ಓಂ ನಮಃ ಶಿವಾ

ರಾಧಾಕೃಷ್ಣ 🦚💙
890 views
7 days ago
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ #ಓಂ ನಮಃ ಶಿವಾಯ ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮಃ ಯಾರು ಶಿರದಲ್ಲಿ ರುಮಾಲನ್ನು ಧರಿಸಿರುವನೋ ಯಾರು ಬೆಟ್ಟಗಳಲ್ಲಿ ಸದಾ ಅಲೆದಾಡುತ್ತಿರುವನೋ, ಯಾರು ಜಮೀನುದಾರರ ಅಧಿಪತಿ ಯೋ ಅಂತಹ ರುದ್ರನೇ ನಿನಗೆ ನಮಸ್ಕಾರಗಳು. ಅವನು ರುಮಾಲನ್ನು ಧರಿಸಿರುವುದು ಅವನ ಗುರುತನ್ನು ಮರೆಮಾಚಿಸಲಿಕ್ಕೆ. ಪರ್ವತಗಳಲ್ಲಿ ಯೋಗಿಗಳು ತಪಸ್ಸನ್ನು ಆಚರಿಸುತ್ತಾರೆ. ಅವರ ರಕ್ಷಣೆಗೆ ರುದ್ರನು ಪರ್ವತಗಳಲ್ಲಿ ಸಂಚರಿಸುತ್ತಾನೆ. ಮೇಲಿನ ಮಂತ್ರಗಳು ಆಂದರೆ ಮೊದಲನೇ ಮಂತ್ರದಿಂದ ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮಃ ಮಂತ್ರಗಳ ವರೆಗೆ ರಹಸ್ಯ ವಾದ ಅರ್ಥಗಳನ್ನು ಹೇಳಿದ್ದರೂ, ವೇದಗಳ ಕಾಲದಲ್ಲೂ, ಕಳ್ಳರು, ರಾತ್ರಿ ಕಳ್ಳರು, ಡಕಾಯಿತರು, ದರೋಡೆಕೋರರು, ಮೋಸ ವಂಚನೆ ಮಾಡುವವರು, ಕೊಲೆಗಡುಕರು ಇದ್ದರು ಎನ್ನುವುದು ತಿಳಿಯುತ್ತದೆ. ಆದರೆ ಅವರು ನಾಗರಿಕ ಸಮಾಜದಿಂದ ದೂರ ಉಳಿದಿದ್ದರು ಆದರೆ ಈಗ ಇಂತಹವರ ಸಂಖ್ಯೆ ಹೆಚ್ಚಿ ಅವರು ನಾಗರಿಕ ಸಮಾಜದ ಮಧ್ಯೆಯೇ ಇರುವುದಷ್ಟೇ ಅಲ್ಲದೆ, ನಮ್ಮನ್ನು ಆಳುವವರ ಮಧ್ಯೆಯೂ ಸೇರಿ ಹೋಗಿದ್ದು ಅಂಥವರನ್ನು ಶಿಕ್ಷಿಸಲು ರುದ್ರನು ತನ್ನ ಆಧುನಿಕ ಬಿಲ್ಲು ಬಾಣಗಳನ್ನು ಉಪಯೋಗಿಸುವಂತೆ ಬೇಡಿಕೊಂಡು, ಆ ರುದ್ರನಿಗೆ ನಮಸ್ಕಾರಗಳು. ನಮ ಇಷುಮದ್ಭ್ಯೋ ಧನ್ವಾವಿಭ್ಯಷ್ಚ ವೋ ನಮಃ ಯಾರು ಬಿಲ್ಲು ಮತ್ತು ಬಾಣಗಳನ್ನು ಹಿಡಿದಿರುವವರೋ ಅವರಿಗೆ ನಮಸ್ಕಾರಗಳು. ಇಲ್ಲಿಯೂ ಸಹಾ ರುದ್ರಗಣಗಳ ಬಗ್ಗೆ ಪ್ರಸ್ತಾಪಿಸಲಾಗಿದೆ ನಮ ಅತನ್ವಾನೇಭ್ಯಃ ಪ್ರತಿದಧಾನೇಭ್ಯಶ್ಚ ವೋ ನಮಃ ಯಾರ್ಯಾರು ಬಿಲ್ಲಿನ ಎರಡೂ ತುದಿಗಳಿಗೆ ಹಗ್ಗವನ್ನು ಕಟ್ಟಿ ಆ ಬಿಲ್ಲಿಗೆ ಬಾಣವನ್ನು ಹೂಡುತ್ತಾರೋ ಅಂತಹವರಿಗೆ ಅಂದರೆ ರುದ್ರಗಣಗಳಿಗೆ ನಮಸ್ಕಾರಗಳು ಈ ಮಂತ್ರವು ಶಿಲ್ಪ ಕಲಾವಿದರನ್ನು ಅಂದರೆ ಇಂದ್ರ ಮತ್ತು ಅವನ ಸಹಾಯಕರನ್ನು ಕುರಿತು ಹೇಳಲಾಗಿದೆ ಎಂದು ಸಹಾ ಒಂದು ಅಭಿಪ್ರಾಯವಿದೆ. ಇಂದ್ರನೂ ಸೇರಿದಂತೆ ಈ ಎಲ್ಲಾ ದೇವತೆಗಳು, ರುದ್ರಗಣಗಳೂ ಸಹಾ ರುದ್ರನ ನೇರ ನಿಯಂತ್ರಣ ದಲ್ಲಿವೆ. ನಮ ಆಯಚ್ಚಭ್ಯೋ ವಿಸೃಜದ್ಭ್ಯಶ್ಚ ವೋ ನಮಃ ಯಾರು ಬಿಲ್ಲನ್ನು ಬಗ್ಗಿಸಿ ಅದರಿಂದ ಬಾಣವನ್ನು ಬಿಡುತ್ತಾರೋ ಅವರಿಗೆ ನಮಸ್ಕಾರಗಳು ಬಿಲ್ಲನ್ನು ಬಗ್ಗಿಸಿ ಬಾಣ ಬಿಡುವುವರನ್ನು ಶ್ರಮಿಕ ವರ್ಗಕ್ಕೆ ಅನ್ವಯಿಸಿ ಶ್ರಮಿಕ ವರ್ಗದವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳನ್ನು ಹೇಳಲಾಗಿದೆ. ನಮೋ ಸದ್ಭ್ಯೋ ವಿಧ್ಯದ್ಬ್ಯಶ್ಚ ವೋ ನಮಃ ಬಾಣಗಳಿಂದ ಗುರಿಗೆ ಹೊಡೆಯುತ್ತಿರುವವರಿಗೆ ಮತ್ತು ಗುರಿಯನ್ನು ಬೇಧಿಸುತ್ತಿರುವವರಿಗೆ ನಮಸ್ಕಾರಗಳು. ಬಿಲ್ಲುಗಾರರಲ್ಲಿ ಎರಡು ವಿಧ, ಒಂದು ಬಗೆಯವರು ಗುರಿಗೆ ಬಾಣವನ್ನು ಬಿಡುವಂತಹವರಾದರೆ, ಮತ್ತೊಂದು ಬಗೆಯವರು ಗುರಿಯನ್ನು ಬೇಧಿಸಿ ಮುಂದೆ ಹೋಗುವಂತೆ ಬಾಣವನ್ನು ಬಿಡುವಂತಹವರು. ಈ ಯೋಧರ ರೂಪ ದಲ್ಲಿರುವ ರುದ್ರನಿಗೆ ನಮಸ್ಕಾರಗಳು ನಮ ಆಸೀನೇಭ್ಯಃ ಶ್ಯನಾಭ್ಯಶ್ಚ ವೋ ನಮಃ / ಶ್ಯನೇಭ್ಯಶ್ಚ ವೋ ನಮಃ ಆಸನದಲ್ಲಿ ನೇರವಾಗಿ ಕುಳಿತಿರುವವರಿಗೂ ಹಿಂದೆ ಒರಗಿಕೊಂಡು ಕುಳಿತಿರುವವರಿಗೂ ನಮಸ್ಕಾರಗಳು ಅಂದಿನ ಕಾಯಕ ಯೋಗವನ್ನು ಮುಗಿಸಿ ಆಸನದಲ್ಲಿ ನೇರವಾಗಿಯೋ ಅಥವಾ ಒರಗಿಕೊಂಡೋ ವಿಶ್ರಾಂತಿ ಪಡೆಯುತ್ತಿರುವವರ ರೂಪದಲ್ಲಿ ತೋರುತ್ತಿರುವ ರುದ್ರನಿಗೆ ನಮಸ್ಕಾರಗಳು. ವೇದಕಾಲದ ಸಮಾಜದಲ್ಲಿ ಅವರವರ ಪಾಲಿಗೆ ಬಂದ ಕಾಯಕವನ್ನು ಮಾಡುವುದನ್ನು ಕಾಯಕ ಯೋಗ ಎಂದು ಕರೆಯಲಾಗಿದೆಯಲ್ಲದೆ, ಈ ಕಾಯಕ ಮಾಡುವವರಲ್ಲಿ ರುದ್ರನನ್ನೇ ಕಂಡು ನಮಸ್ಕರಿಸುವ ಸಂಸ್ಕಾರ ವಿತ್ತು ಎಂಬುದನ್ನು ಈ ಮಂತ್ರದ ಮೂಲಕ ಹೇಳಲಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರೂ ಅವರವರ ಪಾಲಿಗೆ ಬಂದ ಕಾಯಕ ಗಳನ್ನು ಮಾಡಲೇ ಬೇಕಾದ್ದು ಅನಿವಾರ್ಯ ಮತ್ತು ಅವಶ್ಯಕ ಎಂಬ ಅರಿವು ವೇದ ಕಾಲದ ಸಮಾಜದಲ್ಲಿಯೇ ಇತ್ತು. ಇದು ಹೊಸದಾಗಿ ಇತ್ತೀಚಿಗೆ ಬಂದದ್ದೇನೂ ಅಲ್ಲ ಎನ್ನುವುದಕ್ಕೆ ಈ ಮಂತ್ರ ಪುರಾವೆ ಒದಗಿಸುತ್ತದೆ. ನಮಃ ಸ್ವಪದ್ಭ್ಯೋ ಜಾಗ್ರದ್ಭ್ಯಶ್ಚ ವೋ ನಮಃ ನಿದ್ರೆ ಮಾಡುತ್ತಿರುವವರಿಗೆ ಮತ್ತು ಜಾಗೃತಾವಸ್ಥೆ ಯಲ್ಲಿರುವವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು. ಭೂಮಿಯ ಒಂದು ಭಾಗದ ಜನ ನಿದ್ರೆ ಮಾಡುತ್ತಿದ್ದರೆ ಮತ್ತೊಂದು ಭಾಗದ ಜನ ಜಾಗೃತ ರಾಗಿರುತ್ತಾರೆ. ಅಂದರೆ ಭೂಮಿಯು ಗುಂಡಾಗಿದೆ ಅನ್ನುವ ತಿಳಿವಳಿಕೆ ವೇದ ಕಾಲದಲ್ಲೇ ಇತ್ತು ಎನ್ನಲು ಈ ಮಂತ್ರಕ್ಕಿಂತ ಬೇರೆ ಪುರಾವೆ ಬೇಕಿಲ್ಲಾ. ಇದು ಆಳವಾದ ತಪಸ್ಸಿನಲ್ಲಿ ಮಗ್ನರಾಗಿ ಸಮಾಧಿ ಸ್ಥಿತಿ ತಲುಪಿರುವ ಒಂದು ವರ್ಗವನ್ನೂ ಹಾಗೂ ತಮ್ಮ ಕರ್ಮ ಯೋಗ ದಲ್ಲಿ ಅಂದರೆ ಕಾಯಕ ಯೋಗದಲ್ಲಿ ನಿರತರಾಗಿರುವ ಮತ್ತೊಂದು ವರ್ಗವನ್ನು ಕುರಿತ ಮಂತ್ರ ಎಂತಲೂ ಭಾವಿಸ ಬಹುದು. ನಮಸ್ತಿಷ್ಟದ್ಭ್ಯೋ ಧಾವದ್ಬ್ಯಶ್ಚ ವೋ ನಮಃ ನಿಂತಿರುವವರ ಮತ್ತು ಓಡುತ್ತಿರುವವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು ಇಲ್ಲಿ ಜಡ ಮತ್ತು ಚೇತನಗಳ ಬಗ್ಗೆ ಹೇಳಿದ್ದು ರುದ್ರನು ಜಡರೂಪದಲ್ಲೂ ಚೇತನ ರೂಪದಲ್ಲೂ ಇದ್ದು ಅವನು ಸರ್ವವ್ಯಾಪಿ ಎಂದು ಮತ್ತೊಮ್ಮೆ ಹೇಳಲಾಗಿದೆ. ನಮಃ ಸಭಾಭ್ಯಃ ಸಭಾಪತಿಭ್ಶಶ್ಚ ವೋ ನಮಃ ಸಭೆಯಲ್ಲಿ ಭಾಗವಹಿಸಿರುವವರೂ ಸಬೆಯ ಅಧ್ಯಕ್ಷನೂ ಆದ ರುದ್ರನಿಗೆ ನಮಸ್ಕಾರಗಳು. ಸಭೆಗಳು ಅಂದರೆ ಆಧ್ಯಾತ್ಮಿಕ, ಧಾರ್ಮಿಕ ಸಭೆಗಳು. ಇಂತಹ ಸಭೆಗಳಲ್ಲಿ ಭಾಗವಹಿಸುವವರಲ್ಲಿಯೂ ಪ್ರವಚನ ನೀಡುವವರಲ್ಲಿಯೂ ಇರುವವನು ಒಬ್ಬನೇ. ಅವನು ರುದ್ರ. ಗುರುವಿನ ರೂಪ ದಲ್ಲಿಯೂ ಶಿಷ್ಯನ ರೂಪದಲ್ಲಿಯೂ ತಾನೇ ಆಗಿರುವ ರುದ್ರನಿಗೆ ನಮಸ್ಕಾರಗಳು ನಮೋ ಅಶ್ವೇಭ್ಯೋs ಶ್ವಪತಿಭ್ಯಶ್ಚ ವೋ ನಮಃ ಅಶ್ವಗಳಿಗೂ ಅಶ್ವಗಳ ಅಧಿಪತಿಯಾದ ರುದ್ರನಿಗೂ ನಮಸ್ಕಾರಗಳು. ವೇದಗಳಲ್ಲಿ ಅಶ್ವ ಎನ್ನುವ ಪದವನ್ನು ಬಹಳ ಆಳವಾದ ಅರ್ಥದಲ್ಲಿ ಉಪಯೋಗಿಸಲಾಗಿದೆ. ಇದು ಮಹಾನ್ ಕ್ರಿಯಾತ್ಮಕ ಜೈವಿಕ ಶಕ್ತಿ. ಈ ಮಹಾನ್ ಕ್ರಿಯಾತ್ಮಕ ಜೈವಿಕ ಶಕ್ತಿಯೂ ತಾನೇ ಆಗಿ, ಈ ಶಕ್ತಿಯ ಅಧಿಪತಿಯೂ ತಾನೇ ಆಗಿರುವ ರುದ್ರನೇ ನಿನಗೆ ನಮಸ್ಕಾರಗಳು. ಶುಭವಾಗಲಿ ಧನ್ಯವಾದಗಳು
ರಾಧಾಕೃಷ್ಣ 🦚💙
2K views
10 days ago
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ #ಓಂ ನಮಃ ಶಿವಾಯ ನಮಃ ಸಸ್ಪಿಂಜರಾಯ ತ್ವಿಶೀಮತೆ ಪತೀನಾಂ ಪತಯೇ ನಮಃ ಹಳದಿ ಮಿಶ್ರ ಮೈಬಣ್ಣ ದಿಂದ ಕೂಡಿ ತನ್ಮೂಲಕ ಕಾಂತಿ ಬೀರುತ್ತಿದ್ದು ನಮಗೆ ನ್ಯಾಯದ ಮಾರ್ಗ ವನ್ನು ತೋರುತ್ತಿರುವ ರುದ್ರನೇ ನಿನಗೆ ನಮಸ್ಕಾರಗಳು. ಸಸ್ಪಿ ಎಂದರೆ ಶತ್ರುಗಳನ್ನು ನಾಶಮಾಡುವವನು ಎಂಬ ಅರ್ಥವೂ ಇದೆ. ಹೊರಗಿನ ಶತೃಗಳು ಒಳಗಿನ ಶತೃಗಳ ಮೂಲ. ಪ್ರಾಪಂಚಿಕ ಪ್ರಲೋಭನೆಗೆ ಒಳಗಾದಾಗ ಮನಸ್ಸು ನೋವಿಗೆ ಒಳಗಾಗಿ ಅದರ ಪರಿಣಾಮ, ನಮ್ಮ ಪ್ರಜ್ನೆಯು ವ್ಯಾಕುಲತೆಗೆ ಒಳಗಾಗುತ್ತದೆ. ಮನಸಿನ ಸಹಾಯದಿಂದ ಪ್ರಜ್ನೆಯು ಶುದ್ಧವಾಗದಿದ್ದರೆ ಮೋಕ್ಷ ಅಸಾಧ್ಯ. ರುದ್ರನ ಧ್ಯಾನದಿಂದ ಹೊರಗಿನ ಮತ್ತು ಒಳಗಿನ ಶತೃಗಳಿಂದ ರಕ್ಷಣೆ ಒದಗುತ್ತದೆ ಅಷ್ಟೇ ಅಲ್ಲ ಅವನು ನಮಗೆ ಮೋಕ್ಷವನ್ನೂ ದಯಪಾಲಿಸುತ್ತಾನೆ. ಅಂತಹ ರುದ್ರನೇ ನಿನಗೆ ಮತ್ತೊಮ್ಮೆ ನಮಸ್ಕರಿಸುತ್ತಿದ್ದೇನೆ. ನಮೋ ಬಬ್ಲುಶಾಯ ವಿವ್ಯಾಧಿನೇsನ್ನಾನಾಂ ಪತಯೇ ನಮಃ ನಂದಿವಾಹನವೇರಿ ದುಷ್ಟರನ್ನು ಶಿಕ್ಷಿಸುವ, ಅನ್ನಕ್ಕೆ ಒಡೆಯನಾದ ರುದ್ರನೇ ನಿನಗೆ ನಮಸ್ಕಾರಗಳನ್ನು ಮಾಡುತ್ತಿದ್ದೇನೆ. ಬಬ್ಲುಶ ಅಂದರೆ ಕಂದು ಬಣ್ಣ. ರುದ್ರನ ವಾಹನವಾದ ನಂದಿಯ ಬಣ್ಣ ಕಂದು ಬಣ್ಣ. ರುದ್ರನು ಶಕ್ತಿಯ ಮೂಲವೂ ಆಗಿದ್ದಾನೆ ಮತ್ತು ಕಾರಣನೂ ಅಗಿದ್ದಾನೆ. ರುದ್ರನ ಶಕ್ತಿಗಳು ತನ್ನ ವಾಹನವಾದ ನಂದಿಯ ಮೂಲಕ ಪಸರಿಸುವ ಮೂಲಕ ಎಲ್ಲ ಲೋಕಗಳ ಸೃಷ್ಟಿ ಸ್ಥಿತಿ ಮತ್ತು ಲಯ ಆಗುತ್ತಿದೆ. ರುದ್ರನನ್ನು ಅನ್ನಾನಾಂ ಪತಯೇ ಎಂದೂ ಹೇಳಿದೆ. ಅನ್ನ ಅಂದರೆ ಆಹಾರ. ಆಹಾರ ದೇಹ ಪೋಷಣೆಗೆ ಅಷ್ಟೆ ಅಲ್ಲದೆ ಅದು ಮನಸಿನ ಯೋಚನೆಗಳಿಗೂ ಭಾವನೆಗಳಗೂ ಬೇಕಾದ ಆಹಾರ. ಇಂತಹ ಅನ್ನಕ್ಕೆ, ಆಹಾರಕ್ಕೆ ಒಡೆಯನಾದ ರುದ್ರನೇ ನಿನಗೆ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇನೆ. ನಮೋ ಹರಿಕೇಶಾಯೋಪವೀತಿನೇ ಪುಷ್ಟಾನಾಂ ಪತಯೇ ನಮಃ ದಟ್ಟವಾದ ಕಪ್ಪುಕೂದಲುಳ್ಳ,ಯಜ್ನೋಪವೀತವನ್ನು ಧರಿಸಿರುವ ಪುಷ್ಟಿಗೆ, ಪೌಷ್ಟಿಕತೆಗೆ ಒಡೆಯನಾದ ರುದ್ರನೇ ನಿನಗೆ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಪಕ್ಷಪಾತವಿಲ್ಲದವನು ಎನ್ನುವುದು ಹರಿಕೇಶಾ ಎನ್ನುವ ಪದ ಸೂಕ್ಷ್ಮಾರ್ಥ. ಧರ್ಮ ಪಾಲನೆ ಮಾಡುವವರಿಗೆ ತಾನು ಪುಷ್ಟಿಯನ್ನು ನೀಡುತ್ತಾನೆ. ಹರಿಕೇಶಾ ಎಂದರೆ ಶಾಶ್ವತನೂ ಎಂಬ ಅರ್ಥವೂ ಇದೆ. ಬೃಹದಾರಣ್ಯಕ ಉಪನಿಷದ್ ವಾಕ್ಯದಂತೆ ಬ್ರಹ್ಮವು ನಿರ್ವಿಕಲ್ಪವೂ, ಅವಿನಾಶಿಯೂ ಆಗಿರುವಂತಾದ್ದು. ಪುಷ್ಟ ಎಂದರೆ ಪೌಷ್ಟಿಕವಾದವುಗಳು. ವಾಕ್, ಜ್ನಾನ ,ಆರೋಗ್ಯ ( ಜ್ನಾನೇಂದ್ರಿಯಗಳ ಚುರುಕುತನವೂ ಸೇರಿದಂತೆ) ಐಷ್ವರ್ಯ, ಸಂತಾನ, ಗೋವುಗಳು ( ಆಧುನಿಕ ಪರಿಭಾಷೆಯಲ್ಲಿ ವಾಹನಗಳು ಎಂದಾಗಬ ಹುದು) ಸಮೃದ್ಭರಿತ ನಗರಗಳು,ಹಳ್ಳಿಗಳು, ಧರ್ಮಾಧಿಕಾರ ( ಧರ್ಮದಿಂದ ಅಧಿಕಾರ ನಿರ್ವಹಣೆ), ಅಷ್ಟ ಸಿದ್ಧಿಗಳು ಮತ್ತು ಗೃಹಗಳು. ಇವು ಹತ್ತು ವಿಧದ ಪುಷ್ಟಿ ಗಳು. ಯಾರು ತನ್ನಲ್ಲಿ ಶರಣಾಗುತ್ತಾರೋ ಅವರಿಗೆ ಈ ಎಲ್ಲ ಹತ್ತ್ತು ವಿಧದ ಪುಷ್ಟಿಗಳನ್ನು ದಯಪಾಲಿಸುವುದಲ್ಲ್ಲದೆ. ಈ ದಶಪುಷ್ಟಿ ಗಳಿಗೂ ರುದ್ರನು ಒಡೆಯನಾಗಿದ್ದಾನೆ. ಓ ರುದ್ರನೇ ನಾವು ನಿನಗೆ ಶರಣಾಗಿದ್ದೇವೆ. ನಮಗೆ ಈ ಎಲ್ಲಾ ಹತ್ತು ಪುಷ್ಟಿಗಳನ್ನೂ ನೀಡಿ ನಮ್ಮನ್ನು ಉದ್ದರಿಸು ಎಂದು ಬೇಡಿ ಕೊಳ್ಳುತ್ತಾ ನಿನಗೆ ನಮಸ್ಕಾರಗಳ ಸಮರ್ಪಣೆ ಮಾಡುತ್ತಿದ್ದೇನೆ. ಸ್ವೀಕರಿಸು. ನಮೋ ಭವಸ್ಯ ಹೇತ್ಯೈ ಜಗತಾಂ ಪತಯೇ ನಮಃ ಜಗತ್ ಸೃಷ್ಟಿ ಕರ್ತನೂ ಬ್ರಹ್ಮಾಂಡ ದ ಒಡೆಯನೂ ಆದ ರುದ್ರನೇ ನಿನಗೆ ನಮಸ್ಕಾರಗಳು. ಭವ ಎಂದರೆ ಅಸ್ಥಿತ್ವಕ್ಕೆ ಬರುವುದು, ಹುಟ್ಟು, ಜೀವ ಇವೆಲ್ಲ ಅರ್ಥಗಳು. ರುದ್ರನು ಭವ ಅಷ್ಟೇ ಅಲ್ಲಾ ಆತನು ಜಗತ್ತಿಗೇ ಪತಿ, ಜಗತ್ತಿನ ಒಡೆಯ. ರುದ್ರನ ಸರ್ವೋಚ್ಛತೆಯನ್ನು ಇಲ್ಲಿನ ಅನೇಕ ಮಂತ್ರಗಳಲ್ಲಿ ಸಾರಿ ಸಾರಿ ಹೇಳಲಾಗಿದೆ. ಲಲಿತಾ ಸಹಸ್ರನಾಮದ ನಾಮಗಳಲ್ಲಿ ’ಭವಾನಿ” ಎನ್ನುವುದು ಒಂದು ನಾಮ. ಭವ ನ ಅರ್ಧಾಂಗಿ ಭವಾನಿ. ವ್ಯಾಕರಣ ರೀತಿಯಾಗಿ ಭವ ಮತ್ತು ಭವಾನಿ ಬೇರೆ ಬೇರೆ ಯಾದರೂ ಭವ ಮತ್ತು ಭವಾನಿ ಇವರ ಕ್ರಿಯೆಗಳಲ್ಲಿ ಭಿನ್ನತೆ ಇಲ್ಲಾ. ತನ್ನ ಭಕ್ತರ ಮನಸ್ಸು ದೈವೀ ಪ್ರಜ್ನೆ ಯಲ್ಲಿ ಸಂಪೂರ್ಣ ವಾಗಿ ತುಂಬಿ ಹೋಗುವಂತೆ ತನ್ನ ಭಕ್ತರನ್ನು ಹರಸುತ್ತಾಳೆ ಭವಾನಿ. ವೈಯಕ್ತಿಕ ಪ್ರಜ್ನೆಯು ದೈವೀ ಪ್ರಜ್ನೆಯಲ್ಲಿ ಮುಳುಗಿಹೋಗುವದನ್ನೇ ಲೀನವಾಗುವಿಕೆ. ಶ್ರೀ ಲಲಿತಾಂಬಿಕೆ ಯನ್ನು ಭವಾನಿ ಎಂದು ಸಂಭೋಧಿಸಲಾಗಿದೆ. ಭವಾನಿ ಎಂದು ಕರೆದ ಕ್ಷಣ ಅವಳು ಧಾವಿಸಿ ಬಂದು ಭಕ್ತರನ್ನು ತನ್ನಲ್ಲಿ ಲೀನವಾಗಿಸಿಕೊಂಡು ಬಿಡುತ್ತಾಳೆ. ಹಾಗಾಗಿ ಅವಳನ್ನು ಭವನ ಅರ್ಧಾಂಗಿ ಎಂದು ಭಾವಿಸಿದರೆ, ಕರೆದರೆ, ಉತ್ಸಾಹದಿಂದ ಸಂತೋಷ ಭರಿತಳಾಗಿ ಬಿಡುತ್ತಾಳೆ. ಮಹಾವಾಕ್ಯ ವಾದ ತತ್ ವಂ ಅಸಿ ಎನ್ನುವುದಕ್ಕೆ ಇದು ಪರೋಕ್ಷವಾಗಿ ಅನ್ವಯ ಅಗಿಬಿಡುತ್ತದೆ. ಈ ಕಾರ್ಯವಿಧಾನ ವೇ ಸಾಯುಜ್ಯ ಎನಿಸುಕೊಂಡಿರುವುದು.ಇದೇ ತತ್ ಕ್ಷಣ ಮೋಕ್ಷವನ್ನು ಕೊಡುವಂತಾದ್ದು. ಈ ಬಗೆಯಲ್ಲಿ ರುದ್ರನನ್ನು ಧ್ಯಾನಿಸಿವುದು ಜಪ ಹೋಮಾದಿಗಳಿಗಿಂತಲೂ ಹೆಚ್ಚು ಪರಿಣಾಮಕಾರಿ. ಮೋಕ್ಷಗಳು ನಾಲ್ಕು ವಿಧ. ಒಂದು ಸಾಲೋಕ್ಯ: ಇಷ್ಟ ದೈವದ ಲೋಕದಲ್ಲಿ ದೇವರೊಂದಿಗೇ ಇರುವುದು. ಎರಡನೆಯದು ಸಾರೂಪ್ಯ; ದೈವೀ ರೂಪ ಆಕಾರವನ್ನೇ ತಾನೂ ಹೊಂದುವುದು, ಮೂರನೆಯದು ಸಾಮೀಪ್ಯ; ಇಷ್ಟ ದೈವ ದ ಹತ್ತಿರವೇ ಇರುವುದು ನಾಲ್ಕನೆಯದು ಸಾಯುಜ್ಯ: ದೈವದೊಂದಿಗೇ ಲೀನವಾಗಿಬಿಡುವುದು. ಮೊದಲನೆಯದರಿಂದ ಆರಂಭ ಮಾಡಿ ಕೊನೆಯ ಹಂತದಲ್ಲಿ ಸಾಯುಜ್ಯ ಹೊಂದುವುದು ಒಂದು ಮಾರ್ಗವಾದರೆ, ತನ್ನನ್ನು ಇಷ್ಟ ದೈವದೊಂದಿಗೆ ತಾದಾತ್ಮ್ಯ ಗೊಳಿಸುವ ಯೋಚನಾ ಪ್ರಕ್ರಿಯೆಯು ಶೀಘ್ರವಾಗಿ ಸಾಯುಜ್ಯವನ್ನೇ ಕೊಡಬಲ್ಲುದು. ನಮೋ ರುದ್ರಾಯಾ ತತಾವಿನೇ ಕ್ಷೇತ್ರಾಣಾಂ ಪತಯೇ ನಮಃ ತನ್ನ ಬಿಲ್ಲುಗಳಿಂದ ನಮಗೆ ರಕ್ಷಣೆ ನೀಡುತ್ತಿರುವ ರುದ್ರನಿಗೆ ನಮಸ್ಕಾರಗಳು. ಎಲ್ಲಾ ಕ್ಷೇತ್ರಗಳ ಅಂದರೆ ಎಲ್ಲ ಪ್ರದೇಶಗಳಿಗೂ ಒಡೆಯನಾಗಿ ಆ ಪ್ರದೇಶಗಳನ್ನು ರಕ್ಷಿಸುತ್ತಿರುವ ರುದ್ರನಿಗೆ ನಮಸ್ಕಾರಗಳು. ಜೀವವು ದೇಹ ಬಿಟ್ಟನಂತರ ಬೇರೊಂದು ದೇಹವನ್ನು ಪಡೆದುಕೊಂಡು ಮತ್ತೆ ಹುಟ್ಟಿಬರುತ್ತದೆ ಎಂಬುದು ಬಹಳ ಆಳವಾದ ನಂಬಿಕೆಯಾಗಿದ್ದು, ಈ ನಂಬಿಕೆ ಸಾವಿರಾರು ವರ್ಷಗಳಿಂದ ಇದ್ದು, ಇದು ಮಾನವನ ವಂಶವಾಹಿನಿಯಲ್ಲೇ ಸೇರಿ ಹೋಗಿದೆ ಎಂದರೆ ತಪ್ಪಾಗಲಾರದು. ಈ ಪುನರ್ಜನ್ಮದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಪುನರ್ಜನ್ಮ ಇದೆ ಎಂದು ನಿರೂಪಿಸಲು ಮತ್ತು ಇಲ್ಲಾ ಎಂದು ನಿರೂಪಿಸಲೂ ದಾಖಲೆಗಳ ಲಭ್ಯ ಇದೆ. ಪುನರ್ಜನ್ಮ ಇಲ್ಲದೇ ಇರುವುದನ್ನು ಮೋಕ್ಷ ಎಂದು ಸಹಾ ನಂಬಲಾಗಿದೆ. ಇದರ ಬಗ್ಗೆ ಮತ್ತೊಮ್ಮೆ ಅಂದರೆ ಲಲಿತಾ ಸಹಸ್ರ ನಾಮದ ಬಗ್ಗೆ ಮಾತಾಡುವಾಗ ಪ್ರಸ್ತಾಪಿಸುತ್ತೇನೆ. ದೇಹ ಬಿಟ್ಟ ಆ ಜೀವಾತ್ಮನು ಮತ್ತೊಂದು ದೇಹವನ್ನು ಹೊಂದಲು ಪಡಬೇಕಾದ ನೋವು ಮತ್ತು ಕಷ್ಟಗಳನ್ನು ರುದ್ರನು ಪರಿಹರಿಸುತ್ತಾನೆ. ಕ್ಷೇತ್ರಾಣಾಂ ಪತಯೇ ಅಂದರೆ ಬ್ರಹ್ಮಾಂಡದ ಒಡೆಯ ಎಂದೇ ಅರ್ಥೈಸ ಬೇಕು. ಕ್ಷೇತ್ರ ಮತ್ತು ಕ್ಷೇತ್ರಜ್ನ ನ ಬಗ್ಗೆ ಭಗವದ್ಗೀತೆಯ 13 ನೇ ಅಧ್ಯಾಯ ವಿವರಿಸಿದರೆ, ಕ್ಷೇತ್ರವನ್ನು ಸ್ಥೂಲ ದೇಹವೆಂತಲೂ, ಕ್ಷೇತ್ರಜ್ನ ನನ್ನು ಸೂಕ್ಷ್ಮ ದೇಹವೆಂದು ನಿರ್ಣಯಿಸಿರುವ ಉಪನಿಷದ್ ವಾಕ್ಯಗಳೂ ಇವೆ. ಬ್ರಹ್ಮ ಸೂತ್ರವು ಕ್ಷೇತ್ರವನ್ನು ಸ್ಥೂಲ ದೇಹವೆಂತಲೂ, ಕ್ಷೇತ್ರಜ್ನ ನನ್ನು ಅತ್ಮ ಎಂತಲೂ ನಿರ್ಣಾಯಕವಾಗಿ ಸಮರ್ಥಿಸಿಬಿಟ್ಟಿದೆ. ಈ ಮಂತ್ರವು ರುದ್ರನಿಂದ ನಮಗೆ ಒದಗುವ ಮೂರು ವಿಧದ ರಕ್ಷಣೆಗಳನ್ನು ಹೇಳಿದೆ. ನಾವು ವಾಸಿಸುವ ಸ್ಥಳ, ನಮ್ಮ ದೇಹ ಮತ್ತು ಆತ್ಮ. ರುದ್ರಾಧ್ಯಾಯದ ಮೊದಲನೇ ಅನುವಾಕದ ಮೊದಲನೇ ಶ್ಲೋಕ’ ನಮ’ಸ್ತೇ ರುದ್ರ ಮನ್ಯವ’ ಉತೋತ ಇಷ’ವೇ ನಮಃ’ | ನಮ’ಸ್ತೇ ಅಸ್ತು ಧನ್ವ’ನೇ ಬಾಹುಭ್ಯಾ’ಮುತ ತೇನಮಃ’ | ಇಲ್ಲಿ ಬಿಲ್ಲು ಕ್ರಿಯೆಯ ಗುರಿಯಾಗಿದ್ದರೆ , ಈ ಶ್ಲೋಕದಲ್ಲಿ ಆ ಕ್ರಿಯೆಯು ರುದ್ರನು ನಮಗೆ ನೀಡುವ ಮೂರು ವಿಧವಾದ ರಕ್ಷಣೆಗಳಾಗಿವೆ ಎನ್ನುವುದನ್ನು ಮುಖ್ಯವಾಗಿ ಗಮನಿಸಬೇಕು. ಬ್ರಹ್ಮಾಂಡದ ಒಡೇಯನಾದ ರುದ್ರನೇ, ನೀನು ನಾವು ವಾಸಿಸುವ ಪ್ರದೇಶವನ್ನು, ನಮ್ಮ ದೇಹವನ್ನೂ, ಆತ್ಮವನ್ನೂ, ರಕ್ಷಿಸುವುದೇ ಅಲ್ಲದೆ, ಈ ದೇಹವನ್ನು ಬಿಟ್ಟನಂತರ ಮತ್ತೊಂದು ದೇಹದ ಹುಡುಕಾಟದಲ್ಲಿ ಆಗುವ ಕಷ್ಟಗಳನ್ನು ನೋವುಗಳನ್ನೂ ಪರಿಹರಿಸು ಎಂದು ಬೇಡಿಕೊಂಡು ನಿನಗೆ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ. ಓ ರುದ್ರನೇ ನಮ್ಮನ್ನು ರಕ್ಷಿಸು. ನಮಃ ಸೂತಾಯಹಂತ್ಯಾಯ ವನಾನಾಂ ಪತಯೇ ನಮಃ ವನಗಳಿಗೆ ಅಂದರೆ ಅರಣ್ಯಗಳಿಗೆ ಅಧಿಪತಿಯಾದ ಯಾರೂ ನಾಶಮಾಡಲಾಗದ ಸಾರಥಿಯಾದ ರುದ್ರನೇ ನಿನಗೆ ನನ್ನ ನಮಸ್ಕಾರಗಳು. ಸೃಷ್ಟಿಯ ಸಮಸ್ತ ಜೀವಿಗಳನ್ನೂ ರಥದಲ್ಲಿ ಕೂರಿಸಿ ಅದರ ಸಾರಥ್ಯವನ್ನು ರುದ್ರನು ವಹಿಸಿಕೊಂಡಿದ್ದಾನೆ. ಇಲ್ಲಿ ಅರಣ್ಯ ಎನ್ನುವುದು ಸಂಸಾರ ಬಂಧನ. ಈ ಸಂಸಾರ ಬಂಧನದಲ್ಲಿರುವ ನಮ್ಮೆಲ್ಲರನ್ನೂ ಆ ಅರಣ್ಯದ ರಾಜನೇ ಆದ ರುದ್ರನು ತನ್ನ ರಥದಲ್ಲಿ ಕೂಡಿಸಿ ತಾನೇ ಸಾರಥ್ಯವನ್ನು ವಹಿಸಿಕೊಂಡು ಅರಣ್ಯದಿಂದ ಹೊರಗೆ ಕರೆದೊಯ್ಯುತ್ತಾನೆ. ಅಂದರೆ ಸಂಸಾರ ಬಂಧನದಿಂದ ಬಿಡುಗಡೆ ಮಾಡಿ ಮೋಕ್ಷವನ್ನು ದಯಪಾಲಿಸುತ್ತಾನೆ. ಇಲ್ಲಿ ಭವಾರಣ್ಯ ಕುಠಾರಿಕಾ, ಪಾಪಾರಣ್ಯ ದವಾನಲಾ, ರುದ್ರರೂಪಾಯೈ ಎಂಬ ಲಲಿತಾ ಸಹಸ್ರನಾಮದ ಈ ಮೂರು ನಾಮಗಳು ನೆನಪಿಗೆ ಬರುತ್ತವೆ. ತನ್ನ ಕೊಡಲಿಯಿಂದ ಅರಣ್ಯವನ್ನು ಕಡಿದು ಸಂಸಾರವೆಂಬ ಆ ಅರಣ್ಯದಲ್ಲಿ ಸಿಕ್ಕಿಹಾಕಿಕೊಂಡಿರುವ ಜೀವನನ್ನು ಬಿಡುಗಡೆ ಮಾಡುವವಳು, ತನ್ನ ಕಾಡ್ಗಿಚ್ಚಿನಿಂದ ಜೀವಿಯ ಪಾಪ ಎಂಬ ಅರಣ್ಯವನ್ನು ದಹಿಸುವವಳೂ, ರುದ್ರರೂಪಿಣಿಯೂ ಆದ ಶ್ರೀ ಲಲಿತಾ ಮಹಾತ್ರಿಪುರ ಸುಂದರಿ. ಈ ಶ್ಲೋಕವು ಸೃಷ್ಟಿ, ಸ್ಥಿತಿ ಲಯ, ತಿರೋಧಾನ ಮತ್ತು ಅನುಗ್ರಹ ಕ್ಕೆ ಕಾರಣ ವಾದ ಆ ಮಹಾಚೈತನ್ಯವನ್ನು ರುದ್ರ ಎಂದು ಕರೆದರೂ, ಲಲಿತಾ ಎಂದು ಕರೆದರೂ, ಆ ಮಹಾಚೈತನ್ಯ ಒಂದೇ ಆಗಿದೆ. ಈ ಸಂಸಾರದ ಅರಣ್ಯದಲ್ಲಿ ಸಿಲುಕಿಕೊಂಡಿರುವ ನಮ್ಮನ್ನು ಇಲ್ಲಿಂದ ಬಿಡುಗಡೆ ಮಾಡಿ ನಿನ್ನ ಸಾನ್ನಿಧ್ಯವನ್ನು ನೀಡು. ಓ ರುದ್ರನೇ ನಿನಗೆ ನನ್ನ ನಮಸ್ಕಾರಗಳು. ನಮೋ ರೋಹಿತಾಯ ಸ್ಥಪತಯೇ, ವೃಕ್ಷಾಣಾಂ ಪತಯೇ ನಮಃ ಸ್ಥಪತಿ ಎಂಬ ಪದಕ್ಕೆ ನಾನಾ ಅರ್ಥಗಳು. ರಾಜ, ಅಧಿಕಾರಿ, ವಾಸ್ತುಶಿಲ್ಪಿ. ಇಲ್ಲಿ ಯಾವ ಅರ್ಥದಲ್ಲಿ ಈ ಪದ ಪ್ರಯೋಗ ಆಗಿದೆ ಎಂದು ಹೇಳುವುದು ಕಷ್ಟ ಆಗಿದೆ. ಮತ್ತೊಮ್ಮೆ ಇಲ್ಲಿ ರುದ್ರನನ್ನು ಮರಗಳ ಅಧಿಪತಿ. ಒಡೆಯ ಎಂದು ಹೇಳಲಾಗಿದೆ. ಕೆಂಪು ಬಣ್ಣ ದಿಂದ ಕೂಡಿದ ಮರಗಳಿಗೆ ಅಧಿಪತಿಯಾದ ರುದ್ರನೇ ನಿನಗೆ ನಮಸ್ಕಾರಗಳು. ರೋಹಿತ ಎನ್ನುವ ಪದಕ್ಕೆ ವಾಕ್ ಅನ್ನು ದಯಪಾಲಿಸುವವವನೂ ಎಂಬ ಅರ್ಥವೂ ಇದೆ. ರುದ್ರನ ತಾಂಡವ ನೃತ್ಯದ ಸಮಯದಲ್ಲಿ ಅವನ ಢಮರುವಿನಿಂದ ಹೊರಟ ಶಬ್ಧ ಅಕ್ಷರಗಾಳಾದುವು, ಆ ಅಕ್ಷರ ಗಳ ಸಂಯೋಜನೆ ಪದಗಳಾಗಿ, ಪದಗಳ ಉಚ್ಚಾರ ವಾಕ್ ಆಗಿದೆ. ಹಾಗಾಗಿ ರುದ್ರನು ವಾಕ್ ಅನ್ನು ದಯಪಾಲಿಸುವವನು. ರೋಹಿತ ಎನ್ನುವ ಪದಕ್ಕೆ ಕೆಂಪು ಎಂಬ ಅರ್ಥ ಕೊಡುವುದಾದರೆ, ಕೆಂಪು ಬಣ್ಣ ಪುಷ್ಟಿ ಅಥವಾ ಪೌಷ್ಟಿಕತೆಯನ್ನು ಸೂಚಿಸುತ್ತದೆ. ರುದ್ರನನ್ನು ಕೆಂಪು ಬಣ್ಣ ಉಳ್ಳವನು ಎಂದು ಹೇಗೆ ಹೇಳಲಾಗಿದೆಯೋ ಹಾಗೆಯೇ, ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿಯನ್ನೂ ಕೆಂಪು ಬಣ್ಣದಿಂದ ಕೂಡಿರುವವಳು ಎಂದು ಹೇಳಲಾಗಿದೆ. ಲಲಿತೆಯ ಕೆಂಪು ಬಣ್ಣ ಜೀವಿಗಳ ಬಗ್ಗೆ ಆಕೆಯ ಅನುಕಂಪದ ಸೂಚಕವಾಗಿದ್ದು, ಧರ್ಮ ಮಾರ್ಗದಲ್ಲಿ ನಡೆಯುವವರನ್ನು ಸದಾ ರಕ್ಷಿಸುವ ಮತ್ತು ಅವರ ಬಗ್ಗೆ ಅನುಕಂಪ ಹೊಂದಿರುವ ರುದ್ರನ ಬಣ್ಣವೂ ಸಹಾ ಕೆಂಪು ಎಂದೇ ವರ್ಣಿಸಲಾಗಿದೆ ನಮೋ ಮಂತ್ರಿಣೇ ವಣಿಜಾಯ ಕಕ್ಷಾಣಾಮ್ ಪತಯೇ ನಮಃ ಎಲ್ಲಾ ಮಂತ್ರಗಳ ಪ್ರಮುಖನು. ಮಂತ್ರಗಳು ರಹಸ್ಯ ವಾಗಿರುವುದರಿಂದ ರಹಸ್ಯವಾದ ಜ್ನಾನಕ್ಕೆ ಪ್ರಮುಖನೂ, ಎಲ್ಲ ಉದ್ಯೋಗ, ವ್ಯಾಪಾರ, ಕಾಯಕಗಳಿಗೆ ಒಡೆಯನೂ, ರಹಸ್ಯ ಸ್ಥಾನಗಳ ಅಧಿಪತಿಯೂ ಆದ ರುದ್ರನೇ ನಿನಗೆ ನಮಸ್ಕಾರಗಳು. ಈ ಎಲ್ಲಾ ಮಂತ್ರಗಳೂ ಪತಯೇ ನಮಃ ಎಂದೇ ಕೊನೆಗೊಳ್ಳುತ್ತವೆ. ಹಾಗಾಗಿ ಶ್ರೀ ರುದ್ರವನ್ನು ನಮಕ ಎಂದು ಕರೆಯಲಾಗಿದೆ. ಜಗತ್ತಿನಲ್ಲಿ ಜರುಗುವ ಎಲ್ಲಾ ಕ್ರಿಯೆಗಳಿಗೂ ರುದ್ರನೇ ಒಡೆಯ ಎಂದೇ ಶ್ರೀ ರುದ್ರ ಹೇಳುತ್ತದೆ. ಈ ಮಂತ್ರವು ರುದ್ರನು ಎಲ್ಲಾ ಮಂತ್ರಗಳ ಪ್ರಮುಖ ಎಂದು ಹೇಳುತ್ತದೆ. ಶಿವರೂಪಿಯಾದ ಶ್ರೀ ದಕ್ಷಿಣಾಮೂರ್ತಿ ಹಲವಾರು ಮಂತ್ರಗಳ, ಅದರಲ್ಲೂ ಮಹಾ ಮಂತ್ರಗಳ ಕರ್ತೃ. ಶಿವನನ್ನು ಆದಿಗುರು ಎಂದೂ ಕರೆಯಲಾಗಿದೆ. ’ಶಿವಾಯ ಗುರವೇ ನಮಃ” ಈ ಹಿಂದೆ ಹೇಳಿದಂತೆ ಕಕ್ಷಾಣಾಂ ಪತಯೇ ಎಂದರೆ ಮಂತ್ರ ರಹಸ್ಯದ ಒಡೆಯ ರುದ್ರ. ಲಲಿತಾ ಸಹಸ್ರನಾಮದ ’ಸರ್ವ ಮಂತ್ರ ಸ್ವರೂಪಿಣ್ಯೈ ನಮಃ” ಹಾಗೂ ದಕ್ಷಿಣಾಮೂರ್ತಿ ರೂಪಿಣ್ಯೈ ನಮಃ ಈ ಎರಡು ನಾಮಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನಮೋ ಭುವಂತಯೇ ವಾರಿವಾಸ್ಕೃತಾಯೌಷಧೀನಾಂ ಪತಯೇ ನಮಃ ಮಾನವಕುಲವೂ ಸೇರಿದಂತೆ ಈ ಬ್ರಹ್ಮಾಂಡಕ್ಕೇ ಆಧಾರವಾದ, ಔಷಧ ಗಳ ಅಂದರೆ ಔಷಧ ಗುಣವುಳ್ಳ ಗಿಡ ಮೂಲಿಕೆ ಗಳ ಅಧಿಪತಿಯೇ ಆದ ರುದ್ರನೇ ನಿನಗೆ ನಮಸ್ಕಾರಗಳು. ಎಲ್ಲ ವಿಧದ ರೋಗಗಳನ್ನು ಭವರೋಗವನ್ನೂ ಸೇರಿದಂತೆ ಗುಣ ಪಡಿಸಿ, ನಮಗೆ ಪ್ರಾಪಂಚಿಕ ಸುಖ ಭೋಗಗಳ ಜತೆಗೆ ಅಧ್ಯಾತ್ಮಿಕ ಜ್ನಾನವನ್ನೂ ನೀಡುವ ರುದ್ರನೇ ನಿನಗೆ ನಮಸ್ಕಾರಗಳ ಅರ್ಪಣೆ ನಮ ಉಚ್ಚ್ಯೈಘ್ರೋಷಾಯಾssಕ್ರಂದಯತೇ ಪತ್ತೀನಾಂ ಪತಯೇ ನಮಃ ಭಕ್ತರಿಂದ ಉಚ್ಛ ಸ್ತರದಲ್ಲಿ ಮಂತ್ರಘೋಷ ಮಾಡಿಸಿಕೊಳ್ಳುತ್ತಿರುವ ರುದ್ರನೇ, ಶತೃಪಡೆಯನ್ನು ಸದೆಬಡಿದು, ಭಕ್ತರನ್ನು ಹರಸುತ್ತಿರುವ ರುದ್ರನೇ, ಕಾಲ್ನಡಿಗೆಯ ಸೈನಿಕರ ಒಡೆಯನಾದ ರುದ್ರನೇ ನಿನಗೆ ನಮನಗಳು, ಪ್ರಣಾಮಗಳು. ಭಕ್ತರಿಗೆ, ಸಾಧಕರಿಗೆ ಅವರ ಹಾದಿಯಲ್ಲಿ ಬಹಳಷ್ಟು ಅಡೆತಡೆಗಳು ಬರುತ್ತವೆ. ಅವೇ ಶತೃ ಪಡೆಗಳು. ಈ ಅಡೆ ತಡೆಗಳನ್ನು ನಿವಾರಿಸಿ, ನಾಶಮಾಡಿ ಅವರ ಹಾದಿಯನ್ನು ಸುಗಮ ಮಾಡುವವನು ರುದ್ರ. ಇಂತಹ ಅಡೆತಡೆಗಳನ್ನು ದುಷ್ಟಶಕ್ತಿಗಳನ್ನು ನಾಶಮಾಡಲೆಂದೇ ಇರುವ ಕಾಲ್ನಡಿಗೆಯ ಸೈನಿಕರಾದ ರುದ್ರಗಣಗಳಿಗೆ ರುದ್ರನು ಅಧಿಪತಿ. ಅಂತಹ ಕರುಣಾಮೂರ್ತಿಯಾದ ರುದ್ರನೇ ನಿನಗೆ ನಮಸ್ಕಾರಗಳು. ನಮಃ ಕೃತ್ಸ್ನವೀತಾಯ ಧಾವತೇ ಸತ್ವಾನಾಂ ಪತಯೇ ನಮಃ ಸರ್ವ ವ್ಯಾಪಿಯಾದ ರುದ್ರನೇ, ಭಕ್ತರನ್ನು ರಕ್ಷಿಸಲು ಧಾವಿಸಿ ಬರುವ ರುದ್ರನೇ, ಧರ್ಮಮಾರ್ಗದಲ್ಲಿ ನಡೆಯುವವರನ್ನು ಸದಾ ಹರಸುವ ರುದ್ರನೇ ನಿನಗೆ ನಮಸ್ಕಾರಗಳು. ಇದು ಎರಡನೇ ಅನುವಾಕದ ಕೊನೆಯ ಮಂತ್ರ. ಸ್ಥಿರ ಶಕ್ತಿ ಮತ್ತು ಚರ ಶಕ್ತಿ ಎರಡೂ ರುದ್ರನೇ ಹಾಗಾಗಿಯೇ ಅವನು ಸರ್ವವ್ಯಾಪಿ. ಸ್ಥಿರ ಶಕ್ತಿಯಾಗಿ ಸೃಷ್ಟಿ ಕ್ರಿಯೆಗೆ ಕಾರಣನಾದರೆ, ಚರ ಶಕ್ತಿಯಾಗಿ ಭಕ್ತಾನುಗ್ರಹ ಕಾರಕ ನಾಗುತ್ತಾನೆ. ಶಿವ ಮತ್ತು ಶಕ್ತಿ ತತ್ವ ಗಳನ್ನು ಸೂಕ್ಷ್ಮ ವಾಗಿ ಹೇಳಲಾಗಿದೆ.ಈ ಹಿಂದೆ ನಮಃ ಸೂತಾಯಹಂತ್ಯಾಯ ವನಾನಾಂ ಪತಯೇ ನಮಃ ಮಂತ್ರದಲ್ಲಿ ಹೇಳಿದಂತೆ ರುದ್ರನು ಪರಮೋಚ್ಛ ಒಡೆಯನಾಗಿ ಪಂಚಕೃತ್ಯ ಗಳು ಅಂದರೆ ಸೃಷ್ಟಿ, ಸ್ಥಿತಿ, ಲಯ, ತಿರೋಧಾನಗಳೆಂಬ ಪಂಚಕೃತ್ಯ ಗಳ ನ್ನು ಮಾಡುತ್ತಾನೆ. ಇಲ್ಲಿ ಲಲಿತಾ ಸಹಸ್ರ ನಾಮದ ಸೃಷ್ಟಿಕರ್ತ್ರೈ ನಮಃ ಇಂದ ಮೊದಲ್ಗೊಂಡು ತಿರೋಧಾನಕರ್ಯೈ ನಮಃ ಎನ್ನುವವರೆಗೆ 7 ನಾಮಗಳನ್ನು ನೆನಪಿಸಿ ಕೊಳ್ಳಬಹುದಾಗಿದೆ. ಇಲ್ಲಿಗೆ ಎರಡನೇ ಅನುವಾಕ ಸಂಪೂರ್ಣ ಆಗಿದೆ. ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್