ರಾಧಾಕೃಷ್ಣ 🦚💙
792 views
11 days ago
#ಓಂ ನಮಃ ಶಿವಾಯ #ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಭಕ್ತಿಗಿರುವ ಶಕ್ತಿ :- ಪರಮೇಶ್ವರನ ಭಕ್ತರಾಗಿದ್ದ ರಾಮಕೃಷ್ಣಶಾಸ್ತ್ರಿಗಳು ಯುವಕರಾಗಿದ್ದಾಗಲೇ ಕಾಶಿ ವಿಶ್ವನಾಥನ ದರ್ಶನಕ್ಕೆಂದು ಕಾಶಿಗೆ ಹೋದವರು, ವಿಶ್ವನಾಥನ ಮೇಲಿರುವ ಭಕ್ತಿಯೋ ಅಥವಾ ಆಕರ್ಷಣೆಯೋ ವಾರಣಾಸಿಯಲ್ಲಿಯೇ ನೆಲಸಿದರು. ಅಲ್ಲಿ ವಿಶ್ವನಾಥನ ಮಂದಿರದಲ್ಲಿ ಅರ್ಚಕ ವೃತ್ತಿ ದೊರೆಯಿತು. ಮತ್ತೆ ಊರ ಕಡೆ ಬರಲೇ ಇಲ್ಲ. ನಿರ್ಮಲವಾದ ಮನಸ್ಸಿನಿಂದ ಶಿವನ ಪೂಜೆ, ಅರ್ಚನೆ, ವ್ರತ- ಕತೆ, ಹಾಗೂ ಶಿವಪುರಾಣ ಓದುವುದು, ಹೀಗೆ ದಿನವಿಡೀ ಶಿವ ಪೂಜಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಕೊಂಡರು. ಕ್ರಮೇಣ ಸಾಮಾನ್ಯ ಕುಟುಂಬದ ‘ಸುಶೀಲ’ ಎಂಬ ಕನ್ಯೆಯೊಂದಿಗೆ ಮದುವೆಯಾಯಿತು. ಪತಿ-ಪತ್ನಿಯರಿಬ್ಬರೂ ಶಿವ ಪೂಜೆಯಲ್ಲಿಯೇ ಸಂತೃಪ್ತರಾಗಿ ನೆಮ್ಮದಿ ಜೀವನ ನಡೆಸುತ್ತಿದ್ದು, ರಾಮಕೃಷ್ಣಶಾಸ್ತ್ರಿಗಳು ಈಗ ಉತ್ತರ ಭಾರತದವರಂತೆ 'ಶಾಸ್ತ್ರಿಗಳು' ಹೋಗಿ ರಾಮಕೃಷ್ಣ ಪಂಡಿತರಾದರು. ಶ್ರಾವಣ ಮಾಸ ಬಂದಿತು. ಪಂಡಿತರು ಎಂದಿಗಿಂತಲೂ ಮುಂಚಿತವಾಗಿ ಎದ್ದು ದೇವಸ್ಥಾನಕ್ಕೆ ಹೊರಡಲು ತಯಾರಿ ಮಾಡಿಕೊಂಡರು. ಪತ್ನಿಯು ಅದೇನು ಇಷ್ಟು ಬೇಗ ಹೊರಟಿದ್ದೀರಿ ಎಂದು ಕೇಳಿದ್ದಕ್ಕೆ, ಸುಶೀಲಾ ಇಂದು ಕಾರ್ತಿಕ ಸೋಮವಾರ ನಾನು ಮಂದಿರಕ್ಕೆ ಹೋಗಿ ಶಿವನ ಪೂಜೆಯನ್ನು ಬೇಗ ಮುಗಿಸಿ ಮನೆಗೆ ಬರುತ್ತೇನೆ. ಸಂಜೆ ‘ಶಿವಪುರಾಣ’ ಓದಿ ಪಾರಾಯಣ ಮಾಡಬೇಕು. ಅದಕ್ಕೆ ಎಲ್ಲ ತಯಾರಿ ಮಾಡಿಡು ಎಂದು ಹೇಳಿ ಮಂದಿರಕ್ಕೆ ಹೊರಟರು. ಪೂಜೆ ಮುಗಿಸಿ ಮನೆಗೆ ಬಂದು, ಸಂಜೆ ಹೋಮ ಕುಂಡವನ್ನು ಸ್ಥಾಪಿಸಿ, ಹೋಮಕುಂಡದ ಎದುರಿಗೆ ಮೃದುವಾದ ಬಟ್ಟೆಯಿಂದ ಹಾಸಿದ ಪೀಠ ಇಟ್ಟು, ಶಿವನ ತ್ರಿಶೂಲ ಮತ್ತು ಡಮರುಗ ಸ್ಥಾಪಿಸಿದರು. ಪೂಜೆ ಮುಗಿಸಿ ಪಾರಾಯಣ ಶುರುಮಾಡಿದಾಗ ನೆರೆಹೊರೆಯವರು ಪೂಜೆಗೆ ಬಂದು ಕುಳಿತಿದ್ದರು. ಅವರವರಲ್ಲೇ ಮಾತಾಡಿಕೊಳ್ಳುತ್ತಾ, ಇದೇನು ಪಂಡಿತರು ಕಾಶಿ ಪೀತಾಂಬರ ಹಾಸಿ ಅಲಂಕರಿಸಿದ ಮೃದುವಾದ ಪೀಠ, ಪೀಠದ ಮೇಲೆ ಶಿವನ ಡಮರುಗ, ತ್ರಿಶೂಲ ಇಡುತ್ತಾರಲ್ಲ ಏನು ಕಾರಣ ಎಂದು ಒಬ್ಬ ಕೇಳಿದಾಗ, ಮತ್ತೊಬ್ಬರು ಹೇಳಿದರು, ಪಂಡಿತರು ಮಹಾನ್ ಶಿವ ಭಕ್ತರು ಶ್ರದ್ಧಾ-ಭಕ್ತಿ ಯಿಂದ ಶಿವನ ಪೂಜೆ ಮಾಡುತ್ತಾರೆ. ಅವರು ಪೂಜೆ ಮಾಡುವ ಸಮಯದಲ್ಲಿ ಸಾಕ್ಷಾತ್ ಮಹಾದೇವನೇ ಬಂದು ಪೀಠದಲ್ಲಿ ಕೂರುತ್ತಾನೆ ಎಂಬ ನಂಬಿಕೆಯಿಂದ ಪಂಡಿತರು ಈ ರೀತಿ ಮಾಡಿದ್ದಾರೆ. ಪಂಡಿತರಿಗೆ ಶಿವನ ಮೇಲೆ ಅಪಾರವಾದ ಭಕ್ತಿ ಮತ್ತು ನಂಬಿಕೆ ಇದೆ ಎಂದು ಪಕ್ಕದವರು ಹೇಳಿದರು. ಮತ್ತೊಂದು ದಿನ ಮುಂಜಾನೆಯೇ ಎದ್ದು ಸ್ನಾನ ಮಾಡಿ ಶಿವ ಮಂದಿರಕ್ಕೆ ಹೊರಟರು. ಮತ್ತೆ ಪತ್ನಿಯು ಇದೇನು ಇಷ್ಟು ಬೇಗ ಹೊರಟಿರಿ ಎಂದು ಕೇಳಿದಾಗ, ನಾಳೆ 'ಮಹಾ ಶಿವರಾತ್ರಿ' ವಿಶೇಷ ಪೂಜೆ ಇದೆ ಭಕ್ತಾದಿ ಗಳು ತುಂಬಾ ಜನ ಬರುತ್ತಾರೆ. ಕಾವಡಿಯಲ್ಲಿ ಶಿವನಿಗೆ ಜಲಾಭಿಷೇಕ ಮಾಡಬೇಕು. ರಾತ್ರಿಯೆಲ್ಲಾ ಯಾಮ ಪೂಜೆ ನಡೆಯಬೇಕು. ಬಹಳ ಕೆಲಸ ವಿದೆಯೆಂದು ಹೊರಟರು. ಪಂಡಿತರು ಮುಂಜಾನೆಯೇ ಶಿವಾಲಯಕ್ಕೆ ಬಂದರು. ಎಲ್ಲಾ ತಯಾರಿ ಮಾಡಿದ ಮೇಲೆ ಶಿವನ ಮುಂದೆ ಪೀಠವನ್ನು ಇಟ್ಟು ಮೆತ್ತನೆ ಕಾಶಿ ಪೀತಾಂಬರ ಹಾಸನ್ನು ಹಾಸಿದರು ಇನ್ನು ಪೂಜೆ ಶುರು ಮಾಡ ಬೇಕು ಎಂದುಕೊಂಡರು. ಆ ಸಮಯಕ್ಕೆ ಶಿವಾಲಯದ ಕಾರ್ಯಕ ರ್ತರೂಬ್ಬರು ಬಂದು ರಾಮಕೃಷ್ಣ ಪಂಡಿತರೇ, ‘ಸ್ವಾಮಿ ಮಹಾರಾಜರು’ ಶಿವನ ದರ್ಶನಕ್ಕೆ ಬರುತ್ತಿದ್ದಾರೆ. ಅವರು ಬಂದು ದರ್ಶನ ಮಾಡಿಕೊಂಡು ಹೋದ ಮೇಲೆ ಜನಗಳನ್ನು ಬಿಡಬೇಕಂತೆ ಎಂದು ಓಡಿ ಬಂದು ಹೇಳಿದ. ಸ್ವಾಮಿ ಮಹಾರಾಜರು ಆಗಮಿಸುತ್ತಿದ್ದಂತೆ ಭಕ್ತರೆಲ್ಲರೂ ಭಕ್ತಿಯಿಂದ 'ಸ್ವಾಮಿ ಮಹಾರಾಜ್ಕೀ ಜೈ ಜೈ ' ಬೋಲೋ ಮಹಾರಾಜ್ ಕೀ ಜಯ್' ಎಂದು ಕೂಗುತ್ತಿದ್ದರು. ಸ್ವಾಮಿಗಳು ಒಳಗೆ ಬಂದರು ಎಲ್ಲರಿಗೂ ಕಲ್ಯಾಣ ವಾಗಲಿ ಎಂದು ಹಾರೈಸಿ, ನಾನು ಮಂದಿರದಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದು ಕೊಳ್ಳುವೆ ಎಂದರು. ಭಕ್ತಾದಿಗಳು ಹೊರಗೆ ಹೋದರು. ಸ್ವಾಮಿಗಳು ಶಿವನ ಮುಂದೆ ಹಾಸಿದ್ದ ಪೀಠವನ್ನು ನೋಡಿದರು. ಓಹೋ ಪಂಡಿತ್ ಜಿ ನನಗಾಗಿ ರೇಷ್ಮೆ ವಸ್ತ್ರ ಹಾಸಿ ಅಲಂಕರಿಸಿದ ಸುಂದರ ಪೀಠವನ್ನು ಇಟ್ಟಿರುವಿರಾ? ಒಳ್ಳೆಯದು. ಹೌದು ಪೀಠ ಬಹಳ ಚೆನ್ನಾಗಿದೆ. ನನಗಾಗಿ ಹಾಸಿರುವುದು ಅಲ್ಲವೇ? ಇದರ ಮೇಲೆ ಕುಳಿತು ನಾನು ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದರು. ಕ್ಷಮಿಸಿ ಸ್ವಾಮಿ ಮಹಾರಾಜರೇ, ಈ ಆಸನವನ್ನು ಮಹಾದೇವನಿಗಾಗಿ ಅಲಂಕರಿಸಿ ಸಿದ್ಧಪಡಿಸಿರುವೆ. ಪೂಜಾ ಸಮಯದಲ್ಲಿ ಸಾಕ್ಷಾತ್ ಮಹದೇವ ಬಂದು ಪೀಠದಲ್ಲಿ ವಿರಾಜಮಾನನಾಗುತ್ತಾನೆ ಇದನ್ನು ಕೇಳುತ್ತಿದ್ದಂತೆ ಸಿಟ್ಟಿ ನಿಂದ ಸುಸು ಗುಡುತ್ತಲೇ ಸ್ವಾಮಿ ಮಹಾರಾಜರು ಪಕಪಕನೇ ಜೋರಾಗಿ ನಕ್ಕು, ಏ ಮೂರ್ಖ ಪಂಡಿತ, ಸರಿಯಾಗಿ ಕೇಳಿಸಿಕೋ, ಭಗವಂತ ಬಂದು ಪೀಠದಲ್ಲಿ ಕುಳಿತುಕೊಳ್ಳುತ್ತಾನೆಯೇ, ಇದಂತೂ ಅಸಾಧ್ಯವಾದ ವಿಷಯವೇ ಸರಿ, ಎಂದು ಇನ್ನೂ ಜೋರಾಗಿ ನಕ್ಕು ನಿನಗೇನು ಹುಚ್ಚು ಗಿಚ್ಚು ಹಿಡಿದಿದೆ ಯೇ ಕೇಳಿದಾಗ, ಇಲ್ಲ ಸ್ವಾಮಿ ಮಹಾರಾಜ ನನಗೆ ಅಪಾರವಾದ ನಂಬಿಕೆ ಇದೆ ಏಕೆಂದರೆ ಪ್ರತಿವರ್ಷದ ಶಿವರಾತ್ರಿ ಹಾಗೂ ವಿಶೇಷ ಸಂದರ್ಭದಲ್ಲಿ ಸ್ವತಃ ಪರಮೇಶ್ವರನು ಪೂಜೆಯ ಸಮಯಕ್ಕೆ ಬಂದು ಪೀಠದಲ್ಲಿ ವಿರಾಜ ಮಾನರಾಗಿರುತ್ತಾರೆ ನನಗೆ ಅದರ ಅನುಭವ ಆಗಿದೆ ಎಂದರು. ಸ್ವಾಮಿ ಮಹಾರಾಜರು, ಏನೋ ಪಂಡಿತ, ನೀನೇನು ದೊಡ್ಡ ಶಿವನ ಔಪಾಸಕನೇ? ಹಾಗಿದ್ದರೆ, ಭಗವಾನ್ ಬೋಲೆನಾಥರು ಈ ಪೀಠವನ್ನು ಅಲಂಕರಿಸಿರುತ್ತಾರೆ. ಎಂಬುದನ್ನು ಪ್ರತ್ಯಕ್ಷವಾಗಿ ಪ್ರಮಾಣೀಕರಿಸುವೆಯಾ? ಎಂದು ಸವಾಲು ಹಾಕಿದರು. ಮಹಾರಾಜ್, ಶಂಕರ ಭಗವಾನನು ಬಂದು ಪೀಠದಲ್ಲಿ ಕುಳಿತಿರುತ್ತಾರೆ. ಆದರೆ ಕಣ್ಣಿಗೆ ಕಾಣಿಸುವುದಿಲ್ಲ. ಅವರ ಅನುಗ್ರಹದಿಂದ ನನ್ನ ಪೂಜೆ ಸಾಂಗ ವಾಗಿ ನೆರವೇರುತ್ತದೆ ಎಂದು ಪಂಡಿತರು ವಿಶ್ವಾಸದಿಂದ ಹೇಳಿದರು.ಏಯ್ ಮೂರ್ಖ ಪಂಡಿತ, ದುರಹಂಕಾರಿ, ಆಗಿನಿಂದ ಹೇಳಿದ್ದನ್ನೇ ವದರುತ್ತಿದೆಯ ಲ್ಲ ನೀನು ಮಾಡಿದ ಪೀಠದಲ್ಲಿ ಶಂಕರ ಬಂದು ಪವಡಿಸುತ್ತಾರೆ ಎಂಬುದನ್ನು ನನಗೆ ಸಾಬೀತು ಪಡಿಸಬೇಕು. ಆಗ ನಿನ್ನ ಭಕ್ತಿಯ ಶಕ್ತಿ ಎಷ್ಟೆಂದು ನಾನೇ ಹೇಳುತ್ತೇನೆ. ನಮ್ಮಿಬ್ಬರ ವಾದದಲ್ಲಿ ಯಾವುದು ಸತ್ಯ ನಾಳೆ ಗೊತ್ತಾಗುತ್ತದೆ. ಸ್ವಾಮಿ ಮಹಾರಾಜರೇ, ನಾಳೆ ತನಕ ನನಗೆ ಸಮಯ ಕೊಡಿ ನಿಮಗೆ ಗೊತ್ತಾಗುತ್ತದೆ ಎಂದು ಪಂಡಿತರು ವಿನಯದಿಂದ ಹೇಳಿದರು. ಆಯ್ತು ನನಗೆ ನಿನ್ನ ಮಾತಿನಲ್ಲಿ ವಿಶ್ವಾಸವಿದೆ ನಾಳೆಯ ತನಕ ಕಾಯುವೆ. ಆದರೆ ಮತ್ತೇನಾದರೂ ನಿನ್ನ ಚಾಲಾಕಿ ಬುದ್ಧಿಯನ್ನು ತೋರಿಸುವಿ ಆದ್ದ ರಿಂದ ಈ ಪೀಠವನ್ನು ನಾನೇ ಮನೆಗೆ ತೆಗೆದುಕೊಂಡು ಹೋಗಿ ನಾಳೆ ತರುತ್ತೇನೆ ಎಂದರು. ಆಯ್ತು ಸ್ವಾಮಿ ಮಹಾರಾಜ ನೀವೇ ಭಗವಂತ ಕೂರುವ ಪೀಠದ ಎದುರು ಕುಳಿತು ಪರೀಕ್ಷೆ ಮಾಡಿ ನೋಡಿ ನಾನು ಹೇಳಿದ್ದು ಸುಳ್ಳಾದರೆ ಆ ಶೃಂಗಾರದ ಪೀಠದಲ್ಲಿ ನೀವೇ ವಿರಾಜಮಾನರಾಗಿ ಎಂದು ಪಂಡಿತನು ಹೇಳಿದನು. ಸ್ವಾಮಿ ಮಹಾರಾಜರು ಆಯ್ತು ನೀನು ಹೇಳಿದ್ದೇ ನಿಜವಾದರೆ, ನಾನು ನಿನ್ನ ಸೇವಕನಾಗುತ್ತೆನೆ. ಒಂದು ವೇಳೆ ಭಗವಂತನು ಪೀಠದ ಮೇಲೆ ಕೂರದಿದ್ದರೆ ದೇವಸ್ಥಾನದಿಂದ ನಿನ್ನನ್ನು ಹೊರಗೆ ಓಡಿಸುತ್ತೇನೆ ಎಂದರು. ಪಂಡಿತನು ಆಗಲಿ ಸ್ವಾಮಿ ಮಹಾರಾಜ ನಿಮ್ಮ ಷರತ್ತನ್ನು ನಾನು ಒಪ್ಪಿಕೊಳ್ಳುವೆ ಎಂದನು. ಸ್ವಾಮಿ ಮಹಾರಾಜರು ಪಂಡಿತರಿಂದ ಪೀಠವನ್ನು ತೆಗೆದುಕೊಂಡು ಮನೆಗೆ ಹೋದರು. ಈ ಸುದ್ದಿ ಜನಗಳ ಬಾಯಿಂದ ಜನಗಳಿಗೆ ಹರಡಿ ಎಲ್ಲಾ ಕಡೆ ಇದೇ ಸುದ್ದಿಯಾಯಿತು. ಈ ಜಗಳದಲ್ಲಿ ಯಾರು ಗೆಲ್ಲುತ್ತಾರೆ ಭಗವಂತನಿಗೇ ಗೊತ್ತು. ಪಂಡಿತರು ಹಲವಾರು ವರ್ಷಗಳಿಂದಲೂ ಭಕ್ತಿ ಹಾಗೂ ನಿಷ್ಟೆ ಯಿಂದ ಶಿವನ ಪೂಜೆಯನ್ನು ಮಾಡುತ್ತಿದ್ದಾರೆ ಅವರಿಗೆ ಜಯವಾಗುತ್ತದೆ. ನಾಳೆ ತನಕ ಕಾಯಲೇಬೇಕು. ಆಶ್ರಮಕ್ಕೆ ಬಂದ ಸ್ವಾಮಿ ಮಹಾರಾಜರು ತಮ್ಮ ಶಿಷ್ಯನ ಹತ್ತಿರ 'ಈ ಪಂಡಿತ ಬಹಳ ವರ್ಷಗಳಿಂದ ದೇವಸ್ಥಾನದ ಕಾಣಿಕೆ, ದಕ್ಷಿಣೆ, ಹುಂಡಿಯಲ್ಲಿರುವ ಹಣವನ್ನು ಚೆನ್ನಾಗಿ ಬಳಸಿಕೊಂಡಿದ್ದಾ ನೆ. ನಾಳೆ ಅವನ ಬಣ್ಣ ಬಯಲಾಗುತ್ತದೆ ಎಂದು ಬಹಳ ವಿಶ್ವಾಸದಿಂದ ಶಿಷ್ಯನೆದರು ಹೇಳಿದರು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಪಂಡಿತರು ಮನೆಗೆ ಬಂದು ಎಲ್ಲವನ್ನು ಪತ್ನಿಗೆ ಎಲ್ಲವನ್ನು ಹೇಳಿದರು. ಆಕೆ,‌ ವಿಶ್ವಾಸದಿಂದ ನೀವು ಇಷ್ಟು ವರ್ಷಗಳಿಂದ ಬೋಲೇನಾಥನನ್ನು ನಂಬಿ ಕೊಂಡು ಬಂದಿದ್ದೀರಿ ಅವನು ಕಾಪಾಡುತ್ತಾನೆ ಎಂದಳು. ಪಂಡಿತರು ಶಿವನ ಇಚ್ಛೆ ಏನು ಇದೆಯೋ ಅದೇ ಆಗಲಿ ನಾನಂತೂ ಶಿವ ಏನೇ ತೀರ್ಪುಕೊಟ್ಟರು ಅದನ್ನು ಪ್ರಸಾದ ಎಂದುಕೊಳ್ಳುತ್ತೇನೆ. ಅದರಂತೆ ನಡೆಯುತ್ತೇನೆ. ಎಂದುಕೊಂಡು ಹೇ, ದೇವಾ, ಪರಮೇಶ್ವರ, ಶಿವಶಂಕರ, ಗೌರೀಶಂಕರ, ನಾಳೆ ಭಕ್ತನ ಪರೀಕ್ಷೆ ನಡೆಯುತ್ತಿದೆ. ನನಗೆ ನಂಬಿಕೆ ಇದೆ. ನೀನು ನನಗೆ ಸಹಾಯ ಮಾಡುವೆ. ನೀನೇ ರಕ್ಷಿಸು ಎಂದು ಪ್ರಾರ್ಥಿಸಿದನು. ಮರುದಿನವೇ 'ಮಹಾಶಿವರಾತ್ರಿ' ರಾಮಕೃಷ್ಣ ಪಂಡಿತರು ಶಿವಾಲಯಕ್ಕೆ ಬಂದರು. ಸ್ವಾಮಿ ಮಹಾರಾಜರು ಬಂದರು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಪಂಡಿತ ನಿನಗೋಸ್ಕರ ನಾನು ಕಾದಿದ್ದೆ ತೆಗೆದುಕೊ ಎಂದು ರೇಷ್ಮೆ ವಸ್ತ್ರದ ಶಿವನ ಆಸನವನ್ನು ಸ್ವಾಮಿ ಮಹಾರಾಜ ಕೊಟ್ಟು ನೀನು ಹೇಳಿದಂತೆ ಈ ಆಸನದ ಮೇಲೆ ಶಿವ ವಿರಾಜಮಾನನಾಗುವುದು ನೋಡೋಣ ಎಂದು ಪೀಠದ ಎದುರಿಗೆ ಕುಳಿತರು. ಪಂಡಿತರು ಪೀಠವನ್ನು ಶಿವನ ಮುಂದಿರಿಸಿ ಭಕ್ತಿಯಿಂದ 'ಓಂ ನಮಃ ಶಿವಾಯ' ಎಂದು ಶಿವ ಪಂಚಾ ಕ್ಷರಿ ಮಂತ್ರವನ್ನು ಜಪಿಸುತ್ತ ಪೂಜೆ ಪ್ರಾರಂಭ ಮಾಡಿದರು. ಶ್ರೀಮದಾತ್ಮನೇ ಗುಣೈಕ ಸಿಂಧುವೇ ನಮಃ ಶಿವಾಯ| ಧಾಮಲೇಶಧೂತಕೋಕ ಬಂದವೇ ನಮಃ ಶಿವಾಯ| ನಾಮಶೇಷಿತಾನಮದ್ಭವಾಂಧವೇ ನಮಃ ಶಿವಾಯ| ಪಾಮರೇತರಪ್ರಧಾನಬಂಧವೇ ನಮಃ ಶಿವಾಯ|| ಸ್ತೋತ್ರ ಪಠಿಸುತ್ತ ಕಣ್ಮುಚ್ಚಿ ಶಿವಧ್ಯಾನ ಮಾಡುತ್ತಾ, ಹೇ ಶಿವ ಶಂಕರ ಅಭಯಂಕರ ಪಾಲಯಮಾಂ, ಜಗದ್ರಕ್ಷಕ ಸರ್ವ ವ್ಯಾಪಿ ಸರ್ವೇಶ್ವರ, ನಾನು ಸತ್ಯವನ್ನೇ ನುಡಿದಿದ್ದರೆ ಅಂದಿನಿಂದ ಇಂದಿನ ತನಕ, ನಿಷ್ಠೆ ಹಾಗೂ ಭಕ್ತಿಯಿಂದ ನಿನ್ನ ಪೂಜೆಯನ್ನು ಮಾಡಿದ್ದೇ ಆದರೆ, ರೇಷ್ಮೆ ವಸ್ತ್ರದಿಂದ ಶೃಂಗರಿಸಿದ ಆಸನದ ಮೇಲೆ ವಿರಾಜಮಾನನಾಗು ನೀಲಕಂಠನೇ, ದೀನಬಂದು, ಎಂದು ಕಣ್ಣು ಮುಚ್ಚಿ “ಶಿವ ಪಂಚಾಕ್ಷರಿ” ಮಂತ್ರ ಪಠಿಸುತ್ತಾ, ಅನನ್ಯ ಭಕ್ತಿಯಿಂದ ಬೇಡಿಕೊಂಡು. ನಂತರ ಸ್ವಾಮಿ ಮಹಾರಾಜ್ ಗೆ, ಬನ್ನಿ ಪೀಠವನ್ನು ಪರೀಕ್ಷಿಸಿ ಇದರಲ್ಲಿ ಪರಮೇಶ್ವರ ವಿರಾಜಮಾನನಾಗಿಲ್ಲದಿದ್ದರೆ ನೀವೇ ಆಸನದಲ್ಲಿ ಕುಳಿತುಕೊಳ್ಳಿ ಎಂದರು. ಅರೇ ಇದೆಂಥ ದಡ್ಡ ಮಾತು. ಹಾಲಿಗೂ, ನೀರಿಗೂ ಇರುವ ವ್ಯತ್ಯಾಸ ನೀನೇ ನೋಡುವಿಯಂತೆ. ಹಾಲು ಹಾಲೇ, ನೀರು ನೀರೇ, ಆಗಿರುತ್ತದೆ. ನಿನ್ನೆದುರಿಗೆ ಶೃಂಗರಿಸಿದ ಪೀಠದಲ್ಲಿ ಕುಳಿತುಕೊಳ್ಳುತ್ತೇವೆ ನೋಡುತ್ತಿರು, ಅದರಲ್ಲಿ ಅನುಮಾನವೇ ಬೇಡ ಎಂದು ಶಿವನು ಕೂರುವ ಪೀಠದ ಹತ್ತಿರ ಬಂದರು.‌'ರೇಷ್ಮೆ ವಸ್ತ್ರದಿಂದ ಅಲಂಕರಿಸಿದ ಪೀಠ' ವನ್ನು ಕೈ ಯಿಂದ ಎತ್ತಲು ನೋಡಿದರು. ಜಪ್ಪಯ್ಯ ಅಂದರೂ ಅಲುಗಾಡಲಿಲ್ಲ. ನೆಲಕ್ಕೆ ಅಂಟಿಸಿದಂತೆ ಅಂಟಿಕೊಂಡಿತ್ತು. ಇದು ಹೇಗೆ ಸಾಧ್ಯ ನಾನೇ ಈಗ ತಾನೆ ತಂದಿಟ್ಟಿದ್ದು, ‌ನನಗೆ ಬೆವರು ಬರಲು ಶುರುವಾಗುತ್ತಿದೆ, ಇದನ್ನು ಎತ್ತುವು ದಿರಲಿ, ಅಲುಗಾಡಿಸಲು ಕಷ್ಟವಾಗುತ್ತಿದೆ. ಬಳಲಿ ಬೆಂಡಾಗಿದ್ದ ಸ್ವಾಮಿ ಮಹಾರಾಜರು, ಹೌದು ಪಂಡಿತರೇ ನೀವು ಹೇಳಿದಂತೆ ಭಗವಾನ್ ಶಂಕರನು ಇದರಲ್ಲಿ ವಿರಾಜಮಾನನಾಗಿದ್ದಾನೆ. ಸುಸ್ತಾದ ಸ್ವಾಮಿ ಮಹಾರಾ ಜರು ಪ್ರಯತ್ನವನ್ನು ಬಿಟ್ಟು ಭಯದಿಂದ, ಹೇ ಭಗವಾನ್ ಶಂಕರ ಆಸನದಲ್ಲಿ ನಿಜವಾಗಿಯೂ ನೀನು ಕುಳಿತಿರುವೆ. ಮಹಾದೇವ ನನ್ನ ಅಪರಾಧವಾಯಿತು ಕ್ಷಮಿಸು ದೇವ ಪಶ್ಚಾತಾಪದಿಂದ ಬೇಡಿಕೊಂಡು, ಪಂಡಿತರಿಗೆ,‌ ಸ್ವಾಮಿ ನೀವು ನಿಜವಾಗಿಯೂ ಶಂಕರನ ಪರಮಭಕ್ತರು ನಿಮ್ಮ ಭಕ್ತಿ ನಿಜವಾದದ್ದು. ನನ್ನದು ಆಡಂಬರ, ಭೋಲೆನಾಥನ ಪ್ರಾಮಾ ಣಿಕ ಭಕ್ತರು ನೀವು ಎಂದು ಕೈಮುಗಿದು ಹೇಳುತ್ತಿದ್ದರೆ, ಭಕ್ತರೆಲ್ಲರೂ ಈ ದೃಶ್ಯವನ್ನು ಕೌತುಕದಿಂದ ನೋಡುತ್ತಿದ್ದರು. ಇಲ್ಲ ಸ್ವಾಮಿ ಮಹಾರಾಜ್ ಭಗವಾನ್ ಶಂಕರನಿಗೆ ಎಲ್ಲರೂ ಸಮಾನ ಭಕ್ತರೆ ಆಗಿರುವರೆಂದು ಪಂಡಿತರು ವಿನಯದಿಂದ ಹೇಳಿದರು. ಸ್ವಾಮಿ ಮಹಾರಾಜ್ ಹಾಕಿದ ಸವಾಲಿನಲ್ಲಿ ಪಂಡಿತರ ಭಕ್ತಿಯ- ಶಕ್ತಿಯೇ ಗೆದ್ದಿತು. ಪಂಡಿತ್ ಜೀ ಜಯ್ ಎಂದು ಜನರು ಜಯ ಘೋಷ ಮಾಡಿದರು. ಕಲಾಭ್ಯಾಂ ಚುಡಾಲಂಕೃತ ಶಶಿಕಲಾಭ್ಯಾಂ ನಿಜ ತಪ :- ಫಲಾಭ್ಯಾಂ ಭಕ್ತೇಷು ಪ್ರಕಟಿತ ಫಲಾಭ್ಯಾಂ ಭವತು ಮೇ! ಶಿವಾಭ್ಯಾಮಸ್ತೋಕತ್ರಿಭುವನ ಶಿವಾಭ್ಯಾಂ ಹೃದಿಪುನರ್! ಭವಾಭ್ಯಾಮಾನಂದಸ್ಫುರದನುಭವಾಭ್ಯಾಂ ನತಿರಿಯಂ ! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ