ಆಷಾಢ ನವರಾತ್ರಿ 🙏
5 Posts • 2K views
#ಆಷಾಢ ನವರಾತ್ರಿ 🙏 #varahi amma ಗುಪ್ತ ನವರಾತ್ರಿ ಆಚರಣೆ ಮಾಹಿತಿ ಗುಪ್ತ ನವರಾತ್ರಿಯ ಮಹತ್ವ: ಗುಪ್ತ ನವರಾತ್ರಿಯೆಂದು ಆಚರಿಸಲಾಗುವ ಆಷಾಢ ನವರಾತ್ರಿಯನ್ನು ದೇಶದ ಕೆಲವೆಡೆ ಗಾಯತ್ರಿ ದೇವಿಯ ನವರಾತ್ರಿಯೆಂದೂ ಕೂಡ ಆಚರಿಸುತ್ತಾರೆ. ಈ ನವರಾತ್ರಿಯಂದು 9 ದಿನ ರಾತ್ರಿ ದುರ್ಗಾದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಇಂದು ಗುಪ್ತ ಎಂದರೆ ರಹಸ್ಯವೆಂದರ್ಥ. ಈ ಪದವೇ ಸೂಚಿಸುವಂತೆ ಈ ಹಬ್ಬವನ್ನು ಗುಪ್ತವಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮೊಟ್ಟ ಮೊದಲ ಬಾರಿಗೆ ಗುಪ್ತ ಸಾಮ್ರಾಜ್ಯದವರು ಆಚರಿಸಿರುವುದರಿಂದ ಇದಕ್ಕೆ ಗುಪ್ತ ಎನ್ನುವ ಹೆಸರು ಬರಲು ಕಾರಣವಾಯಿತೆಂಬ ನಂಬಿಕೆಯಿದೆ. ಕುಟುಂಬದಲ್ಲಿ ಯಾರಾದರು ವ್ರತವನ್ನು ಕೈಗೊಂಡಾಗ ಸಾವನ್ನಪ್ಪಿದರೆ, ಸಾಮಾಜಿಕ ಅಥವಾ ಆಧ್ಯಾತ್ಮಿಕ ಸೇವೆಯಲ್ಲಿ ಇರುವಾಗಲೇ ದೈವಾಧೀನರಾದರೆ ಅಂತಹ ಕುಟುಂಬದಲ್ಲಿ ಈ ನವರಾತ್ರಿಯನ್ನು ಒಂಟಿಯಾಗಿ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ದುರ್ಗಾದೇವಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಲಾಗುತ್ತದೆ. ಈ ಹಬ್ಬದಲ್ಲಿ ಯಾವುದೇ ಆಡಂಬರವಿರುವುದಿಲ್ಲ. ಕೇವಲ ಭಕ್ತಿಯೊಂದೇ ದೇವಿಗೆ ಅರ್ಪಿಸಲಾಗುತ್ತದೆ. ಈ ನವರಾತ್ರಿಯಂದು ದುರ್ಗೆಯನ್ನು ಆರಾಧಿಸಿದರೆ ದೇವಿಯು ಆಂತರಿಕ ಮತ್ತು ಬಾಹ್ಯ ನಕಾರಾತ್ಮಕ ಶಕ್ತಿಗಳನ್ನು , ಚಿಂತನೆಗಳನ್ನು ತೊಡೆದು ಹಾಕುತ್ತಾಳೆ. ಈ ನವರಾತ್ರಿಯ ಆಚರಣೆಯಿಂದ ಬುದ್ಧಿವಂತಿಕೆ ಮತ್ತು ಸಂಪತ್ತು ದೊರೆಯುತ್ತದೆ ಎನ್ನುವ ನಂಬಿಕೆಯೂ ಇದೆ. ವಿಷ್ಣುವಿನ ವರಹ ಅವತಾರ ಗುಪ್ತ ನವರಾತ್ರಿ ಸಮಯದಲ್ಲಿ ಜನರು ಸಾಮಾನ್ಯವಾಗಿ ದುರ್ಗಾ ದೇವಿಯನ್ನು ನವದುರ್ಗಾ ಎನ್ನುವ 9 ಅವತಾರಗಳಲ್ಲಿ ಪೂಜಿಸಲಾಗುತ್ತದೆ. ಮಾಟಮಂತ್ರ, ಅಸೂಯೆ ಮುಂತಾದ ದುಷ್ಟ ಶಕ್ತಿಗಳ ವಿರುದ್ಧ ಈ ಪೂಜೆಯು ರಕ್ಷಣೆ ನೀಡುತ್ತದೆ. ಗುಪ್ತ ನವರಾತ್ರಿಯ 9 ರಾತ್ರಿ ದೇವಿ ಮಹಾತ್ಮ್ಯಾಂ ಅಥವಾ ದುರ್ಗಾ ಮಂತ್ರಗಳನ್ನು ಪಠಿಸಲಾಗುತ್ತದೆ. ಆಷಾಢ ನವರಾತ್ರಿಯು ವರಹಿ ದೇವಿಯನ್ನು ಕೂಡ ಪೂಜಿಸಲು ಸೂಕ್ತ ಸಮಯವಾಗಿದೆ. ವರಾಹಿ ದೇವಿಯು ಹಂದಿ ಮುಖದ ದೇವಿಯಾಗಿದ್ದು, ಈಕೆಯನ್ನು ವಿಷ್ಣುವಿನ ವರಹ ಅವತಾರದ ಅತ್ನಿಯೆಂದು ಪರಿಗಣಿಸಲಾಗುತ್ತದೆ. ಈಕೆ ಶಕ್ತಿಯುತ ಮತ್ತು ಸಹಾನುಭೂತಿಯುಳ್ಳ ದೇವತೆಯಾಗಿದ್ದಾಳೆ. ಈಕೆ ಭಕ್ತರ ಬಯಕೆಯನ್ನು ಈಡೇರಿಸುತ್ತಾಳೆ. ಹಾಗೂ ಭೌತಿಕ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ. ವರಹಿಯನ್ನು ಲಕ್ಷ್ಮಿ ದೇವಿಯ ಸಂಪತ್ತಿನ ರೂಪವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮಾಂಡ ಪುರಾಣದ ಪ್ರಕಾರ, ವರಹಿ ದೇವಿಯು ಧೈರ್ಯ, ಶೌರ್ಯ, ವಿಜಯ ಮತ್ತು ಬೇಡಿದ ವರಗಳನ್ನು ನೀಡುವ ದೇವಿಯಾಗಿದ್ದಳೆ. ಗುಪ್ತ ನವರಾತ್ರಿಯ ಪೂಜಾವಿಧಿ: 1) ಮನೆಯಲ್ಲೇ ದೇವಿಗೆ ಮಂತ್ರವನ್ನು ಮತ್ತು ಪ್ರಸಾದವನ್ನು ಅರ್ಪಿಸುವುದರ ಮೂಲಕ ಸರಳವಾಗಿ ಪೂಜೆಯನ್ನು ಮಾಡಿ. 2) ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ದೇವಿಯ ಮಹಾತ್ಮ್ಯಾಂ ಓದಿ ಅಥವಾ ಬೇರೆಯವರಿಂದ ಕೇಳಿ. 3) ನಿಮ್ಮಲ್ಲಿ ಸಂಪೂರ್ಣ ದಿನ ಉಪವಾಸವಿರಲು ಸಾಧ್ಯವಾದರೆ ದಿನಪೂರ್ತಿ ಉಪವಾಸವಿರಿ ಅಥವಾ ಸಂಪೂರ್ಣ ದಿನ ಉಪವಾಸವಾಗಿರಲು ಸಾಧ್ಯವಿಲ್ಲದಿದ್ದರೆ ಒಂದು ಹೊತ್ತಾದರೂ ಉಪವಾಸವನ್ನು ಆಚರಿಸಿ. 4) ದುರ್ಗೆಯ ಪೂಜೆಯೊಂದಿಗೆ ವರಹಿ ದೇವಿಯನ್ನು ಕೂಡ ಆರಾಧಿಸಿ. 5) ಆಷಾಢ ನವರಾತ್ರಿಯ 9 ರಾತ್ರಿಗಳಲ್ಲೂ ದುರ್ಗೆಯನ್ನು ವಿಶೇಷವಾಗಿ ಪೂಜಿಸಿ, ಪೂಜೆಯ ನಂತರ ಸುಮಂಗಲಿಯರಿಗೆ ಅರಶಿಣ, ಕುಂಕುಮ, ಬಳೆ, ಅಕ್ಷತೆ ಹಾಗೂ ಸೀರೆಯನ್ನು ಅಥವಾ ರವಿಕೆಯ ಬಟ್ಟೆಯನ್ನು ನೀಡಿ. ಗುಪ್ತ ನವರಾತ್ರಿಯ ಅಥವಾ ಆಷಾಢ ನವರಾತ್ರಿಯಾಚರಣೆಯ ಉಪಯೋಗ: 1) ನಕಾರಾತ್ಮಕ ಶಕ್ತಿಯನ್ನು ದೂರಾಗಿಸುತ್ತದೆ. 2) ಸಂಪತ್ತನ್ನು, ಹಣವನ್ನು ನೀಡಿ, ದುರಾದೃಷ್ಟದಿಂದ ನಿಮ್ಮನ್ನು ದೂರಾಗಿಸುತ್ತದೆ. 3) ಹಣಕಾಸಿನ ವಿಚಾರದಲ್ಲಿ ಅಥವಾ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ತೆಗೆದು ಹಾಕುತ್ತದೆ. 4) ಶಕ್ತಿ, ಸಾಮರ್ಥ್ಯ ಮತ್ತು ಎಲ್ಲಾ ಕಾರ್ಯದಲ್ಲೂ ಜಯವನ್ನು ನೀಡುತ್ತಾಳೆ. 5) ಆರೋಗ್ಯವಂತ ಜೀವನವನ್ನು ಕಲ್ಪಿಸುತ್ತದೆ. ಆಷಾಢ ನವರಾತ್ರಿಯ ಅಥವಾ ಗುಪ್ತ ನವರಾತ್ರಿಯ 9 ದಿನ ರಾತ್ರಿಯು ತಾಯಿ ದುರ್ಗೆಯನ್ನು ಆರಾಧಿಸಿ ಅವಳ ಆಶೀರ್ವಾದವನ್ನು ಪಡೆದುಕೊಳ್ಳಿ. ಈ ನವರಾತ್ರಿಯು ಕೂಡ ಉಳಿದೆಲ್ಲಾ ನವರಾತ್ರಿಗಳಷ್ಟೇ ಪವಿತ್ರವಾದ ನವರಾತ್ರಿಯೆಂದು ಪರಿಗಣಿಸಲಾಗಿದೆ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
8 likes
11 shares
#ಆಷಾಢ ನವರಾತ್ರಿ 🙏 #🙏ಶ್ರೀ ದುರ್ಗಾ ದೇವಿ🙏 ಶ್ರೀನವರಾತ್ರಿ ಸಂಕಲ್ಪ ಮತ್ತು ಅಖಂಡ ದೀಪಸ್ಥಾಪನವಿಧಿ.*. ಶ್ರೀನವರಾತ್ರಿ ಉತ್ಸವವನ್ನು ಆಶ್ವೀನ ಶುಕ್ಲ ಪ್ರತಿಪದೆಯ ದಿನ ಸಂಕಲ್ಪ ಪೂರ್ವಕವಾಗಿ ಪ್ರಾರಂಭಿಸಬೇಕು . ಅಚಮನ ಪ್ರಾಣಾಯಾಮ ಸಂಕಲ್ಪ - ಶುಭೆ ಶೋಭನೆ ಮಹೂರ್ತೆ - ಏವಂಗುಣವಿಶೆಷಣವಿಶಿಷ್ಟಯಾಂ ಆಶ್ವೀನ ಪ್ರತಿಪತ್ ಪುಣ್ಯತಿಥೌ ಶ್ರೀಭಾರತಿರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀವೆಂಕಟೇಶ ಫ್ರೇರಣಯಾ ತತ್ಪ್ರೀತ್ಯರ್ಥಂ ಶ್ರೀ -ಭೂ -ದುರ್ಗಾ ಬ್ರಹ್ಮಾ ,ಪ್ರಾಣ ,ಸರಸ್ವತಿ , ಭಾರತೀ ಶೇಷ ಗರುಡಾದಿ ಸಹಿತಸ್ಯ ಶ್ರೀನಿವಾಸಸ್ಅದ್ಯ ಪ್ರಾತರಾರಭ್ಯ ಆಗಮಿ ದಶಮಿ ಪರ್ಯಂತಂ (ತ್ರಿರಾತ್ರೋತ್ಸವ ,ಪಂಚರಾತ್ರೋತ್ಸವ ,ಸಪ್ತ ರಾತ್ರೋತ್ಸವ) ನವರಾತ್ರೋತ್ಸವಾಖ್ಯಂ ಕರ್ಮಕರಿಷ್ಯಮಾಣಃ ಘೃತದೀಪಸಂಯೋಜನಂ ,(ಅಖಂಡದೀಪ ಸ್ಥಾಪನಂ) ತೈಲದೀಪ ಸಂಯೋಜನಂ ,ಪ್ರತಿದಿನಂ ಮಧ್ಯಾಹ್ನೇ ಮಹಾಪೂಜಾಂ ,ಸಾಯಾಹ್ನೇ ಸಚ್ಛಾಸ್ತ್ರಶ್ರವಣಂ ,ಶ್ರೀನಿವಾಸಕಲ್ಯಾಣ ಪಾರಯಣಂ ಚ ಕರಿಷ್ಯೇ | ಘಟಸ್ಥಾಪನಂ ಚ ಕರಿಷ್ಯೇ | ಎಂದು ಸಂಕಲ್ಪಮಾಡಿ ಮಂತ್ರಾಕ್ಷತೆ ನೀರು ಬಿಡುವುದು . ಘಟಸ್ಥಾಪನ ಸಂಪ್ರದಾಯವಿದ್ದವರು ಆಕಲಶೇಷುಧಾವತಿ , ಗೃಹವೈಪ್ರತಿಷ್ಠಾ ಸೂಕ್ತಂ ಮುಂತಾದ ಕಲಶಸ್ಥಾಪನ ಮತ್ತು ಪ್ರಾಣಪ್ರತಿಷ್ಠಾಪನ ಮಂತ್ರಗಳಿಂದ ಘಟಸ್ಥಾಪನೆಮಾಡಿ ಕುಲದೇವರನ್ನು ಸ್ಥಾಪಿಸಿ ನವರಾತ್ರಿ ಯಲ್ಲಿ ಪ್ರತಿನಿತ್ಯ ಷೋಡಶೋಪಚಾರದಿಂದ ಪೂಜಿಸಿ ನೈವೇದ್ಯ ಮಹಾನಿರಾಜನಾದಿಗಳನ್ನು ಮಾಡಬೇಕು. ದೀಪಸ್ಥಂಭಪೂಜಾ ಸ್ಥಂಭಾಗ್ರೇ ಸಪ್ತವಿಂಶತಿ ಕೃತ್ತಿಕಾನಕ್ಷತ್ರದೇವತಾಭ್ಯೋನಮಃ | ನಾಲೇ.ವಾಸುಕಿ ದೇವತಾಯೈನಮಃ |ಪಾದೇ ಚಂದ್ರಾರ್ಕಭ್ಯಾಂ ನಮಃ | ಎಂದು ದೀಪಸ್ಥಂಭವನ್ನು ಪೂಜಿಸಿ.ಮಂತ್ರಾಕ್ಷತೆ ಹಾಕಿ ದೀಪಸ್ಥಂಭಕ್ಕೆ ಶಾವಂತಿಕೆ ಹೂವಿನ ಹಾರವನ್ನು ಸುತ್ತಿ ಒಂದು ಎಣ್ಣೆ ಯ ದೀಪ ಇನ್ನೋಂದು ತುಪ್ಪದ ದೀಪವನ್ನು ಅಗ್ನಿ ನಾಗ್ನಿಃ ಸಮಿಧ್ಯತೆ ಎಂಬ ಮಂತ್ರದಿಂದ ಹಚ್ಚಬೇಕು ಈದೀಪಗಳನ್ನು ನಂದದಂತೆ ನೋಡಿ ಕೂಳ್ಳಬೇಕು .ಇದನ್ನೇ ಅಖಂಡದೀಪವೆನ್ನಲಾಗಿದೆ . ಅಖಂಡ ದೀಪಕಂ ದೇವ್ಯಾಃ ಪ್ರೀತಯೇ ನವರಾತ್ರಕಂ | ಉಜ್ವಲಯೇದ್ ಅಹೋರಾತ್ರಮೆಕಚಿತ್ತೋ ಧೃತವೃತಃ ।। ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
18 likes
16 shares
#ಆಷಾಢ ನವರಾತ್ರಿ 🙏 #🙏ಶ್ರೀ ದುರ್ಗಾ ದೇವಿ🙏 #ಆಧ್ಯಾತ್ಮ #varahi amma ಶ್ರೀ ವಾರಾಹಿ ಗುಪ್ತ ನವರಾತ್ರಿ ಪೂಜೆ:- ವರ್ಷ ಋತುವಿನ ಆರಂಭದ ಆಷಾಡ ಮಾಸದ ಈ ಕಾಲವನ್ನು ದಕ್ಷಿಣಾಯನ ಕಾಲ ಎಂದು ಕರೆಯುತ್ತಾರೆ. ಆಷಾಡ ಮಾಸವು ‘ಶಕ್ತಿ ದೇವತೆ’ ಆರಾಧನೆಗೆ ಶ್ರೇಷ್ಠವಾದ ಪರ್ವಕಾಲವಾಗಿದೆ. ಈ ಕಾಲದಲ್ಲಿ ದೇವತೆಗಳ ಆರಾಧನೆಗಳು ಜಾಸ್ತಿ ಇರುತ್ತದೆ. ಆಷಾಡ ಪಾಡ್ಯದಿಂದ ನವಮಿ ತನಕ “ಗುಪ್ತ ನವರಾತ್ರಿ”ಯ ಕಾಲ ಗುಪ್ತ ನವರಾತ್ರಿಯಲ್ಲಿ ಶಕ್ತಿ ದೇವತೆಯಾದ “ವಾರಾಹಿ” ದೇವಿಯನ್ನು ಆರಾಧನೆ ಮಾಡುತ್ತಾರೆ. ವಾರಾಹಿ ದೇವಿ ಯನ್ನು ಆರಾಧನೆ ಮಾಡುವುದರಿಂದ ಸದೃಢ ದೇಹಕ್ಕೆ ಅನ್ನ - ಮನಸ್ಸಿನ ಶಕ್ತಿ ಸಮೃದ್ಧಿಯಾಗಿರುತ್ತದೆ. ಕ್ಷುದ್ರ ಶಕ್ತಿಗಳು ನಿರ್ಮೂಲ ವಾಗಿ ಶಾರೀರಿಕವಾಗಿ ಬಲವೃದ್ಧಿ ಹೆಚ್ಚುತ್ತದೆ. ವಾರಾಹಿ ದೇವಿ ಭೂಮಿ ವಿವಾದ ಗಳನ್ನು ಬಗೆಹರಿಸುತ್ತಾಳೆ. ವಾರಾಹಿ (ನವರಾತ್ರಿ) ಆರಾಧನೆಯನ್ನು ರಾತ್ರಿ ಮಾಡಬೇಕು. ದೇವಿಯ ವ್ಯುತ್ಪತ್ತಿ ಕುರಿತು ಪುರಾಣಗಳಲ್ಲಿ ಹಲವು ಕಥೆಗಳಿವೆ. ಲಲಿತೋಪಖ್ಯಾನದಲ್ಲಿ ಭಂಡಾಸುರನನ್ನು ವಧಿಸಲು ದೇವತೆಗಳಿಂದ ಆಗದೆ ನಿಸ್ತೇಜರಾದರು. ದೇವತೆಗಳೆಲ್ಲ ಶಿವನನ್ನು ಪ್ರಾರ್ಥಿಸುತ್ತಾರೆ. ಶಿವನು ಮಾಡಿದ ಮಹಾಯಾಗ ದಿಂದ “ಚಿದಗ್ನಿ - ಕುಂಡ- ಸಂಭೂತಾ- ದೇವಕಾರ್ಯ- ಸಮುದ್ಯತಾ” ದಿಂದ ಉದಿಸಿ ಬಂದವಳೇ ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿ ದೇವತೆಗಳ ಕಾರ್ಯವನ್ನು ಪೂರೈಸಲು,‌ ದುಷ್ಟರಾಕ್ಷಸ ಸಂಹಾರ ಮಾಡಲು ಉದ್ಭವಿಸಿದಳು. ಲಲಿತಾ ದೇವಿ ಎಲ್ಲರ ದೇಹದಲ್ಲಿ ಶಕ್ತಿಯಾಗಿ ಇರುತ್ತಾಳೆ. ಶರೀರಕ್ಕೆ ಚೈತನ್ಯ ಶಕ್ತಿ ತುಂಬುವವಳು ಶ್ರೀ ಲಲಿತೆ, ಬುದ್ಧಿಶಕ್ತಿ ಕಾರಕ ಶ್ಯಾಮಲಾದೇವಿ, ಇಂದ್ರಿಯ ಶಕ್ತಿಗೆ ವಾರಾಹಿ ದೇವಿ. ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ, ಸ್ವರೂಪಿಣಿಯರಾಗಿ ಈ ಮಾತೆಯರ ಅಂಶ ದೇಹದಲ್ಲಿ ಇರುತ್ತದೆ. ಭಂಡಾಸುರನನ್ನು ವಧಿಸಲು ಇಚ್ಛಾಶಕ್ತಿಯಾದ ಶ್ರೀ ಲಲಿತಾ ದೇವಿ ತನ್ನ ಸಹಾಯಕ್ಕಾಗಿ ಅವಳೊಳಗಿಂದ ಎರಡು ಶಕ್ತಿಗಳನ್ನು ಹೊರಗೆ ತರುತ್ತಾಳೆ. ಆ ಶಕ್ತಿ ದೇವತೆಗಳೇ ಶ್ಯಾಮಲಾದೇವಿ- ವಾರಾಹಿದೇವಿ. ಇವರು ಸಪ್ತಮಾತ್ರಿಕೆಯರಲ್ಲಿ ಪ್ರಮುಖರು. ಇಚ್ಛಾಶಕ್ತಿ ಮತ್ತು ಚೈತನ್ಯ ಶಕ್ತಿ ಆದ ಶ್ರೀ ಲಲಿತಾ ದೇವಿಯಿಂದ ಹೊರಬಂದ ಜ್ಞಾನ ಶಕ್ತಿ ಶ್ಯಾಮಲಾ ದೇವಿ. ಇವಳು ಮಹಾಕವಿ ಕಾಳಿದಾಸನಿಗೆ ಅನುಗ್ರಹ ಮಾಡಿದ “ಮಾತಂಗಿ” ದೇವಿ. ಲಲಿತಾದೇವಿ ತನ್ನ ಶ್ರೀಮನ್ನಗರ ಸಾಮ್ರಾಜ್ಯದ ಪ್ರಧಾನ ಮಂತ್ರಿ ಪದವಿ ಮುದ್ರಿಕೆಯನ್ನು ಶ್ಯಾಮಲ ದೇವಿಗೆ ಕೊಟ್ಟು, ಜೊತೆಗೆ ಏಳು ಆವರಣಗಳುಳ್ಳ ರಥವನ್ನು ( “ಗೇಯಚಕ್ರ - ರಥಾರೂಢ- ಸರ್ವಾಯುಧ -ಪರಿಷ್ಕೃತಾ- ಮಂತ್ರಿಣೀ- ಪರಿಸವಿತಾ”) ಅನುಗ್ರಹಿಸುತ್ತಾಳೆ.‌ ಶ್ರೀ ಲಲಿತೆ ಕ್ರಿಯಾಶಕ್ತಿ ವಾರಾಹಿ ದೇವಿಯನ್ನು ತನ್ನ ಸೇನಾ ದಂಡನಾಯಕಳನ್ನಾ ಗಿ ಮಾಡಿ, ಆಜ್ಞಾ ಚಕ್ರದಿಂದ ಐದು ಆವರಣಗಳ ರಥವನ್ನು, ಹಲ ( ನೇಗಿಲು) ಮತ್ತು ಮುಸಲ (ಒನಕೆ) ಎಂಬ ಆಯುಧಗಳನ್ನು “ಕಿರಿಚಕ್ರ- ರಥಾರೂಢ -ದಂಡ ನಾಥಾ- ಪುರಸ್ಕೃತಾ” ಈ ರೀತಿ ವಾರಾಹಿ ದೇವಿಯನ್ನು ಸ್ತುತಿ ಮಾಡುತ್ತಾರೆ. ನಂತರ ಶ್ಯಾಮಲ ದೇವಿ ಮತ್ತು ವಾರಾಹಿ ದೇವಿಯರು ಭಂಡಾಸುರನ ಪುತ್ರ ವಿಷಂಗ ( ಮಮಕಾರ) ಮಂತ್ರಿಯಾದ ವಿಶುಕ್ರ ನ( ಅಹಂಕಾರ) ಪ್ರಾಣಹರಣವನ್ನು ಮಾಡಿದರು. ಕಾಮ ಎಂಬ ಅವಿದ್ಯೆ ಗೆ ಮೂಲ ಶಕ್ತಿಯಾದ ಭಂಡಾ ಸುರನನ್ನು ಶ್ರೀ ಲಲಿತಾ ದೇವಿ ವಧಿಸಿದಳು. (“ಭಂಡಪುತ್ರ ವಧೋದ್ಯುಕ್ತ ಬಾಲಾ ವಿಕ್ರಮ ನಂದಿತಾ! ಮಂತ್ರಿಣ್ಯಂಭಾ ವಿರಚಿತ ವಿಷಂಗ ವಧ ತೋಷಿತಾ! ವಿಷುಕ್ರ ಪ್ರಾಣ ಹರಣ ವಾರಾಹಿ ವೀರ್ಯ ನಂದಿತಾ”) ಅವಿದ್ಯೆಯ ಮೂಲವಾದ ರಾಕ್ಷಸ ಭಂಡಾ ಸುರನನ್ನು ಲಲಿತಾದೇವಿ ವಧಿಸಿದಳು.‌ ಇಂಥ ಇಚ್ಚಾ ಶಕ್ತಿ ಲಲಿತೆಯಿಂದ ಕ್ರಿಯಾಶಕ್ತಿ ವಾರಾಹಿ ದೇವಿ ಉಗಮವಾಗಿದ್ದು. ಈಕೆಯನ್ನು ಆರಾಧಿಸುವುದು ಆಷಾಡ ಮಾಸ 9 ದಿನಗಳು ಗುಪ್ತನವರಾತ್ರಿ ಆದ್ದರಿಂದ ರಾತ್ರಿ ಸಮಯ ಆರಾಧನೆ ಮಾಡಬೇಕು. ಪಾಡ್ಯದ ಮೊದಲ ದಿನ ಸ್ನಾನ ಮಾಡಿ ವಸ್ತ್ರ ಧರಿಸಿ, ದೇವರ ಮುಂದೆ ನಿಂತು ಪ್ರಾರ್ಥಿಸಿ 9 ದಿನಗಳು ಗುಪ್ತ ನವರಾತ್ರಿ ಪೂಜೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಬೇಕು. ವ್ರತ ಸಂಕಲ್ಪ ಮಾಡಿದ ಮೇಲೆ ಹೊರಗಿನ ಆಹಾರ ಸೇವನೆ ಮಾಡಬಾರದು. ಸಾಯಂಕಾಲ ಮತ್ತೆ ಸ್ನಾನ ಮಾಡಿ ವಸ್ತ್ರ ಧರಿಸಿ ಪೂಜಾ ಸ್ಥಳ ವನ್ನು ಶುದ್ದಿ ಮಾಡಿ ರಂಗೋಲಿ ಬರೆದು, ವಾರಾಹಿ ದೇವಿಯ ವಿಗ್ರಹ ಅಥವಾ ಫೋಟೋ ಇದ್ದರೆ ಪೂಜೆ ಮಾಡಬೇಕು ಇಲ್ಲದಿದ್ದರೆ ಕಳಶವನ್ನು ಪ್ರತಿಷ್ಠಾಪಿಸಿ, ಅಥವಾ ಲಕ್ಷ್ಮಿ- ದುರ್ಗೆಯರ ಫೋಟೋ ಇಟ್ಟುಕೊಳ್ಳ ಬಹುದು ಪೂಜೆಗೆ ಸಲಕರಣೆಗಳು ಅರಿಶಿನ- ಕುಂಕುಮ- ಅಕ್ಷತೆ -ಹೂವು- ಹಣ್ಣು -ವೀಳ್ಯದೆಲೆ ಅಡಿಕೆ, ‌ ಗಂಧ, ಚಂದನ ಧೂಪ( ವಾರಾಹಿ ಮಾತೆಗೆ ಧೂಪ ಶ್ರೇಷ್ಠ) ದೀಪ ಮಂಗಳಾರತಿ, ಎಲ್ಲಾ ವ್ರತ -ಕತೆ ಪೂಜಾದಿಗಳನ್ನು ಮಾಡುವಂತೆ ಅನುಕೂಲಗಳನ್ನು ಜೋಡಿಸಿ ಕೊಂಡು ಪೂಜೆಗೆ ಕೊರಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ವಾರಾಹಿ ದೇವಿಗೆ ಗಂಧ ಚಂದನ ಅರಿಶಿನ ಕುಂಕುಮ ಗೆಜ್ಜೆ ವಸ್ತ್ರ ಹೂವು ಅಲಂಕಾರ ಮಾಡಿ, ಕುಂಕುಮಾರ್ಚನೆ, ಅಷ್ಟೋತ್ತರ, ಮಾಡಿಕೊಂಡು ಧೂಪ - ದೀಪ ತೋರಿಸಿ, ಸಿಹಿ ಪದಾರ್ಥ ನೈವೇದ್ಯ (9 ದಿನವೂ ಬೆಲ್ಲ ಏಲಕ್ಕಿ ಹಾಕಿದ ಪಾನಕ ನೈವೇದ್ಯ ಮಾಡಬೇಕು) ಮಂಗಳಾರತಿ ಮಾಡಿ ಪ್ರಾರ್ಥಿಸಿ ಕೊಂಡು ನಮಸ್ಕಾರ ಮಾಡಬೇಕು. ಎಂಟು ದಿನದ ಪೂಜೆ ನಂತರ ಒಂಬತ್ತನೇ ದಿನ ನೆರೆಹೊರೆಯವರನ್ನು ಅರಿಶಿನ ಕುಂಕುಮಕ್ಕೆ ಕರೆದು ಹೂವು ದಕ್ಷಿಣೆ ತಾಂಬೂಲಾದಿಗಳ ಸಹಿತ ಸತ್ಕರಿಸಬೇಕು. ಹತ್ತನೇ ದಿನ ಉದ್ಯಾಪನೆ ಮಾಡಿ ಒಬ್ಬ ಬ್ರಾಹ್ಮಣನಿಗೆ ದವಸ- ಧಾನ್ಯಗಳನ್ನು ತಾಂಬೂಲ ದಕ್ಷಿಣ ಸಹಿತ ಕೊಟ್ಟು ಆಶೀರ್ವಾದ ಪಡೆಯಬೇಕು. ಯಾರೂ ಸಿಗದಿದ್ದರೆ ದೇವಸ್ಥಾನದ ಅರ್ಚಕರಿಗೆ ಕೊಡಬಹುದು. ಇವೆಲ್ಲವೂ ವಾರಾಹಿ ದೇವಿಗೆ ಬಹಳ ಪ್ರಿಯವಾದ ಆರಾಧನೆ ಆಗಿದೆ. ಯಜ್ಞಸ್ವರೂಪ ನಾರಾಯಣನಿಂದ ಸ್ತ್ರೀ ರೂಪದ ತತ್ವ ‘ವಾರಾಹಿ ದೇವಿ’ ಭೂ ತತ್ವ ದೇವತೆಯಾಗಿ ಬಂದಳು. ಇವಳ ಕೈಯಲ್ಲಿ ಹಲ ಮತ್ತು ಮುಸಲವಿದೆ. ಇದರ ಸಂಕೇತ ಭೂಮಿ ಉಳುವುದಕ್ಕಾಗಿ ನೇಗಿಲು (ಹಲ) ಮತ್ತು ಬೆಳೆಯನ್ನು ಧಾನ್ಯ ಮಾಡಿಕೊಳ್ಳಲು ಒನಕೆ ( ಮುಸಲ) ಕೈಯಲ್ಲಿ ಹಿಡಿದಿದ್ದಾಳೆ. ಭೂ ತತ್ವವಾದ ವಾರಾಹಿ ದೇವಿಯನ್ನು ಭೂ ವಿವಾದ ಬಗೆಹರಿಸಲು, ಜಗಳ, ವ್ಯಾಪಾರಿ ಸಂಬಂಧ ತೊಂದರೆ, ಹಾಗೂ ಮಾಟ ಮಂತ್ರ ಪ್ರಯೋಗ ನಿಗ್ರಹಿಸಲು ಆರಾಧಿಸುತ್ತಾರೆ. ಈ ವ್ರತವನ್ನು ಮಾಡುವವರು 9 ದಿನಗಳು ಸಾತ್ವಿಕ ಆಹಾರ ಸೇವಿಸಬೇಕು. ಚಾಪೆ ಮೇಲೆ (ಒಬ್ಬರೇ) ಮಲಗಬೇಕು. ಅನವಶ್ಯಕವಾಗಿ ಮಾತನಾಡಬಾರದು. ಕೋಪ - ತಾಪಗಳು ಇರಬಾರದು. ಲಲಿತಾ ಸಹಸ್ರನಾಮ ಓದಬೇಕು. ಎಷ್ಟು ಸಾಧ್ಯವೋ ಅಷ್ಟು ಸಮಾಧಾನ ಚಿತ್ತದಿಂದ ಪೂಜೆಯನ್ನು ನೆರವೇರಿಸಿ ವಾರಾಹಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ವಾರಾಹಿ ತ್ವಮಶೇಷಜಂತುಷು ಪುನಃ ಪ್ರಾಣಾತ್ಮಿಕಾ ಸ್ಪಂದಸೇ ಶಕ್ತಿ ವ್ಯಾಪ್ತ ಚರಾಚರಾ ಖಲು ಯತಸ್ತ್ವಾಮೇತದಭ್ಯರ್ಥಯೇ! ತ್ವತ್ಪಾದಾಂಬುಜಸಂಗಿನೋ ಮಾಮಾ ಸಕೃತ್ಪಾಪಂ ಚಿಕಿರ್ಷಂತಿ ಯೇ ತೇಷಾ ಮಾ ಕುರು ಶಂಕರ ಪ್ರಿಯತಮೇ ದೇಹಾಂತರಾವಸ್ಥಿತಿಮ್ ಇತಿ ವಾರಾಹಿ ನಿಗ್ರಹಾಷ್ಟಕಂ ಸ್ತೋತ್ರ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
20 likes
24 shares
#ಆಷಾಢ ನವರಾತ್ರಿ 🙏 #🙏ಶ್ರೀ ದುರ್ಗಾ ದೇವಿ🙏 #ಆಧ್ಯಾತ್ಮ ನಾಳೆ ನವರಾತ್ರಿ ವಿಶೇಷ ಘಟಸ್ಥಾಪನೆ, ಅಂಣೆ ಹಾಗೂ ಮಾಲಾ ಬಂಧನ ನವರಾತ್ರಿಯಲ್ಲಿ ದೇವಿಯನ್ನು ಕಲಶದಲ್ಲಿ ಆವಾಹಿಸಿ ಪೂಜಿಸುವುದು ಪದ್ಧತಿ. ಇದಕ್ಕಾಗಿ ಮಣ್ಣಿನ ಅಥವಾ ತಾಮ್ರ/ಬೆಳ್ಳಿ ಯ ಕಲಶದಲ್ಲಿ ದೇವಿ ಆವಾಹನೆ ಮಾಡಲಾಗುತ್ತದೆ. ಒಂದು ಪ್ರತ್ಯೇಕ ಪಾತ್ರೆಯಲ್ಲಿ ಹೊಲ ಗದ್ದೆಯಿಂದ ತಂದ ಮಣ್ಣು ತುಂಬಿಸಿ ಸಪ್ತ ಧಾನ್ಯ ಅಥವಾ ಬರಿ ಗೋಧಿ, ಭತ್ತ, ಜವೆಗೋಧಿ ಅಥವಾ ಬರಿ ಗೋಧಿ ಬಿತ್ತಲಾಗುತ್ತದೆ. ನೀರು ಚಿಮುಕಿಸಿ ಒಂಭತ್ತು ದಿನಗಳಲ್ಲಿ ಮೊಳಕೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ದೇವಿ ಘಟವನ್ನು ಈ ಪಾತ್ರೆಯಲ್ಲಿ ಇರಿಸಲಾಗುತ್ತದೆ ಅಥವಾ ದೇವಿ ಘಟದ ಬಳಿ ಅಂಕುರಪಾತ್ರೆ ಇರಿಸಲಾಗುತ್ತದೆ. ಇದೇ ಅಂಕುರಾರ್ಪಣೆ ವಿಧಿ. ನದಿ ಸರೋವರ ಬಾವಿ ಇತ್ಯಾದಿ ಜಲಮೂಲದಿಂದ ತಂದ ನೀರು ಕಲಶದಲ್ಲಿ ತುಂಬಿಸಿ, ಅರಿಶಿನ ಕೊಂಬು, ಅಡಿಕೆ ಬೆಟ್ಟ, ಕುಂಕುಮ, ಗಂಧ, ಪುಷ್ಪ, ಪಂಚರತ್ನ ಅಥವಾ ಮುತ್ತು-ಹವಳ, ಪಂಚಪಲ್ಲವ,ಗರಿಕೆ, ಅಕ್ಷತೆ, ಚಿನ್ನ ಅಥವಾ ಬೆಳ್ಳಿ ನಾಣ್ಯ ಪ್ರತ್ಯೇಕ ವೇದ-ಪುರಾಣ ಮಂತ್ರಗಳೊಂದಿಗೆ ಕಲಶದಲ್ಲಿ ಹಾಕಲಾಗುತ್ತದೆ. ಈ ಕಲಶದ ಮೇಲೆ ಅಕ್ಕಿ ತುಂಬಿದ ಪಾತ್ರೆ ಇರಿಸ ಅದರ ಮೇಲೆ ದುರ್ಗೆಯ ಚಿಕ್ಕ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ . ಕೆಲವರು ಪಾತ್ರೆಯ ಬದಲಾಗಿ ಅರಿಶಿನ ಲೇಪಿತ ತುಂಬಿದ ತೆಂಗಿನಕಾಯಿ ಇಡಲಾಗುತ್ತದೆ. ಕೆಲವರು ಪೂರ್ಣಪಾತ್ರೆ ಅಥವಾ ಪೂರ್ಣಫಲದ ಬದಲಾಗಿ ಬರಿ ಸುಗಂಧಿತ ಹೂಗಳ ಮಾಲಿಕೆ ಇರಿಸುತ್ತಾರೆ. ಈ ಕಲಶಕ್ಕೆ ವಸ್ತ್ರ ಸೂತ್ರ ಸುತ್ತಲಾಗುತ್ತದೆ. ಕೆಲವು ಕುಟುಂಬಗಳಲ್ಲಿ ಈ ಕಲಶದ ತುದಿಗೆ ತಾಗುವಂತೆ ಮೇಲ್ಛಾವಣಿ ಅಥವಾ ಮಂಟಪದ ಮೇಲಿಂದ ಹೂಮಾಲೆಯನ್ನು ಕಟ್ಟಲಾಗುತ್ತದೆ. ಇನ್ನೂ ಕೆಲವರು ಮಾಲಿಕೆಗಳನ್ನು ಕಲಶಕ್ಕೆ ಕಟ್ಟುತ್ತಾರೆ. ಈ ವಿಧಿಯೇ ಮಾಲಾಬಂಧನ. ಈಗ ಶ್ರೀದೇವಿಯನ್ನು ಕಲಶದಲ್ಲಿ ಆವಾಹನೆ ಮಾಡಲಾಗುತ್ತದೆ. ಘಟಸ್ಥಾಪನೆಯ ವಿಧಿ ಪ್ರದೇಶದಿಂದ ಪ್ರದೇಶಕ್ಕೆ, ಕುಟುಂಬದಿಂದ ಕುಟುಂಬಕ್ಕೆ ಕುಲಾಚಾರ ರೀತ್ಯಾ ಬದಲಾಗುತ್ತದೆ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
12 likes
14 shares