💔ಕನ್ನಡ ಕಿರುತೆರೆಯ ಪ್ರಸಿದ್ಧ ಹಿರಿಯ ನಟ ಇನ್ನಿಲ್ಲ 😭

9 Posts • 50K views
Edu ವೀರ
22K views 6 hours ago
ಕನ್ನಡ ಕಿರುತೆರೆಯ ಪ್ರಸಿದ್ಧ ಧಾರಾವಾಹಿ (Serial) ಮಂಗಳಗೌರಿ ಮದುವೆ (Mangala gowri maduve) ಸೀರಿಯಲ್​ನಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದ ಖ್ಯಾತ ಕಿರುತೆರೆ ನಟ ಹಾಗೂ ರಂಗಭೂಮಿ ಕಲಾವಿದರ ವಿಜಯ್ ಕುಮಾರ್ (Vijay kumar jithoori) ನಿಧನರಾಗಿದ್ದಾರೆ. ವಿಜಯ್ ಕುಮಾರ್ ಜಿತೂರಿ ಅವರು ಮಂಗಳಗೌರಿ ಸೀರಿಯಲ್​ನ ಗಗನ್ ಚಿನ್ನಪ್ಪ ಅವರ ಪೊಲೀಸ್ ಪಾತ್ರದ ಜೊತೆ ಕಾನ್ಸ್ಟೇಬಲ್ ಆಗಿ ನಟಿಸಿದ್ದರು.ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಮಂಟೆಸ್ವಾಮಿ ಕಥಾ ಪ್ರಸಂಗ ಹಾಗೂ ಸುಪ್ರಸಿದ್ಧ ರಂಗಗೀತೆಗಳ ಗಾಯನದಲ್ಲಿ ತೊಡಗಿಸಿಕೊಂಡಿದ್ದಾರೆ.ಶಂಕರ್ ನಾಗ್ ಜೊತೆ ಒಡನಾಟಶಂಕರ್ ನಾಗ್ ಅವರ ನಿರ್ದೇಶನದ ಪ್ರಸಿದ್ಧ 'ನಾಗಮಂಡಲ' ನಾಟಕಕ್ಕೆ ಮಂಟೆಸ್ವಾಮಿ ಕಥಾ ಪ್ರಸಂಗದ ಹಾಡುಗಾರಿಕೆಯನ್ನು ನೋಡಿ ಶಂಕರ್ ನಾಗ್ ಸ್ವತಃ ಇವರನ್ನು ಗಾಯಕರಾಗಿ ಆಯ್ಕೆ ಮಾಡಿಕೊಂಡಿದ್ದರು. #💔ಕನ್ನಡ ಕಿರುತೆರೆಯ ಪ್ರಸಿದ್ಧ ಹಿರಿಯ ನಟ ಇನ್ನಿಲ್ಲ 😭
137 likes
1 comment 175 shares