ಶರಣರೇ ಕನ್ನಡಿಗರಾಗಿ ಹುಟ್ಟಿದ್ದಕ್ಕ ನೀವು ಹೆಮ್ಮೆ ಪಡ್ತೆರಿ ಪೂರ್ತಿಯಾಗಿ ಓದಿ.. "ಮೋಳಿಗೆ ಮಾರಯ್ಯ ಮತ್ತು ಅವರ ಧರ್ಮಪತ್ನಿ ಮಹಾದೇವಿ ಕಾಶ್ಮೀರದ ಅರಸು (ರಾಜ ರಾಣಿ) , ಬಸವಣ್ಣನವರನ್ನು ಅರಸುತ್ತ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಅನುಭವ ಮಂಟಪದ 770 ಅಮರಗಣಗಳಲ್ಲಿ ಒಬ್ಬರಾದರು.. ಇದು ಕನ್ನಡಕ್ಕಿದ್ದ ಮಾಂತ್ರಿಕ ಶಕ್ತಿ ಅಲ್ಲದೆ ಇನ್ನೇನು?.. ಅದರಂತೆಯೇ.. "ಅಫ್ಘಾನ್ ಮೂಲದ ರಾಜ ಮರುಳಶಂಕರದೇವರು" "ತಮಿಳನಾಡಿನಿಂದ ಬಂದ ಮಾದಾರ ಚೆನ್ನಯ್ಯನವರು" "ಗುಜರಾತದಿಂದ ಬಂದ ಆದಯ್ಯನವರು" "ಉತ್ತರಪ್ರದೇಶದಿಂದ ಗೋರಖನಾಥ್ ರವರು" "ಮಧ್ಯಪ್ರದೇಶದಿಂದ ಬಂದ ಡೋಹರ ಕಕ್ಕಯ್ಯನವರು" "ಮಹಾರಾಷ್ಟ್ರದಿಂದ ಬಂದ ಸಿದ್ದರಾಮೇಶ್ವರರು" "ಮಹಾರಾಣಿ ಭೊಂತಾದೇವಿಯವರು" "ಆಂಧ್ರಪ್ರದೇಶದಿಂದ ಬಂದ ಉರಿಲಿಂಗಪೆದ್ದಿಯವರು" "ಜೈನ ಮುನಿ ಮನು ಮುನಿ ಗುಮ್ಮಟದೇವ" ಹಾಗೂ ಇನ್ನೂ ಅನೇಕಾನೇಕರು ಅನ್ಯ ಪ್ರದೇಶ ಅನ್ಯ ರಾಜ್ಯ ಅನ್ಯ ವಿಭಾಗ ಅನ್ಯ ಭಾಷೆಯವರು ವಿಶ್ವಗುರು ಬಸವಣ್ಣನವರನ್ನು ಹಾಗೂ ಬಸವಾದಿ ಮಹಾ ಶರಣರನ್ನು ಬಸವಾದಿ ಪ್ರಮಥರನ್ನು ಅರಸುತ್ತಾ ಕಲ್ಯಾಣಕ್ಕೆ ಬಂದಿರುತ್ತಾರೆ.. ೭೭೦ ಅಮರ ಗಣಂಗಳು ಹಾಗೂ ೧೯೬೦೦೦ ಬಸವಾದಿ ಮಹಾ ಶರಣ ಶರಣೆಯರು.. ನೋಡಲು ಬಂದವರು ಕನ್ನಡ ನಾಡಿಗೆ ಕನ್ನಡ ಭಾಷೆಗೆ ಶರಣರಿಗೆ ಮಂತ್ರಮುಗ್ಧರಾಗಿ ತಾಯಿ ಕನ್ನಡಾಂಬೆಯ ಮಡಿಲಲ್ಲಿ ಇಲ್ಲಿಯೇ ಉಳಿದುಬಿಟ್ಟರು ಕರ್ನಾಟಕಕ್ಕೆ ಬಂದು ಕನ್ನಡವನ್ನು ಕಲಿತು ಕನ್ನಡದಲ್ಲಿಯೇ ತಮ್ಮ ಅನುಭಾವದ ವಚನಗಳನ್ನ ಬರೆದು ಅಗ್ರಗಣ್ಯ ಬಸವಾದಿ ಶರಣರಾದರು.. ಇದು ಕನ್ನಡಕ್ಕಿರುವ ಪವಾಡ ಶಕ್ತಿಯಲ್ಲವೇ??? ಕಾಯಕ ತತ್ವದಿಂದ ದಕ್ಷಿಣ ಭಾರತದ ಹಾಗೂ ಕರ್ನಾಟಕದಲ್ಲಿ ಉದಯವಾದ ಏಕೈಕ ಧರ್ಮ "ಲಿಂಗಾಯತ ಧರ್ಮ".. ಕನ್ನಡಿಗನಾಗಿದ್ದಕ್ಕೆ ಇಷ್ಟು ಅಭಿಮಾನ ಸಾಕಲ್ಲವೇ ಅಥವಾ ಇನ್ನು ಬೇಕಾ???
#ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ 🙏