"ಸದಾಚಾರ ಸದ್ಭಕ್ತಿ ಇಲ್ಲದವರನೊಲ್ಲನಯ್ಯ, ಅವರಾರಾಧನೆ ದಂಡ, ನಿಚ್ಚ ನಿಚ್ಚ ಪ್ರಾಯಶ್ಚಿತ್ತರನೊಲ್ಲ, ಕೂಡಲಸಂಗಮದೇವ ಭೂಭಾರಕರನು.. ✍🏻 ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಚನ.. ವಚನದ ಭಾವಾರ್ಥ: ಯಾರಲ್ಲಿ ಒಳ್ಳೆಯತನ, ಒಳ್ಳೆಯ ನಡೆ ನುಡಿ ಆಚರಣೆಗಳು ಇರುವುದಿಲ್ಲವೋ ಅಂತಹವರು ಪೂಜೆ ಮಾಡುವುದು, ಆರಾಧನೆ ಮಾಡುವುದು, ವ್ಯರ್ಥ ಪದೇ ಪದೇ ತಪ್ಪುಗಳನ್ನು, ಅಕ್ರಮಗಳನ್ನು, ಅಪರಾಧಗಳನ್ನು ಮಾಡುವುದು ನಂತರ ಕ್ಷಮೆ ಯಾಚಿಸುವುದು, ಇಲ್ಲವೇ ಪಶ್ಚಾತಾಪ ಪಡುವುದು, ಮತ್ತೆ ಹಳೆ ಚಾಳಿಯನ್ನು ಮುಂದುವರಿಸುವ ವ್ಯಕ್ತಿಗಳು ಭೂಮಿಗೆ ಭಾರ..!
#ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ