ಕೃಷ್ಣೆ 🦚💙
691 views
1 days ago
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ #ರಾಮಾಯಣ ರಾಮಾಯಣ ಪಾತ್ರ ತ್ರಿಜಟೆ :- ರಾಮಾಯಣದಲ್ಲಿ ಮುಖ್ಯ ಪಾತ್ರವಲ್ಲದಿದ್ದರೂ ಬಂದು ಹೋಗುವ ಪಾತ್ರ ಗಳಲ್ಲಿ ಒಬ್ಬಳಾದ ' ತ್ರಿಜಟೆ' ರಾವಣನ ಸಾಮ್ರಾಜ್ಯ ಲಂಕಾ ನಗರದಲ್ಲಿದ್ದ ಒಬ್ಬ ರಾಕ್ಷಸಿ. ಇವಳು ಗೊತ್ತೇ ಇಲ್ಲ ಅನ್ನುವಂತಿಲ್ಲ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿ ಮಿಂಚಿದ್ದಾಳೆ. ಅದು ಅವಳ ವೈಯುಕ್ತಿಕ ನಡೆ ನುಡಿಯಿಂದ ಪ್ರಮುಖ ಪಾತ್ರ ವಾಗಿದೆ. ರಾವಣ ಸೀತೆಯನ್ನು ಕದ್ದೊಯ್ದು ಲಂಕಾ ನಗರ ಸಾಮ್ರಾಜ್ಯದ ಅಶೋಕ ವನದಲ್ಲಿ ಇಟ್ಟು ಅವಳಿಗೆ ಕಾವಲಾಗಿ ರಾಕ್ಷಸಿಯ ರನ್ನು ಇಟ್ಟನು. 'ತ್ರಿಜಟೆ' ಉಳಿದೆಲ್ಲ ರಾಕ್ಷಸಿಯರಿಗೆ ಮುಖ್ಯಸ್ಥೆಯಾಗಿದ್ದಳು. ರಾಕ್ಷಸಿಯರೆಲ್ಲಾ ಸೀತೆಯ ಜೊತೆ ಕೆಟ್ಟದಾಗಿ ನಡೆದುಕೊಂಡರೂ, ತ್ರಿಜಟೆ ಮಾತ್ರ ಸೀತೆಯನ್ನು ಅರ್ಥ ಮಾಡಿಕೊಂಡ ನಂತರ ಬಹಳ ಪ್ರೀತಿ ಯಿಂದ ಮಗಳಂತೆ ನೋಡಿ ಕೊಂಡಳು. ತೊಂದರೆ ಕೊಡುವ ರಾಕ್ಷಸಿಯರಿಗೆಲ್ಲ ಸೀತೆಯ ಮೇಲೆ ಭಯ ಭಕ್ತಿ ಹುಟ್ಟುವಂತ ಕನಸುಗಳನ್ನು ಹೇಳಿ ಸೀತೆಯ ತಂಟೆಗೆ ಹೋಗದಂತೆ ಮಾಡುತ್ತಿದ್ದಳು. ರಾಕ್ಷಸಿಯಾಗಿಯೂ ಮಾಡಿದ ಅವಳ ಒಳ್ಳೇ ಕಾರ್ಯಗಳು 'ರಾಮಾಯಣವನ್ನು' ನರನಾಡಿಗಳಲ್ಲು ತುಂಬಿ ಕೊಂಡ ಎಲ್ಲರ ಹೃದಯದ ಮೂಲೆಯಲ್ಲೂ ಅವಳಿಗೊಂದು ಸ್ಥಾನ ಕೊಟ್ಟಿ ದ್ದಾರೆ. 'ತ್ರಿಜಟೆ' ಯ ಕುರಿತಾದ ಮಾಹಿತಿಗಳು, ವಾಲ್ಮೀಕಿ -ತುಳಸಿದಾಸರಂತ ಪ್ರಮುಖ ರಾಮಾಯಣಗಳು ಮತ್ತು ಅದ್ಭುತ ರಾಮಾಯಣ- ಆನಂದ ರಾಮಾಯಣ ಇಂಥ ಗ್ರಂಥಗಳಲ್ಲಿ ಸಿಗದಿದ್ದರೂ, ಹೊಸದಾಗಿ ಬಂದ ಇತರೆ ರಾಮಾಯಣಗಳು ಇವಳನ್ನು ಗುರುತಿಸಿ ಇವಳ ಕುರಿತಾಗಿ ವಿವರಿಸಿದ್ದಾರೆ.‌ ರಾವಣನ ತಮ್ಮ ವಿಭೀಷಣ ಮತ್ತು ಆತನ ಪತ್ನಿ ಸರಮಾಳ ಮಗಳು 'ತ್ರಿಜಟೆ'. ಇವಳ ದೊಡ್ಡಪ್ಪ ರಾವಣನ ಅರಮನೆಯ ಎಲ್ಲಾ ಸೇವಕಿಯರಿಗೆ ಮುಖ್ಯಸ್ಥೆ ಯಾಗಿದ್ದಳು. ವಿಭೀಷಣ ಆಸ್ಥಾನದಲ್ಲಿ ನಿಷ್ಠಾವಂತ- ಪ್ರಾಮಾಣಿಕ ಮಂತ್ರಿ ಗಳಲ್ಲಿ ಪ್ರಮುಖನಾಗಿದ್ದನು, ಹಾಗೂ ಮಂಡೋದರಿಯಂಥ ನ್ಯಾಯ ನೀತಿ ಧರ್ಮ ಪರಾಯಣೆಯುಳ್ಳ ಪತಿವ್ರತೆ. ರಾವಣನ ಜೊತೆ ಇವರೆಲ್ಲ ಇದ್ದ ಕಾರಣ ರಾವಣ ದುಷ್ಕೃತ್ಯಗಳನ್ನು ಮಾಡುತ್ತಾ ಬಂದಿದ್ದರೂ ಅವೆಲ್ಲ ಎಲೆಮರೆಕಾಯಿಯಂತೆ ಅಡಗಿತ್ತು. ಆದರೆ ಲೋಕಮಾತೆ ಸೀತೆಯನ್ನು ಯಾವಾಗ ರಾವಣ ಕದ್ದುತಂದು ಬಂಧಿಸಿಟ್ಟನೋ ಆಗ ರಾವಣನ ದುಷ್ಕೃತ್ಯ ಗಳು ಒಂದೊಂದಾಗಿ ಬಯಲಿಗೆ ಬರುತ್ತದೆ. ರಾಮನ ಪರಮಭಕ್ತನಾದ ಸರಳ–ಸಜ್ಜನ ವಿಭೀಷಣನು ಲಂಕೆಯಲ್ಲಿದ್ದಾಗಲೂ ರಾಮನಾಮವನ್ನು ಸ್ಮರಿಸುತ್ತಿದ್ದನು. ರಾವಣನ ತಪ್ಪುಗಳನ್ನು ಕಂಡಾಗ ನೇರವಾಗಿ ಖಂಡಿಸಿ ಎಚ್ಚರಿಸುತ್ತಿದ್ದನು. ತನ್ನ ಧರ್ಮ–ಕರ್ಮ ಮತ್ತು ತಪಸ್ಸಿನ ಫಲವಾಗಿ ಬ್ರಹ್ಮನಿಂದ ‘ಚಿರಂಜೀವಿ’ ವರ ಪಡೆದನು. ಸೀತೆಯನ್ನು ರಾವಣನು ಅಪಹರಿಸಿದಾಗ ಅದಕ್ಕೆ ಮೊದಲ ವಿರೋಧ ವ್ಯಕ್ತಪಡಿಸಿದವನು ವಿಭೀಷಣನೇ. ರಾವಣನು ಮಾತು ಕೇಳದಾಗ, ತನ್ನ ದೊಡ್ಡ ಕುಟುಂಬವನ್ನೂ ಸಾಮ್ರಾಜ್ಯವನ್ನೂ ತೊರೆದು ಶ್ರೀರಾಮನ ಆಶ್ರಯಕ್ಕೆ ಬಂದು ವಾನರಸೇನೆಯಲ್ಲಿ ಸೇರಿದ್ದನು. ರಾಕ್ಷಸಕುಲದಲ್ಲಿ ಹುಟ್ಟಿದರೂ ವಿಭೀಷಣನು ರಾಮಭಕ್ತಿಯಿಂದ ಸದ್ಗುಣಗಳ ಮೂರ್ತಿಯಾಗಿದ್ದನು. ರಸಭರಿತ ಕಸಿ ಮಾವಿನ ಮರದ ಕೆಳಗೆ ಇರುವ ಔಷಧಿಯುಕ್ತ ‘ಕಾಕಿ’ ಹಣ್ಣಿನ ಪುಟ್ಟ ಗಿಡ ಯಾರಿಗೂ ಕಾಣದಂತೆ, ವಿಭೀಷಣನ ಮಹಿಮೆಯ ನಡುವೆ ತ್ರಿಜಟೆಯ ಸೌಮ್ಯ ಗುಣಗಳು ಮಸುಕಾಗಿದ್ದವು. ಆದರೂ ತನ್ನ ಸಜ್ಜನಿಕೆಯ ಮೂಲಕವೇ ತ್ರಿಜಟೆ ಸೀತಾರಾಮರ ಒಲುಮೆಗೆ ಪಾತ್ರಳಾದಳು. ಇಷ್ಟೆಲ್ಲಾ ಒಳ್ಳೆ ಗುಣವುಳ್ಳ ಇವಳು ರಾಕ್ಷಸಿಯಾಗಿ ಹುಟ್ಟಲು ಕಾರಣ ಏನು ಎಂದರೆ, ಪೂರ್ವ ಜನ್ಮದಲ್ಲಿ ರಾಮನ ಅವತಾರವಾಗುವ ಮೊದಲು ವೈಕುಂಠ ದಲ್ಲಿ ಮಹಾವಿಷ್ಣು ಮತ್ತು ಲಕ್ಷ್ಮಿಯ ಸೇವೆ ಮಾಡಲು'ರತ್ನ ಜ್ಯೋತಿ' ಎಂಬ ಹೆಸರಿನ ಗಂಧರ್ವಕನ್ಯೆ ಇದ್ದಳು. ಇವಳೇ ರಾಮಾಯಣದ ತ್ರಿಜಟೆ. ಒಮ್ಮೆ ವಿಷ್ಣುವಿನ ದರ್ಶನ ಮಾಡಲು ಅಂಗೀರಸ ಮಹರ್ಷಿಗಳು ವೈಕುಂಠ ಕ್ಕೆ ಬಂದರು. ಅವರ ಎದುರಿಗೆ ಗಂಧರ್ವ ಕನ್ಯೆ ( ತ್ರಿಜಟೆ) ಸ್ವಲ್ಪ ಅಹಂಕಾರ ದಿಂದ ವೈಯಾರ ಮಾಡುತ್ತಾ ಇದ್ದಳೆ ಹೊರತು, ಅಂಗೀರಸ ಮಹರ್ಷಿಗಳು ಎದುರಿಗೆ ಬಂದರೂ ಮಹರ್ಷಿಗಳಿಗೆ ತಲೆಬಾಗಲಿಲ್ಲ ಇದನ್ನು ಗಮನಿಸಿ ಕೋಪಗೊಂಡ ಮಹರ್ಷಿಗಳು ನೀನು ಭೂಲೋಕದಲ್ಲಿ ರಾಕ್ಷಸಿ ಯಾಗಿ ಜನ್ಮ ತಾಳು ಎಂದು ಶಾಪ ಕೊಟ್ಟರು. ಈ ಶಾಪದ ಪ್ರಭಾವದಿಂದ ಪ್ರಸಿದ್ಧಿ ಪಡೆದ ಲಂಕಾ ಸಾಮ್ರಾಜ್ಯದ, ಸದ್ಗುಣವಂತ ವಿಭೀಷಣನ ಮಗಳಾಗಿ ಜನಿಸಿದಳು. ಅವಳ ಪೂರ್ವ ಜನ್ಮದ ಪುಣ್ಯದಿಂದ ಲಕ್ಷ್ಮಿಯ ಅಂಶವಾದ ಸೀತಾಮಾತೆಯ ಕೈಂಕರ್ಯ ಮತ್ತೆ ದೊರಕುವಂತಾಯಿತು. ರಾವಣ ಸೀತೆಯನ್ನು ಕದ್ದೋಯ್ದು ಬಂಧಿಸಿಟ್ಟಾಗ ಒಂದಷ್ಟು ರಾಕ್ಷಸೀಸೇವಕಿ ಯರನ್ನು ಸೇವೆ ಮಾಡಲು ನೇಮಿಸಿದ್ದನು. ಅವರೆಲ್ಲ ರಾವಣನ ಗುಣಗಾನ ಮಾಡುತ್ತಾ ಸೀತೆಯನ್ನು ಮರಳು ಮಾಡತ್ತಾ ರಾವಣನನ್ನು ಇಷ್ಟಪಡುವಂತೆ ಮಾಡುವ ಪ್ರಯತ್ನ ಮಾಡುತ್ತಲೇ ಇದ್ದರು. ಇದು ಸೀತೆಗೆ ಸಹಿಸಲಸಾಧ್ಯ ಹಿಂಸೆಯಾಗಿತ್ತು. ಅವರೆಲ್ಲರೂ ಅದೆಷ್ಟೇ ಹಿಂಸೆ ಕೊಟ್ಟರು. ಸೀತೆ ಬಾಯಲ್ಲಿ ಮಾತ್ರ ರಾಮ ನಾಮ ವಿನಃ ಬೇರೆ ಏನೂ ಬರುತ್ತಿರಲಿಲ್ಲ. “ರಾಮ ನಾಮ” ಒಂದೇ ಅವಳ ಉಸಿರು -ಧೈರ್ಯ- ಶಕ್ತಿ ಆಗಿತ್ತು ಇದನ್ನೆಲ್ಲಾ ಗಮನಿಸುತ್ತಿದ್ದು, ಸ್ವಾಭಾವಿಕವಾಗಿಯೇ ಅಂತ: ಕರಣವುಳ್ಳ ತ್ರಿಜಟೆ ಒಂದು ದಿನ ಸೀತೆಗೆ ಕೇಳಿ ದಳು. ನೀನು ಹೀಗೆ ಸದಾ ಕಾಲ ರಾಮ ನಾಮ ಜಪಿಸುತ್ತಿದ್ದರೆ, ನೀನೇ ರಾಮನಾಗಿ ಬಿಡುವೆ ಎಂದಳು. ಇದನ್ನು ಕೇಳಿ ನಕ್ಕ ಸೀತೆ, ಅದು ಸಾಧ್ಯವಿಲ್ಲ ನಾನು ರಾಮನಲ್ಲಿ ಐಕ್ಯಳಾದರೂ ಸೀತೆಯಾಗಿ ಉಳಿಯಲು ಇಷ್ಟಪಡುತ್ತೇ ನೆ. ಒಂದು ವೇಳೆ ನಾನು ರಾಮನೊಳಗೆ ರಾಮ ನಾದರೆ ರಾಮನ ಸೇವೆ ಯನ್ನು ಯಾರು ಮಾಡುತ್ತಾರೆ. ನನಗೆ ರಾಮನ ಸೇವೆ ಮಾಡುವುದರಲ್ಲಿ ಸಂತೋಷ ತೃಪ್ತಿ ಅಡಗಿದೆ. ಇದೇ ನನ್ನ ಸಾರ್ಥಕತೆಯ ಬದುಕು ಎಂದಳು. ಸೀತೆಯ ಈ ಮಾತಿನಿಂದ ತ್ರಿಜಟೆಗೆ ಸೀತೆಯ ಕರ್ತವ್ಯ ನಿಷ್ಠೆ ಕಂಡು ಆಶ್ಚರ್ಯವಾಯಿತು, ಎಲ್ಲರೂ ಅವರವರ ಕರ್ತವ್ಯ ಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂಬ ಸೀತೆಯ ಕರ್ತವ್ಯ ಪ್ರಜ್ಞೆ ಮೆಚ್ಚಿದ ತ್ರಿಜಟೆ, ಸೀತೆಯನ್ನು ಜೋಪಾನವಾಗಿ ಕಾಯುತ್ತಿದ್ದಳು. ಆದರೂ ಒಮ್ಮೊಮ್ಮೆ ಉಳಿದ ರಾಕ್ಷಸಿಯರು ಸೀತೆಗೆ ಬಹಳ ತೊಂದರೆ ಕೊಡುತ್ತಿದ್ದರು. ನೀನು ರಾವಣನ ಹೆಂಡತಿ ಆಗಲೇಬೇಕು. ನಿನಗೆ ಒಪ್ಪಲು ಏನು ತೊಂದರೆ, ರಾವಣನಂತ ಶೂರ- ಧೀರ- ಸಕಲ ಸಾಮ್ರಾಜ್ಯದ ಚಿನ್ನದ ನಗರದ ಒಡೆಯ ನಿನಗೆ ಇಂಥ ಪುರುಷ ಸಿಗುವನೇ? ನೀನು ಇದಕ್ಕೆ ಒಪ್ಪದಿದ್ದರೆ ಸಾಯುವ ತನಕ ಇಲ್ಲಿಯೇ ಇದ್ದು ಕೊಳೆಯಬೇಕು. ನಿನ್ನ ಕಷ್ಟಕ್ಕೆ ಕೊನೆಯೇ ಇಲ್ಲ. ಇಂಥ ಚುಚ್ಚು ಮಾತುಗಳು, ರಾಮನಿಂದ ದೂರ ಇರುವ ನೋವು. ಒಂಟಿ ತನ ಅವಳನ್ನು ತುಂಬಾ ಕಾಡಿ ಹತಾಶೆಯಿಂದ ಕಣ್ಣೀರು ಹಾಕುವಂತೆ ಮಾಡುತಿತ್ತು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಒಂದು ದಿನ ಹೀಗೆ ರಾಕ್ಷಸಿಯರೆಲ್ಲಾ ಸೇರಿ ಸೀತೆಗೆ ತೊಂದರೆ ಕೊಡುತ್ತಿದ್ದಾಗ ತ್ರಿಜಟೆ ಬಂದು ಹೇಳಿದಳು. ನಾನು ನಿನ್ನೆ ರಾತ್ರಿ ಒಂದು ಕನಸು ಕಂಡೆ. ಆನೆ ಅಂಬಾರಿಯ ರಥದ ಮೇಲೆ ಆಕಾಶದಿಂದ ಶ್ರೀರಾಮಚಂದ್ರ -ಲಕ್ಷ್ಮಣನ ಸಮೇತ ಬಂದು ಸೀತೆಯನ್ನು ಕರೆದುಕೊಂಡು ಹೋದರು ಎಂದಳು. ಆಗ ರಾಕ್ಷಸಿಯರು ನಮ್ಮ ರಾವಣನ ಸೈನ್ಯ ಅವರನ್ನು ಬಗ್ಗು ಬಡಿಯಲಿಲ್ಲವೇ? ಎಂದು ಕೇಳಿದಾಗ ತ್ರಿಜಟೆ ಹೇಳಿದಳು ರಾವಣನ ಸೈನ್ಯವನ್ನೆಲ್ಲ ಅವರಿಬ್ಬರೇ ಧೀರರು ನುಚ್ಚು ನೂರು ಮಾಡಿದರು. ರಾವಣ ತಡೆಯಲ್ಲಿಲ್ಲವೇ? ಎಂದಿದ್ದ ಕ್ಕೆ, ರಾವಣ ನೊಂದಿಗೆ ರಾಮ ಲಕ್ಷ್ಮಣರು ಸೇರಿ ಹೋರಾಡಿ ಅವನನ್ನು ಬಾಣಗಳಿಂದ ಹೊಡೆದುರುಳಿಸಿದರು. ರಾವಣನ ದೇಹದಿಂದ ಕಪ್ಪು ಆಕೃತಿ ಯನ್ನು ಯಮದೇವ ಬಂದು ಹೊತ್ತುಕೊಂಡು ಹೋದನು. ಆಮೇಲೆ ನಾವೆಲ್ಲ ಲಂಕಾ ನಗರದಲ್ಲಿ ಅನಾಥರಾದೆವು ಎಂಬ ಕನಸನ್ನು ಭಯಂಕರ ವಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸಿದಳು. ಇದನ್ನು ಕೇಳಿ ಹೌದಾ? ರಾಮ ಲಕ್ಷ್ಮಣರೆಂಬ ವೀರರು ಮುಂದಿನ ದಿನಗಳಲ್ಲಿ ನಮ್ಮನ್ನೆಲ್ಲಾ ಬಂಧನದಲ್ಲಿ ಇಡುತ್ತಾರೋ, ಕೊಂದುಬಿಡುತ್ತಾರೋ? ಹೇಗೋ ಏನೋ? ಎಂದು ಹೆದರಿ ದರು. ತ್ರಿಜಟೆ ಹೇಳಿದಳು, ಲಂಕಾ ನಗರದಲ್ಲಿ ಅನ್ಯಾಯಗಳು ಅವ್ಯಾಹತ ವಾಗಿ ನಡೆಯುತ್ತಿದೆ. ಪಾಪದ ಕೊಡ ತುಂಬುತ್ತಿದ್ದಂತೆ ಸಾಮ್ರಾಜ್ಯ ಅಧೋ ಗತಿಯಾಗುತ್ತದೆ ಇದು ಸತ್ಯ ಎಂದಳು. ಆಗ ರಾಕ್ಷಸೀಯರು ಹಾಗಾದರೆ ನಾವು ಏನು ಮಾಡಬೇಕು ಎಂದಾಗ, ಇದಕ್ಕೆ ಒಂದೇ ಸುಲಭ ದಾರಿ ಇದೆ. ಏನು ಎಂದು ಕೇಳಿದರು. ಇನ್ನು ಮುಂದೆ ನಾವು ನಾರಾಯಣರ ಪತ್ನಿ ಲಕ್ಷ್ಮಿ ಯಂತಿರುವ ಸೀತಾಮಾತೆಗೆ ತೊಂದರೆ ಕೊಡದ ಹಾಗೆ ಚೆನ್ನಾಗಿ ನೋಡಿ ಕೊಳ್ಳಬೇಕು. ಸೀತಾ ಮಾತೆ ನಮ್ಮನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವಳು ಎಂದಳು. ಈ ರೀತಿ ತ್ರಿಜಟೆ ಕನಸಿನ ಸಂಗತಿಗಳನ್ನು ಹೇಳಿ ಹೇಳಿ ಆ ರಾಕ್ಷಸಿಯರ ಮನಸ್ಸನ್ನು ಪರಿವರ್ತಿಸಿಸೀತೆಗೆ ಕೊಡುತ್ತಿದ್ದ ಕಾಟವನ್ನು ತಪ್ಪಿಸಿದಳು. ಮುಂದೆ ರಾಮ ರಾವಣರ ಯುದ್ಧವಾಯಿತು ಸೀತೆಯನ್ನು ಬಂಧಮುಕ್ತ ಗೊಳಿಸಿದ ನಂತರ ಅವಳನ್ನು ರಾಮನ ಜೊತೆ ಕಳಿಸಿಕೊಡಲು ತ್ರಿಜಟೆ ಬಂದಳು. ರಾಮನನ್ನು ಕಣ್ತುಂಬಾ ನೋಡಿದಳು. ಪ್ರಭು ನನ್ನ ತಪ್ಪನ್ನು ಮನ್ನಿಸಿ ಎಂದು ರಾಮನ ಚರಣಕ್ಕೆರಗಿದಳು. ರಾಮ ಅವಳನ್ನು ಹಿಡಿದು ಮೇಲೆಬ್ಬಿಸಿ, ನೀನು ಮಾಡಿದ ಉಪಕಾರ ಬಹಳ ದೊಡ್ಡದು, ನಿನಗೆ ಏನು ವರಬೇಕು ಎಂದು ಮಮತೆಯಿಂದ ಕೇಳಿದನು. ಪ್ರಭು ಸದಾ ಕಾಲ ನಾನು ನಿಮ್ಮಿಬ್ಬರ ಸೇವೆಯನ್ನು ಮಾಡುವಂತಾಗಲಿ ಎಂದು ಕೇಳಿದಳು. ರಾಮ ಆಕೆಗೆ ಮುಕ್ತಿಯನ್ನು ಕರುಣಿಸಿ ಎಂದೆಂದೂ ನಮ್ಮ ಜೊತೆಯಲ್ಲಿಯೇ ಇರುವೆ ಎಂದು ವರದಾನ ಮಾಡಿದನು. ರಾಕ್ಷಸರ ಜನ್ಮದಲ್ಲಿ ಜನಿಸಿಯು ರಾಕ್ಷಸ ಗುಣಗಳನ್ನು ತೊರೆದು ಕಠಿಣ ಪರಿಸ್ಥಿತಿಯಲ್ಲಿದ್ದ ಸೀತಾಯನ್ನು ಸಂತೋಷ ಗೊಳಿಸಿ ನೋಡಿಕೊಂಡ ಕಾರಣ ಅವಳು ಪೂರ್ವಜನ್ಮದ ಶಾಪದಿಂದ ಮುಕ್ತಳಾದಳು. ಮೂಲ ರಾಮಾಯಣದಂತ ದೊಡ್ಡ ಗ್ರಂಥದಲ್ಲೂ ರಾಕ್ಷಸಿ 'ತ್ರಿಜಟೆ'ಯ ವಿಚಾರ ನಾಲ್ಕು ಸಾಲದರೂ ಇದ್ದೇ ಇರುತ್ತದೆ. ರಾಕ್ಷಸ ಬಣದ ಬಂಧನದಲ್ಲಿದ್ದ ಸೀತೆಯನ್ನು ಕಾಪಾಡಿದ “ಮಾತೃ ಹೃದಯದ ತಾಯಿ” ಎಂಬ ಖ್ಯಾತಿ ಪಡೆದು ರಾಮಾ ಸೀತೆಯ ಅನುಗ್ರಹಕ್ಕೆ ಪಾತ್ರಳಾದಳು. ಶುದ್ಧ ಬ್ರಹ್ಮ ಪರಾತ್ಪರ ರಾಮ ಕಾಲಾತ್ಮಕ ಪರಮೇಶ್ವರ ರಾಮ ಶೇಷ ತಲ್ಪ ಸುಖನಿದ್ರಿತ ರಾಮ ಬ್ರಹ್ಮಾದ್ಯಮರ ಪ್ರಾರ್ಥಿತ ರಾಮ ಚಂಡ ಕಿರಣ ಕುಲ ಮಂಡನ ರಾಮ ಶ್ರೀಮದ್ ದಶರಥ ನಂದನ ರಾಮ ಕೌಸಲ್ಯ ಸುಖ ವರ್ಧನ ರಾಮ ವಿಶ್ವಾಮಿತ್ರ ಪ್ರಿಯಧನ ರಾಮ ಘೋರ ತಾಟಕಾ ಘಾತಕ ರಾಮ ಮಾರೀಚಾದಿನಿ ಪಾತಕರಾಮ ಕೌಶಿಕ ಮಖ ಸಂರಕ್ಷಕ ರಾಮ ಶ್ರೀ ಮದ ಹಲ್ಯೋದ್ಧಾರಕ ರಾಮ ಗೌತಮ ಮುನಿ ಸಂಪೂಜಿತ ರಾಮ ಸುರಮುನಿ ವರಗಣ ಸಂಸ್ತುತ ರಾಮ ನಾವಿಕ ದಾವಿಕ ಮೃದು ಪದ ರಾಮ ಮಿಥಿಲಾ ಪುರ ಜನ ಮೋಹಕರಾಮ ವಿದೇಹ ಮಾನಸ ರಂಜಕ ರಾಮ ತ್ರ್ಯಂಬಕ ಕಾರ್ಮಿಕ ಭಂಜಕ ರಾಮ ಸೀತಾರ್ಪಿತ ವರಮಾಲಿಕ ರಾಮ ಕೃತ ವೈವಾಹಿಕ ಕೌತುಕ ರಾಮ ಭಾರ್ಗವ ದರ್ಪ ವಿನಾಶಕ ರಾಮ ಶ್ರೀಮದ್ ಅಯೋಧ್ಯಾ ಪಾಲಕ ರಾಮ ರಾಮ ರಾಮ ಜಯ ರಾಜಾರಾಮ ರಾಮ ರಾಮ ಜಯ ಸೀತಾರಾಮ!! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ