*:ಅಲ್ಲಮ ಪ್ರಭುದೇವರ ಗುರು ಬಸವಣ್ಣನವರು (ಗುರುವಿನ ಗುರು):*
(ಅರ್ಥಾಥ ಬಸವಣ್ಣನವರಿಗೆ ಗುರುವಿಲ್ಲಾ, ಸೃಷ್ಟಿ ಕರ್ತ ಲಿಂಗದೇವರೆ ಅವರಿಗೆ ಗುರುವಾಗಿದ್ದರು, ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ ಅಲ್ಲಮ ಪ್ರಭುಗಳು ಹಾಗೂ ಬಸವಣ್ಣನವರ ವಚನಗಳು ಸ್ಪಷ್ಟನೆ ನೀಡಿದೆ 👇🏼*)
ಅಲ್ಲಮ ಪ್ರಭುದೇವರ *ವಚನ 1*
ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ. ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ. ಇದ್ದಾನೆ ನೋಡಾ *ಎನ್ನ ಗುರು ಅನಿಮಿಷನು* ಎನ್ನ ಜ್ಞಾನದೊಳಗೆ. ಇದ್ದಾನೆ ನೋಡಾ *ಎನ್ನ ಗುರುವಿನ ಗುರು ಪರಮಗುರು ಬಸವಣ್ಣ* ಎನ್ನ ಕಂಗಳ ಮುಂದೆ ! *ಗುಹೇಶ್ವರ ಸಾಕ್ಷಿಯಾಗಿ, ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ* !
ಗುರು ಬಸವಣ್ಣನವರ *ವಚನ 2*
"ಎನ್ನ ಗುರು ಪರಮಗುರು ನೀವೆ ಕಂಡಯ್ಯ, ಎನ್ನ ಗತಿಮತಿ ನೀವೆ ಕಂಡಯ್ಯ, *ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ*,
ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ.
ಕೂಡಲಸಂಗಮದೇವ
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು ನಿಮ್ಮ ಶರಣ ಸಿದ್ಧರಾಮಯ್ಯ ದೇವರೆ ಬಲ್ಲರು..
#ಬಸವಣ್ಣನವರ ವಚನ..
#//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು