ಕಾಯಕವೇ ಕೈಲಾಸ..
582 views
"ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ??? ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೆಣ್ಣಿಂಗೆಯೂ, ಲಿಂಗಕ್ಕೆಯೂ ವಿರುದ್ಧವೇ??? ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಮಣ್ಣಿಂಗೆಯೂ, ಲಿಂಗಕ್ಕೆಯೂ ವಿರುದ್ಧವೇ??? ಇದು ಕಾರಣ ಪರಂಜ್ಯೋತಿ ಪರಮ ಕರುಣಿ ಪರಮಶಾಂತನೆಂಬ ಲಿಂಗವು ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು. ಅರಿವಿಂದ ಕೊಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರ..! ✍️ ಗಜೇಶ ಮಸಣಯ್ಯಗಳ ಪುಣ್ಯಸ್ತ್ರಿ (12ನೇ ಶತಮಾನ, ಕರಜಿಗೆ ಗ್ರಾಮ, ಅಕ್ಕಲಕೋಟೆ ತಾಲ್ಲೂಕು ಮಹಾರಾಷ್ಟ್ರ).. ವಚನದ ಭಾವಾರ್ಥ: ಆಧ್ಯಾತ್ಮ ಸಾಧನೆಗೆ, ಮುಕ್ತಿಗೆ, ಹೆಣ್ಣು ಮಣ್ಣು ಹೊನ್ನು ಅಡ್ಡಿಯಾಗುವ ಅಂಶಗಳು ಎನ್ನುವ ಪ್ರಾಚೀನ ನಿಯಮವನ್ನು, ನಂಬಿಕೆಯನ್ನು ಈ ವಚನ ನಿರಾಕರಿಸುತ್ತದೆ.ಹೆಣ್ಣಿಗೂ, ಮಣ್ಣಿಗೂ ಹೊನ್ನಿಗೂ ದೇವರ ಅರಿವಿಗೂ ವಿರುದ್ಧವಿಲ್ಲ. ಅರಿವಿನಿಂದ ಉತ್ತಮ ಸಾಧನೆ ಮಾಡಬಹುದು ಎಂಬುದು ಶಿವ ಶರಣೆ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಅವರ ಅಭಿಪ್ರಾಯ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು