ಶ್ರೀ ಗುರು ಬಸವಲಿಂಗಾಯ ನಮ:.. "ತೊರೆಯ ಕಟ್ಟೆಯ ಕಟ್ಟಿ ನಿಲಿಸಲುಬಹುದೆ??? ನೆರೆ ಮರುಳಿಗೆ ಬುದ್ಧಿಯ ಹೇಳಲುಬಹುದೆ??? ತರಿಸಲುವೋಚ್ಛೆಯನರಿಯದೆ ಮರೆದಿದ್ದಡೆ ಹಗೆ ಇರುವುದ ಮಾಣ್ಬನೆ??? ದೂರದಲ್ಲಿ ಹೋದವ ಊರ ಸುದ್ದಿಯನರಿಯ ಹೇಳದೆ ಬಯಲಾದ ಕಾಣ, ಎನ್ನ ಅಜಗಣ್ಣ ತಂದೆ.. ✍️ ಶರಣೆ ಮುಕ್ತಾಯಕ್ಕ ನವರ ವಚನ.. ವಚನದ ಭಾವಾರ್ಥ: ತೊರೆಯ ನೀರನ್ನೇ ಕಟ್ಟಿಯಾಗಿ ನಿಲ್ಲಿಸಲು ಸಾಧ್ಯವಿಲ್ಲ. ಪೂರ್ತಿ ಮರುಳನಾದ ವ್ಯಕ್ತಿಗೆ ಬುದ್ಧಿ ಹೇಳಲು ಆಗದು. ಹಾಗೆಯೆ, ವೈರಿಯ ಸಂಹಾರಕ್ಕೆಂದು ಹೋಗಿ, ಎದುರಿಗೆ ಇರುವ ವೈರಿಯ ಮನೋಸ್ಥಿಯನ್ನೇ ಅರಿಯದೆ ಸುಮ್ಮನಿದ್ದರೆ, ಆತ ಇರಿಯದೆ ಬಿಡಲಾರ. ಈ ಸತ್ಯಸಂಗತಿಗಳನ್ನು ಹೇಳಿ, ದೂರಾನ್ವಯದಿಂದ ಯಾವ ಕೆಲಸವೂ ಸಾಧಿತವಾಗದೆಂಬ ವಾಸ್ತವವನ್ನು ಮನಗಾಣಿಸುತ್ತಾಳೆ ಮುಕ್ತಾಯಕ್ಕ ಈ ವಚನದಲ್ಲಿ. ದೂರ ಹೋದವನು ಊರ ಸುದ್ದಿಯನ್ನು ಅರಿಯದಂತೆ, ನನ್ನ ಅಜಗಣ್ಣ ಏನನ್ನೂ ಹೇಳದೆ ದೂರ ಹೋಗಿಬಿಟ್ಟ, ಎಂದು ಮನದ ಅಳಲನ್ನು ಮನನೊಂದು ತೋಡಿಕೊಳುತ್ತಾರೆ ಮಹಾ ತಾಯಿ ಶರಣೆ ಮುಕ್ತಾಯಕ್ಕ ನವರು..
#ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು