"ಆಗಿಲ್ಲದ ಸಿರಿ ಆಯುಷ್ಯವಿಲ್ಲದ ಬದುಕು, ಸುಖವಿಲ್ಲದ ಸಂಸಾರ, ಎಳತಟೆಗೊಂಬ ಕಾಯದ ಸಂಗ ಬಳಲಿಸುವ ಜೀವಭಾವ, ಇವರ ಕಳವಳವಳಿದಲ್ಲದೆ ಮಳುಬಾವಿಯ ಸೋಮನ ತಿಳಿಯಬಾರದು.. ✍️ಮಳುಭಾವಿಯ ಸೋಮಣ್ಣ.. ವಚನದ ಭಾವಾರ್ಥ: ಆದ್ಯಾತ್ಮಿಕ ಅರಿವಿಗೆ, ಸಂಕಟ ಮುಕ್ತ ಬದುಕಿಗೆ ಇರುವ ಅಡ್ಡಿಗಳನ್ನು ಮಳುಭಾವಿಯ ಸೋಮಣ್ಣನವರು ಗುರುತಿಸಿದ್ದಾರೆ. ಬಡತನದ ಸಂಕಷ್ಟದ ಜೀವನ,
ಕಡಿಮೆ ಅವಧಿಯ ಜೀವಿತಾವಧಿ, ಕಷ್ಟ ಕೋಟಲೆಯ ಸಾಮಾಜಿಕ ಕೌಟುಂಬಿಕ ಬದುಕು, ಅನಾರೋಗ್ಯದ ಕಡೆಗೆ
ಇಂದ್ರಿಯ ಆಕರ್ಷಣೆಗೆ,
ಭೋಗ ಜೇವನಕ್ಕೆ ವಾಲುವ ದೇಹ ಇವೆಲ್ಲವೂಗಳ ಚಿಂತೆ ಕಳೆಯದಿದ್ದರೆ ಪರಮಸತ್ಯದ ಅರಿವು ಆಗುವುದಿಲ್ಲ.. ಶರಣು ಶರಣಾರ್ಥಿಗಳು🙏🏻
#ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ವಚನಗಳು #ಬಸವಾದಿ ಶರಣ ಶರಣೆಯರು