ಕೃಷ್ಣೆ 🦚💙
521 views
9 hours ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #🙏 ಓಂ ನಮಃ ಶಿವಾಯ ಚಂಡಿಕೇಶ್ವರ:- ಮಹಾದೇವನ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಹೋದಾ ಗ ಪ್ರಕಾರದಲ್ಲಿ ಪ್ರದಕ್ಷಿಣೆ ಯನ್ನು ಅರ್ಧ ಚಂದ್ರಾಕಾರ ಮಾಡುತ್ತೇವೆ. ಇದನ್ನು 'ಸೋಮಸೂತ್ರ' ಎನ್ನುತ್ತಾರೆ. ಶಿವನ ಪಾಣಿಪೀಠದ ಗೋಮಕಿ ಬಾಯಿಂದ ತೀರ್ಥ ಬೀಳುವ ಜಾಗದವರೆಗೆ ಹೋಗುತ್ತೇವೆ. ಅದನ್ನು ದಾಟಿ ಹೋಗುವುದಿ ಲ್ಲ. ಏಕೆಂದರೆ ಶಿವನ ಶಿರದಿಂದ ಇಳಿದು ಬಂದ ಅಭಿಷೇಕದ ತೀರ್ಥದಲ್ಲಿ ಗಂಗೆ ಹಾಗೂ ಗಣಗಳು ಇರುತ್ತಾರೆ ಅಂಥ ಪವಿತ್ರ ತೀರ್ಥವನ್ನು ದಾಟಬಾರದು ಹಾಗೂ ತೀರ್ಥದಲ್ಲಿ ಶಿವನ ಸಕಾರಾತ್ಮಕ ಅಪಾರ ಶಕ್ತಿ ಇದ್ದು, ಅದರ ಪ್ರಭಾವ ದಿಂದ ಮನುಷ್ಯನ ದೇಹದ ಮುಖ್ಯವಾದ ಶಕ್ತಿ ನಷ್ಟವಾಗು ತ್ತದೆ ಎಂಬ ಕಾರಣಕ್ಕೆ ಸುತ್ತು ಪ್ರದಕ್ಷಿಣೆ ಹಾಕಬಾರದು ಎನ್ನುತ್ತಾರೆ. ಶಿವನ ದೇವಸ್ಥಾನದಲ್ಲಿ ಕೆಲವು ಆಚರಣೆಗಳನ್ನು ಕಾಣುತ್ತೇವೆ. ಆಲಯದ ಒಳಗೆ ಹೋದಾಗ ಶಿವ ದರ್ಶನ ಮಾಡಿ ಬರುವಾಗ ನಂದಿಯ ಕಿವಿಯ ಮೇಲ್ಭಾಗವನ್ನು ಹೆಬ್ಬೆರಳಿನಿಂದ ತೋರುಬೆರಳ ತನಕ ಹಿಡಿದು ಶಿವನನ್ನು ನೋಡುತ್ತಾ ಇಷ್ಟಾರ್ಥಗಳನ್ನು ಯಾರಿಗೂ ಕೇಳದಂತೆ ಹೇಳುತ್ತೇವೆ. ಧ್ಯಾನಾಸಕ್ತನಾದ ಶಿವನು ನಂದಿಯ ಮೂಲಕ ತಿಳಿಯುತ್ತಾನೆ ಎಂಬ ನಂಬಿಕೆ ಇದೆ. ಶಿವನ ದೇವಸ್ಥಾನ ದಿಂದ ವಿಭೂತಿ - ಪತ್ರೆ -ಫಲ -ಪುಷ್ಪ- ಪ್ರಸಾದ ಏನನ್ನೇ ತರುವುದಾದರೂ ಶಿವನ ಕುಟುಂಬದವನೇ ಆಗಿರುವ “ಚಂಡಿಕೇಶ್ವರ” ನ ಕಿವಿ ಬಳಿ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ತಿಳಿಸಿ ತರಬೇಕು. ಶಿವ ಮಂದಿರಗಳಲ್ಲಿ ಶಿವನ ಕುಟುಂಬವಾದ ಗಣಪತಿ, ಶಿವ- ಪಕ್ಕದ ಗುಡಿಯಲ್ಲಿ ಪಾರ್ವತಿ, ಹಾಗೆ ಸುಬ್ರಹ್ಮಣ್ಯ, ಈಶ್ವರನ ಎದುರಿಗೆ ನಂದಿ- ಹಾಗೆ ಬೃಂಗಿ ಮತ್ತು ಚಂಡಿಕೇಶ್ವರ ಮೂರ್ತಿಗಳನ್ನು ಇಟ್ಟಿರು ತ್ತಾರೆ. ಶಿವನ ಗಣಗಳಲ್ಲಿ ನಂದಿ- ಬೃಂಗಿಯರ ಹಿನ್ನೆಲೆ ಸಾಧಾರಣ ಗೊತ್ತಿರುತ್ತದೆ. 'ಚಂಡಿಕೇಶ್ವರ'ನ ಕುರಿತಾಗಿ ಒಂದು ಕಥೆ ಇದೆ. ದಕ್ಷಿಣ ಭಾರತದಲ್ಲಿ ಮಣಿಯಾರ್ ನದಿಯ ದಡದಲ್ಲಿ ಒಂದು ಅಗ್ರಹಾರವಿದ್ದು ಅಲ್ಲಿ 'ಈಚದತ್ತ' ಶರ್ಮಾ ಎಂಬ ಬ್ರಾಹ್ಮಣ ವೇದಪಂಡಿತನಿದ್ದು, ಮಕ್ಕಳಿಗೆ ವೇದ ಪಾಠ ಮಾಡುತ್ತಿದ್ದರು. ಚಂದೇಶನು ತಂದೆಯಂತೆ ವೇದಪಾರಂಗತನಾಗಿದ್ದು, ಅವನ ಆರಾಧ್ಯ ದೈವ ಶಿವನ ಭಕ್ತನಾಗಿದ್ದನು. ಶಿವಧ್ಯಾನ, ಶಿವ ಪೂಜೆ ಮಾಡುವುದರಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು. ನಿತ್ಯವೂ ಮಣಿಯಾರ್ ನದಿಯಲ್ಲಿ ಸ್ನಾನ, ದೇವತಾರಾಧನೆ ಮಾಡಿ ವೇದಾಧ್ಯಯನ ಮಾಡುತ್ತಿದ್ದ. ಅಂದು ನದಿಯಲ್ಲಿ ಸ್ನಾನ ಮಾಡಿ ನಿತ್ಯ ಕರ್ಮಗಳನ್ನು ಮುಗಿಸಿ ಬರುತ್ತಿರುವಾಗ ಒಬ್ಬ ಗೋಪಾಲಕ ಒಂದು ಹಸುವನ್ನು ಮನ ಬಂದಂತೆ ಹೊಡೆಯುತಿದ್ದ ಇದನ್ನು ಕಂಡ ಚಂದೇಶನ ಮನಸ್ಸಿಗೆ ನೋವಾಯಿತು. ಹೇಳಿದ ಹೇ ಗೋಪಾಲಕ ಗೋವು ದೈವ ಸಮಾನವಾದದು ಅದನ್ನು ಹಿಂಸಿಸುವುದು ಹೊಡೆಯುವುದು ಸರಿಯಲ್ಲ. ನಿನಗೆ ಈ ಹಸುವನ್ನು ಸಾಕುವುದು ಕಷ್ಟವಾದರೆ ನಾನು ಆದರ ಪಾಲನೆ ಪೋಷಣೆ ಮಾಡುತ್ತೇನೆ ಎಂದು ಹೇಳಿದ. ಕೋಪದಲ್ಲಿದ್ದ ಗೋಪಾಲಕ ಆಯಿತು ನನ್ನ ಎಲ್ಲಾ ಗೋವುಗಳನ್ನು ನಿನಗೆ ಕೊಡುತ್ತೇನೆ ಅದರ ಎಲ್ಲಾ ಜವಾಬ್ದಾರಿ ನಿನ್ನ ಮೇಲಿದೆ ಆದರೆ ಅದರ ಮೇಲಿನ ಹಕ್ಕು ನನ್ನದು. ಅವುಗಳ ಹಾಲು ನನಗೆ ಸಿಗಬೇಕು ಎಂದನು. ಚಂದೇಶನು ಷರತ್ತುಗಳಿಗೆ ಸಂತೋಷದಿಂದ ಒಪ್ಪಿ ಅವನು ನದಿಯ ದಡದಲ್ಲೇ ಇದ್ದು ಗೋ ಪೋಷಣೆ ಮಾಡುತ್ತಾ, ಜೊತೆ ಯಲ್ಲಿ ವೇದಾಧ್ಯಯನ ಮುಂದುವರೆಸಿದ. ಚಂದೇಶನ ಪಾಲನೆ ಪೋಷಣೆ ಯಿಂದ ಗೋವುಗಳು ತೃಪ್ತಿ ಹೊಂದಿ ಚಂದೇಶ ನನ್ನು ಪ್ರೀತಿಸತೊಡ ಗಿದವು. ಚಂದೇಶನು ನಿತ್ಯವೂ ಕಾಡಿಗೆ ಹೋಗಿ ಹುಲ್ಲು ಸೊಪ್ಪು ತಂದು ಹಸುಗಳಿಗೆ ಮೇವನ್ನು ಹಾಕುತ್ತಿದ್ದನು. ಮೇವು ತರುವ ಸಲುವಾಗಿ ಅವನ ಬಳಿ ಚಿಕ್ಕ ಕೊಡಲಿಯನ್ನು ಇಟ್ಟುಕೊಂಡಿದ್ದನು. ಚಂದೇಶನ ಆರೈಕೆಯಿಂದ ಗೋವು ಗಳು ಅವಾಗಿಯೇ ಹಾಲು ಸುರಿಸಲು ಪ್ರಾರಂಭಿಸಿದವು. ಹಾಲನ್ನು ಸಂಗ್ರಹಿಸಲು ಮಣ್ಣಿನ ದೋಣಿ ಮಾಡಿ ಹಾಲನ್ನು ಸಂಗ್ರಹಿಸುತ್ತಿದ್ದನು. ಅವನು ನಿತ್ಯ ಪೂಜೆಗಾಗಿ ನದಿಯಿಂದ ಮರಳನ್ನು ತಂದು ಶಿವಲಿಂಗ ತಯಾರಿಸಿದನು. ಮಣ್ಣಿನ ದೋಣಿಗಳಲ್ಲಿ ಹಾಲನ್ನು ಸಂಗ್ರಹಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದನು. ಒಂದು ದಿನ ಅಗ್ರಹಾರದಿಂದ ಬರುತ್ತಿದ್ದ ಒಬ್ಬ ವ್ಯಕ್ತಿ , ಗೋವುಗಳು ತಾವಾಗಿಯೇ ಹಾಲು ಸುರಿಸುವುದನ್ನು ಹಾಗೂ ಚಂದೇಶನು ಹಾಲನ್ನು ಸಂಗ್ರಹಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದನ್ನು ನೋಡಿದನು. ಇದನ್ನು ಅಗ್ರಹಾ ರದಲ್ಲಿದ್ದ ಗೋವುಗಳ ಯಜಮಾನನಿಗೆ ತಿಳಿಸಿದನು. ಯಜಮಾನ ಚಂದೇಶನ ತಂದೆಯಲ್ಲಿ ದೂರು ಹೇಳಿದನು. ತನ್ನ ಮಗ ಅನ್ಯರ ಹಸುವಿನ ಹಾಲನ್ನು ಶಿವನಿಗೆ ಅಭಿಷೇಕ ಮಾಡುವುದನ್ನು ಕೇಳಿ ಕೋಪಗೊಂಡು ಕಣ್ಣಾರೆ ನೋಡ ಬೇಕೆಂದು ಚಂದೇಶನಿದ್ದಲ್ಲಿಗೆ ಬಂದನು. ಆದರೆ ಆ ಸಮಯ ಚಂದೇಶನು ಏಕಾಗ್ರತೆಯಿಂದ ಶಿವನಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದನು. ಗೋವುಗಳು ಸಹ ನೋಡುತ್ತಿದ್ದವು “ಈಚದತ್ತ ಶರ್ಮ”ನು ಮಗನನ್ನು ಕರೆದನು, ಕೇಳಲಿಲ್ಲ ವೆಂದು ಹತ್ತಿರಕ್ಕೆ ಹೋಗಿ ಅಲುಗಾಡಿಸಿದರೂ, ಧ್ಯಾನ ಮಗ್ನ ನಾಗಿದ್ದ ಚಂದೇಶನಿಗೆ ಎಚ್ಚರ ಆಗಲಿಲ್ಲ ಕೋಪಗೊಂಡ ಈಚದತ್ತ ಹಾಲು ತುಂಬಿಸಿ ಸಂಗ್ರಹಿಸಿಟ್ಟ ಮಣ್ಣಿನ ದೋಣಿ ಗಳನ್ನು ಕಾಲಿಂದ ಒದ್ದನು. ಹಾಲು ತುಂಬಿದ ಮಣ್ಣಿನ ದೋಣಿಗಳು ಒಡೆದ ತುಂಡುಗಳು ಮರಳಿನ ಶಿವಲಿಂಗಕ್ಕೆ ತಾಗಿ ಶಿವಲಿಂಗವು ಬಿರಿಯಿತು. ತಕ್ಷಣ ಎಚ್ಚರಗೊಂಡ ಚಂದೇಶ, ಕೋಪಗೊಂಡು ತನ್ನ ಶಿವ ಧ್ಯಾನವನ್ನು ಭಂಗ ಮಾಡಿ, ಅಭಿಷೇಕಕ್ಕೆ ಇಟ್ಟ ಹಾಲಿನ ಮಡಿಕೆಗಳನ್ನು ಕಾಲಿ ನಿಂದ ಒದ್ದು ಒಡೆದು ಆ ಚೂರುಗಳಿಂದ ಶಿವನ ಲಿಂಗವನ್ನು ಭಿನ್ನ ಮಾಡಿದ ನಿನ್ನ ಕಾಲುಗಳಿಗೆ ತಕ್ಕ ಶಾಸ್ತಿ ಮಾಡುವೆ ಎಂದು ತಂದೆಯೆನ್ನದೇ ಅವನ ಎರಡು ಕಾಲುಗಳನ್ನು ಕತ್ತರಿಸಿದನು. ತಂದೆಯ ಎರಡು ಕಾಲಿನಿಂದಲೂ ರಕ್ತ ಹರಿದು ನೋವಿನಿಂದ ನರಳುತ್ತಾ ರಕ್ತದ ಮೇಲೆ ಕುಳಿತುಬಿಟ್ಟನು. ತಂದೆ ಎನ್ನದೆ ತನ್ನ ಆರಾಧ್ಯ ದೈವ ಶಿವನ ಧ್ಯಾನಕ್ಕೆ ಅಪ ಚಾರ ಮಾಡಿದವನ ಕಾಲುಗಳನ್ನು ಕತ್ತರಿಸಿದ ಚಂದೇಶನ ಭಕ್ತಿಗೆ ಮೆಚ್ಚಿ ಭಿನ್ನವಾದ ಮರಳಿನ ಲಿಂಗದೊಳಗಿಂದ ಶಿವನು ಪ್ರತ್ಯಕ್ಷನಾದನು. ಸಾಮಾನ್ಯ ಮನುಷ್ಯನಾದ ಚಂದೇಶನ ಭಕ್ತಿಗೆ ಮೆಚ್ಚಿ ಚಂದೇಶನನ್ನು ತನ್ನ ಕುಟುಂಬದ ಸದಸ್ಯನೆಂದು ಗಣಪತಿ - ಸುಬ್ರಹ್ಮಣ್ಯರ ಜೊತೆ ತನ್ನ ಮಗ ನೆಂದು ಸ್ವೀಕರಿಸಿದನು. ಚಂದೇಶನ ಹೆಸರನ್ನು ಚಂಡಿಕೇಶ್ವರ ಎಂದು ನಾಮಕರಣ ಮಾಡಿದನು. ಶಿವನ ಅನುಗ್ರಹದಿಂದ ಈಚದತ್ತ ಶರ್ಮನಿಗೆ ಕಾಲುಗಳು ಬಂದವು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ ಶಿವನ ಗುಡಿಯಲ್ಲಿ ಇರುವ ಚಂಡಿಕೇಶ್ವನ ಮುಂದೆ ಚಪ್ಪಾಳೆ ಅಥವಾ ಚಿಟಿಕೆ ಹೊಡೆಯಬೇಕು ಏಕೆಂದರೆ ಪರಮೇಶ್ವರನು ಧ್ಯಾನದಲ್ಲಿ ನಿರತನಾಗಿದ್ದು, ಚಂಡಿಕೇಶ್ವರ ಸದಾ ಕಾಲವು ಶಿವನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ಹಾಗೆಂದ ಮಾತ್ರಕ್ಕೆ ಅವನಿಗೆ ಗೊತ್ತಿಲ್ಲದಂತೆ ಭಕ್ತರು ಶಿವನ ಪತ್ರೆ- ಪುಷ್ಪ- ಪ್ರಸಾದ -ಭಸ್ಮ, ಇಂಥ ಯಾವುದೇ ವಸ್ತುವನ್ನು ತೆಗೆದು ಕೊಂಡು ಹೋಗಬೇಕಾದರೆ, ಧ್ಯಾನದಲ್ಲಿ ಮುಳುಗಿರುವ ಚಂಡಿಕೇಶ್ವರನಿಗೆ ಚಪ್ಪಾಳೆ ತಟ್ಟಿ ಎಚ್ಚರ ಮಾಡಿ ಶಿವನ ಪ್ರಸಾದಗಳನ್ನು ಅವನಿಗೆ ತೋರಿಸಿ ತೆಗೆದುಕೊಂಡು ಹೋಗುವ ಪದ್ಧತಿ ಬಂದಿದೆ. ಕೆಲವರು ಚಂಡಿಕೇಶ್ವರನಿಗೆ ಕಿವಿ ಕೇಳುವುದಿಲ್ಲ ಎಂದು ತಿಳಿದಿದ್ದಾರೆ. ಆದರೆ ಅವನು ಶಿವ ಧ್ಯಾನದಲ್ಲಿ ಮಗ್ನನಾಗಿ ರುತ್ತಾನೆ ಧ್ಯಾನದಿಂದ ಎಚ್ಚರಗೊಳಿಸಲು ಚಪ್ಪಾಳೆ ತಟ್ಟ ಬೇಕು. ಸಾಮಾನ್ಯ ಮಾನವನಾಗಿದ್ದ ಚಂದೇಶನ ಭಕ್ತಿಗೆ ಶಿವನು ಮೆಚ್ಚಿ ತನ್ನ ಮಗನಾಗಿ ಮಾಡಿಕೊಂಡನು. ಕರ ಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮಾನಸಂ ವಾಪರಾಧಮ್ ನಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ!! ನನ್ನ ಕೈ ಕಾಲುಗಳ ಕ್ರಿಯೆಗಳಿಂದ ಮಾತಿನಿಂದ, ಶರೀರದಿಂದ, ಕಣ್ಣು ಕಿವಿಗಳಿಂದ, ಮನಸ್ಸಿನಿಂದ, ಅಥವಾ ಕರ್ಮಗಳಿಂದ, ನಿರ್ಧಾರಿತ ಕೆಲಸವನ್ನು ಮಾಡುವಾಗ, ಯಾವ ಪಾಪಗಳಾಗಿದೆಯೋ, ಅವೆಲ್ಲವನ್ನು ಕ್ಷಮಿಸು ಹೇ ಮಹಾದೇವ ಶಂಭೋ ಜಯವಾಗಲಿ, ಕರುಣಾ ಸಾಗರನಾದ ನಿನ್ನಲ್ಲಿ ಅವೆಲ್ಲವನ್ನು ಅರ್ಪಿಸುತ್ತೇನೆ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ