ಬಸವಣ್ಣನವರು ಅನುಭವ ಮಂಟಪ ಕಟ್ಟಿದ ಉಲ್ಲೇಖ ಈ ವಚನಗಳಲ್ಲಿದೆ..
1)ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯ ಬೆಳೆಯ ಬೆಳೆದು, ಪರಮಪ್ರಸಾದವನೊಂದು ರೂಪಮಾಡಿ ಮೆರೆದು, ಭಕ್ತಿಫಲವನುಂಡಾತ ನಮ್ಮ ಬಸವಯ್ಯನು. ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವಮಂಟಪವನನು ಮಾಡಿ, ಅನುಭವಮೂರ್ತಿಯಾದ ನಮ್ಮ ಬಸವಯ್ಯನು. ಅರಿವ ಸಂಪಾದಿಸಿ ಆಚಾರವನಂಗಂಗೊಳಿಸಿ, ಏಳುನೂರೆಪ್ಪತ್ತು ಅಮರಗಣಂಗಳ ಅನುಭವ ಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು. ಆ ಅನುಭವದಲ್ಲಿ ಐಕ್ಯಪ್ರಸಾದವನಂಗಂಗೊಂಡು, ಮಂತ್ರ ನಿರ್ಮಂತ್ರವಾದಾತ ನಮ್ಮ ಬಸವಯ್ಯನು. ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲ ಕೂಡಿ, ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು.
#ನೀಲಾಂಬಿಕೆ ತಾಯಿ
2)ಅಯ್ಯಾ, ಭಕ್ತಿಗೆ ಬೀಡಾದುದು ಕಲ್ಯಾಣ ಮೂವತ್ತಾರು ವರ್ಷ
ಅಯ್ಯಾ, ಅನುಭವಕ್ಕೆ ಶಿವಸದನವಾದುದು ಇಪ್ಪತ್ತೇಳು ವರ್ಷ ಅಯ್ಯಾ, ಹಿಂದಿನಂತನುಭವ ಹಿಂದಿನಂತೆ ಭಕ್ತಿಯಿಲ್ಲ
ಮೂರುಮಾಸದೊಳಗಾಗಿ,
ಇಲ್ಲಿ ಆಡಲು ಭಯವಿಲ್ಲ ಕೇಳಯ್ಯಾ ಕೂಡಲಸಂಗಮದೇವಯ್ಯಾ - ಬ.ವ
#ಬಸವಣ್ಣನವರು
3)ಬಸವಾದಿ ಪ್ರಮಥರ ದಿವ್ಯದರ್ಶನದ ಸಕಾರ ಸ್ವರೂಪ ಈ ಅನುಭವ ಮಂಟಪ. ಬಸವಣ್ಣನವರ ನೂತನ ಸಮಾಜ ಧರ್ಮತತ್ತ್ವದ ಆಡುಂಬೊಲ ಈ ಅನುಭವ ಮಂಟಪ. ಇಲ್ಲಿರುವ ಎಲ್ಲಾ ಅನುಭಾವಿಗಳ ಮಹತ್ಕಾಕಾಂಕ್ಷೆಯ ನೆಲೆವೀಡು ಈ ಅನುಭವ ಮಂಟಪ ನೋಡಾ ಕಲಿದೇವರದೇವಾ
#ಮಡಿವಾಳಮಾಚಿದೇವ..
4)ಕಪಿಲಸಿದ್ಧಮಲ್ಲಿಕಾರ್ಜುನಾ
ನಿಮ್ಮ ಸಂಗನ ಬಸವಣ್ಣ ಬಂದು ಮರ್ತ್ಯದಲ್ಲಿ ಮಹಾಮನೆಯ ಕಟ್ಟಿದರೆ ಮರ್ತ್ಯಲೋಕವೆಲ್ಲವೂ ಭಕ್ತಿ ಸಾಮ್ರಾಜ್ಯವಾಯಿತ್ತು ಆ ಮನೆಗೆ ತಲೆಬಾಗಿ ಹೊಕ್ಕವರೆಲ್ಲರೂ
ನಿಜಲಿಂಗ ಪದವಿಯ ಪಡೆದರು.
#ಬಸವಯೋಗಿ ಸಿದ್ದರಾಮೇಶ್ವರರು..
#ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ