ಕಾಯಕವೇ ಕೈಲಾಸ..
729 views
"ಶರೀರ ಬೆಳದು ಪ್ರಳಯಕ್ಕೊಳಗು, ಬುದ್ದಿ ಬೆಳೆದು ಸುಖಕ್ಕೊಳಗು, ಸುಖ ಬೆಳೆದು ವಿಕಾರಕ್ಕೊಳಗು, ವಿಕಾರ, ಸಕಲ ಮರಣಕ್ಕೆ ಒಳಗಾಯಿತ್ತು, ಇಂತಿವಕ್ಕೆ ಹೊರಗಾಗು, ಐಘಟ ದೂರ ರಾಮೇಶ್ವರಲಿಂಗವನರಿವುದಕ್ಕೆ.. ✍️ಶರಣ ಮೆರೆಮಿಂಡಯ್ಯ ದೇವರ ವಚನ.. ವಚನದ ಭಾವಾರ್ಥ: ಶರೀರ ಬೆಳೆಯುತ್ತಾ ಬೆಳೆಯುತ್ತಾ ನಾಶವಾಗುವ ಕಡೆ ಸಾಗುವಂತೆ ಬುದ್ದಿ ಬೆಳೆದು ಹೆಚ್ಚು ಸುಖಕ್ಕೆ ಇಡಾಗಿ, ಆ ಸುಖ ಹೆಚ್ಚಾಗಿ ಮಾನಸಿಕ- ಆರೋಗ್ಯ ಸ್ಥಿತಿ ವಿಕಾರಕ್ಕೆ,ತಿರುಗುತ್ತದೆ, ಇದು ವ್ಯಕ್ತಿಯ ವಿನಾಶಕ್ಕೆ ಕಾರಣ ವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಅರಿವು- ಪ್ರಜ್ಞೆ ನಾಶವಾಗುತ್ತದೆ. ಇಂತಹ ಪರಿಸ್ಥಿತಿಯಿಂದ ಹೊರಗೆ ಇರಬೇಕು ಎಂಬುದು ಶಿವಶರಣ ಮೆರೆಮಿಂಡಯ್ಯನವರ ಆಶಯ..! #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ