ಮಾಂಗಲ್ಯ ಕಟ್ಟಿದ ಮಾತ್ರಕ್ಕೆ ಮದುವೆಯಲ್ಲ ಮನದಾಳದಲ್ಲಿ ಮೂಡುವ ಒಡಂಬಡಿಕೆನೇ ಮದುವೆ ತಾಳಿ ಕಟ್ಟಿದ ಕೈಗಳಿಗಿಂತ ಮನಸ್ಸು ಮುಟ್ಟಿದ ಕೈ ಮೇಲು ಮಂತ್ರ ಹೇಳಿದ ಮಾತ್ರಕ್ಕೆ ಬಂಧವಲ್ಲ ಶಾಸ್ತ್ರದ ಮಂತ್ರಗಳಿಗಿಂತ,ನೀನಿಲ್ಲದೆ ನಾನಿಲ್ಲ ಅನ್ನೋ ಮಾತು ಪವಿತ್ರ ಕೈ ಹಿಡಿದು ನಡೆಯುವ ಆಸೆ ಬಂದ ದಿನ,ಕಣ್ಣಲ್ಲಿ ಕಣ್ಣಿಟ್ಟು ನೀನೇ ಸಾಕು ಎಂದ ದಿನ ಅದೇ ಮದುವೆ ನಿನ್ನ ಹೆಸರು ಕೇಳಿದೊಡನೆ,ಕಣ್ಣಲ್ಲಿ ಬೆಳಕು ಮೂಡಿದರೆ ನಿನ್ನಿಲ್ಲದ ನಾಳೆಯ ಬಗ್ಗೆ ಯೋಚಿಸಲೂ ಮನಸ್ಸು ಒಪ್ಪದಿದ್ದರೆ ಅದೇ ಮದುವೆ ಹೊಸ್ತಿಲು ದಾಟುವುದಲ್ಲ ಮದುವೆ ಹೃದಯದೊಳಗೆ ನೀನು ನೆಲೆಸುವುದೇ ಮದುವೆ ಊರು ಕೇಳದ ಬಂಧ,ಶಾಸ್ತ್ರ ಕೇಳದ ನಂಬಿಕೆ,ಕಷ್ಟದಲ್ಲಿ ಜೊತೆ,ಸುಖದಲ್ಲಿ ನಗೆ ಪ್ರತಿದಿನ ಮತ್ತೆ ಮತ್ತೆ ನಿನ್ನನೇ ಆರಿಸುವ ಮನಸ್ಸು ಅದೇ ಮದುವೆ ಕಾಗದದಲ್ಲಿ ಸಹಿ ಇಲ್ಲದೆ ಇದ್ರು,ಜೀವನ ಪೂರ್ತಿ ಜೊತೆಗೆ ಬಾಳುವ ಪ್ರಮಾಣ ಮಾಡೋದು ಆ ಪ್ರೀತಿಯೇ ಸಪ್ತಪದಿ,ಆ ಭರವಸೆಯೇ ಮದುವೆ ಜೊತೆಯಲ್ಲಿ ವಯಸ್ಸಾಗೋಣವೆಂಬ ಒಂದು ಪುಟ್ಟ ಆಸೆ ಹುಟ್ಟಿದರೆ ಸಾಕು ಅಲ್ಲೇ ಏಳು ಜನ್ಮದ ಗಂಟು ಬಿದ್ದಂತೆ ಊಟದಲ್ಲಿ ಅರ್ಧ ಹಂಚೋದು,ರಾತ್ರಿ ಜ್ವರ ಬಂದಾಗ ಎಚ್ಚರ ಇರೋದು ಬಿದ್ದಾಗ ಎಬ್ಬಿಸೋದು,ನಕ್ಕಾಗ ಜೊತೆ ನಗೋದು ಇದೆಲ್ಲಾ ಮಾಂಗಲ್ಯಕ್ಕಿಂತ ದೊಡ್ಡದು ಸಮಾಜಕ್ಕೆ ತೋರಿಸೋಕೆ ಫೋಟೋ ಬೇಕು ಸಂಸಾರಕ್ಕೆ ಬೇಕಾಗಿರೋದು ಭುಜ ಜೀವನ ಪೂರ್ತಿ ಅಲ್ಲೇ ತಲೆ ಇಡೋ ಜಾಗ ಮದುವೆ ಅಂದ್ರೆ❓ಮೂರು ಗಂಟು ಅಲ್ಲ ಮೂರು ಕಾಲಕ್ಕೂ ನೀನೇ ಅಂತ ಒಪ್ಪಿಕೊಳ್ಳೋದು #ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️
2907 shares

More like this