ಕಾಯಕವೇ ಕೈಲಾಸ..
676 views
4 days ago
ಶ್ರೀ ಗುರು ಬಸವ ಲಿಂಗಾಯ ನಮಃ.. ಕುಲ ಗೋತ್ರ ಜಾತಿ ಸೂತಕದಿಂದ ಕೆಟ್ಟವರೊಂದು ಕೋಟ್ಯಾನುಕೋಟಿ. ಜನನ ಸೂತಕದಿಂದ ಕೆಟ್ಟವರು ಅನಂತಕೋಟಿ. ಮಾತಿನ ಸೂತಕದಿಂದ ಮೋಸವಾದವರು ಮನು ಮುನಿಸ್ತೋಮ ಅಗಣಿತ ಕೋಟಿ. ಆತ್ಮಸೂತಕದಿಂದ ಅಹಂಕರಿಸಿ ಕೆಟ್ಟವರು ಹರಿಹರ ಬ್ರಹ್ಮಾದಿಗಳೆಲ್ಲರು. 'ಯದ್ದೃಷ್ಟಂ ತನ್ನಷ್ಟಂ' ಎಂಬುದನರಿಯದೆ ಹದಿನಾಲ್ಕು ಲೋಕವೂ ಸಂಚಿತಾಗಾಮಿಯಾಗಿ ಮರಳಿ ಮರಳಿ ಹುಟ್ಟುತ್ತಿಪ್ಪರಯ್ಯ. ಇಂತೀ ಸೂತಕದ ಪ್ರಪಂಚ ಬಿಡಲಾರದ ಪಾಷಂಡಿ ಮರುಳುಗಳಿಗೆ ಪರಬ್ರಹ್ಮ ದೊರಕುವದೆ ಅಯ್ಯಾ??? ಇದು ಕಾರಣ, ನಾಮರೂಪು ಕ್ರೀಗಳಿಗೆ ಸಿಲ್ಕುವನಲ್ಲವಯ್ಯ. ಅಗಮ್ಯ ಅಪ್ರಮಾಣ ಅಗೋಚರವಯ್ಯ. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾ ವಿಮಲ ರಾಜೇಶ್ವರ ಲಿಂಗವಲ್ಲದೆ ಉಳಿದವರಿಗಿಲ್ಲವೆಂಬೆನು.. ✍🏻 ಶರಣ ಬಾಚಿ ಕಾಯಕದ ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು