ಕಾಯಕವೇ ಕೈಲಾಸ..
601 views
|| ಶ್ರೀ ಗುರು ಬಸವ ಲಿಂಗಾಯ ನಮಃ || ಶರಣ ಶ್ರೀ ಮಡಿವಾಳ ಮಾಚಿದೇವ ನವರ ಸ್ಮರಣೋತ್ಸವ.. ತಂದೆ : ಪರುವತಯ್ಯ ತಾಯಿ : ಪಾರ್ವತಿ ಸ್ಥಳ : ದೇವರ ಹಿಪ್ಪರಗಿ, ಸಿಂಧಗಿ ತಾಲ್ಲೂಕು, ವಿಜಯಪುರ ಜಿಲ್ಲೆ ಕಾಯಕ : ಮಡಿವಾಳಿ (ಬಟ್ಟೆ ಶುಚಿಗೊಳಿಸುವುದು) ಜಯಂತಿ : ಬಾದ್ರಪದ ಶುಕ್ಲ ಚತುರ್ಥಿಯಂದು (ಗಣೇಶ ಚೌತಿ) ಲಭ್ಯ ವಚನಗಳ ಸಂಖ್ಯೆ : ೩೪೬ ಅಂಕಿತ : ಕಲಿದೇವರ ದೇವ ಪಂಚಭೂತಗಳು ದೇವರಲ್ಲ, ಸೂರ್ಯ-ಚಂದ್ರ, ಆತ್ಮ ಇವರಾರೂ ದೇವರಲ್ಲ, *ಬಸವಣ್ಣನೊಬ್ಬನೇ ದೇವರು* ಎಂದು ಹೇಳುತ್ತ, ಪರಮಾತ್ಮನೊಂದಿಗಿನ ಸಂವಾದದಲ್ಲಿ, ನಿಮ್ಮ ಧ್ಯಾನ ದಲ್ಲಿರಿಸಲೊಲ್ಲೆಡೆ ಬಸವಣ್ಣನ ಧ್ಯಾನ ದಲ್ಲಿರಿಸಿಸೇನ್ನನು ಎಂದಿರುವರು. ಇವರ ವಚನಗಳಲ್ಲಿ ಅನೇಕ ಪವಾಡಗಳನ್ನು ಉಲ್ಲೇಖಿಸಿದ್ದಾರೆ (ಕೆಂಬಾವಿ ಬೋರಣ್ಣ, ಕೇಶಿರಾಜ, ಇತ್ಯಾದಿ). ಲಿಂಗವಂತನು ಪೂರ್ವ ಸಂಬಂಧಗಳನ್ನು ಮರೆಯದಿದ್ಧರೆ, ಶಿವಭಕ್ತಿ ಲಭಿಸದು ಎಂದಿದ್ದಾರೆ. ಪರಸ್ತ್ರೀ - ಪರಧನ - ಪರದೈವ ಇವುಗಳನ್ನು ಬಯಸಿದರೆ, ಕೈಲಾಸವೆಂಬುದು ಅಂಗೈ ಮೇಲಣ ನೆಲ್ಲಿಕಾಯಿ ಎಂದಿದ್ದಾರೆ. ಇವರ ಬಗೆಗಿನ ಹಲವು ಐತಿಹ್ಯಗಳು ಪ್ರಚಾರದಲ್ಲಿವೆ (ನುಲಿಯ ಚಂದಯ್ಯನಿಗೆ ಇಷ್ಟಲಿಂಗ ಪೂಜೆಯ ಪ್ರಾಮುಖ್ಯತೆ, ಬಸವಣ್ಣನ ಅಹಂ ನಿರ್ಮೂಲನೆ, ಮೇದರ ಕೇತಯ್ಯನ ಪ್ರಾಣ ಮರಳಿ ಬರಿಸುವುದು..). ಮುಂದೆ 'ಕಲ್ಯಾಣ ಕ್ರಾಂತಿ'ಯ ಸಂದರ್ಭದಲ್ಲಿ ಮಾಚಿದೇವರು ಹೊತ್ತ 'ಜವಾಬ್ಧಾರಿ' ಗುರುತರವಾದುದು. ಶರಣ ಧರ್ಮ ಸಂರಕ್ಷಣೆ - ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು, ಚನ್ನ ಬಸವಣ್ಣ, ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ 'ಭೀಮ ರಕ್ಷೆಯಾಗಿ' ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ, ಗೊಡಚಿ, ತಡ ಕೋಡ, ಮೂಗ ಬಸವ, ಕಾತರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿದ ಸಾಹಸಿ ಮಾಚಯ್ಯ. ಉಳವಿಗೆ ಹೋಗುತ್ತಿರುವಾಗಲೆ ಮಾರ್ಗ ಮಧ್ಯದ ಮುರಗೋಡದ ಹತ್ತಿರವಿರುವ ಕಾರಿಮಣಿ (ಕಾರಿಮನೆ) ಯಲ್ಲಿ ಲಿಂಗೈಕ್ಯರಾದರು. ಇಂದಿಗೂ ಅಲ್ಲಿ ಅವರ ಗದ್ದುಗೆ ಕಾಣಬಹುದು.. ಇವರ ವಚನಗಳಲ್ಲಿ ಗಣಾಚಾರ ನಿಷ್ಠೆ, ಡಾಂಭಿಕತೆ, ಕರ್ಮಠತನ, ಕ್ಷುದ್ರದೈವಾರಾಧನೆ, ಸ್ಥಾವರಲಿಂಗ ಪೂಜೆಗಳನ್ನು ಕುರಿತ ನಿಷ್ಠುರ ಟೀಕೆ ಪ್ರಮುಖವಾಗಿ ಕಂಡುಬರುತ್ತದೆ. ಇವರ ವಚನ: *ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ..* *ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು..* *ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ..* *ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ..* *ಸನ್ನಹಿತವು ಬಸವಣ್ಣನಿಂದ..* *ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ, ಜಂಗಮ ಬಸವಣ್ಣನಿಂದ..* *ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ..* *ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ..* *ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ, ಶೂನ್ಯ ಕಾಣಾ, ಕಲಿದೇವರದೇವಾ..* ---------------------------------------- *ಅಕ್ಕರ ಗಣಿತ ಗಾಂಧರ್ವ ಜ್ಯೋತಿಷ ಆತ್ಮವಿದ್ಯೆ ತರ್ಕ ವ್ಯಾಕರಣ ಅಮರಸಿಂಹ ಛಂದಸ್ಸು ನಿಘಂಟು ಶಾಲಿಹೋತ್ರ ಗ್ರಹವಾದ ಗಾರುಡ ದ್ಯೂತ ವೈದಿಕಶಾಸ್ತ್ರ ಸಾಮುದ್ರಿಕಶಾಸ್ತ್ರ ಲಕ್ಷಣಶಾಸ್ತ್ರ ಅಶ್ವಶಿಕ್ಷೆ ಗಜಶಿಕ್ಷೆ ಗೋಕರ್ಣ ದಾಡಾಬಂಧ ಮೂಲಿಕಾಸಿದ್ಧಿ ಭೂಚರತ್ವ ಖೇಚರತ್ವ ಅತೀತ ಅನಾಗತ ವರ್ತಮಾನ ಸ್ಥೂಲ ಸೂಕ್ಷ್ಮ ಇಂದ್ರಜಾಲ ಮಹೇಂದ್ರಜಾಲ ವಡ್ಯಾನಚೇಷ್ಟೆ ಪರಕಾಯಪ್ರವೇಶ ದೂರದೃಷ್ಟಿ ದೂರಶ್ರವಣ ಋಗ್ಯಜುಃಸಾಮಾಥರ್ವಣ ಶ್ರುತಿಸ್ಮೃತಿ ಆಯುರ್ದಾಯ ನಷ್ಟಿಕಾಮುಷ್ಟಿಚಿಂತನೆ ಚೋರವಿದ್ಯೆ ಅಮೃತೋದಯ ಭಾಷಾಪರೀಕ್ಷೆ ವೀಣಾವಿದ್ಯೆ ಭೃಂಗಿವಿದ್ಯೆ ಮಲ್ಲವಿದ್ಯೆ ಶಸ್ತ್ರವಿದ್ಯೆ ಧನುರ್ವಿದ್ಯೆ ಅಗ್ನಿಸ್ತಂಭ ಜಲಸ್ತಂಭ ವಾಯುಸ್ತಂಭ ವಾದವಶ್ಯ ಅಂಜನಾಸಿದ್ಧಿ ಫುಟಿಕಾಸಿದ್ಧಿ ಮಂತ್ರತಂತ್ರಸಿದ್ಧಿ* *ಇವೆಲ್ಲವ ಕಲಿತಡೇನು ಅರುವತ್ನಾಲ್ಕು ವಿದ್ಯಾಪ್ರವೀಣನೆನಿಸಿಕೊಂಬನಲ್ಲದೆ ಲಿಂಗವಂತನೆನಿಸಿಕೊಂಬುದಿಲ್ಲ.. *ಲಿಂಗವುಳ್ಳ ಶಿವಭಕ್ತಂಗೆ ಇವರೆಲ್ಲರೂ ಕೂಡಿ ಸರಿಬಾರದೆಂದ ನಮ್ಮ ಕಲಿದೇವರದೇವ..* #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ