ಫಾಲೋ
ಕೃಷ್ಣೆ 🦚💙
@radhe_radhe4723
238
ಪೋಸ್ಟ್ಸ್
952
ಫಾಲೋವರ್ಸ್
ಕೃಷ್ಣೆ 🦚💙
602 ವೀಕ್ಷಿಸಿದ್ದಾರೆ
20 ಗಂಟೆಗಳ ಹಿಂದೆ
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ #ಶ್ರೀ ಲಲಿತಾ ತ್ರಿಪುರ ಸುಂದರಿ ನಮೋಸ್ತುತ್ತೆ ಶ್ರೀ ಲಲಿತ ಸಹ್ರಸನಾಮವನ್ನು ಪಠಿಸುವ ಮುನ್ನ ಏನೆಲ್ಲ ಮಾಡಬೇಕು ಮತ್ತು ಅದರ ಪ್ರಯೋಜನಗಳೇನು? ಶ್ರೀ ಲಿಲತಾ ಸಹಸ್ರನಾಮ ಎಂಬುದು ಬ್ರಹ್ಮಪುರಾಣದ ಒಂದು ಪಠ್ಯ. ಲಲಿತಾ ಎಂಬುದು ಆನಂದ ದೇವತೆ, ಈಕೆ ಪರಶಿವನ ಪತ್ನಿ ಪಾರ್ವತಿ ದೇವಿಯ ರೂಪ. ಭಗವಾನ್ ಹಯಗ್ರೀವ ಮತ್ತು ಅಗಸ್ತ್ಯ ಮುನಿಗಳ ಚರ್ಚೆಯಿಂದ ಹೊರಹೊಮ್ಮಿದ ಮಂತ್ರವೇ ಶ್ರೀ ಲಿಲತಾ ಸಹಸ್ರನಾಮ. ಇದು ಅತ್ಯಂತ ಪವಿತ್ರವಾದ ಮಂತ್ರವಾಗಿದ್ದು ಅತ್ಯಂತ ಶಕ್ತಿಯುತವಾದ ಮಂತ್ರವಾಗಿದೆ. ಮೊದಲಿಗೆ ಲಲಿತಾ ಸಹಸ್ರನಾಮವನ್ನು ಪಠಿಸುವ ಮುನ್ನ ಏನೆಲ್ಲ ಮಾಡಬೇಕು – ಲಲಿತಾ ಸಹಸ್ರನಾಮವನ್ನು ಪಠಿಸುವ ಮೊದಲು ಸ್ನಾನ ಮಾಡಬೇಕು ಅಥವಾ ಕೈ – ಕಾಲುಗಳನ್ನು ತೊಳೆದುಕೊಳ್ಳಬೇಕು. – ಕುಳಿತುಕೊಳ್ಳಲು ಆರಾಮದಾಯಕ ಸ್ಥಳವನ್ನು ಅಥವಾ ಆಸನವನ್ನು ಆಯ್ದುಕೊಳ್ಳಿ. ದೇವರ ಕೋಣೆಯಲ್ಲಿ ಚಾಪೆಯನ್ನು ಹಾಸಿಕೊಂಡು ಕೂಡ ಕುಳಿತುಕೊಳ್ಳಬಹುದು. – ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಯಾವಾಗಲೂ ಸಕಾರಾತ್ಮಕ ಆಲೋಚನೆಯನ್ನೇ ಹೊಂದಲು ಪ್ರಯತ್ನಿಸಬೇಕು. – ಶ್ರದ್ಧಾ ಮತ್ತು ಭಕ್ತಿಯಿಂದ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಬೇಕು. – ಮಂತ್ರವನ್ನು ಸರಿಯಾದ ಉಚ್ಚಾರಣೆಯಲ್ಲಿ ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಂತ್ರವನ್ನು ಪಠಿಸಿಬೇಕು. – ಸಂಪೂರ್ಣ ದಿನ ದೈಹಿಕವಾಗಿ ಅಥವಾ ಮಾನಸಿಕವಾಗಿ ಇತರರನ್ನು ನೋಯಿಸದಿರಿ. – ಮಂತ್ರವನ್ನು ಓದುವಾಗ ಪ್ರತಿಯೊಂದು ಸಾಲುಗಳನ್ನು ಅರ್ಥಮಾಡಿಕೊಳ್ಳಿ. – ಮಂತ್ರದ ಕೊನೆಯಲ್ಲಿ ದೇವಿಗೆ ಜಪವನ್ನು ಅರ್ಪಿಸಿ. ಶ್ರೀ ಲಲಿತಾ ಸಹಸ್ರನಾಮದಿಂದಾಗುವ ಪ್ರಯೋಜನಗಳು – ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದಾಗ ಈ ಮಂತ್ರವನ್ನು ಪಠಿಸಿ. – ಪವಿತ್ರ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದಾಗ ಈ ಮಂತ್ರವನ್ನು ಪಠಿಸಿ. – ದಾನ ಧರ್ಮಗಳನ್ನು ಮಾಡಲು ಆಗದಿದ್ದಾಗ ಈ ಮಂತ್ರವನ್ನು ಪಠಿಸಿ. – ಅಪೂರ್ಣವಾದ ಪೂಜೆಯಿಂದುಂಟಾಗುವ ಕಷ್ಟವನ್ನು ದೂರಾಗಿಸುತ್ತದೆ. – ಅಕಾಲಿಕ ಮರಣದ ಭಯವನ್ನು ದೂರಾಗಿಸುತ್ತದೆ. ದೀರ್ಘ ಮತ್ತು ಉತ್ತಮ ಆರೋಗ್ಯಕರ ಜೀವನವನ್ನು ನೀಡುತ್ತದೆ. – ವ್ಯಕ್ತಿಯ ಹಣೆಯನ್ನು ಹಿಡಿದು ಧಾರ್ಮಿಕವಾಗಿ ಲಲಿತಾ ಸಹಸ್ರನಾಮವನ್ನು ಜಪಿಸಿದರೆ ಜ್ವರವು ಕಡಿಮೆಯಾಗುತ್ತದೆ. – ಗ್ರಹಗಳಿಗೆ ಸಂಬಂಧಿಸಿದ ಮತ್ತು ದುಷ್ಟ ಶಕ್ತಿಗಳಿಗೆ ಸಂಬಂಧಿಸಿದ ತೊಂದರೆಗಳಿಂದ ಹೊರಬರಲು ಒಂದು ಪಾತ್ರೆ ನೀರನ್ನು ಅಥವಾ ಒಂದು ಲೋಟ ನೀರನ್ನು ಧಾರ್ಮಿಕವಾಗಿ ತಲೆಯ ಮೇಲೆ ಸುರಿದುಕೊಂಡು ಶ್ರೀ ಲಲಿತಾ ಸಹಸ್ರನಾಮ ಜಪಿಸಬೇಕು. – ಸಂತಾನ ಭಾಗ್ಯಕ್ಕಾಗಿ ಓರ್ವ ವ್ಯಕ್ತಿಯು ಲಲಿತಾ ಸಹಸ್ರನಾಮ ಜಪಿಸುವಾಗ ಇಟ್ಟುಕೊಂಡ ತುಪ್ಪವನ್ನು ಸೇವಿಸಬೇಕು. – ವ್ಯಕ್ತಿಯಲ್ಲಿನ ಸೂಕ್ಷ್ಮ ಶಕ್ತಿಯು ಜಾಗೃತಗೊಳ್ಳುತ್ತದೆ. – ಅಪಘಾತಗಳಿಂದ ಮತ್ತು ಶತ್ರುಗಳಿಂದುಂಟಾಗುವ ಸಮಸ್ಯೆಗಳನ್ನು ದೂರಾಗಿಸಿ, ಅವರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ. – ಶುಕ್ರವಾರದಂದು ವಿಶೇಷವಾಗಿ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಆ ವ್ಯಕ್ತಿಯಲ್ಲಿ ಶಕ್ತಿ, ಖ್ಯಾತಿ, ಇಚ್ಛಾಶಕ್ತಿ ಹೆಚ್ಚಾಗುತ್ತದೆ. – ಒಮ್ಮೆ ಲಲಿತಾ ದೇವಿಯ ಹೆಸರನ್ನು ಜಪಿಸುವುದರಿಂದ ಶಿವನ ಹೆಸರನ್ನು ಸಾವಿರ ಬಾರಿ ಜಪಿಸುವಷ್ಟು ಉತ್ತಮ. – ಸಂಜೆ ಸಮಯದಲ್ಲಿ ಅಥವಾ ಬೆಳಗ್ಗೆ ಜಪಿಸುವುದರಿಂದ ಆ ಕುಟುಂಬದಲ್ಲಿ ಏಕತೆ, ಶಾಂತಿ, ಸ್ಪಷ್ಟ ಮನಸ್ಸು ಮತ್ತು ಸಮೃದ್ಧಿ ನೆಲೆಯಾಗುತ್ತದೆ. – ಲಲಿತ ಸಹ್ರಸನಾಮದಿಂದ ಜೀವನದ ಮೂಲಭೂತ ಅವಶ್ಯಕತೆಗಳಿಗೆ ಎಂದಿಗೂ ಕೊರತೆಯಾಗುವುದಿಲ್ಲ. – ಕಾಳಿ ಮಾತೆಯ, ದುರ್ಗಾ ದೇವಿಯ, ದೇವತೆಗಳ, ಪರಾಶಕ್ತಿಯ ಮತ್ತು ಭಗವತಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ನೀವು ಈ ರೀತಿಯಾಗಿ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸುವುದು ಅದರಲ್ಲೂ ಶುಕ್ರವಾರ ಲಲಿತಾ ಸಹಸ್ರನಾಮ ಪಠಿಸುವುದಕ್ಕೆ ವಿಶೇಷ ಮಹತ್ವವಿದೆ. ಮೂಲಕ ಈ ಎಲ್ಲಾ ಅಂಶಗಳ ಶುಭ ಫಲವನ್ನು ಪಡೆದುಕೊಳ್ಳಬಹುದಾಗಿದೆ. ✍️ಸತೀಶ್ ಬಿಲ್ಲವ👌❤️🙏 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
581 ವೀಕ್ಷಿಸಿದ್ದಾರೆ
20 ಗಂಟೆಗಳ ಹಿಂದೆ
#🔱 ಭಕ್ತಿ ಲೋಕ ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ | ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ || ಪ || ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ ಕವಿ ಗುರುವು ಶನಿಯು ಮಂಗಳನು ನೀನೇ | ದಿವ ರಾತ್ರಿಯು ನೀನೇ ನವ ವಿಧಾನವು ನೀನೇ ಭವರೋಗ ಹರ ನೀನೇ ರಕ್ಷಕನು ನೀನೇ || 1 || ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ ನಕ್ಷತ್ರ ಯೋಗ ತಿಥಿ ಕರಣ ನೀನೇ | ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ ಪಕ್ಷಿವಾಹನ ದೀನರಕ್ಷಕನು ನೀನೇ || 2 || ಋತುವತ್ಸರವು ನೀನೇ ಪೃಥಿವಿ ಧಾರಿಯು ನೀನೇ ಕ್ರತು ಹೋಮ ಯಜ್ಞ ಸದ್ಗತಿಯು ನೀನೇ | ಜಿತವಾಗಿ ಎನ್ನೊಡೆಯ ಪುರಂದರ ವಿಠ್ಠಲನೆ ಸ್ತುತಿಗೆ ಸಿಲುಕದ ಅಪ್ರತಿಮ ಮಹಿಮ ನೀನೇ || 3 || ಸಂಗ್ರಹ...... ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
527 ವೀಕ್ಷಿಸಿದ್ದಾರೆ
20 ಗಂಟೆಗಳ ಹಿಂದೆ
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ವಿಶೇಷ ವಿಚಾರಗಳು ಒಮ್ಮೆ ಓದಿ ಜ್ಞಾನ ದೀವಿಗೆಯಾಗಿ 🌺🙏🌸 ಮಾನವ ಜೀವನ ಅಮೂಲ್ಯ- ಜ್ಞಾನ ಸಂಪಾದಿಸಿ ಭಗವತ್ಕೃಪೆಗೆ ಪಾತ್ರರಾಗೋಣ. ಅನೇಕ ಪ್ರಾಣಿಗಳಿಗೆ ನೆವೆಯಾದಾಗ ತುರಿಸಿಕೊಳ್ಳಲು ಸಹ ಕೈಬಲವಿಲ್ಲ. ಹೀಗಿರುವಾಗ ರೋಗನಿವಾರಣೆಗೆ, ಆಹಾರಸೇವನೆಗೆ, ಎಲ್ಲಕ್ಕೂ ಮಿಗಿಲಾದ ಆತ್ಮೋದ್ಧಾರಕ್ಕೆ ಮೀಸಲಾದ ಮಾನವ ಜನ್ಮ ಸಣ್ಣದಲ್ಲ. ಮತ್ತೆ ಸಿಗಲಾರದ ಈ ಮಾನವ ಜನ್ಮ ಎಂತಹಾ ಅಮೂಲ್ಯ. ಅದರಲ್ಲೂ ಇವನ ಆಯುಸ್ಸು ಅತಿ ಹೆಚ್ಚೆಂದರೆ 100 ವರ್ಷ. ನಮ್ಮ 1 ವರ್ಷದೇವತೆಗಳ 1 ದಿನ. ನಮ್ಮ 360 ವರ್ಷ ದೇವತೆಗಳ 1 ವರ್ಷ. ಕೃತಯುಗದ ಅವಧಿ 17,28,000 ಆಗಿತ್ತು. ತ್ರೇತಾಯುಗದಲ್ಲಿ ಅದು ಮತ್ತಷ್ಟು ಇಳಿಯುತ್ತಾ 12 ಲಕ್ಷ 296 ಸಾವಿರ ವರ್ಷಗಳು ದ್ವಾಪರಕ್ಕೆ ಬಂದಾಗ ಅವಧಿ ಇನ್ನೂ ಕಡಿಮೆಯಾಗಿ 8 ಲಕ್ಷ 64 ಸಾವಿರ ಎನಿಸಿತ್ತು. ಕಲಿಯುಗದ ಅವಧಿಯಂತು 4 ಲಕ್ಷ 32 ಸಾವಿರ ಆಗಿತ್ತು. ಇಂತಹ ಒಂದು ಯುಗ ಚಕ್ರ ಕಳೆದಾಗ 43 ಲಕ್ಷ 20ಸಾವಿರ ವರ್ಷಗಳು ಸಾಗುವವು. ಇಂತಹ 43 ಲಕ್ಷ 20 ಸಾವಿರವರ್ಷಗಳು ಒಂದು ಯುಗಚಕ್ರ. ಇವು ಸಾವಿರಭಾರಿ ತಿರುಗಿದಾಗ ಬ್ರಹ್ಮ ದೇವರ ಒಂದು ಹಗಲು ಆದಂತೆ. ಅದು ಮತ್ತೂ ಸಾವಿರ ಬಾರಿ ಕಳೆದಾಗ ಒಂದು ರಾತ್ರಿಯಾದಂತೆ. ನಮ್ಮ 86.4 ಕೋಟಿ ವರ್ಷಗಳು ಬ್ರಹ್ಮದೇವರ ಒಂದು ದಿನ. ಅಂತಹಾ 360 ದಿನಗಳು ಒಂದು ವರ್ಷವು. ಅಂತಹಾ ನೂರುವರ್ಷಗಳು ಅವರ ಆಯುಸ್ಸು. ಇದು ನಮ್ಮ ಭಗವಂತನಿಗೆ ರೆಪ್ಪೆ ತೆರೆದಂತೆ. ಇಂತಹಾ ಬ್ರಹ್ಮಾದಿಗಳ ಆಯುಸ್ಸಿನ ಮುಂದೆ ನಮ್ಮ ಮಾನವರ ಈ ನೂರು ವರ್ಷದ ಜನ್ಮದ ಆಯುಸ್ಸು, ಅದರಲ್ಲೂ ರೋಗರುಜಿನಗಳಿಂದ ಬಳಲಿರದ ಸಮಯ ಕೋಟಿಯ ಒಂದಂಶವೂ ಇಲ್ಲ. ಹೀಗಿರುವಾಗ ಅವನನ್ನು ಮರೆತು, ಭೋಗದಲ್ಲೇ ಮುಳುಗಿ ಅಮೂಲ್ಯ ಅವಕಾಶವನ್ನೂ ಮೂಲೆಗುಂಪು ಮಾಡಿಕೊಳ್ಳಬೇಕೆ? ಜ್ಞಾನಸಂಪಾದನೆ, ಲೋಕೋಪಕಾರದಿಂದ ಕರ್ತವ್ಯಪರರಾಗಿ ಸಾರ್ಥಕ ಮಾಡಿಕೊಳ್ಳಬೇಡವೆ? ಇಂದೇ ತೀರ್ಮಾನಿಸಿ ಭಗವಚ್ಚಿಂತನೆಯಿಂದ ನಿಮ್ಮ ಆಯುಸ್ಸಿಗೆ ಸಾರ್ಥಕ್ಯದ ಪದಕ ನೀಡಿ. 'ಕಾಲನ ದೂತರು ಕಾಲ್ಪಿಡಿದೆಳೆದಾಗ ತಾಳು ತಾಳು ಎಂದರೆ ತಾಳುವರೆ' 'ಮೃತ್ಯು ಬಾರದ ಮುನ್ನ ಧರ್ಮವ ಗಳಿಸಿರೋ' 'ಅಲ್ಪಾವಕಾಶದ ಈಶರೀರವು ಗಾಳಿಗೊಡ್ಡಿದ ದೀಪ" ಹೀಗಿರುವಾಗ ಶರೀರದಿಂದ ಮೆರೆಯದಿರಿ. ಭಗವಂತನನ್ನು ಮರೆಯದಿರಿ. 'ವೈಕುಂಠವೆಂಬುದು ಅಲ್ಲೇ ಬರಿದೆ ಲೌಕಿಕವ ತೊಡೆದರೆ ಇಪ್ಪುದು ಇಲ್ಲೇ' ಲೌಕಿಕ ಜಂಜಾಟಸ್ವಲ್ಪ ತೊರೆದು ಜ್ಞಾನ ಸಂಪಾದಿಸಿಕೊಳ್ಳಿರಿ. ಅದರಿಂದ ಭಗವಂತ ಪ್ರೀತನಾಗುವನು ಆಧ್ಯಾತ್ಮ ಜ್ಞಾನವನ್ನು ಬೆಳೆಸೋಣ ಭಗವತ್ಕೃಪೆಗೆ ಪಾತ್ರರಾಗೋಣ ಸದಾ ಭಗವಂತನ ಸ್ಮರಣೆ ಮಾಡೋಣ🌺🙏🌸 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
763 ವೀಕ್ಷಿಸಿದ್ದಾರೆ
20 ಗಂಟೆಗಳ ಹಿಂದೆ
#ಜೈ ಹನುಮಾನ್ #🔱 ಭಕ್ತಿ ಲೋಕ ಶಕ್ತಿ ಶಾಲಿ ಹನುಮಂತ:- ಶ್ರೀ ರಾಮಭಕ್ತನಾದ ಹನುಮಂತನು ಜ್ಞಾನ, ಭಕ್ತಿ, ವೈರಾಗ್ಯ ಮತ್ತು ಅಷ್ಟಸಿದ್ದಿಗಳನ್ನು ಗಳಿಸಿಕೊಂಡ ಮಹಾನ್ ಶಕ್ತಿಶಾಲಿ ಹನುಮಂತ. ಭಕ್ತರ ಅಭೀಷ್ಟಗಳನ್ನು ನೆರವೇರಿಸುವ ಸರ್ವ ಶಕ್ತ ದೇವನೆಂದು ಭಕ್ತಾದಿಗಳ ನಂಬಿಕೆಗೆ ಪಾತ್ರನಾಗಿದ್ದಾನೆ. ಆಂಜನೇಯನು ಸಾಕ್ಷಾತ್ ಪರಮೇಶ್ವರನ ಅಂಶದಿಂದ ಜನಿಸಿದವನು ಅತ್ಯಂತ ಬಲಶಾಲಿ ಎಂಬುದಕ್ಕೆ ಅನೇಕ ಪುರಾಣ ಕಥೆಗಳು ಇವೆ. ಹನುಮಂತನು ಹಿಂದು ದೇವತೆಗಳಲ್ಲಿ ಒಬ್ಬ ಶಕ್ತಿದೇವತೆ. ಶ್ರೀರಾಮ ಚಂದ್ರನ ಪರಮಭಕ್ತ. ಶಿವನ ಹನ್ನೊಂದನೇ ಅವತಾರ ಎಂದು ಹೇಳಲಾಗುತ್ತದೆ. ಶಿವಪುರಾಣದ ಪ್ರಕಾರ ದೇವತೆಗಳು ಮತ್ತು ದಾನವರ ನಡುವೆ ಅಮೃತ ಹಂಚುವ ಸಂದರ್ಭದಲ್ಲಿ ಮೋಹಿನಿ ರೂಪವನ್ನು ಧರಿಸಿದ ವಿಷ್ಣುವ ನ್ನು ಕಂಡು ಶಿವನು ಆಕರ್ಷಿತನಾಗುತ್ತಾನೆ. ಆ ಸಮಯದಲ್ಲಿ ಶಿವನ ವೀರ್ಯ ಸ್ಖಲನವಾಯಿತು. ಸಪ್ತಋಷಿಗಳು ಶಿವನ ವೀರ್ಯವನ್ನು ಎಲೆಗಳ ದೊನ್ನೆಗಳಲ್ಲಿ ಸಂಗ್ರಹಿಸಿದರು. ಸೂಕ್ತವಾದ ಸಂದರ್ಭದಲ್ಲಿ ಆ ವೀರ್ಯವನ್ನು ವಾನರರಾಜ ಕೇಸರಿಯ ಪತ್ನಿಯಾದ ಅಂಜನಾದೇವಿಯ ಕಿವಿಗಳ ಮೂಲಕ ಅವಳ ಉದರಕ್ಕೆ ಸೇರಿಸಿದರು. ಆಕೆ ಮಕ್ಕಳಿಗಾಗಿ ಶಿವನನ್ನು ಕುರಿತು ಕಠಿಣ ತಪಸ್ಸು ಮಾಡಿದ್ದಳು. ಮುಂದೆ ಅಂಜನ ಗರ್ಭ ಧರಿಸಿ ನವಮಾಸಗಳು ತುಂಬಿದಾಗ ಆಕೆಗೆ ಅಂಜನಾಸುತ ಹನುಮಂತ ಜನಿಸಿದನು ಹೀಗೊಂದು ಕಥೆ ಇದೆ. ಸಂಸ್ಕೃತದಲ್ಲಿ 'ಹನುಮಾನ್' ಎಂಬುದು, ದವಡೆ ಎಂದು ಅರ್ಥ 'ಹನು' ಎಂದರೆ ದವಡೆ, 'ಮಾನ್' ಎಂದರೆ ವಿರೂಪ ಗೊಂಡಿದೆ ಎಂದು ಅರ್ಥ. ಬಾಲ್ಯದಲ್ಲಿ ಹನುಮನು ಆಕಾಶ ದಲ್ಲಿ ಉದಯಿಸುತ್ತಿದ್ದ ಕೆಂಪು ರಂಗಿನ ಸೂರ್ಯನನ್ನು ಹಣ್ಣೆಂದು ತಪ್ಪಾಗಿ ತಿಳಿದು, ತಿನ್ನಲು ಮುಂದಾಗುತ್ತಾನೆ. ಸೂರ್ಯನನ್ನು ಹನುಮಂತನಿಂದ ರಕ್ಷಿಸಲು ಇಂದ್ರದೇವನು ತನ್ನ ಆಯುಧದಿಂದ ಆಂಜನೇಯನ ಮೇಲೆ ಹಲ್ಲೆ ಮಾಡು ತ್ತಾನೆ. ಇಂದ್ರನ ವಜ್ರಾಯುಧ ಹನುಮಂತನ ದವಡೆಗೆ ತಗಲಿ ದವಡೆ ವಿರೂಪಗೊಳ್ಳುತ್ತದೆ. ಇದರಿಂದ ಆಂಜನೇಯನನ್ನು “ಹನುಮಾನ್” ಎಂದು ಕರೆಯುತ್ತಾರೆ. ಪ್ರಜ್ಞಾಹೀನನಾಗಿದ್ದ ಆಂಜನೇಯನ ಸ್ಥಿತಿಯನ್ನು ನೋಡಿ ವಾಯುದೇವರಿಗೆ ಕೋಪಬಂದು ಗಾಳಿ ನಿಲ್ಲಿಸಿ, ಇಂದ್ರ ಮತ್ತು ಸೂರ್ಯದೇವ ಕ್ಷಮೆಯನ್ನು ಕೇಳಿ ಪ್ರಜ್ಞಾಹೀನ ನಾದ ಆಂಜನೇಯನನ್ನು ಯಥಾಸ್ಥಿತಿಗೆ ಬರುವಂತೆ ಮಾಡುತ್ತಾರೆ. ಆನಂತರ ಎಲ್ಲಾ ದೇವಾನುದೇವತೆಗಳು ಹನುಮನಿಗೆ ಶಕ್ತಿಯುತವಾದ ವರ ಕೊಟ್ಟು ಆಶೀರ್ವದಿಸುತ್ತಾರೆ. ಸೂರ್ಯದೇವನು ತನ್ನ ತೇಜಸ್ಸಿನ ಜೊತೆಯಲ್ಲಿ ಆತನಿಗೆ ಶಾಸ್ತ್ರಗಳ ಜ್ಞಾನವನ್ನು ಕೊಡುತ್ತಾನೆ .ಯಮನು ಹನುಮಂತ ನಿಗೆ ರೋಗಗಳು ಭಾದಿಸದೆ ಆರೋಗ್ಯ ಹಾಗೂ ತೇಜೋ ವಂತನಾಗಿರು ಎಂದು ಹರಸುತ್ತಾನೆ. ಹನುಮಂತ ಮಾಡುವ ಎಲ್ಲಾ ಯುದ್ಧಗಳಲ್ಲಿ ಅವನಿಗೆ ಜಯ ಲಭಿಸಲಿ. ಎಂದು ಕುಬೇರ ಆಶೀರ್ವದಿಸುತ್ತಾನೆ. ಶಿವನು, ಯಾವುದೇ ಅಸ್ತ್ರಶಸ್ತ್ರಗಳಿಂದ ಹನುಮಂತನಿಗೆ ಮರಣ ವಾಗದಂತೆ ಹರಸುತ್ತಾನೆ. ಬ್ರಹ್ಮದೇವನು ಹನುಮಂತನು ಇಚ್ಛಿಸಿದಂತೆ ರೂಪ ಧರಿಸುವ ವರ ಕೊಡುತ್ತಾನೆ. ಮತ್ತು ಎಲ್ಲಿಗೆ ಹೋಗ ಬೇಕೆಂದು ಇಚ್ಚಿಸಿದರು ಅಲ್ಲಿಗೆ ಸುಲಲಿತವಾಗಿ ಶೀಘ್ರವಾಗಿ ಹೋಗುವಂತೆ ವರ ಕೊಡುತ್ತಾನೆ. ಹೀಗೆ ಸಕಲ ದೇವತೆಗಳು ಹನುಮಂತನಿಗೆ ವರಗಳ ಸುರಿಮಳೆ ಗರೆದರು. ಸರ್ವಶಕ್ತ ಸಂಪನ್ನನಾದ ಹನುಮಂತನಿಗೆ 'ಶಕ್ತಿಮಾನ್' ಎಂಬ ಹೆಸರು ಬರುತ್ತದೆ. ಮುಂದೆ ರಾಮಾಯಣದಲ್ಲಿ ಹನುಮನ ಮಹತ್ತರವಾದ ಗುರುತರವಾದ ಪಾತ್ರ ವಹಿಸುತ್ತಾನೆ."ರಾಮಾಯಣ ಮಹಾಮಾಲಾ ರತ್ನಂ, ವಂದೇ ನಿಲಾತ್ಮಜಂ" ‘ರಾಮಾಯಣ ಮಹಾಮಾಲೆಯೊಳಗೆ ರತ್ನದಂತಿರುವ ಆಂಜನೇಯನಿಗೆ ನಮಸ್ಕಾರಗಳು' ಭಕ್ತ ಶಿರೋಮಣಿ ಹನುಮಂತ ಸದಾಕಾಲ ರಾಮನಾಮಜಪ ಸ್ಮರಣೆ ಮಾಡುತ್ತಲೇ, ತನ್ನ ಬುದ್ಧಿಚಾತುರ್ಯಗಳನ್ನು ಬಳಸಿ ರಾಮನಿಗೆ ಎಲ್ಲ ಕಾರ್ಯಗಳಲ್ಲೂ ಸಹಕಾರಿಯಾಗಿದ್ದನು. ಆಂಜನೇಯ ಇಲ್ಲದ ರಾಮಾಯಣ ಕಲ್ಪಿಸಲು ಸಾಧ್ಯವಿಲ್ಲ ಆಂಜನೇಯ ರಾಮ ಭಕ್ತನಾಗಿ ಮತ್ತು ಭಾರತದ ಎಲ್ಲಾ ಜನ ಮನಸ್ಸನ್ನು ಗೆದ್ದ ದೇವರಾಗಿದ್ದಾನೆ. ನಮ್ಮ ದೇಶದ ಹಳ್ಳಿ, ಹಳ್ಳಿಗಳಲ್ಲೂ ಆಂಜನೇಯನ ಗುಡಿ ಇರುತ್ತದೆ. ರಾಮನ ದೇವಸ್ಥಾನ ಕಡಿಮೆ ಇರಬಹುದು. ಎಲ್ಲೇ ರಾಮನ ದೇವಸ್ಥಾನವಿರಲಿ ಅಲ್ಲಿ ಆಂಜನೇಯ ಇರುತ್ತಾನೆ. ಆಂಜನೇಯ ಇಲ್ಲದ ರಾಮ ಮಂದಿರ ಇಲ್ಲ. ಆದರೆ ರಾಮ ನಿಲ್ಲದ ಆಂಜನೇಯ ಗುಡಿ ಬೇಕಾದಷ್ಟು ಕಡೆ ಇದೆ. "ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ! ಪುರತೋ ಮಾರುತೀರ್ಯಸ್ಯ ತಂ ವಂದೇ ರಘುನಂದನಂ" (ಎಡಗಡೆಯಲ್ಲಿ ಪತ್ನಿ ಸೀತೆ, ಬಲಗಡೆಯಲ್ಲಿ ಸಹೋದರ ಲಕ್ಷ್ಮಣ, ರಾಮನ ಮುಂದುಗಡೆ 'ದಾಸ ಮಾರುತಿ' ಇರುವ ಆ ರಘುನಂದನ ಶ್ರೀರಾಮಚಂದ್ರನಿಗೆ ನಾನು ವಂದಿಸುವೆನು.) ಬಾಲ್ಯದಲ್ಲಿ ಆಂಜನೇಯ ತನ್ನ ಬಾಲಲೀಲೆಗಳಿಂದ ಮಿತಿ ಮೀರಿ ಚೇಷ್ಟೆ ಮಾಡಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದನು. ಇವನ ಕಾಟವನ್ನು ಸಹಿಸಲಾರದೆ ಋಷಿಮುನಿಗಳು ಕೋಪ ಗೊಂಡಿದ್ದು ಉಂಟು. ಆದರೆ ಇವನು ಯಾರ ಕೋಪಕ್ಕೂ ಬಗ್ಗಲಿಲ್ಲ. ವನಗಳಲ್ಲಿ ತಪಸ್ಸಿನಲ್ಲಿ ನಿರತರಾಗಿದ್ದ ಋಷಿ ಮುನಿಗಳಿಗೆ ತೊಂದರೆ ಕೊಡುತ್ತಿದ್ದನು. ಇವನ ತೊಂದರೆ ಸಹಿಸಲಾರದೆ ಮನಸ್ಸಿನಲ್ಲಿ ಬೈದುಕೊಂಡಿದ್ದು ಇದೆ. ಹಾಗೆ ಕೋಪಗೊಂಡ ಋಷಿಗಳಲ್ಲಿ 'ಮಾತಂಗಮುನಿ'ಗಳು ಒಬ್ಬರು. ಇವರು ಆಂಜನೇಯನ ಚೇಷ್ಟೆ, ಕುಚೇಷ್ಟೆಗಳನ್ನು ತಡೆಯಲಾರದೆ, 'ನಿನಗಿರುವ ಈ ಅಪಾರ ಶಕ್ತಿಯೆಲ್ಲವೂ ಮರೆತು ಹೋಗಲಿ' ಎಂದು ಶಾಪ ಕೊಟ್ಟರು. ಇದನ್ನು ತಿಳಿದ ತಾಯಿ 'ಅಂಜನಾದೇವಿ' ಮುನಿಗಳ ಹತ್ತಿರ ಬಂದು, ಕ್ಷಮೆ ಯಾಚಿಸಿ, ಮಗನನ್ನು ಕ್ಷಮಿಸುವಂತೆ ಬೇಡಿಕೊಂಡಳು. ತಾಳ್ಮೆ ತಂದುಕೊಂಡ ಮಾತಂಗ ಮುನಿಗಳು ಸಮಾಧಾನ ದಿಂದ ಇವನು ಮುಂದೆ ಯಾವುದಾದರೂ ಮಹತ್ಕಾರ್ಯ ಮಾಡುವ ಸಂದರ್ಭದಲ್ಲಿ ಯಾರಾದರೂ ಹಿರಿಯರು ಅವನ ಶಕ್ತಿಯ ಬಗ್ಗೆ ನೆನಪಿಸಿದಾಗ, ಮರಳಿ ಶಕ್ತಿ ಬರುತ್ತದೆ ಎಂದು ಹೇಳಿದರು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಆಗಿನಿಂದ ಹನುಮನಿಗೆ ತನ್ನ ಶಕ್ತಿ ಮತ್ತು ಶಾಪದ ಕಾರಣ ಎಲ್ಲವೂ ಮರೆತು ಹೋಗಿದ್ದರ ಪರಿಣಾಮ ಕಿಷ್ಕಿಂದ ಪಟ್ಟಣ ದ ರಾಜ ಸುಗ್ರೀವನಿಗೆ ಸಹಾಯ ಮಾಡುತ್ತಾ ಜೊತೆಯಲ್ಲಿ ಓಡಾಡುತ್ತಿದ್ದ. ಹನುಮಂತನಿಗೆ ಇದ್ದ ಆ ಶಕ್ತಿಗೆ ಶಕ್ತಿಗೆ ನೇರ ವಾಗಿ 'ವಾಲಿಯನ್ನು' ಸೋಲಿಸುವ, ಸಾಮರ್ಥ್ಯವಿದ್ದು, ಮರೆವಿನಿಂದಾಗಿ ಹಾಗೆ ಇದ್ದನು. ಮುಂದೆ ರಾವಣನಿಂದ ಸೀತೆ ಅಪಹರಣವಾದ ಸಂದರ್ಭದಲ್ಲಿ, ಸಮುದ್ರವನ್ನು ಲಂಘಿಸಿ ಯಾರು ರಾವಣನ ಆಸ್ಥಾನಕ್ಕೆ ಹೋಗಲು ಸಾಧ್ಯ ಎಂಬ ಪ್ರಶ್ನೆ ಬಂದಾಗ, ಎಲ್ಲಾ ವಾನರರಂತೆ ಹನುಮಂತನು ತನ್ನ ಕೈಯಲ್ಲಿ ಸಾಧ್ಯವಿಲ್ಲವೆಂದು ದೂರದಲ್ಲಿ ಕುಳಿತಿದ್ದನು ಆಗ ಅವನ ಶಕ್ತಿಯ ಬಗ್ಗೆ ತಿಳಿದಿದ್ದ ಅನುಭವಿ, ಹಿರಿಯ ಜಾಂಬುವಂತ, ಹನುಮಂತನನ್ನು ಕರೆದು ನಿನಗೆ ಎಂತಹ ಶಕ್ತಿ ಇದೆ ಎಂದು ನಿನಗೇ ತಿಳಿದಿಲ್ಲ. ನಿನ್ನ ಶಕ್ತಿಯಿಂದ ಏನು ಬೇಕಾದರೂ ಮಾಡಬಹುದು ಬೆಟ್ಟ ಎತ್ತಬಹುದು, ಸಮುದ್ರ ಹಾರಬಹುದು,ಗಾಳಿ ಹಿಡಿದು ನಿಲ್ಲಿಸಬಹುದು, ಎಂದು ಅವನಿಗಿರುವ ಶಕ್ತಿಯನ್ನು ನೆನಪಿಸಿದನು. ನೀನು ಬಾಲ್ಯ ದಲ್ಲಿದ್ದಾಗ ನಿನ್ನ ಚೇಷ್ಟೆ ತಡೆಯಲಾರದೆ, ಋಷಿಗಳು ಕೊಟ್ಟ ಶಾಪ, ಎಲ್ಲವನ್ನೂ ಹೇಳಿದನು. ಆಂಜನೇಯನಿಗೆ ತನ್ನಲ್ಲಿರುವ ಎಲ್ಲಾ ಶಕ್ತಿ ನೆನಪಾಯಿತು. 'ರಾಮ ನಾಮ ಸ್ಮರಣೆ' ಮಾಡುತ್ತಾ ದೊಡ್ಡ ಬೆಟ್ಟದ ಮೇಲೆ ನಿಂತು ತನ್ನ ದೇಹವನ್ನು ಹಿಗ್ಗಿಸಿ ಬಾಲವನ್ನು ನೆಲಕ್ಕೆ ಅಪ್ಪಳಿ ಸಿದನು, ಭೂಮಂಡಲವೇ ಅಲ್ಲೋಲಕಲ್ಲೋಲ ವಾಗುವಂತೆ ಘರ್ಜನೆ ಮಾಡಿ ಆಕಾಶದಷ್ಟೆತ್ತರ ನಿಂತು ಅದೆಷ್ಟೋಯೋಜ ನೆಗಳ ದೂರ ಹಾರಿದನು. ಚಿಕಿತರಾಗಿ ನೋಡುತ್ತಿದ್ದ ಉಳಿದ ವಾನರರೆಲ್ಲಾ ಉತ್ಸಾಹದಿಂದ ಕುಣಿದು ಹರ್ಷೋದ್ಗಾರದ ಜಯಘೋಷ ಮಾಡಿದರು. ಹನುಮಂತನಿಗೆ ತನ್ನ ಅಪಾರ ಶಕ್ತಿಯ ಅರಿವಾಗುತ್ತಿದ್ದಂತೆ, ಸಮುದ್ರವನ್ನು ಲಂಘಿಸಿ ಲಂಕೆ ಗೆ ಹಾರಿದನು. ಅಶೋಕವನದಲ್ಲಿ ಸೀತೆ ಇರುವ ಜಾಗವನ್ನು ಪತ್ತೆ ಹಚ್ಚಿ ತನ್ನ ಪರಿಚಯ ಮಾಡಿಕೊಂಡು ರಾಮ ಮುದ್ರಿಕೆ ಆಕೆಗೆ ಕೊಟ್ಟು ಎಲ್ಲ ವಿಷಯವನ್ನು ತಿಳಿಸಿದನು. ಹಾಗೆ ಹಸಿವು ನೀಗಿಸಿಕೊಳ್ಳಲು ಅಲ್ಲಿಂದ ಹೊರಟು ಫಲ ಭರಿತ ಉದ್ಯಾನವನ ಹಣ್ಣುಗಳನ್ನು ತಿಂದನು. ಎದುರು ಬಂದ ರಾಕ್ಷಸರನ್ನೆಲ್ಲಾ ಸದೆಬಡಿದನು. ಕಣ್ಣಿಗೆ ರಾವಣನ ಆಸ್ಥಾನಕ್ಕೆ ನುಗ್ಗಿ, ಗಲಾಟೆ ಮಾಡಿ ಲಂಕಾ ನಗರವನ್ನು ಸಾಕಷ್ಟು ಧ್ವಂಸಮಾಡಿ, ಕಿಷ್ಕಿಂಧೆಗೆ ಬಂದು ಸೀತಾಮಾತೆ ಇದ್ದ ಜಾಗ ಅವಳು ತಿಳಿಸಿದ ಎಲ್ಲ ವಿಚಾರ ತಿಳಿಸಿದನು. ಸೀತೆಯು ಕೊಟ್ಟ ಚೂಡಾಮಣಿಯನ್ನು ರಾಮನಿಗೆ ಕೊಟ್ಟ ನು. ಸೀತೆಯನ್ನುಹುಡುಕಿ ಬಂದ ಶುಭ ಸಮಾಚಾರವನ್ನು ತಿಳಿಸಿದ ಹನುಮಂತನನ್ನು ರಾಮನು ಬಿಗಿದಪ್ಪಿದನು. ಮುಂದೆ ನಡೆದ ರಾಮ-ರಾವಣರ ಯುದ್ಧದಲ್ಲಿ ರಾವಣನು ಹತನಾದನು. ಸೀತೆ ಬಂಧನದಿಂದ ಮುಕ್ತಳಾದಳು. ಎಂತಹ ಅಸಾಧ್ಯವಾದ ಕಾರ್ಯವನ್ನು ಸಾಧ್ಯ ಮಾಡುವ ಶಕ್ತಿ ಹನುಮಂತನಿಗೆ ಮಾತ್ರ ಇರುವುದು. ಎಂಬುದು ಲೋಕ ಪ್ರಸಿದ್ಧಿಯಾಯಿತು. "ಯತ್ರ ಯತ್ರ ರಘುನಾಥ ಕೀರ್ತನಂ , ತತ್ರ ತತ್ರ ಕೃತ ಮಸ್ತಕಾಂಜಲಿಮ್! ಭಾಷ್ಪವಾರಿ ಪರಿಪೂರ್ಣ ಲೋಚನಂ, ಮಾರುತಿಂ ನಮತಾ ರಾಕ್ಷಸಾಂತಕಮ್! ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮದೂತಂ ಶರಣಂ ಪ್ರಪದ್ಯೇ" ಈ ಶ್ಲೋಕವನ್ನು ಪ್ರತಿದಿನ ಸಂಜೆ ಕೈಕಾಲು ತೊಳೆದುಕೊಂಡು ದೇವರ ಮುಂದೆ ಕೈ ಮುಗಿದು ಹೇಳಿಕೊಂಡರೆ, ಧೈರ್ಯ, ಶಕ್ತಿ, ವಾಕ್ಚಾತುರ್ಯ, ಮನೋನಿಗ್ರಹಗಳು ದೊರೆಯುತ್ತದೆ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
545 ವೀಕ್ಷಿಸಿದ್ದಾರೆ
20 ಗಂಟೆಗಳ ಹಿಂದೆ
#ದಿನಕ್ಕೊಂದು ಕಥೆ ಬುದ್ಧಿವಂತ ಸಂತನ ಕಥೆ :- ಬುದ್ಧಿವಂತರಲ್ಲೇ ಬುದ್ಧಿವಂತನಾದ ಒಬ್ಬ ಸೂಫಿ ಸಂತನಿದ್ದನು. ಇವನು ಜ್ಞಾನಾಕಾಂಕ್ಷಿಯಾಗಿ ಆತ್ಮಜ್ಞಾನವನ್ನು ಪಡೆಯಲು ಊರೂರು ಅಲೆಯುತ್ತಿದ್ದ. ಇವನು ಎಷ್ಟು ಬುದ್ಧಿವಂತ ಎಂದರೆ ಆ ದೇಶದ ರಾಜನಿಗೆ ಸ್ನೇಹಿತನಾಗಿದ್ದ.ರಾಜನು ಎಷ್ಟೋ ಸಾರಿ ಇವನ ಬುದ್ಧಿವಂತಿಕೆಯನ್ನು ಮೆಚ್ಚಿ ನಿನ್ನ ಗುರು ಯಾರು ನಮಗೂ ಸ್ವಲ್ಪ ತಿಳಿಸು ನಾವು ಜಾಣರಾಗುತ್ತೇವೆ ಎನ್ನುತ್ತಿದ್ದ. ಸಂತ ಹೇಳುತ್ತಿದ್ದ ಅದನ್ನು ಹೇಳಲು ಸಾಧ್ಯವಿಲ್ಲ, ಆದರೆ ಪದೇ ಪದೇ ನಿನ್ನ ಗುರು ಯಾರು ಎಂದು ರಾಜನು ಒತ್ತಾಯ ಮಾಡಿದಾಗ, ಸಂತ ಹೇಳಿದ ಅದು ಹೇಳಲು ಸಾಧ್ಯವಿಲ್ಲ ನಾನು ಹೇಳುವುದೂ ಇಲ್ಲ .ಆದರೆ ನಿಮ್ಮ ಒತ್ತಾಯದ ಮೇಲೆ ನಾನು ಸಾಯುವ ಮೊದಲು ನಿಮಗೆ ಅದನ್ನು ತಿಳಿಸಿ ಸಾಯುತ್ತೇನೆ ಎಂದು ಹೇಳಿದ. ಇದಾದ ಮೇಲೆ ರಾಜ ಅವನನ್ನು ಕೇಳಲಿಲ್ಲ, ಸಂತನ ಕಾಲ ಕಳೆದು ವಯಸ್ಸಾಯಿತು ಸಾವು ಹತ್ತಿರ ಬಂದಿದೆ ಎಂದು ತಿಳಿಯಿತು .ತಕ್ಷಣ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ, ಊರಿನ ರಾಜನನ್ನು ಕರೆ ತರುವಂತೆ, ಹಾಗೆ ನಾನು ನನ್ನ ಗುರು ಯಾರು ಎಂದು ಅವರಿಗೆ ಈಗ ನಾನು ಹೇಳುವ ಸಮಯ ಬಂದಿದೆ. ಸೂಫಿ ಜೊತೆ ಇದ್ದಂತ ಎಲ್ಲರೂ ಆ ಕುತೂಹಲವನ್ನು ಕೇಳಲು ಕಾತುರರಾಗಿದ್ದರು. ಹಾಗೆ ರಾಜನಿಗೆ ತಿಳಿಯುತ್ತಿದ್ದಂತೆ ಅವಸರ ಅವಸರವಾಗಿ ರಾಜ ಹೊರಟನು. ಏಕೆಂದರೆ ಸಂತರು ಹೇಳದೆ ಸತ್ತೇ ಹೋಗುವರೊ ಎಂದು ಹೆದರಿ ಬೇಗ ಬಂದನು. ಸಂತ ಸಾಯಲು ಕೆಲವೇ ಸಮಯ ಉಳಿದಿದ್ದು ರಾಜ ಹಾಗೂ ಅವನ ಪರಿವಾರ ಸೇರಿದಂತೆ ಅನೇಕ ಶಿಷ್ಯರು, ಸಂತನ ಬಾಯಿಂದ ಮಾತನ್ನು ಕೇಳಲು ತುದಿಕಾಲಲ್ಲಿ ಕಾಯುತ್ತಿದ್ದರು. ರಾಜನ ಕಡೆ ನೋಡುತ್ತಾ ಸಂತ ಹೇಳಿದ, ನೀವು ಕೇಳುತ್ತಿದ್ದ ಪ್ರಶ್ನೆಗೆ ನಾನು ಈಗಿ ಉತ್ತರ ಕೊಡುತ್ತೇನೆ. ನನಗೆ ಒಬ್ಬರಲ್ಲ ಮೂರು ಜನ ಗುರುಗಳು ಇದ್ದರು. ಇದನ್ನು ಕೇಳಿ ಎಲ್ಲರೂ ಓಹೋ ಅದಕ್ಕೆ ಈ ಸಂತ ಇಷ್ಟು ಬುದ್ದಿವಂತನಾಗಿದ್ದಾನೆ. ಎಲ್ಲರಿಗೂ ಒಬ್ಬನೇ ಗುರು ಇರುತ್ತಾರೆ. ಇವನಿಗೆ ಮೂರು ಜನ ಅದರಿಂದ ಬುದ್ಧಿವಂತ ಎಂದುಕೊಂಡರು. ಸಂತ ಮುಂದುವರಿಸಿ ನನ್ನ ಮೊದಲ ಗುರು ಒಬ್ಬ 'ಕಳ್ಳ'. ಹೀಗೆ ಹೇಳುತ್ತಿದ್ದಂತೆ ಎಲ್ಲರೂ ಮುಖ ಮುಖ ನೋಡಿಕೊಂಡರು, ಇದೇನು ಕಳ್ಳ ಗುರುವಾಗುತ್ತಾನಾ ಕೇಳಲು ಕಾತುರರಾದರು. ಸಂತ ಹೇಳಿದ ನಾನು ಜ್ಞಾನಾರ್ಜನೆಗಾಗಿ ಊರೂರು ಅಲೆಯುತ್ತಿದ್ದೆ. ಎಷ್ಟೇ ಧ್ಯಾನ ಮಾಡಿದರು ಆತ್ಮಜ್ಞಾನ ನನಗೆ ಬರಲೇ ಇಲ್ಲ. ಎಲ್ಲಿ ಜ್ಞಾನ ತಿಳಿಯುತ್ತದೆ ಎಂದು ದಿಕ್ಕು ದೆಸೆ ಇಲ್ಲದೆ ಸುತ್ತುತ್ತಾ ಒಂದು ಹಳ್ಳಿಗೆ ಬಂದೆ ಆಗಲೇ ಕತ್ತಲಾಗಿತ್ತು. ಜನ ಸಂಚಾರ ಇರಲಿಲ್ಲ. ವಿಪರೀತ ಚಳಿ. ಚಳಿಗೋ ಅಥವಾ ಗೌ ಎನ್ನುವ ಕತ್ತಲೆಗೊ ಗೊತ್ತಿಲ್ಲ ಭಯವಾಯಿತು. ಎಲ್ಲಾದರೂ ರಾತ್ರಿ ತಂಗಬೇಕೆಂದು ಹುಡುಕಿದೆ ಏನು ಗೊತ್ತಾಗಲಿಲ್ಲ. ಆ ಹೊತ್ತಿಗೆ ದೂರದಲ್ಲಿ ಒಬ್ಬ ವ್ಯಕ್ತಿ ನಡೆದು ಬರುತ್ತಿದ್ದ. ಆತ ಹತ್ತಿರ ಬಂದ ಕೂಡಲೇ ನೀನು ಎಲ್ಲಿಗೆ ಹೊರಟಿರುವೆ ಎಂದೆ ಆತ ಸ್ವಲ್ಪವೂ ಅಳುಕಿಲ್ಲದೆ ಕಳ್ಳತನ ಮಾಡಲು ಹೊರಟಿರುವೆ ಈಗ ಸಮಯವಿಲ್ಲ ಎಂದ. ನನಗೆ ಆಶ್ಚರ್ಯವಾದರೂ ಅದು ಸಂಬಂಧವಿರಲಿಲ್ಲ ನನ್ನ ಗುರಿಯೇ ಬೇರೆ ಇತ್ತು ಆತನನ್ನು ಒಂದು ರಾತ್ರಿ ಎಲ್ಲಾದರೂ ಉಳಿಯಲು ವ್ಯವಸ್ಥೆ ಬೇಕಿತ್ತು ಆಗುತ್ತದೆಯೇ ಎಂದು ಕೇಳಿದೆ. ಅದಕ್ಕೆ ಕಳ್ಳ ಹೇಳಿದ ನೀವು ಉಳಿಯುವುದಾದರೆ ನನ್ನ ಗುಡಿಸಲೇ ಇದೆ ಆದರೆ ಕೆಲವು ನಿಬಂಧನೆಗಳ ಮೇಲೆ ನೀವು ಬರಬೇಕು. ಏನು ಎಂದಾಗ, ನೀವು ನನ್ನನ್ನು ಕುರಿತು ಪ್ರಶ್ನೆ ಕೇಳುವುದು, ಅನಗತ್ಯವಾಗಿ ತಿಳುವಳಿಕೆ ಉಪದೇಶ ಕೊಡುವಂತಿಲ್ಲ. ಇದಕ್ಕೆ ಸಮ್ಮತಿ ಇದ್ದರೆ ಎಷ್ಟು ದಿನ ಬೇಕಾದರೂ ಇರಬಹುದು, ನಿಮಗೆ ಊಟ- ಸ್ನಾನಕ್ಕೆ ಬಿಸಿ ನೀರು ಎಲ್ಲಾ ಕೊಡುತ್ತೇನೆ ಎಂದಾಗ, ನನಗೆ ಅನಿವಾರ್ಯ ಆಗಿತ್ತು ಎಂದು ಒಪ್ಪಿ ಕಳ್ಳನ ಮನೆಗೆ ಬಂದೆ. ಕಳ್ಳನ ಮನೆಗೆ ಬಂದು 15- 20 ದಿನಗಳಾಯಿತು. ಆ ವೇಳೆಗೆ ಕಳ್ಳ ನನಗೆ ಮೆಚ್ಚುಗೆಯಾಗಿದ್ದ. ಅವನ ಮಾತು ನಡೆ ನುಡಿ ಎಲ್ಲ ಇಷ್ಟವಾಗಿತ್ತು. ಪ್ರತಿನಿತ್ಯ ಸ್ನಾನಕ್ಕೆ ನೀರು, ತಿಂಡಿ ಊಟ ಎಲ್ಲ ಒದಗಿಸುತ್ತಿದ್ದ. ನಾನು ಸಮಯವನ್ನು ಧ್ಯಾನದಲ್ಲಿ ಕಳೆಯುತ್ತಿದ್ದೆ. ಒಂದು ತಿಂಗಳು ಕಳೆಯಿತು. ಇಲ್ಲಿಯೂ ಜ್ಞಾನ ಸಿಗಲಿಲ್ಲ. ಸಾಧನೆ ಗುರಿ ಮುಟ್ಟಲಿಲ್ಲ. ಬೇರೆ ಕಡೆ ಹೋಗಬೇಕು ಎಂದು ಆ ರಾತ್ರಿ ನಿರ್ಧರಿಸಿದೆ. ಕಳ್ಳ ಬೆಳಗಿನ ಜಾವ ಬಂದನು. ನಾನು ಬೆಳಿಗ್ಗೆ ಮನೆ ಬಿಡುವುದರಿಂದ ಪ್ರಶ್ನೆ ಕೇಳಿದೆ. ನೀನು ಪ್ರತಿನಿತ್ಯ ಕಳ್ಳತನ ಮಾಡಲು ಹೋಗುವೆ, ಆದರೆ ಬರಿ ಗೈಯಲ್ಲಿ ಬರುವೆ. ಇಷ್ಟು ಕಷ್ಟಪಟ್ಟು ಏಕೆ ಕಳ್ಳತನಕ್ಕೆ ಹೋಗುವೆ ಬೇರೆ ಏನಾದರೂ ಮಾಡಬಹುದಲ್ಲ ಎಂದೆ. ಆತ ಹೇಳಿದ ನಾನು ದಿನವೂ ಕಳ್ಳತನಕ್ಕೆ ಹೋಗುತ್ತೇನೆ ಆದರೆ ಇದುವರೆಗೂ ನನಗೆ ಏನೂ ಸಿಕ್ಕಿಲ್ಲ. ಆದರೆ ನನ್ನ ಪ್ರಯತ್ನಕ್ಕೆ ಎಂದಾದರೂ ಒಂದು ದಿನ ಸಫಲತೆ ಸಿಗಬಹುದು, ಸಿಗುತ್ತದೆ ಎಂಬ ನಂಬಿಕೆ ಇದೆ ಅದಕ್ಕಾಗಿ ಕಳ್ಳತನಕ್ಕೆ ಹೋಗುತ್ತಿರುವೆ ಎಂದನು. ಕಳ್ಳನ ಮಾತು ಕೇಳಿ ಸಂತನಿಗೆ ಆಶ್ಚರ್ಯ ವಾಯಿತು. ಕೆಲವೇ ದಿನಗಳಿಂದ ಜ್ಞಾನ ಪಡೆಯಲು ಹೂರಟ ನಾನು ಸುಸ್ತಾದೆ. ಆದರೆ ಆತ ಅದೆಷ್ಟೋ ತಿಂಗಳುಗಳಿಂದ ಕಳ್ಳತನ ಮಾಡಲು ಪ್ರಯತ್ನ ಪಡುತ್ತಿದ್ದಾನೆ ಏನೂ ಸಿಗದಿದ್ದರೂ ಅವನ ಪ್ರಯತ್ನ ನಂಬಿಕೆ ಗಟ್ಟಿಯಾ ಗಿದೆ. ಅವನಿಗಿರುವ ವಿಶ್ವಾಸ ಇಲ್ಲ, ಪ್ರಯತ್ನ ನಾನು ಮಾಡಿಲ್ಲ. ನಾನು ಮಾಡಬೇಕಾದ್ದು ಇದೇ ನನ್ನ ಜೀವನ ಸಂದೇಶ ಪ್ರಯತ್ನ ಬಿಡಬಾರದು ಎಂಬುದು ಅರಿವಾಯಿತು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಮುಂದೆ ನನ್ನ ಎರಡನೇ ಗುರು, ಒಂದು ಬೀದಿ ನಾಯಿ ಎಂದನು. ಇದನ್ನು ಕೇಳಿ, ಇದೇನು ವಿಚಿತ್ರ, ನಾಯಿ ಮನುಷ್ಯನಂತೆ ಮಾತನಾಡುವುದಿಲ್ಲ. ನಾಯಿ ಹೇಗೆ ಗುರುವಾಯಿತು ಎಂದು ಯೋಚಿಸುತ್ತಿದ್ದೆವು. ಸಂತ ಹೇಳ ತೊಡಗಿದ. ನಾನು ಸುತ್ತುತ್ತಿದ್ದಾಗ, ಒಮ್ಮೆ ಬಹಳ ಬಾಯಾರಿಕೆಯಾಗಿ ಅವರಿವರನ್ನು ಕೇಳಿ ನದಿ ಇರುವ ಜಾಗ ತಿಳಿದು ನೀರು ಕುಡಿಯಲು ಹೋದೆ. ನದಿಯಲ್ಲಿ ನೀರು ಕುಡಿದು ಮನಸ್ಸು ದೇಹ ತಂಪಾಯ್ತು, ಮರದ ನೆರಳಿನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಲು ಕುಳಿತೆ. ಆ ಹೊತ್ತಿಗೆ ಬಾಯಾರಿದ ಒಂದು ನಾಯಿ ಬಂದು ನೀರು ಕುಡಿಯಲು ಹೋಯಿತು ನೀರಿನಲ್ಲಿ ಅದರ ಪ್ರತಿಬಿಂಬ ಕಂಡು ಬೇರೆ ನಾಯಿ ಎಂದು ಬೊಗಳತೊಡಗಿತು. ಆ ಪ್ರತಿಬಿಂಬ ನಾಯಿ ಬೊಗಳಿದಂತೆ ಕಾಣುತ್ತಿತ್ತು. ಇದರಿಂದ ಇನ್ನೂ ಸಿಟ್ಟು ಮತ್ತು ಕ್ರೋಧದಿಂದ ಮತ್ತಷ್ಟು ಬೊಗಳತೊಡಗಿತು. ಒಂದಷ್ಟು ಹೊತ್ತು ಕೂಗಿದ ನಂತರ ಅದಕ್ಕೆ ಸುಸ್ತಾಗಿ ಹಿಂದೆ ಹೋಗಿ ಕುಳಿತಿತು. ಮತ್ತೆ ಸ್ವಲ್ಪ ಹೊತ್ತಾದ ಮೇಲೆ ಆ ನಾಯಿ ಹೋಗಿರಬಹುದು ಎಂದು ನೀರಿನ ಬಳಿ ಬಂದಿತು .ಆದರೆ ಅದರ ಪ್ರತಿಬಿಂಬ ಮತ್ತೆ ಕಂಡಿತು ಮತ್ತಷ್ಟು ಬೊಗಳಿತು. ಇದು ಎರಡು ಮೂರು ಸಲ ಪುನರಾವರ್ತನೆಯಾಗಿ. ನಾಯಿ ಯೋಚಿ ಸಿತು. ಈ ನಾಯಿಯನ್ನು ಓಡಿಸಲುಸಾಧ್ಯವಿಲ್ಲ. ನೀರು ಕುಡಿಯದೆ ಹೋದರೆ ಹೇಗೂ ಸಾಯುವೆ, ಸಾಯುವ ಮೊದಲು ನೀರು ಕುಡಿದರೆ ತೃಪ್ತಿಯಿಂದ ಸಾಯಬಹುದು, ಒಂದು ವೇಳೆ ಆ ನಾಯಿ ನನ್ನನ್ನು ತಿಂದರೂ ಸಾಯುವೆ ಎಂದು ಯೋಚಿಸಿ ರಭಸದಿಂದ ಓಡಿ ನೀರಿಗೆ ಧುಮುಕಿ ನೀರು ಕುಡಿದು ನೀರೊಳಗೆ ನೋಡಿತು ನಾಯಿ ಕಾಣಲಿಲ್ಲ ನೀರೊಳಗಿಂದ ನೋಡಿದಾಗ ಅದರ ಪ್ರತಿಬಿಂಬ ಕಾಣಲಿಲ್ಲ ಅದು ತೃಪ್ತಿಯಿಂದ ಓಡಿಹೋಯಿತು. ಇದನ್ನು ನೋಡಿದ ನನಗೆ ಅನ್ನಿಸಿತು ಹೊರಗಿನಿಂದ ನಿಂತು ನೋಡಿದರೆ ನಮಗೇನು ತಿಳಿಯುವುದಿಲ್ಲ ಧುಮುಕಿದಾಗ ಮಾತ್ರ ಆಳದ ಅರಿವು ತಿಳಿಯಲು ಸಾಧ್ಯ. ಆದ್ದರಿಂದ ಮುಖಾ ಮುಖಿ ಎದುರಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೇ ಹೊರತು, ಯಾವುದರ ಮೂಲಕವೂ ಅಥವಾ ದೂರದಿಂದ ನಿಂತು ಯೋಚನೆ ಮಾಡುವುದರಿಂದ ಬಗೆಹರಿಯುವುದಿಲ್ಲ ಎಂಬುದು ವೇದ್ಯವಾಯಿತು ಇದನ್ನು ನೋಡಿದ ಮೇಲೆ ನಾಯಿ ನನಗೆ ಎರಡನೇ ಗುರುವಾಯಿತು. ಈಗ ಮೂರನೇ ಗುರು ಯಾರು ಎಂದರೆ. ಪುಟ್ಟ ಬಾಲಕಿ ಹೇಗೆಂದರೆ, ಒಮ್ಮೆ ಹೀಗೆ ಅಲೆಯುತ್ತಾ ಅಪರಿಚಿತರ ಮನೆಗೆ ಹೋದೆ. ಚಿಕ್ಕ ಮಗು ಓಡಿ ಬಂದು ಬಾಗಿಲು ತೆಗೆದು ಮತ್ತೆ ಹೋಗಿ ದೀಪವನ್ನು ಎರಡು ಕೈಯಿಂದ ಅಡ್ಡ ಹಿಡಿದುಕೊಂಡಿತು. ನಾನು ಒಳಗೆ ಹೋದೆ ಆ ಹುಡುಗಿ ಕೈಗಳಿಂದ ಮರೆ ಮಾಡಿ ದೀಪವನ್ನು ಹಿಡಿದುಕೊಂಡಿದ್ದು ನೋಡಿನಾನು ಚಿಂತಕ, ತಿಳಿದವನು, ಎಂಬ ಅಹಂನಿಂದ ಹಾಗೂ ಸ್ವಲ್ಪ ತಮಾಷೆಗೆ ಇಷ್ಟೇ ಬೆಳಕಾ ಎಂದು ಹುಡುಗಿಯನ್ನು ಕೇಳಿದೆ. ಕೂಡಲೇ ಆ ಬಾಲಕಿ ಮುಂದಿನ ಬಾಗಿಲು ಹಾಕಿ ಎಂದಳು ಬಾಗಿಲು ಹಾಕಿ ಈಗೆನಾಯ್ತು ಎಂದೆ ನನ್ನ ಪ್ರಶ್ನೆಗೆ ಉತ್ತರಿಸಿ ಎಂದ ಆ ಹುಡುಗಿ 'ಮುಷ್ಟಿಯಲ್ಲಿ ಹಿಡಿದರೆ ಹಿಡಿಯಷ್ಟು, ಮುಷ್ಟಿಯನ್ನು ಬಿಚ್ಚಿದರೆ ಮನೆ ತುಂಬಾ ಹರಡುವುದು” ಏನು ನೀವೇ ಹೇಳಿ ಎಂದಳು. ಯೋಚಿಸುತ್ತಿದ್ದೆ ಆ ಹುಡುಗಿ ಹೇಳಿದಳು. ಗಾಳಿಗೆ ದೀಪ ಆರುತ್ತದೆ ಎಂದು ದೀಪ ಮರೆ ಮಾಡಿದ್ದೆ. ಇಷ್ಟರ ತನಕ ನನ್ನ ಕೈಯೊಳಗಷ್ಟೇ ಬೆಳಕು ಇತ್ತು. ಕೈ ತೆಗೆದೆ ಮನೆ ತುಂಬಾ ಬೆಳಕು ಹರಡಿತು. ಮಕ್ಕಳು ಚಿಕ್ಕವರು ಅವರಿಗೆ ಗೊತ್ತಿಲ್ಲ ಅಥವಾ ನಮ್ಮ ಕಾಲ ಚೆನ್ನಾಗಿತ್ತು ನಿಮ್ಮ ಕಾಲ ಕೆಟ್ಟು ಹೋಯಿತು. ಹೀಗೆ ಯಾರಿಗೂ ಏನನ್ನು ಹೇಳಬಾರದು ಯಾರಲ್ಲಿ ಯಾವ ಪ್ರತಿಭೆಗಳು ಇರುತ್ತದೋ ಯಾರಿಗೂ ಗೊತ್ತಿರುವುದಿಲ್ಲ. ವಯಸ್ಸು - ವಿದ್ಯಾರ್ಹತೆ- ಬಡತನ ಸಿರಿತನ ಪಟ್ಟಣದವನು- ಹಳ್ಳಿಯವನು ಯಾವ ತಾರತಮ್ಯವೂ ಇರುವುದಿಲ್ಲ. ಜ್ಞಾನ ಇರಬೇಕು - ಬರಬೇಕು ಎಂದರೆ, ಅದು ಯಾರ ಸ್ವತ್ತು ಅಲ್ಲ ಚಿಕ್ಕ ಮಗುವಾದರೆ ಏನು ಶುಕಮುನಿಯಾದ ರೇನು ಯಾರಿಗೆ ಬೇಕಾದರೂ ಬರುತ್ತದೆ. ಈ ರೀತಿ ಸೂಫಿ ಸಂತ ತನ್ನ ಮೂರು ಕಥೆಗಳ ಮೂಲಕ ಗುರುಗಳನ್ನು ಪರಿಚಯಿಸಿದನು. ನೀತಿ: ಯಾವುದೇ ಕಾರಣಕ್ಕೂ ಪ್ರಯತ್ನ ಬಿಡ ಬಾರದು ವಿಶ್ವಾಸ ಕಳೆದು ಕೊಳ್ಳಬಾರದು. ಎರಡನೇದು ನೀರಿನ ಆಳ ಅಗಲ ಎಷ್ಟು ಇದೆ ಎಂದು ನೋಡಲು ನೀರಿಗೆ ತಿಳಿಯಬೇಕು ಹೊರಗೆ ನಿಂತು ನೋಡಿದರೆ ತಿಳಿಯುವುದಿಲ್ಲ. ನಾನು ದೊಡ್ಡ ಜ್ಞಾನಿ, ನನಗೆ ಎಲ್ಲಾ ತಿಳಿದಿದೆ ಎಂಬ ಅಹಂಕಾರ ಎಂದಿಗೂ ಸಲ್ಲದು. ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ ! ಚಕ್ಷುರುನ್ಮೀಲಿತಂ ಯೇನ, ತಸ್ಮೈ ಶ್ರೀ ಗುರವೇ ನಮಃ!! ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದವನ ಕಣ್ಣನ್ನು, ಗುರುವು ಜ್ಞಾನವೆಂಬ ಬಾಡಿಗೆಯ ಕಣ್ಣಿನಿಂದ ತೆರೆಯುತ್ತಾನೆ ಅಂತಹ ಶ್ರೀ ಗುರುವಿಗೆ ನಮಸ್ಕಾರ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
616 ವೀಕ್ಷಿಸಿದ್ದಾರೆ
20 ಗಂಟೆಗಳ ಹಿಂದೆ
#🙏 ಓಂ ನಮಃ ಶಿವಾಯ #ದಿನಕ್ಕೊಂದು ಕಥೆ ಹರತಾಲಿಕಾ ಗೌರಿ ವ್ರತ ಕಥೆ :- ಒಮ್ಮೆ ಪಾರ್ವತಿ ದೇವಿ, ಪತಿ ಪರಮೇಶ್ವರನಲ್ಲಿ, ಸ್ವಾಮಿ ವ್ರತಗಳಲ್ಲಿ ಸರ್ವ ಶ್ರೇಷ್ಠ ಮತ್ತು ಕಡಿಮೆ ಶ್ರಮದಲ್ಲಿ ಅಧಿಕ ಪುಣ್ಯ ಸಿಗುವಂತ ವ್ರತ ಯಾವುದು? ಸೃಷ್ಟಿ, ಸ್ಥಿತಿ, ಲಯ,ಗಳು ಜಗತ್ಪರಿಪಾಲಕರಾದ ನಿಮ್ಮನ್ನು ಪತಿಯಾಗಿ ಪಡೆ ಯಲು ಪೂರ್ವದಲ್ಲಿ ನಾನು ಯಾವ ವ್ರಥ ,ದಾನ, ತಪಸ್ಸು, ಮಾಡಿ ಪಡೆದು ಕೊಂಡೆ ಎಂಬುದನ್ನು ತಿಳಿಸಿ ಎಂದು ಕೇಳಲು,ಪರಮೇಶ್ವರ ಹೇಳುತ್ತಾ,‌ ದೇವಿ ನಾನು ಹೇಳ ಹೊರಟಿರುವ ಕಥೆ ಬಹಳ ಗೌಪ್ಯವಾಗಿಯೂ, ಶ್ರೇಷ್ಠ ತರವಾದ ಕಥೆಯಾಗಿದೆ. ನಕ್ಷತ್ರಗಳಲ್ಲಿ ಚಂದ್ರನು, ಗ್ರಹಗಳಲ್ಲಿ ಸೂರ್ಯ, ಚಾತುರ್ವಣ್ಯ ಗಳಲ್ಲಿ ಬ್ರಾಹ್ಮಣನು, ದೇವತೆಗಳಲ್ಲಿ ವಿಷ್ಣುವು, ನದಿಗಳಲ್ಲಿ ಗಂಗೆ, ಪುರಾಣ ಗಳಲ್ಲಿ ಭಾರತವು, ವೇದಗಳಲ್ಲಿ ಸಾಮವೇದವು, ಇಂದ್ರಿಯಗಳಲ್ಲಿ ಮನಸ್ಸು ಶ್ರೇಷ್ಠವಾಗಿರುವಂತೆ, ಉತ್ತಮೊತ್ತಮವಾದ ನಿನ್ನ ಪೂರ್ವ ಜನ್ಮದ ಪುರಾಣ ಕತೆಯನ್ನ ಕಣ್ಣೆದುರೇ ನಡೆಯುತ್ತಿರುವಂತೆ ಕಥೆಯ ವೃತ್ತಾಂತ ನಿನಗೆ ಹೇಳು ವೆನು ಶ್ರದ್ಧೆಯಿಂದ ಕೇಳು ಎಂದು ಶಿವ ಕಥೆ ಹೇಳಿದನು. ಪರ್ವತರಾಜನ ಪುತ್ರಿಯಾಗಿದ್ದ ನೀನು, ತಪಸ್ಸು ಮಾಡುವ ಸಲುವಾಗಿ ಬಾಲ್ಯಾವಸ್ಥೆಯಲ್ಲಿಯೇ ಹಿಮಾಲಯ ಪರ್ವತಕ್ಕೆ ಹೋಗಿ ಗಿರಿ ಶಿಖರಗಳ ಮಧ್ಯೆ, ಮೈ ಕೊರೆವ ಚಳಿಯಲ್ಲಿ, ಅಧೋಮುಖಳಾಗಿ ನಿಂತು ಧೂಮ್ರ ಪಾನ ಮಾಡುತ್ತಾ 12 ವರ್ಷಗಳವರೆಗೆ ಘೋರವಾದ ತಪಸ್ಸನ್ನು ಆಚರಿಸಿದೆ. ಆನಂತರ ಕೇವಲ ತರಗೆಲೆಗಳನ್ನೇ ತಿಂದು 64 ವರ್ಷ ಕಾಲ ಕಷ್ಟಕರವಾದ ಅನುಷ್ಠಾನ ಮಾಡಿದೆ ಕೇವಲ ಒಣ ಎಲೆಗಳನ್ನೇ ಸೇವಿಸಿ ತಪಸ್ಸು ಮಾಡಿದ ಕಾರಣ ನಿನಗೆ 'ಅಪರ್ಣ' ಎಂಬ ಹೆಸರು ಬಂದಿತು (ಪರ್ಣ ಎಂದರೆ ಎಲೆ). ನಿನ್ನ ಈ ಕಷ್ಟವನ್ನು ಕಂಡ ನಿನ್ನ ತಂದೆ ಪರ್ವತರಾಜ, ಬಹಳ ದುಃಖಿತನಾದ ನು. ಇಂಥ ನನ್ನ ಪುತ್ರಿಯನ್ನು ಯಾರಿಗೆ ಮದುವೆ ಮಾಡಿಕೊಡಲಿ ಇವಳನ್ನು ಮದುವೆಯಾಗುವನು ಎಲ್ಲಿ ದ್ದಾನೆ ಎಂದು ಕೊರಗುತ್ತಿದ್ದನು. ಅದೇ ಸಮಯದಲ್ಲಿ ಶ್ರೀಮನ್ನಾರಾಯಣನಿಗೆ ವಿಷಯ ತಿಳಿದು ಸೌಂದರ್ಯ ಪುತ್ಥಳಿಯಾದ ನಿನ್ನನ್ನು (ಪಾರ್ವತಿಯನ್ನು)ಮದುವೆಯಾಗಲು ನಿರ್ಧರಿ ಸಿದನು. ಆತನು ನಾರದರ ಮುಖಾಂತರ ಪರ್ವತರಾಜನಲ್ಲಿ ವಿಷಯವನ್ನು ತಿಳಿಸಿ ಪಾರ್ವತಿ ಜೊತೆ ಮಾತಾಡಿ ಬರಲು ಕಳಿಸಿದನು. ಆ ಸಮಯಕ್ಕೆ ದೇವ ಲೋಕದಿಂದ ಗಗನ ಮಾರ್ಗದಲ್ಲಿ ನಾರದರು ಬಂದರು. ನಾರದರನ್ನು ಕಂಡು ಅತ್ಯಂತ ಹರ್ಷಿತನಾದ ಪರ್ವತರಾಜನು, ಅರ್ಘ್ಯ ಪಾದ್ಯಾಧಿಗಳಿಂದ ಅವರನ್ನು ಸತ್ಕರಿಸಿ ಕುಶ ಲೋಪರಿ ವಿಚಾರಿಸಿ ಬಂದ ಕಾರಣವೇನು ಎಂದು ಕೇಳಲು, ಪರ್ವತ ರಾಜ ನಿನ್ನ ಪುಣ್ಯಕ್ಕೆ ಎಣೆಯುಂಟೇ ಮಹಾವಿಷ್ಣು ನಿನ್ನ ಮಗಳು ಪಾರ್ವತಿಯನ್ನು ವಿವಾಹವಾಗಲು ನಿನ್ನ ಅಭಿಪ್ರಾಯವನ್ನು ಕೇಳಿ ಕೊಂಡು ಬರಲು ಇಲ್ಲಿಗೆ ಕಳಿಸಿದ್ದಾನೆ. ಇದನ್ನು ಕೇಳುತ್ತಿದ್ದಂತೆ ಪರ್ವತರಾಜನ ಎಲ್ಲಾ ಚಿಂತೆಗಳು ಹೇಳ ಹೆಸರಿಲ್ಲದಂತೆ ಮಾಯವಾಯಿತು. ತ್ರಿಮೂರ್ತಿಗಳ ಲ್ಲಿ ಒಬ್ಬನಾದ ಶ್ರೀ ಹರಿ ನನ್ನ ಮಗಳು ಪಾರ್ವತಿಯನ್ನು ಮದುವೆಯಾಗು ತ್ತಾನೆ ಎಂದರೆ ಅದಕ್ಕಿಂತ ಸೌಭಾಗ್ಯ ಬೇರೆ ಏನಿದೆ? ನನ್ನ ಮುದ್ದಿನ ಮಗಳ ನ್ನು ಮಹಾವಿಷ್ಣುವಿಗೆ ಕೊಟ್ಟು ಸಂತೋಷದಿಂದ ವಿವಾಹ ಮಾಡಿ ಕೊಡುತ್ತೇ ನೆ ಈ ಸುದ್ದಿಯನ್ನು ತಿಳಿಸು ಎಂದು ನಾರದರಿಗೆ ಹೇಳಿದನು. ಇಂಥ ಶುಭ ಸಮಾಚಾರವನ್ನು ತಿಳಿಸಲು, ಶಂಖ, ಚಕ್ರ ಪಿತಾಂಬರಧಾರಿಯಾಗಿ ಸುಶೋ ಭಿತನಾದ ನಾರಾಯಣನನ್ನು ಕಾಣಲು ವೇಗವಾಗಿ ವಿಷ್ಣು ಸದನಕ್ಕೆ ಬಂದು, ಪರ್ವತರಾಜನು ತನ್ನ ಮಗಳು ಪಾರ್ವತಿಯನ್ನು ನಿನಗೆ ವಿವಾಹ ಮಾಡಿಕೊ ಡಲು ಒಪ್ಪಿದ್ದಾನೆ. ನೀನು ವಿವಾಹಕ್ಕೆ ಸಿದ್ಧನಾಗು ಎಂದು ತಿಳಿಸಿದನು. ಪರ್ವತರಾಜ ತನ್ನ ಪುತ್ರಿ ಪಾರ್ವತಿಗೆ, ಮಗಳೇ ನಿನ್ನ ಅದೃಷ್ಟಕ್ಕೆ ಎಣೆಯಿಲ್ಲ ವೈಕುಂಠವಾಸಿಯಾದ, ಸಕಲ ಸೌಭಾಗ್ಯ ಶ್ರೀದೇವಿಗೆ ಆಶ್ರಯವನ್ನಿತ್ತ ಶೇಷ ಷಾಹಿ ಶ್ರೀಮನ್ನಾರಾಯಣನಿಗೆ ನಿನ್ನನ್ನು ಕೊಟ್ಟು ವಿವಾಹ ಮಾಡಿಕೊಡುತ್ತೇನೆ ಎನ್ನಲು, ಇದನ್ನು ಕೇಳಿದ, ಪಾರ್ವತಿ ಮನಸ್ಸಿಗೆ ಇದು ಒಪ್ಪಿಗೆಯಾಗದ ಕಾರಣ, ಏನೂ ಹೇಳದೆ, ಕ್ರೂರ ಮೃಗಗಳು ಹಾಗೂ ದಟ್ಟಾರಣ್ಯದಿಂದ ತುಂಬಿರುವ ಪರ್ವತ ಪ್ರದೇಶಕ್ಕೆ ತನ್ನ ಸಖಿಯೋಡನೆ ಹೋಗಿ ನಿರ್ಜನವಾದ ಸ್ಥಳದಲ್ಲಿ ದುಃಖದಿಂದ ಮಲಗಿಕೊಂಡಳು. ಇದನ್ನು ಕಂಡ ಸಖಿ, ಪಾರ್ವತಿ ನಿನ್ನ ದುಃಖಕ್ಕೆ ಕಾರಣವೇನು ನನಗೆ ಹೇಳು ಸರಿ ಮಾಡುತ್ತೇನೆ ಎಂದಳು. ಆಗ ಪಾರ್ವತಿ,‌ ನೋಡು ಸಖಿ, ನಾನು ಮನಸಾರೆ ಒಪ್ಪಿದ ಮಹಾದೇವನ ನ್ನೇ ವಿವಾಹವಾಗುವ ಸಂಕಲ್ಪ ಮಾಡಿದ್ದೆ, ಇದು ನನ್ನ ಬಯಕೆಯೂ ಆಗಿತ್ತು. ಆದರೆ ನನ್ನ ತಂದೆ ನನಗೆ ತಿಳಿಸದೆ, ವಿವಾಹ ಮಾಡಲು ಹೊರಟಿದ್ದಾರೆ. ಇದರಿಂದ ಬೇಸರವಾಗಿ ನಾನು ದೇಹ ತ್ಯೆಜಿಸಲು ಹೊರಟಿದ್ದೇನೆ ಎಂದಳು. ನೀನು ಚಿಂತಿಸಬೇಡ, ನಿನ್ನ ತಂದೆಗೆ ಯಾವತ್ತೂ ತಿಳಿಯದಂಥ ಒಂದು ಗುಪ್ತಸ್ಥಳಕ್ಕೆ ಕರೆದುಕೊಂಡು ಹೋಗುವೆ ಅಲ್ಲಿ ಶಿವನನ್ನು ಧ್ಯಾನಿಸು ಎಂದ ಸಖಿ ಕೂಡಲೇ, ಒಂದು ಗುಪ್ತ ಗುಹೆಗೆ ಕರೆದುಕೊಂಡು ಹೋದಳು. ಆ ಸ್ಥಳ ಶಿವನ ಗುಹೆಯಾಗಿದ್ದು ಅಲ್ಲಿ ಯಾರು ಬರುವಂತಿರಲಿಲ್ಲ.ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಇತ್ತ ಗಿರಿರಾಜನು ಮಗಳು ಎಲ್ಲಿಯೂ ಕಾಣದೆ ಚಿಂತಿತನಾಗಿ, ನನ್ನ ಮುದ್ದು ಮಗಳನ್ನು ಯಾವ ಕ್ರೂರ ಮೃಗ ಎಳೆದೊಯ್ದಿತೋ, ವಿಷಸರ್ಪ ಕಚ್ಚಿತೋ, ಅಥವಾ ದೇವ, ಅಸುರ ಗಂಧರ್ವ, ಕಿಂಪುರುಷರು ಯಾರಾದರೂ ಹರಣ ಮಾಡಿದರೋ, ಈಗ ನಾನೇನು ಮಾಡಲಿ, ನಾರದರಿಗೆ ಮಾತು ಕೊಟ್ಟಿದ್ದೇನೆ, ಗರುಡ ಧ್ವಜನಾದ ಶ್ರೀಮನ್ನಾರಾಯಣನಿಗೆ ಏನು ಹೇಳಲಿ? ಚಿಂತೆಯಿಂದ ಲೇ ಮೂರ್ಛಿತನಾದನು. ಅರಮನೆಯವರು ಸಾಂತ್ವಾನಗೊಳಿಸಿದರು. ಪಾರ್ವತಿ ಗುಪ್ತವಾದ ಗುಹೆಯಲ್ಲಿ ಲಿಂಗವನ್ನು ಮಾಡಿಕೊಂಡು ಶಿವನನ್ನು ಆರಾಧಿಸುತ್ತಾ ಅವನ ಧ್ಯಾನದಲ್ಲೇ ಮುಳುಗಿದಳು. ಪರ್ವತ ರಾಜ ಮಗಳ ನ್ನು ಹುಡುಕಲು ಎಲ್ಲಾ ಕಡೆ ಅಲೆದಲೆದು ಹುಡುಕುತ್ತಾ ಬಂದವನಿಗೆ ಗುಹೆ ಯಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಪಾರ್ವತಿ ಕಂಡು ಸಂತೋಷ ಗೊಂಡ ನು. ಪಾರ್ವತಿ ತಂದೆಗೆ ನಮಸ್ಕರಿಸಿ, ಪಿತಾಶ್ರೀ ನಾನು ಪರಮೇಶ್ವರರನ್ನೇ ಮದುವೆ ಯಾಗುತ್ತೇನೆ ಅವರನ್ನೇ ನನ್ನ ಪತಿಯಾಗಿ ವರಿಸಿದ್ದೇನೆ, ಇಲ್ಲದಿದ್ದರೆ ನನಗೆ ವಿವಾಹ ಬೇಡ ಇಲ್ಲಿಯೇ ಇರುತ್ತೇನೆ ಎಂದಳು. ಇದನ್ನು ಕೇಳಿದ ಗಿರಿರಾಜ ಸಂತೋಷದಿಂದ ಒಪ್ಪಿದನು ಮತ್ತು ವಿವಾಹವನ್ನು ಪರಮೇಶ್ವರನ ಜೊತೆ ಮಾಡುವೆ ಎಂದು ಮಾತು ಕೊಟ್ಟು ವಿವಾಹ ತಯಾರಿ ನಡೆಸಲು ಉದ್ಯುಕ್ತ ನಾದನು. ನಂತರ ವಿಧಿ, ವಿಧಾನದಂತೆ ನಮ್ಮಿಬ್ಬರ ವಿವಾಹವನ್ನು ವಿಜೃಂಭಣೆ ಯಿಂದ ನೆರವೇರಿಸಿದರು. ನೀನು ಕಠಿಣ ತಪಸ್ಸು, ದೃಢ ಸಂಕಲ್ಪ, ಕಟ್ಟು ನಿಟ್ಟಿನ ವ್ರತ ನಿಯಮಗಳನ್ನು ಮಾಡಿ ನನ್ನನ್ನೇ ವಿವಾಹ ಮಾಡಿಕೊಂಡೆ. ಸೃಷ್ಟಿಕರ್ತ ಬ್ರಹ್ಮನ ಸಮ್ಮುಖದಲ್ಲಿ,‌ ಮಹಾ ವಿಷ್ಣುವಿನ ನೇತೃತ್ವದಲ್ಲಿ ಪಾರ್ವತಿ ಪರಮೇಶ್ವರರ ವಿವಾಹ ಸಂಭ್ರಮ ನಡೆಯಿತು. ವಿವಾಹ ನಡೆದದ್ದು 'ಶಿವರಾತ್ರಿ' ದಿನ ಎಂದು ಪುರಾಣ ಗಳಲ್ಲಿ ಉಲ್ಲೇಖಿಸಲಾಗಿದೆ. ಭೂಲೋಕ ಪಾರ್ವತಿ ದೇವಿಯ ತವರು ಮನೆ ಅವಳು, ಪತಿ ಪರಮೇಶ್ವರ ಅನುಮತಿ ಪಡೆದು ಪ್ರತಿ ವರ್ಷ ಭಾದ್ರಪದ ಮಾಸದ ತದಿಗೆ ದಿನ ತವರು ಮನೆಗೆ ಬಂದು ಶಿವನಾಜ್ಞೆಯಂತೆ ಮೂರು ದಿನ ಅಥವಾ ಐದು ದಿನ ಅಥವಾ ಏಳು ದಿನ ತವರಿನಲ್ಲಿ ಇದ್ದು ಮಗ ಗಣೇಶನೊಂದಿಗೆ ಗಂಡನ ಮನೆಗೆ ಹೋಗುತ್ತಾಳೆ. ತಾಯಿ ಭೂಮಿಗೆ ಬಂದ ದಿನ ಭಾದ್ರಪದ ತದಿಗೆ ದಿನ ಯಾರು 'ಶುದ್ಧ ಮಡಿಯಿಂದ ಸ್ವರ್ಣ ಗೌರಿ” ವ್ರತವನ್ನು ಮಾಡುವರೋ ಅಥವಾ ಉತ್ತರ ಕರ್ನಾಟಕ ಭಾಗದಂತೆ ಉಪವಾಸವಿದ್ದು 'ಹರತಾಲಿಕ ಗೌರಿ' ವ್ರತವನ್ನು ಮಾಡುತ್ತಾರೋ, ಅವರ ಮನದಿಷ್ಟಾರ್ಥಗಳು ನೆರವೇರುತ್ತದೆ. ಮದುವೆಯಾಗುವ ಯುವತಿಯರು ಈ ವ್ರಥವನ್ನು ನಿಷ್ಠೆಯಿಂದ ಮಾಡಿದರೆ ಬಯಸಿದಂಥ ಪತಿ ದೊರೆಯುತ್ತಾನೆ. ಈ ವ್ರತ ಮಾಡಿ ವ್ರತ ಕಥೆಯನ್ನು ಹೇಳಿ-ಕೇಳಿದವರಿಗೆ ಸಕಲ ಸುಖ ಸೌಭಾಗ್ಯ ಸಂಪತ್ತು ಗಳು ದೊರೆತು ದೀರ್ಘಕಾಲ ಸುಖದಿಂದ ಬಾಳುವರು. ಎಂಬುದಾಗಿ ಸಾಕ್ಷಾತ್ ಪರಮೇಶ್ವರನು ತನ್ನ ಪ್ರಿಯ ಪತ್ನಿ ಪಾರ್ವತಿಗೆ ಹೇಳಿ ದನು. ( ನಾವು ಭಾದ್ರಪದ ಮಾಸದ ತದಿಗೆ ದಿನ 'ಸ್ವರ್ಣ ಗೌರಿ' ವ್ರತವನ್ನು ಮಾಡುವಂತೆ, ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕೆಲವು ಕಡೆಗಳಲ್ಲಿ ಭಾದ್ರಪದ ತದಿಗೆ ದಿನ 'ಹರತಾಲಿಕ ಗೌರಿ' ವ್ರತವನ್ನು ಮಾಡುತ್ತಾರೆ.) ಮಂಗಳಂ ಎನ್ನಿರಿ ಮಹಾದೇವಿಗೆ, ಜಯ ಮಂಗಳಂ ಎನ್ನಿರಿ ಮಹಂಕಾಳಿಗೆ ಮಂಗಳಂ ಎನ್ನಿರಿ ಮಹದೇವಿಗೆ !! ಗಿರಿರಾಜನ ಉದರದಿ ಜನಿಸಿ ಗಿರಿಜೆ ಎಂದೆನಿಸಿದೆ| ಗಿರಿ ಮಧ್ಯದಲ್ಲಿ ನಿಂತು ತಪವಗೈದೆ ಗಿರಿಜ ಶಂಕರನೆಂಬೊ ಹೆಸರನ್ನುದ್ದರಿಸಿದೆ ಜನನಿ ಜನಕರ ಮನಕೆ ಸಂತೋಷ ಕೊಡುವ ಮಂಗಳಂ ಎನ್ನಿರಿ ಮಹಾದೇವಿಗೆ; ಮಹಿಷ ಸುರನ ಕೊಂದು ಮಹಿಷೆ ಎಂದೆನಿಸಿದೆ ಚೆಂಡಸುರನ ಕೊಂದು ಚಾಮುಂಡಿಯಾದೆ ನಂದಿ ವಾಹನವೇರಿ ಆದಿಶಕ್ತಿಯು ಆದೆ ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
1.7K ವೀಕ್ಷಿಸಿದ್ದಾರೆ
20 ಗಂಟೆಗಳ ಹಿಂದೆ
##🌺ಹನುಮ ಜಯಂತಿ ಶುಭಾಶಯಗಳು 🙏 #ಹನುಮ ಜಯಂತಿ #💪ಹನುಮ ಜಯಂತಿ ಶುಭಾಶಯಗಳು🚩 #🔱 ಭಕ್ತಿ ಲೋಕ #ಜೈ ಹನುಮಾನ್ ಹನುಮಾನ್ ದ್ವಾದಶ ನಾಮ ಹನುಮಾನಂಜನಾಸೂನುಃ ವಾಯುಪುತ್ರೋ ಮಹಾಬಲಃ | ರಾಮೇಷ್ಟಃ ಫಲ್ಗುಣಸಖಃ ಪಿಂಗಾಕ್ಷೋಽಮಿತವಿಕ್ರಮಃ || ೧ || ಉದಧಿಕ್ರಮಣಶ್ಚೈವ ಸೀತಾಶೋಕವಿನಾಶಕಃ | ಲಕ್ಷ್ಮಣ ಪ್ರಾಣದಾತಾಚ ದಶಗ್ರೀವಸ್ಯ ದರ್ಪಹಾ || ೨ || ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ | ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಾಕಾಲೇ ವಿಶೇಷತಃ | ತಸ್ಯಮೃತ್ಯು ಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ || ೩ || 1. ಹನುಮಾನ್‌: ಆಂಜನೇಯ ಸ್ವಾಮಿಯ ಮುರಿದ ದವಡೆಯಿಂದಾಗಿ ಅವನನ್ನು ಅನುಮಾನ ಎಂದು ಕರೆಯಲಾಗುತ್ತದೆ. ಆಂಜನೇಯ ಸ್ವಾಮಿಯು ಬಾಲ್ಯಾವಸ್ಥೆಯಲ್ಲಿದ್ದಾಗ ಸೂರ್ಯನನ್ನು ತಪ್ಪಾಗಿ ಹಣ್ಣು ಎಂದು ಭಾವಿಸಿ ತಿನ್ನಲು ಹೋಗುತ್ತಾನೆ. ಆಗ ಇಂದ್ರನು ತನ್ನ ಶಕ್ತಿಯನ್ನು ಹಿಡಿದು . ಆಂಜನೇಯ ಸ್ವಾಮಿಯ ದವಡೆಗೆ ಹೊಡೆಯುತ್ತಾನೆ. ಇದರಿಂದಾಗಿ ಆಂಜನೇಯ ಸ್ವಾಮಿಯ ದವಡೆಯು ಊದಿಕೊಂಡಿತು. ಬಳಿಕ ಆಂಜನೇಯ ಸ್ವಾಮಿಯನ್ನು ಹನುಮಾನ್ ಎಂದು ಕರೆಯಲಾರಂಭಿಸಿದರು. 2. ಅಂಜನಿಪುತ್ರ: ಆಂಜನೇಯ ಸ್ವಾಮಿಯು ಮೂಲತಃ ಅಂಜನೀಯ ಮಗ. ಆಕೆ ದೇವರ ಬಳಿ ಪ್ರಾರ್ಥನೆಯನ್ನು ಮಾಡಿಕೊಳ್ಳುವ ಮೂಲಕ ಆಂಜನೇಯ ಸ್ವಾಮಿಯನ್ನು ತನ್ನ ಪುತ್ರನನ್ನಾಗಿ ಪಡೆಯುತ್ತಾಳೆ. ಆಂಜನೇಯ ಸ್ವಾಮಿಯ ಅಂಜನಿಪುತ್ರ ಎನ್ನುವ ಹೆಸರು ಬಂದಿದೆ. 3. ವಾಯುಪುತ್ರ: ಆಂಜನೇಯ ಸ್ವಾಮಿಯು ವಾಯು ಅಂದರೆ ಗಾಳಿಯ ಮಗ. ಆಂಜನೇಯ ಸ್ವಾಮಿಯ ವಾಯುಪುತ್ರ ಎನ್ನುವ ಹೆಸರು ನಮಗೆ ಪ್ರಾಣ, ಜೀವಶಕ್ತಿ, ಗಾಳಿಯ ಮಹತ್ವವನ್ನು ಹೇಳುತ್ತದೆ. ಈ ಹೆಸರು ನಮಗೆ ನಮ್ಮ ಉಸಿರು ಮತ್ತು ಆಂತರಿಕ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಪ್ರೋತ್ಸಾಹಿಸುತ್ತದೆ. 4. ಮಹಾಬಲ: ಮಹಾಬಲ ಎಂದರೆ ಅಗಾಧ ಶಕ್ತಿಯನ್ನು ಹೊಂದಿರುವವನು ಎಂದರ್ಥ. ಆಂಜನೇಯ ಸ್ವಾಮಿಯು ಅಗಾಧವಾದ ದೇಹವನ್ನು ಹೊಂದಿದ್ದಾನೆ. ತನ್ನ ಬೃಹತ್ ದೇಹದಿಂದಾಗಿ ಸಾಗರವನ್ನೇ ದಾಟಿದನು, ಪರ್ವತವನ್ನು ತನ್ನ ಕೈಯಲ್ಲಿ ಎತ್ತಿ ಹಿಡಿದನು. ಇದು ಆತನ ಕೇವಲ ದೈಹಿಕ ಶಕ್ತಿಯನ್ನು ಮಾತ್ರವಲ್ಲ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಕೂಡ ವಿವರಿಸಿದೆ. ಸ್ವಾಮಿಯ ಈ ಹೆಸರು ನಮಗೆ ದೃಢವಾಗಿ ನಿಲ್ಲುವ ಪಾಠವನ್ನು ಕಲಿಸುತ್ತದೆ. 5. ರಾಮೇಷ್ಟ: ಆಂಜನೇಯ ಸ್ವಾಮಿಯು ರಾಮನ ಪರಮ ಭಕ್ತನಾದ್ದರಿಂದ ಆತನನ್ನು ರಾಮೇಷ್ಟ ಎಂದು ಕರೆಯಲಾಗುತ್ತದೆ. ಕೆಲವೊಂದು ವಿಗ್ರಹಗಳಲ್ಲಾಗಿರಬಹುದು, ಫೋಟೋಗಳಲ್ಲಾಗಿರಬಹುದು ರಾಮ ಮತ್ತು ಹನುಮಂತರು ಒಬ್ಬರನ್ನೊಬ್ಬರು ತಬ್ಬಿ ಕೊಂಡಿರುವ ದೃಶ್ಯವನ್ನು ನೋಡಬಹುದು. ಇದು ಅವರಿಬ್ಬರ ನಡುವಿನ ಆಚಲವಾದ ಭಕ್ತಿ ಮತ್ತು ನಿಸ್ವಾರ್ಥ ಸೇವೆಯನ್ನು ಸೂಚಿಸುತ್ತದೆ. ರಾವನ ಬಗೆಗಿನ ಹನುಮಂತನ ಭಕ್ತಿಯನ್ನು ಮರುಪಾವತಿಸಲು ಸಾಧ್ಯವಿಲ್ಲ. ಹನುಮಂತನ ಈ ಹೆಸರು ನಮಗೆ ನಮ್ರತೆ ಮತ್ತು ಪ್ರೀತಿಯ ಶರಣಾಗತಿಯನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ. 6. ಪಾಲ್ಗುಣ ಸಖ: ಮಹಾಭಾರತದಲ್ಲಿ ಅರ್ಜುನನನ್ನು ಫಾಲ್ಗುಣ ಎಂದು ಕರೆಯಲಾಗುತ್ತದೆ. ಹನುಮಂತನು ಅರ್ಜುನನ ಸ್ನೇಹಿತನಾಗಿದ್ದನು. ಈ ಕಾರಣಕ್ಕಾಗಿ ಹನುಮಂತನು ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಸಹಾಯವನ್ನು ಮಾಡಿದ್ದನು.ಹನುಮಂತನು ಅರ್ಜುನನ ಸ್ನೇಹಿತನಾಗಿದ್ದರಿಂದ ಆತನನ್ನು ಪಾಲ್ಗುಣ ಸಖ ಎಂದು ಕರೆಯಲಾಗುತ್ತದೆ. ಹನುಮಂತನ ಈ ಹೆಸರು ನಮಗೆ ಸ್ನೇಹದ ಮಹತ್ವವನ್ನು ಹೇಳುತ್ತದೆ. 7. ಪಿಂಗಾಕ್ಷ: ಪಿಂಗಾಕ್ಷ ಎನ್ನುವ ಹನುಮಂತನ ಹೆಸರು ಆತನ ಕಣ್ಣಿನೊಂದಿಗೆ ಸಂಬಂಧವನ್ನು ಹೊಂದಿದೆ. ಹನುಮಂತನು ಹಳದಿ ಮತ್ತು ಕಂದು ಬಣ್ಣದ ದೈವಿಕ ಬೆಂಕಿಯುಳ್ಳ ಕಣ್ಣುಗಳನ್ನು ಹೊಂದಿದನು.. ಆತನ ಕಣ್ಣುಗಳನ್ನು ಯಾರೆ ನೋಡಿದರೂ ಕೂಡ ಒಮ್ಮೆ ಬೆಚ್ಚಿ ಬೀಳುತ್ತಿದ್ದರು. ಆತನ ಕಣ್ಣುಗಳು ನಮಗೆ ಸ್ಪಷ್ಟತೆ, ಜಾಗರೂಕತೆ ಮತ್ತು ಅಚಲವಾದ ಗಮನವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ 8. ಅಮಿತ ವಿಕ್ರಮ: ಹನುಮಂತನ ಈ ಹೆಸರು ಆತನ ಧೈರ್ಯ ಮತ್ತು ಶೌರ್ಯವನ್ನು ಸೂಚಿಸುತ್ತದೆ. ರಾವಣನ ವಿರುದ್ಧದ ಯುದ್ಧದಲ್ಲಿ ಹನುಮಂತನ ಶಕ್ತಿಯನ್ನು ಎಲ್ಲರು ನೋಡಿದ್ದಾರೆ. ಆತ ನಗುವನೇ ರಾವಣನ ಪ್ರತಿಯೊಂದು ಸೈನಿಕರನ್ನು ಎದುರಿಸಿ ನಿಂತಿದ್ದನು. ಅವನು ಯಾವುದಕ್ಕೂ ಕೂಡ ಭಯವನ್ನು ಹೊಂದಿರಲಿಲ್ಲ. ಹನುಮಂತನ ಅಮಿತ ವಿಕ್ರಮ ಎನ್ನುವ ಹೆಸರು ನಮ್ಮಲ್ಲಿ ಧೈರ್ಯವನ್ನು ತುಂಬುತ್ತದೆ. 9. ಸೀತಾಶೋಕ ವಿನಾಶನ: ರಾವಣನು ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಹೋದಾಗ ಸೀತೆಯು ದುಃಖದಲ್ಲಿ ಕುಳಿತಿರುತ್ತಾಳೆ. ಆಕೆ ತನ್ನೆಲ್ಲಾ ಭರವಸೆಯನ್ನು ಕಳೆದುಕೊಂಡಿರುತ್ತಾಳೆ. ಅದೇ ಸಂದರ್ಭಕ್ಕೆ ಸರಿಯಾಗಿ ಹನುಮಂತನುಸೀತೆಯನ್ನು ಹುಡುಕಿಕೊಂಡು ರಾವಣನ ಸ್ಥಳಕ್ಕೆ ಬರುತ್ತಾನೆ. ಅಲ್ಲಿ ಅವನು ಸೀತೆಯನ್ನು ನೋಡಿದಾಗ ಸೀತೆಗೆ ರಾಮನು ನೀಡಿದ ಉಂಗುರವನ್ನು ನೀಡಿ ಆಕೆಯ ಶೋಕವನ್ನು ದೂರ ಮಾಡುತ್ತಾನೆ. ಹನುಮಂತನ ಈ ಹೆಸರು ನಮ್ಮಲ್ಲಿ ಎಂತಹ ಶೋಕ ಅಥವಾ ದುಃಖಗಳಿದ್ದರೂ ಅದನ್ನು ಮೆಟ್ಟಿ ನಿಲ್ಲುವ ಕಾರ್ಯ ಮಾಡಬೇಕು ಎಂದು ಹೇಳುತ್ತದೆ. . 10. ದಶಗ್ರೀವ ದರ್ಪಹ: ದಶಗ್ರೀವ ದರ್ಪಹಮಂತನು ರಾವಣನ ದರ್ಪವನ್ನು ಮುರಿದ ಸಂದರ್ಭವನ್ನು ವಿವರಿಸುತ್ತದೆ. ರಾವಣ 10 ತಲೆಯನ್ನು ಹೊಂದಿದ್ದು, ಹೆಮ್ಮೆ ಅಹಂಕಾರ ಮತ್ತು ಭ್ರಮೆಯಲ್ಲಿ ಬದುಕುತ್ತಿದ್ದನು. ರಾವಣನ ಅಂತ್ಯಕ್ಕೆ ರಾಮ ಮತ್ತು ರಾವಣನ ನಡುವೆ ಯುದ್ಧ ನಡೆಯುವುದು ಅಗತ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ರಾಮನಿಗೆ ಸಹಾಯ ಮಾಡಿತು ಹನುಮಂತ. ಈ ಕಾರಣಕ್ಕಾಗಿ ಹನುಮಂತನನ್ನು ದಶಗ್ರೀವ ದರ್ಪಹ ಎಂದು ಕರೆಯಲಾಗುತ್ತದೆ 11. ಲಕ್ಷ್ಮಣ ಪ್ರಾಣದಾತ: ರಾಮ ಮತ್ತು ರಾವಣ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ಲಕ್ಷ್ಮಣನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬೀಳುತ್ತಾನೆ. ಆತನನ್ನ ಎಷ್ಟೇ ಎಬ್ಬಿಸಲು ಪ್ರಯತ್ನಿಸಿದರು ಕೂಡ ಲಕ್ಷ್ಮಣ ಕಣ್ಣು ತೆರೆಯುವುದಿಲ್ಲ. ಅಂತಹ ಸಂದರ್ಭದಲ್ಲಿ ಹನುಮಂತನು ಸಂಜೀವಿನಿ ಪರ್ವತವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಬರುತ್ತಾನೆ. ಬಳಿಕ ಆತನು ತಂದ ಸಂಜೀವಿನಿ ಪರ್ವತದಿಂದ ಗಿಡಮೂಲಿಕೆಯನ್ನು ತೆಗೆದುಕೊಂಡು ಲಕ್ಷ್ಮಣನ ಪ್ರಾಣವನ್ನು ಕಾಪಾಡಲಾಗುತ್ತದೆ.ಹನುಮಂತನ ಈ ಹೆಸರು ನಮಗೆ ಇನ್ನೊಬ್ಬರ ಪ್ರಾಣವನ್ನು ಉಳಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಹೇಳುತ್ತದೆ. 12. ಉದಾಧಿ ಕ್ರಮಣ: ಉದಾಧಿಕ್ರಮಣ ಎಂದರೆ ಸಾಗರವನ್ನು ದಾಟಿದವನು ಎಂದರ್ಥ. ಸೀತೆಯನ್ನು ಹುಡುಕಿ ತರುವುದಕ್ಕಾಗಿ ಹನುಮಂತನು ಬೃಹತ್ ಸಾಗರವನ್ನೇ ದಾಟುತ್ತಾನೆ. ಸಾಗರವು ಭಯ, ಅನುಮಾನ ಮತ್ತು ಅಡೆತಡೆಗಳನ್ನು ಪ್ರತಿನಿಧಿಸುತ್ತದೆ. ಹನುಮಂತನ ಹೆಸರು ನಮಗೆ ಎಷ್ಟೇ ಅಡೆತಡೆಗಳು ಎದುರಾದರೂ ಧೈರ್ಯದಿಂದ ಮುನ್ನುಗ್ಗಬೇಕು ಎನ್ನುವುದನ್ನು ಹೇಳಿಕೊಡುತ್ತದೆ. ಹನುಮಂತನ ಈ ಹೆಸರುಗಳಿಂದಲೇ ನಾವು ಆತನ ಒಳ್ಳೆಯ ಗುಣಗಳನ್ನು ನಮ್ಮಲ್ಲಿಯೂ ಬೆಳೆಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಹನುಮಂತನ ಈ 12 ಹೆಸರುಗಳನ್ನು ಪಠಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. ಈ 12 ಹೆಸರುಗಳನ್ನು ಪಠಿಸುವುದರಿಂದ ಕೂಡ ನಾವು ಹನುಮಂತನ ಕೃಪೆಗೆ ಪಾತ್ರರಾಗಬಹುದು. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
1K ವೀಕ್ಷಿಸಿದ್ದಾರೆ
22 ಗಂಟೆಗಳ ಹಿಂದೆ
#🔱 ಭಕ್ತಿ ಲೋಕ #ಜೈ ಹನುಮಾನ್ #💪ಹನುಮ ಜಯಂತಿ ಶುಭಾಶಯಗಳು🚩 #ಹನುಮ ಜಯಂತಿ ##🌺ಹನುಮ ಜಯಂತಿ ಶುಭಾಶಯಗಳು 🙏 ನಾಳೆ ಹನುಮಾನ್ ಜಯಂತಿ ಅರ್ಥ ಮಾಡಿಕೊಂಡು ಓದಿ ಹನುಮಂತನ ಅನುಗ್ರಹದಿಂದ ಶುಭವಾಗಲಿ ಶ್ರೀ ಹನುಮಾನ ಚಾಲೀಸಾವನ್ನು ಗೋಸ್ವಾಮಿ ತುಲಸಿದಾಸರು ರಚಿಸಿದ್ದಾರೆ. ಪ್ರತಿದಿನ ಸ್ನಾನವಾದ ನಂತರ ಸ್ವಚ್ಛ ಮನಸ್ಸಿನಿಂದ ಈ ಹನುಮಾನ ಚಾಲೀಸಾವನ್ನು ಪಠಿಸುವುದರಿಂದ‌ ನಿಮ್ಮೆಲ್ಲ ನೋವು ಸಂಕಟ ರೋಗಗಳು ದೂರಾಗುತ್ತವೆ. ಭೂತ ಪ್ರೇತ ಪಿಶಾಚಿಗಳು ನಿಮ್ಮತ್ರ ಸುಳಿಯುವುದಿಲ್ಲ. ಜೊತೆಗೆ ನಿಮ್ಮ ವಿರೋಧಿಗಳು ಶತ್ರುಗಳು ಸರ್ವನಾಶವಾಗುತ್ತಾರೆ. ಅರ್ಥ ಸಹಿತವಾಗಿ ಹನುಮಾನ ಚಾಲೀಸಾ ಇಂತಿದೆ ; "ಶ್ರೀ ಗುರು ಚರನ ಸರೋಜ ರಜ‌ ನಿಜ ಮನು ಮುಕುರ ಸುಧಾರಿ | ಬರನೂ ರಘುಬರ ಬಿಮಲ ಜಸು ಜೋ ದಾಯಕು ಫಲಚಾರಿ || (ಶ್ರೀ ಗುರುವಿನ ಪಾದಕಮಲಗಳ ಧೂಳಿನಿಂದ ‌ನನ್ನ ಮನಸ್ಸೆಂಬ ಕನ್ನಡಿಯನ್ನು ಬೆಳಗಿ, ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ನೀಡುವ ಶ್ರೀ ರಘುರಾಮನ ವಿಮಲ ಚರಿತ್ರೆಯನ್ನು ವರ್ಣಿಸುವೆನು) ಬುದ್ಧಿಹೀನ ತನು ಜಾನಿಕೆ, ಸುಮಿರೌ ಪವನ ಕುಮಾರ | ಬಲಬುದ್ಧಿ‌ ವಿದ್ಯಾ ದೇಹು ಮೋಹಿ, ಹರಹು ಕಲೆಸ ಬಿಕಾರ || (ಪವನಕುಮಾರನೇ ನನ್ನನ್ನು ಬುದ್ಧಿಹೀನನೆಂದು ತಿಳಿದು ನನಗೆ ಬಲ ಬುದ್ಧಿ ವಿದ್ಯೆಗಳನ್ನು ನೀಡಿ ನನ್ನಲ್ಲಿರುವ ದೋಷಗಳನ್ನು ಕಷ್ಟಗಳನ್ನು ಪರಿಹರಿಸು) ಜಯ ಹನುಮಾನ ಜ್ಞಾನ ಗುಣ ಸಾಗರ | ಜಯ ಕಪೀಸ ತಿಹುಂ ಲೋಕ ಉಜಾಗರ || (ಜ್ಞಾನ ಗುಣಸಾಗರನಾದ ಹನುಮಂತನೇ ನಿನಗೆ ಜಯವಾಗಲಿ, ಮೂರು ಲೋಕಗಳನ್ನು ಜ್ಞಾನದಿಂದ ಬೆಳಗುವ ನಿನಗೆ ಜಯವಾಗಲಿ) ರಾಮದೂತ ಅತುಲಿತ ಬಲಧಾಮಾ | ಅಂಜನಿಪುತ್ರ ಪವನ ಸುತ ನಾಮಾ || (ರಾಮದೂತನೇ‌ ಅಪರಿಮಿತ ಬಲವುಳ್ಳವನೇ ಅಂಜನಿದೇವಿಯ ಪುತ್ರನೇ ಪವನಸುತನೇ) ಮಹಾಬೀರ ಬಿಕ್ರಮ ಬಜರಂಗೀ | ಕುಮತಿ ನಿವಾರ ಸುಮತಿ ಕೆ ಸಂಗೀ || (ಮಹಾವೀರನೇ, ವಿಕ್ರಮನೇ ವಜ್ರಾಂಗನೇ, ನೀನು ದುರ್ಬುದ್ಧಿಯನ್ನು ಹೋಗಲಾಡಿಸಿ ಸುಬುದ್ಧಿಯನ್ನು ಕೊಡುವವನು) ಕಂಚನ ಬರನ ಬಿರಾಜ ಸುಬೇಸಾ | ಕಾನನ ಕುಂಡಲ ಕುಂಚಿತ ಕೇಸಾ || (ನೀನು ಚಿನ್ನದಂತಹ ಮೈಬಣ್ಣವುಳ್ಳವನು, ನಿನ್ನ ಕಿವಿಯಲ್ಲಿ ಕುಂಡಲಗಳು, ನಿನ್ನದು ಗುಂಗುರು ಕೂದಲು, ಉತ್ತಮ ವೇಷ ಧರಿಸಿ ಶೋಭಿಸುತ್ತಿರುವೆ) ಹಾಥ ಬಜ್ರ ಔ ಧ್ವಜಾ ಬಿರಾಜೈ | ಕಾಂಧೇ ಮುಂಜಿ ಜನೇಹೂ ಸಾಜೈ || (ನಿನ್ನ ಕೈಯಲ್ಲಿ ವಜ್ರಾಯುಧ ಮತ್ತು ಧ್ವಜವು ರಾರಾಜಿಸುತ್ತಿದೆ. ಹೆಗಲಿಂದ ಕೆಳಗೆ ಮೂಂಜಿ ಹಾಗೂ ಜನಿವಾರಗಳಿವೆ) ಸಂಕರ ಸುವನ ಕೇಸರಿ ನಂದನ‌ | ತೇಜ ಪ್ರತಾಪ ಮಹಾ ಜಗ ಬಂಧನ || (ನೀನು ರುದ್ರಾಂಶ ಸಂಭೂತ ಹಾಗೂ ವಾನರರಸ ಕೇಸರಿಯ ಮಗನು, ತೇಜೋವಂತನಾಗಿ ಪ್ರತಾಪಿಯಾಗಿ ಇಡೀ ಜಗತ್ತಿನಿಂದ ವಂದ್ಯನು) ವಿದ್ಯಾವಾನ ಗುನೀ ಅತಿ ಚಾತುರ | ರಾಮ ಕಾಜ ಕರಿಬೇಕೋ ಆತುರ || (ನೀನು ಗುಣವಂತನು, ವಿದ್ಯಾವಂತನು ಅತ್ಯಂತ ಚತುರನು, ರಾಮ ಕಾರ್ಯವನ್ನು ಮಾಡಿ ಮುಗಿಸಲು ಸದಾ ಆತುರ ಪಡುವವನು) ಪ್ರಭು ಚರಿತ್ರ ಸುನಿಬೇ ಕೋ ರಸಿಯಾ | ರಾಮಲಖನ ಸೀತಾ ಮನ ಬಸಿಯಾ || (ಶ್ರೀರಾಮಚಂದ್ರನ ಚರಿತೆಯನ್ನು ಆಲಿಸುವುದರಲ್ಲಿ ನಿನಗೆ ಆನಂದ. ಶ್ರೀರಾಮ, ಲಕ್ಷ್ಮಣ, ಸೀತೆ ನಿನ್ನ ಮನಸ್ಸಿನಲ್ಲಿ ನೆಲಸಿ ಬಿಟ್ಟಿದ್ದಾರೆ) ಸೂಕ್ಷ್ಮ ರೂಪ ಧರೀ ಸಿಯಹಿಂ ದಿಖಾವಾ | ಬಿಕಟ ರೂಪ ಧರಿ ಲಂಕ ಜರಾವಾ || (ನೀನು ಸೂಕ್ಷ್ಮ ರೂಪ ಧರಿಸಿಕೊಂಡು ಸೀತೆಗೆ ಕಾಣಿಸಿಕೊಂಡೆ ಅದೇ ಭಯಂಕರ ರೂಪವನ್ನು ಧಾರಣ ಮಾಡಿಕೊಂಡು ಲಂಕೆಯನ್ನು ಸುಟ್ಟೆ) ಭೀಮರೂಪ ಧರಿ ಅಸುರ ಸಂಹಾರೇ | ರಾಮಚಂದ್ರ ಕೆ‌ ಕಾಜ ಸಂವಾರೆ || (ನೀನು ಬೃಹದಾಕಾರ ಧರಿಸಿ ಅಸುರರನ್ನು ಸಂಹರಿಸಿದೆ, ಶ್ರೀರಾಮ ಚಂದ್ರನ ಕಾರ್ಯವನ್ನು ಸಾಂಗಗೊಳಿಸಿದೆ) ಲಾಯ್ ಸಜೀವನ ಲಖನ ಜಿಯಾಯೇ | ಶ್ರೀ ರಘುವೀರ ಹರಷಿ ಉರ ಲಾಯೇ || (ಸಂಜೀವಿನಿಯನ್ನು ತಂದು ಲಕ್ಷ್ಮಣನನ್ನು ಬದುಕಿಸಿಕೊಂಡೆ. ಶ್ರೀ ರಘುನಾಥನು ಸಂತಸದಿಂದ‌ ನಿನ್ನನ್ನು ಆಲಂಗಿಸಿಕೊಂಡನು) ರಘುಪತಿ ಕೀನ್ಹೀ ಬಹುತ‌ ಬಡಾಈ | ತಾಮ ಮಮ ಪ್ರಿಯ ಭರತ ಹಿ ಸಮ ಭಾಈ || (ನೀನು ನನ್ನ ಸೋದರ ಭರತನಷ್ಟೇ ನನಗೆ ಪ್ರಿಯನು ಎಂದು ಶ್ರೀ ರಾಮಚಂದ್ರನು ನಿನ್ನನ್ನು ಬಹುವಾಗಿ ಹೊಗಳಿದ್ದಾನೆ) ಸಹಸ ಬದನ ತುಮ್ಹರೋ ಜಸಗಾವೈಂ ಅಸ ಕಹಿ ಶ್ರೀಪತಿ ಕಂಠ ಲಗಾವೈಂ (ಆದಿಶೇಷನು ಸಹಸ್ರ ಮುಖಗಳಿಂದ ನಿನ್ನ ಕೀರ್ತಿಯನ್ನು ಹಾಡಿ ಹೊಗಳುತ್ತಾನೆ ಎನ್ನುತ್ತಾ ಶ್ರೀಪತಿಯ ನಿನ್ನನ್ನು ಆಲಂಗಿಸಿಕೊಳ್ಳುತ್ತಾನೆ) ಸನಕಾದಿಕ ಬ್ರಹ್ಮಾದಿ ಮುನೀಸಾ | ನಾರದ ಸಾರದ ಸಹಿತ ಅಹೀಸಾ || (ಸನಕಾದಿ ಋಷಿವರ್ಯರು, ಬ್ರಹ್ಮಾದಿಗಳು, ನಾರದರು, ಸರಸ್ವತಿಯೂ ಆದಿಶೇಷನು) ಜಮ ಕುಬೇರ ದಿಗಪಾಲು ಜಹಾಂತೇ | ಕಬಿ ಕೋಬಿದ ಕಹಿ ಸಕೆ ಕಹಾಂತೇ || (ಯಮನು ಕುಬೇರನು ದಿಕ್ಪಾಲರು ಕವಿಕೋವಿದರು ನಿನ್ನ ಮಹಿಮೆಯನ್ನು ಎಷ್ಟೊಂದು ವರ್ಣಿಸಿದರು) ತುಮ ಉಪಕಾರ ಸುಗ್ರೀವಹೀಂ ಕೀನ್ಹಾ | ರಾಮ ಮಿಲಾಯ್ ರಾಜಪದ ದೀನ್ಹಾ || (ನೀನು ಸುಗ್ರೀವನಿಗೆ ಉಪಕಾರವನ್ನು ಮಾಡಿದೆ. ರಾಮನ ಸಖ್ಯ ಮಾಡಿಸಿ ಅವನಿಗೆ ರಾಜ್ಯ ಪದವಿ ಸಿಗುವಂತೆ ಮಾಡಿದೆ) ತುಮ್ಹರೋ ಮಂತ್ರ ವಿಭೀಷನ ಮಾನಾ | ಲಂಕೇಶ್ವರ ಭವ ಸಬಜಗ ಜಾನಾ || (ನೀನು ಕೊಟ್ಟ ಸಲಹೆಯನ್ನು ವಿಭೀಷಣನು ಪಾಲಿಸಿದನು. ಆದರಿಂದಲೇ ಅವನು ಲಂಕಾಧಿಪತಿಯಾದನೆಂಬುದನ್ನು ಇಡೀ ಜಗತ್ತೇ ಬಲ್ಲದು) ಜುಗ ಸಹಸ್ರ ಜೋಜನ ಪರ್ ಭಾನು | ಲೀಲ್ಯೋ ತಾಹಿ ಮಧುರ ಫಲ ಜಾನೂ || (ಎರಡು ಸಹಸ್ರ‌ ಯೋಜನ ದೂರವಿದ್ದ ಸೂರ್ಯವನ್ನು ಮಧುರ ಫಲವೆಂದು ತಿಳಿದು ಅವನೆಡೆಗೆ ಹಾರಿದೆ) ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀಂ | ಜಲಧಿ ಲಾಂಘಿ ಗಯೆ ಆಚರಜ್ ನಾಹೀಂ || (ಶ್ರೀರಾಮಚಂದ್ರನಿತ್ತ ಮುದ್ರಿಕೆಯನ್ನು ಬಾಯಲ್ಲಿಟ್ಟು ನೀನು ಸಮುದ್ರದ ಮೇಲೆ ಹಾರುತ್ತಾ ಅದನ್ನು ದಾಟಿದೆ ಅಂದರೆ ಇದರಲ್ಲಿ ಏನೂ ಅಶ್ಚರ್ಯವಿಲ್ಲ) ದುರ್ಗಮ ಕಾಜ ಜಗತ ಕೇ ಜೇತೇ | ಸುಗಮ ಅನುಗ್ರಹ ತುಮ್ಹರೇ ತೇತೇ || (ಪ್ರಪಂಚದಲ್ಲಿ ದುರ್ಗಮ ಎನಿಸುವ ಎಷ್ಟೆಲ್ಲಾ ಕಾರ್ಯಗಳು ಇವೆಯೋ ಅವೆಲ್ಲ ನಿನ್ನ ಅನುಗ್ರಹವಾದ ಕಾರಣ ಸುಲಭವೆನಿಸುತ್ತವೆ) ರಾಮ ದುಆರೇ ತುಮ ರಖವಾರೇ | ಹೋತನ ಆಜ್ಞಾ ಬಿನು ಪೈಸಾರೇ || (ನೀನು ರಾಮನ ಮನೆಯ ಬಾಗಿಲನ್ನು ಕಾಯುವವನು ನಿನ್ನ ಅನುಮತಿಯಿಲ್ಲದೆ ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ) ಸಬ್ ಸುಖ ಲಹೈ ತುಮ್ಹಾರೀ ಸರನಾ | ತುಮ ರಚ್ಛಕ್ ಕಾಹೂ ಕೋ ಡರ್ ನಾ || (ನಿನ್ನಲ್ಲಿ ಶರಣು ಬಂದವರಿಗೆ ಸಕಲ ಸುಖಗಳು ಲಭಿಸುತ್ತವೆ. ನೀನೇ ರಕ್ಷಕನಾದರೆ ಯಾರಿಗೂ ಭಯ ಪಡಬೇಕಾದುದಿಲ್ಲ) ಆಪನ ತೇಜ ಸಮ್ಹಾರೋ ಆಪೈ | ತೀನೋಂ ಲೋಕ ಹಾಂಕ್‌ ತೇಂ ಕಾಂಪೈ || (ನಿನ್ನ ತೇಜಸ್ಸನ್ನು ನೀನೇ ನಿಗ್ರಹಿಸಿಕೋ ನಿನ್ನ ಒಂದು ಗರ್ಜನೆಯಿಂದ ಮೂರು ಲೋಕಗಳು ನಡುಗುತ್ತವೆ) ಭೂತ ಪಿಶಾಚ ನಿಕಟ ನಹೀಂ ಆವೈ | ಮಹಾಬೀರ ಜಬ ನಾಮ್ ಸುನಾವೈ || (ನಿನ್ನನ್ನು ಸ್ಮರಿಸಿದ ಮಾತ್ರದಿಂದ ಭೂತ ಪಿಶಾಚಿಗಳು ಹತ್ತಿರ ಸುಳಿಯುವುದಿಲ್ಲ) ನಾಸೈ ರೋಗ ಹರೈ ಸಬ ಪೀರಾ | ಜಹತ ನಿರಂತರ ಹನುಮತ ಬೀರಾ || (ವೀರನಾದ ಹನುಮಂತನೇ ನಿನ್ನ ನಾಮವನ್ನು ನಿರಂತರ ಜಪಿಸುವುದರಿಂದ ಸಕಲ ರೋಗಗಳು ದೂರಾಗುತ್ತವೆ, ಎಲ್ಲ ಕಷ್ಟಗಳು ಕಳೆಯುತ್ತವೆ.) ಸಂಕಟ ತೇಂ ಹನುಮಾನ ಛುಡಾವೈ | ಮನಕ್ರಮ ಬಚನ ಧ್ಯಾನ ಜೋ ಲಾವೈ || (ಮನಸಾ ವಾಚಾ ಕರ್ಮಣಾ ಯಾರು ಹನುಮಂತನನ್ನು ಸ್ಮರಿಸುತ್ತಾರೋ ಅವರ ಸಂಕಷ್ಟಗಳನ್ನು ದೂರ ಮಾಡುತ್ತಾನೆ) ಸಬ ಪರ ರಾಮ ತಪಸ್ವೀ ರಾಜಾ | ತಿನ ಕೇ ಕಾಜ್ ಸಕಲ ತುಮ ಸಾಜಾ || (ಯಾರೇ ಆಗಲಿ ರಾಮನ ಭಕ್ತರಾದರೆ ಅವರ ಕಾರ್ಯಗಳನ್ನು ನೀನೇ ಸಾಂಗಗೊಳಿಸುತ್ತಿಯೇ) ಔರ ಮನೋರಥ ಜೋ ಕೋಈ ಲಾವೈ | ಸೋಈ ಅಮಿತ ಜೀವನ ಫಲ‌ ಪಾವೈ || (ಇನ್ಯಾವುದೇ ಮನೋರಥವನ್ನು ಹನುಮಂತನಲ್ಲಿ ಹೇಳಿಕೊಂಡರೆ ಅವರಿಗೆ ಜೀವನದ ಎಲ್ಲ ಫಲಗಳು ದೊರಕುತ್ತವೆ) ಚಾರೋ ಜುಗ ಪರತಾಪ ತುಮ್ಹಾರಾ | ಹೈ ಪರಸಿದ್ಧ ಜಗ‌‌ ಉಜಿಯಾರಾ || (ನಿನ್ನ ಪ್ರತಾಪವು ಚತುರ್ಯುಗಗಳಲ್ಲಿ ಹರಡಿದೆ.‌ ನಿನ್ನ ಯಶೋ ಕೀರ್ತಿಯು ಜಗತ್ಪ್ರಸಿದ್ಧವಾದುದು) ಸಾಧು ಸಂತ ಕೇ ತುಮ ರಖವಾರೇ | ಅಸುರ ನಿಕಂದನ ರಾಮ ದುಲಾರೇ‌ || (ನೀನು ಸಾಧು ಸಂತರ ರಕ್ಷಕನು, ರಾಕ್ಷಸರನ್ನು ಸಂಹರಿಸಿದ ರಾಮ ಪ್ರಿಯನು) ಅಷ್ಟಸಿದ್ಧಿ ನೌ ನಿಧಿ ಕೇ ದಾತಾ | ಅಸ ಬರ ದೀನ ಜಾನಕೀ ಮಾತಾ || (ಜಾನಕಿಮಾತೆಯು ನೀನು ಅಷ್ಟ ಸಿದ್ಧಿಗಳನ್ನು ನವನಿಧಿಗಳನ್ನು ಕೊಡುವವನಾಗು ಎಂದು ವರವನ್ನು ನೀಡಿದಳು‌) ರಾಮ ರಸಾಯನ ತುಮ್ಹಾರೆ ಪಾಸಾ | ಸದಾ ರಹೋ ರಘುಪತಿ ಕೆ ದಾಸಾ || (ರಾಮಭಕ್ತಿ ಎಂಬ ರಸಾಯನ ನಿನ್ನ ಬಳಿಯಿದೆ. ನೀನು ಸದಾ ಕಾಲ ರಘುನಾಥನ ದಾಸನಾಗಿರು) ತುಮ್ಹಾರೆ ಭಜನ ರಾಮ ಕೋ ಪಾವೈ | ಜನಮ ಜನಮ ಕೆ ದು:ಖ ಬಿಸರಾವೈ || (ನಿನ್ನ ಸ್ಮರಣೆ ಮಾಡಿದರೆ ಶ್ರೀರಾಮನೇ ನಮಗೆ ಲಭ್ಯವಾಗುತ್ತಾನೆ. ಜನ್ಮ ಜನ್ಮಾಂತರಗಳ ದು:ಖವನ್ನು ಮರೆಸುತ್ತಾನೆ) ಅಂತಕಾಲ ರಘುಬರ ಪುರ ಜಾಈ | ಜಹಾಂ ಜನ್ಮ ಹರಿ ಭಕ್ತ‌ ಕಹಾಈ || (ಅಂತ್ಯಕಾಲ ಬಂದಾಗ ರಘುನಾಥನ ನಗರಿಯಲ್ಲಿ ಜನ್ಮಿಸಿ ಹರಿಭಕ್ತನೆಂಬ ಕೀರ್ತಿಯನ್ನು ಪಡೆಯುತ್ತಾನೆ)‌ ಔರ ದೇವತಾ ಚಿತ್ತ ನ ಧರ ಈ | ಹನುಮತ ಸೇಈ ಸರ್ಬ ಸುಖ ಕರ ಈ || (ಉಳಿದ್ಯಾವ ದೇವತೆಗಳನ್ನು ಮನಸ್ಸಿಗೆ ತಾರದೆ, ಹನುಮಂತನನ್ನು ಸೇವಿಸಿ ಸಕಲ ಸುಖಗಳನ್ನು ಪಡೆಯುತ್ತಾರೆ) ಸಂಕಟ ಕಟೈ ಮಿಟೈ ಸಬಪೀರಾ | ಜೋ ಸುಮಿರೈ ಹನುಮತ ಬಲಬೀರಾ || (ಮಹಾವೀರನಾದ ಹನುಮಂತನನ್ನು ಸ್ಮರಿಸುವುದರಿಂದ ಎಲ್ಲ ಸಂಕಷ್ಟಗಳು ನೋವುಗಳು ಪರಿಹಾರವಾಗುತ್ತವೆ) ಜೈ ಜೈ ಜೈ ಹನುಮಾನ ಗೋಸಾಈ | ಕೃಪಾಕರಹು ಗುರುದೇವ ಕಿ ನಾಈಂ || (ಹನುಮಂತ ದೇವರೇ ನಿನಗೆ ಜಯವಾಗಲಿ. ಗುರುದೇವನಂತೆ ನಮ್ಮಲ್ಲಿ ಕೃಪೆಯಿಡು) ಜೋ ಸತ ಬಾರ ಪಾಠ ಕರ ಕೋಈ | ಛೂಟ ಬಂದಿ ಮಹಾ ಸುಖ ಹೋಈ || (ಇದನ್ನು ಯಾರು ನೂರು ಬಾರಿ ಪಠಣ ಮಾಡುವರೋ ಅವರು ಭವ ಬಂಧನಗಳಿಂದ ಬಿಡುಗಡೆ ಹೊಂದಿ ಮಹಾ ಸುಖವನ್ನು ಪಡೆಯುವರು) ಜೋ ಯಹ ಪಢೈ ಹನುಮಾನ ಚಾಲೀಸಾ | ಹೋಯ ಸಿದ್ಧಿ ಸಾಖೀ ಗೌರೀಸಾ || (ಈ‌ ಸ್ತೋತ್ರ ಹನುಮಾನ ಚಾಲೀಸಾವನ್ನು ಯಾರು ಪಠಣ ಮಾಡುತ್ತಾರೋ ಅವರಿಗೆ ಸಕಲ ಸಿದ್ಧಿಗಳು ಲಭಿಸುತ್ತವೆ ಎಂಬುದಕ್ಕೆ ಶಂಕರನೇ ಸಾಕ್ಷಿ) ತುಲಸಿದಾಸ ಹರಿ ಚೇರಾ | ಕೀಜೈ ನಾಥ್ ಹ್ರದಯ ಮಹಂ ಡೇರಾ || (ಈ ಹನುಮಾನ ಚಾಲೀಸಾವನ್ನು ರಚಿಸಿದ ಹರಿಯ ದಾಸರಾದ ತುಲಸಿದಾಸರು ಎಲೈ ಸ್ವಾಮಿಯೇ ಸದಾ ನನ್ನ ಹೃದಯದಲ್ಲಿ ನೆಲಸು ಎಂದು ಪ್ರಾರ್ಥಿಸುತ್ತಾರೆ) ಪವನತನಯ ಸಂಕಟ ಹರನ ಮಂಗಲ ಮೂರುತಿ ರೂಪ | ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ || (ವಾಯುಪುತ್ರನೇ ಸಂಕಟ ಮೋಚಕನೆ ಮಂಗಳಮಯ ರೂಪ ಹೊಂದಿದ ಮೂರ್ತಿಯೇ ರಾಮಲಕ್ಷಣ ಸಮೇತನಾಗಿ ‌ನನ್ನ ಹೃದಯದಲ್ಲಿ ನೆಲಸು)" ಮಂಗಳಂ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
504 ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
#ದಿನಕ್ಕೊಂದು ಕಥೆ #🙏 ಓಂ ನಮಃ ಶಿವಾಯ 🙏 ಹರಿಃ ಓಂ 🕉️“ಸದಾಶಿವನೂ ಸಹ ಪರೈಯ ಪಾದಗಳನ್ನು ಪೂಜಿಸುತ್ತಾನೆ.” ಇದು ಎಲ್ಲಾ ಹೇರಳತೆಯ ಕಲ್ಪನೆಗಳನ್ನು ಉಲ್ಟಾಗೊಳಿಸುತ್ತದೆ. ಸಮೀಪ ಪರಮಾವಸ್ಥೆಯಾದ ಸದಾಶಿವ ತತ್ತ್ವ ಕೂಡ ಪರೈಗೆ ನಮಸ್ಕರಿಸುತ್ತದೆ. ಪರ್ಯೈ / ಪರೈ ಯಾರು? ಪರೈ ಎಂದರೆ: 1. ಆದಿ, ನಿಶ್ಶಬ್ದ ನಾದ (ಪ್ರಾಥಮಿಕ ಶಬ್ದರಹಿತ ಶಬ್ದ) 2. ಶಿವನಿಗೂ ಮೂಲವಾದ ತತ್ತ್ವ 3. ಅನಾಹತ ಸ್ಪಂದನ (ಹೃದಯಕ್ಕಿಂತಲೂ ಆಳವಾದ ಶಬ್ದ) – ಅನಾಹತ ನಾದ 4. ತಮಿಳು ಸಿದ್ಧ ಪರಂಪರೆಯಲ್ಲಿ, ಪರೈ ಎಂದರೆ ಸೃಷ್ಟಿಯ ಮಹಾ ನಾದದ ಮೃದಂಗ — ಮೌನದಿಂದಲೇ ಉದ್ಭವಿಸುವ ಸ್ಪಂದನ ಹೀಗಾಗಿ, ಪರಮ ತತ್ತ್ವವೂ ತನ್ನದೇ ಮೂಲಕ್ಕೆ ನಮಸ್ಕರಿಸುತ್ತದೆ. ಪ್ರೇಮದಿಂದ ವೇದಾಂತ ಜ್ಞಾನ 🙏🏻 ಓಂ ತತ್ ಸತ್ 🙏🏻 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
599 ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
#ದಿನಕ್ಕೊಂದು ಕಥೆ #ಶ್ರೀ ಕೃಷ್ಣ 💥 ಮಹಾಭಾರತದ ಒಂದು ಸಣ್ಣ ಮಾಹಿತಿ ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ .... ನಕುಲನಾದರೋ ಅಪ್ರತಿಮ ರೂಪವಂತ. . ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ .. ಸಹಸ್ರ ಸಹಸ್ರ ಗಂಡಾನೆಗಳ ಭೀಮ ನ ಭುಜ ಬಲಕ್ಕೆ ಸಾಟಿ ಯಾರು..? ಆದರೆ ಇವರೆಲ್ಲರಿಗಿಂತ ಹಿರಿಯನಾದ ಧರ್ಮರಾಜ ನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..! ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ.. ಧರ್ಮರಾಜನಲ್ಲಿ ದ್ದ ಏಕೈಕ ಸಂಪತ್ತೆಂದರೆ “ ಧರ್ಮ “..! ಹುಟ್ಟು ಹೆಸರು ಯುಧಿಷ್ಠಿರ ನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ. “ ಶರಣರ ಮಹಿಮೆಯನ್ನು ಮರಣ ಕಾಲದಲ್ಲಿ ಕಾಣಬೇಕು ” ಇದು ಗಾದೆ ಮಾತು. ಧರ್ಮರಾಜನೇನೆಂದು ಅರ್ಥಮಾಡಿಕೊಳ್ಳಬೇಕಾದರೆ ಪಾಂಡವರ ಜೀವನದ ಕೊನೆಗೆ ನಾವು ಬರಬೇಕು.. ಭಗವಾನ್ ಶ್ರೀಕೃಷ್ಣನಿಗೆ ಪಾಂಡವರೆಂದರೆ ಪಂಚಪ್ರಾಣ. ಪಾಂಡವರಿಗಾದರೋ – ಶ್ರೀಕೃಷ್ಣ ಆತ್ಮವೇ ಆಗಿದ್ದ. ಹೀಗಾಗಿ ಶ್ರೀಕೃಷ್ಣ ಪರಂಧಾಮದ ನಂತರ ಪಾಂಡವರಿಗೆ ಆತನಿಲ್ಲದ ಭೂಮಿ ಶೂನ್ಯವೆನಿಸಿತು.. ಬದುಕು ಸಪ್ಪೆ ಎನಿಸಿತು..! ಮನಸ್ಸು ಮಹಾಪ್ರಸ್ಥಾನ ಕ್ಕೆ ಅಣಿಯಾಯಿತು..! ಮಹಾಪ್ರಸ್ಥಾನವೆಂದರೆ ಹಿಂದಿರುಗಿ ಬಾರದ ಪ್ರಯಾಣ. ಬದುಕು ಸಾಕೆನಿಸಿದಾಗ ಮನಸ್ಸನ್ನು ಪರತತ್ವದಲ್ಲಿ ಲೀನಗೊಳಿಸಿ, ಅನ್ನನೀರುಗಳನ್ನೂ ಪರಿತ್ಯಜಿಸಿ ಶರೀರ ಬೀಳುವವರೆಗೆ ನಡೆಯುತ್ತಲೇ ಭೂಮಂಡಲ ಪರ್ಯಟನೆ ಮಾಡುವ ಒಂದು ಮಹಾವ್ರತ..!! ರಾಜವಸ್ತ್ರಗಳನ್ನು ತೊರೆದು, ನಾರುಮಡಿಯುಟ್ಟು ಮಹಾಪ್ರಸ್ಥಾನಕ್ಕೆ ಹೊರಟುನಿಂತ ಪಾಂಡವರನ್ನು ಕಂಡು ಹಸ್ತಿನಾವತಿಯೇ ಗೋಳಿಟ್ಟಿತು.. ವನವಾಸದ ನೆನಪು ಮತ್ತಷ್ಟು ದಾರುಣವಾಗಿ ಮರುಕಳಿಸಿತು.. ಪೌರರೆಷ್ಟೇ ಪ್ರಯತ್ನಿಸಿದರೂ ಮುಕ್ತಿಗೆ ಮುಖಮಾಡಿ ನಿಂತಿದ್ದ ಪಾಂಡವರನ್ನು ಹಿಂದಿರುಗಿಸಲು ಸಾಧ್ಯವಾಗಲೇ ಇಲ್ಲ.! ವನವಾಸಕ್ಕೆ ಹೊರಟುನಿಂತಾಗ ಇದ್ದಂತೆ ಪಾಂಡವರಲ್ಲಿ ಕಿಂಚಿತ್ತಾದರೂ ದುಃಖವಿರಲಿಲ್ಲ. ಮರಣ ವು ಅವರಿಗೆ ಮಹೋತ್ಸವವೇ ಆಗಿತ್ತು.! ಮುಂದೆ ಮುಂದೆ ಧರ್ಮರಾಜ, ಮತ್ತೆ ಭೀಮ, ಅರ್ಜುನ, ನಕುಲ-ಸಹದೇವರು, ಕೊನೆಯಲ್ಲಿ ದ್ರೌಪದಿ – ಹೀಗೆ ಸಾಗುತ್ತಿದ್ದ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು. ಭೂಮಿಯನ್ನೆಲ್ಲಾ ಸುತ್ತಿ ಕೊನೆಯಲ್ಲಿ ಪಾಂಡವರು ಹಿಮಾಲಯದ ಶಿಖರಗಳನ್ನು ದಾಟಿ ಸಾಗುತ್ತಿದ್ದಾಗ ಮೊದಲಿಗೆ ದ್ರೌಪದಿಯು ಪ್ರಾಣಗಳನ್ನು ತೊರೆದು ಬಿದ್ದು ಬಿಟ್ಟಳು. ಒಡನೆಯೇ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ:” ಅಣ್ಣಾ, ದ್ರೌಪದಿಯೇಕೆ ಯೋಗಭ್ರಷ್ಟಳಾಗಿ ಬಿದ್ದು ಬಿಟ್ಟಳು…!? ” ಧರ್ಮರಾಜ ಉತ್ತರಿಸಿದ, “ ಐವರನ್ನು ಸಮಾನರಾಗಿ ಪ್ರೀತಿಸಬೇಕಾಗಿದ್ದ ಆಕೆ ಗುಪ್ತವಾಗಿ ಅರ್ಜುನನನ್ನು ಅಧಿಕವಾಗಿ ಪ್ರೀತಿಸುತ್ತಿದ್ದಳು.ಈ ತಾರತಮ್ಯವೇ ಅವಳ ಪತನಕ್ಕೆ ಕಾರಣವಾಯಿತು ” ಮುಂದೆ ಸಾಗುತ್ತಿದ್ದಂತೆಯೇ ಸಹದೇವ ಧರೆಗುರುಳಿದಾಗ.. ಭೀಮ ಪುನಃ ಅಣ್ಣನನ್ನು ಪ್ರಶ್ನಿಸಿದ, “ ಅಣ್ಣ, ಸಹದೇವನಿಗೇಕೆ ಹೀಗಾಯಿತು? ” ಧರ್ಮರಾಜ ಉತ್ತರಿಸಿದ: “ ತನ್ನ ಶಾಸ್ತ್ರಜ್ಞಾನದ ಬಗ್ಗೆ ಸಹದೇವನಿಗೆ ಗುಪ್ತ ಗರ್ವವಿದ್ದಿತು. ಅದುವೇ ಆತನ ಪತನಕ್ಕೆ ಕಾರಣವಾಯಿತು.” ಮತ್ತೆ ಕುಸಿದವನು ನಕುಲ , ಅಣ್ಣನಲ್ಲಿ ಭೀಮ ನಕುಲನ ಪತನಕ್ಕೆ ಕಾರಣವನ್ನು ಪ್ರಶ್ನಿಸಿದ.. “ ತನ್ನ ಅನನ್ಯ ಸಾಧಾರಣವಾದ ರೂಪದ ಕುರಿತಾದ ಗಾಢ ಗರ್ವವೇ ನಕುಲನ ಪತನಕ್ಕೆ ಕಾರಣ” ವಾಯಿತೆಂದು ಧರ್ಮರಾಜ ಉತ್ತರಿಸಿದ. ಮತ್ತೆ ಮೃತ್ಯುವಿನ ಸರದಿ ಅರ್ಜುನ ದಾಯಿತು. ಕಂಗೆಡುವ ಮನದ ಕಣ್ಣೀರನ್ನು ನುಂಗುತ್ತ ಭೀಮ ದೊಡ್ಡಣ್ಣನನ್ನು ಕೇಳಿದನು:” ಗೀತೋಪದೇಶಕ್ಕೆ ಪಾತ್ರನಾದ ಅರ್ಜುನನ ಸ್ಥಿತಿ ಹೀಗೇಕಾಯಿತು? ” ಧರ್ಮರಾಜ ಹೀಗೆ ಉತ್ತರಿಸಿದ: “ತನ್ನ ಪರಾಕ್ರಮದ ಬಗೆಗೆ ಅರ್ಜುನನಿಗೆ ಅತಿಶಯವಾದ ಅಹಂಕಾರವಿದ್ದಿತು.. ಅಹಂಕಾರದ ಆವೇಗದಲ್ಲಿ ಲೋಕದ ಎಲ್ಲಾ ವೀರರನ್ನು ಒಂದೇ ದಿನದಲ್ಲಿ ಮಣಿಸಿಬಿಡುವೆನೆಂದು ಆತ ಹೇಳಿಕೊಂಡಿದ್ದ.! ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದುರಿಂದ ಸುಳ್ಳಾಡಿದಂತಾಯಿತು.. ಗರ್ವ ಮತ್ತು ಮಿಥ್ಯಾ ವಚನಗಳು ಅರ್ಜುನನ ಪತನಕ್ಕೆ ಕಾರಣವಾದುವು” ಮಹಾಪ್ರಸ್ಥಾನ ಮುಂದುವರೆಯಿತು.. ಕೊಂಚ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮ ನೇ ಬಿದ್ದುಬಿಟ್ಟ. ಆದರೆ ಪ್ರಾಣ ಕಳೆದುಕೊಳ್ಳುವುದಕ್ಕೆ ಮುನ್ನ, ಪ್ರಜ್ಞೆಕಳೆದುಕೊಳ್ಳದೆ, ಧೃತಿಗೆಡದೆ ಅಣ್ಣನನ್ನು ಪ್ರಶ್ನಿಸಿದ, “ ಅಣ್ಣಾ, ನಿನ್ನ ಪ್ರಿಯ ಸೋದರನಾದ ನನಗೆ ಹೀಗೇಕಾಗುತ್ತಿದೆ? ” ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿಯೂ ತನ್ನ ದೋಷಗಳನ್ನು ತಿಳಿಯಬಯಸಿದ ಭೀಮನ ಜ್ಞಾನದಾಹವನ್ನು, ಧೃತಿಯನ್ನು ಯಾರೂ ಮೆಚ್ಚಬೇಕು..!! ಜೀವಜ್ಯೋತಿ ಆರಿ ಹೋಗುವ ಕೊನೆಯ ಕ್ಷಣಗಳಲ್ಲಿ ತನ್ನ ವ್ಯಕ್ತಿತ್ವದ ಕೊರತೆಗಳನ್ನು ತಿಳಿಹೇಳುವ ಅಣ್ಣನ ತಿಳಿಮಾತುಗಳು ತಮ್ಮನ ಕಿವಿಗಳಿಗೆ ಬಿದ್ದವು. “ ಬಾಹುಬಲದ ಗರ್ವ ನಿನ್ನ ಪತನದ ಪ್ರಬಲ ಕಾರಣ.. ಅದಕ್ಕಿಂತ ಮುಖ್ಯ ಕಾರಣ – ನೀನು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದುದು. ನಮ್ಮ ಶರೀರ ಧಾರಣೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರದ ಮೇಲೆ ಮಾತ್ರವೇ ನಮಗೆ ಅಧಿಕಾರವಿದೆ.. ಜಗತ್ತಿನಲ್ಲಿ ಹಸಿವೆಯಿಂದ ಬಳಲುವ -ಸಾಯುವ ಜೀವಗಳೆಷ್ಟೋ!! ನಾವೇ ಸಂಪಾದಿಸಿದ್ದಾದರೂ ನಾಲಿಗೆ ಚಪಲಕ್ಕಾಗಿ ಅಗತ್ಯವಿಲ್ಲದೇ ಆಹಾರ ಸೇವಿಸುವುದು ಆ ಜೀವಗಳಿಗೆ ಮಾಡಿದ ಅನ್ಯಾಯ. ಅನ್ನದೇವತೆಗೆ ಮಾಡಿದ ಅಪಚಾರವದು. ” ಧೀರ ಧರ್ಮಜ ಅಸಹಾಯ ಶೂರನಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆದ. ಭೂಮಂಡಲಕ್ಕೆ ಚಕ್ರವರ್ತಿ ಎನಿಸಿದ್ದ ಜನನಾಥ ಧರ್ಮಜನ ಜೊತೆ ಉಳಿದಿದ್ದು ಕೊನೆಗೊಂದು ನಾಯಿ ಮಾತ್ರ. ಬುದ್ಧಿ-ಭಾಷೆಗಳನ್ನು ಮೀರಿದ ಮಹಾ ಯಾತ್ರೆಯನ್ನು ಕೈಗೊಂಡಿದ್ದ ಆ ಮಹಾನುಭಾವನಿಗೆ ಕೆಲಹೊತ್ತಿನಲ್ಲಿಯೇ ದೇವರಾಜನ ದಿವ್ಯ ರಥದ ಘೋಷ ಕೇಳಿಸಿತು. ಕಲ್ಮಷದ ಕಪ್ಪು ಚುಕ್ಕೆಗಳೇ ಇಲ್ಲದ ಧವಳ ಜೀವನವನ್ನು ಗೌರವಿಸಲು – ಧರೆಯ ದೊರೆಯನ್ನು ದಿವಿಗೆ ಸ್ವಾಗತಿಸಲು ಸ್ವಯಂ ಸ್ವರ್ಗದ ದೊರೆಯೇ ಆಗಮಿಸಿದ. ದಿವಿ-ಭುವಿಯ ರಾಜರ ಆ ಭವ್ಯ ಸಮಾಗಮದಲ್ಲಿ ದೇವೇಂದ್ರ ಧರ್ಮರಾಜನಿಗೆ ಶರೀರ ಸಹಿತವಾಗಿ ಸ್ವರ್ಗಕ್ಕೆ ಬರಲು ಆಮಂತ್ರಣವಿತ್ತ. “ ತನ್ನ ಬದುಕನ್ನು ಸ್ವರ್ಗಮಾಡಿದ ತಮ್ಮಂದಿರು ಮತ್ತು ಮಡದಿಯ ಒಡನಾಟ ಸ್ವರ್ಗದಲ್ಲಿಯೂ ಬೇಕೆಂ “ದ ಧರ್ಮರಾಜ. “ ಶರೀರ ಸಹಿತವಾಗಿ ಸ್ವರ್ಗವೇರುವ ಅಪೂರ್ವ ಸುಯೋಗವು ನಿನ್ನದಾದರೆ, ನಿನ್ನ ತಮ್ಮಂದಿರು ಮತ್ತು ಮಡದಿ ಶರೀರವನ್ನು ತೊರೆದು ಆಗಲೇ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದ್ದಾರೆ ” ಎಂಬುದು ಇಂದ್ರನ ಉತ್ತರವಾಗಿತ್ತು. ಧರ್ಮರಾಜನ ಮುಂದಿನ ಮನವಿ ಮನಸ್ಸು ಮುಟ್ಟುವಂತಹುದು. “ ಆಶ್ರಿತರನ್ನು ಕೈ ಬಿಡುವುದು ಸಜ್ಜನರ ಧರ್ಮವಲ್ಲ. ಸೈನ್ಯ ಕೋಶಗಳು, ಅಮಾತ್ಯ ಪ್ರಜೆಗಳು, ಕೊನೆಗೆ ನನ್ನ ಜೀವದ ಒಡನಾಡಿಗಳೇ ಆಗಿದ್ದ ಸಹೋದರರು, ಮಡದಿಯೂ ಸೇರಿದಂತೆ ಸರ್ವಸ್ವವೂ ನನ್ನಿಂದ ದೂರವಾದರೂ ಜೊತೆಬಿಡದ ಈ ನಾಯಿಯನ್ನು ಬಿಡಲಾರೆ. ನೀನು ನನ್ನ ವಿಷಯದಲ್ಲಿ ಪ್ರಸನ್ನನಾಗಿರುವುದೇ ನಿಜವಾದರೆ ಸ್ವರ್ಗದಲ್ಲಿ ನನ್ನೊಡನೆ ಈ ನಾಯಿಗೂ ಸ್ಥಾನವನ್ನು ಕಲ್ಪಿಸು. ” ಚಕಿತನಾದ ಇಂದ್ರ ಹೇಳಿದ, “ ಸ್ವರ್ಗದಲ್ಲಿ ನಾಯಿಗಳಿಗೆ ಅವಕಾಶವಿಲ್ಲ “. (Dogs are not allowed..!) “ ಹಾಗಿದ್ದರೆ ನನಗೆ ಯಾವ ಸ್ವರ್ಗವೂ ಬೇಡ, ನಾಯಿಯೊಡನೆ ನಾನೂ ಇಲ್ಲಿಯೇ ಇರುತ್ತೇನೆ ” ಧರ್ಮರಾಜನ ಈ ಮಾತುಗಳು ಇಂದ್ರನನ್ನು ದಂಗುಬಡಿಸಿತು.! ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..? ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಲನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಷ್ಠಿರನೆಲ್ಲಿ….? ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ? ಸ್ವರ್ಗಕ್ಕೆ ಬೆನ್ನು ಹಾಕಿ ನಾಯಿ ಇದ್ದ ಕಡೆ ಮುಖಮಾಡಿ ನಿಂತ ಧರ್ಮರಾಜ ನಿಗೆ ಮಹಾದಾಶ್ಚರ್ಯವೇ ಕಾದಿತ್ತು..!! ನಾಯಿ ಮಾಯವಾಗಿತ್ತು..!! ಆಸ್ಥಾನ ದಲ್ಲಿ ಧರ್ಮ ನಿಂತಿತ್ತು..!! ಯಾವ ಧರ್ಮಕ್ಕಾಗಿ ರಾಜ್ಯ ಕೋಶಗಳನ್ನೂ ಕಳೆದು ಕೊಂಡನೋ , ಯಾವ ಧರ್ಮಕ್ಕಾಗಿ ತುಂಬಿದ ರಾಜ ಸಭೆಯಲ್ಲಿ ಧರ್ಮಪತ್ನಿಯ ವಸ್ತ್ರಾಪಹರಣ ವನ್ನು ಎದುರಿಸಿದನೋ , ಯಾವ ಧರ್ಮಕ್ಕಾಗಿ ಕಾಡಾಡಿಯಾಗಿ ಕ್ಲೇಶಗಳನ್ನು ಅನುಭವಿಸಿದನೋ, ಯಾವ ಧರ್ಮಕ್ಕಾಗಿ ಸಂಗ್ರಾಮ ಯಜ್ಞದೀಕ್ಷಿತನಾಗಿ ಬಂಧು ಮಿತ್ರರು,ಮುದ್ದು ಮಕ್ಕಳು, ಯುದ್ಧ ಯಜ್ಞದಲ್ಲಿ ಹತರಾಗಿ-ಹುತರಾಗಿ ಹೋಗುವುದನ್ನು ಕಣ್ಣಾರೆ ಕಂಡನೋ , ಯಾವ ಧರ್ಮದ ಪೂರ್ಣಸಾಧನೆಗಾಗಿ ಸರ್ವತ್ಯಾಗದ ಮಹಾಪ್ರಸ್ಥಾನವನ್ನು ಕೈ ಗೊ೦ಡನೋ, ಆ ಧರ್ಮ ಭುವಿಯ ಬದುಕಿನ ಕೊನೆ ಕ್ಷಣಗಳಲ್ಲಿ, ಎಲ್ಲವನ್ನು ಕಳೆದು ಕೊಂಡ ಅಕಿಂಚನ ಸ್ಥಿತಿಯಲ್ಲಿ ಕಣ್ಣೆದುರು ಮೈದಳೆದು ನಿಂತಿತ್ತು..ಧರ್ಮರಾಜನಿಗೆ ತನ್ನಿರವೇ ಮರೆಯಿತು..!! ನಾಯಿ ನಾಯಿಯಾಗಿರಲಿಲ್ಲ, ಧರ್ಮರಾಜನ ತಂದೆ ಯಮಧರ್ಮರಾಜನಾಗಿದ್ದ..! ಧರ್ಮಸ್ವರೂಪಿಯೇ ಅವನಲ್ಲವೇ? ಬದುಕೆ೦ಬುದು ಮರಣದೆಡೆಗಿನ ನಿರಂತರ ಪಯಣ.. ಬದುಕೆ೦ಬುದು ಮರಣದ ಸಿದ್ಧತೆ ಮಾತ್ರ..!! ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು.. ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ.. ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ……ಕೂಡಿಕೊಳ್ಳುತ್ತಲೇ ಇರುತ್ತದೆ.. “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..” ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು.. ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.? ಬಲವೇ ..? ಪರಾಕ್ರಮವೇ ..? ರೂಪವೇ..? ವಿದ್ಯೆಯೇ..? ಮರಣದ ಮಾತು ಹಾಗಿರಲಿ.. ಬದುಕಿನ ಕೊನೆಯವರೆಗೆ ಕೂಡ ಇವುಗಳು ಬರಲಾರವು.. ಕಾಲ ಕಳೆದಂತೆ ಬಲ ಕುಂದುತ್ತದೆ .. ಪರಾಕ್ರಮ ಮಸುಕಾಗುತ್ತದೆ.. ರೂಪ ಮಾಸುತ್ತದೆ.. ವಿದ್ಯೆ ಮರೆಯುತ್ತದೆ .. ದ್ರೌಪದಿ ನಕುಲರ ರೂಪವೇನಾಯಿತು ? ಸಹದೇವನ ವಿದ್ಯೆ ಎಲ್ಲಿಹೋಯಿತು ? ಭೀಮಾರ್ಜುನರ ಬಲ ಪರಾಕ್ರಮಗಳು ಯಾವ ಪ್ರಯೋಜನಕ್ಕೆ ಬಂದವು? ಧರ್ಮರಾಜನೆಂದೂ ಕೈಬಿಡದ ಧರ್ಮವೊಂದೇ ತಾನೆ ನಾಯಿಯಾಗಿ ಅವನನ್ನು ಕಾಯುತ್ತಿದ್ದುದು..!! ಧರ್ಮದೊಡನಿದ್ದರೆ ಮಾತ್ರ ಬಲ ವಿದ್ಯೆ ರೂಪಗಳಿಗೊಂದು ಅರ್ಥ .. ಹಾಗಿಲ್ಲದಿದ್ದರೆ ಇವುಗಳು ಪತನ ಸೋಪಾನಗಳೇ ಸರಿ .. ಧರ್ಮಶೀಲನಿಗೆ ಬದುಕಿನ ಕೊನೆ ಧರ್ಮರೂಪದಲ್ಲಿಯೇ ಬಂದರೆ ಉಳಿದವರಿಗೆ ಅದು ಮೃತ್ಯುರೂಪ … *"*" ಭೋಜರಾಜನ ಜೀವನಸಂದೇಶವನ್ನು ಗಮನಿಸಿ: ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ | ಆಪಾತಮಾತ್ರ ಮಧುರೋ ವಿಷಯೋಪಭೋಗಃ|| ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ | ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ || (ಗಾಳಿಗೆ ಸಿಕ್ಕಿದ ಮೋಡವೆಷ್ಟು ಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಸ್ಥಿರವಾದುದು .. ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ .. ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನಹಾಗೆ ನಮ್ಮ ಪ್ರಾಣ .. ಪರಲೋಕ ಪ್ರಯಾಣದ ಪರಮಸಖನೆಂದರೆ ಧರ್ಮವೊಂದೇ ಅಲ್ಲವೇ..?) *** ಧರ್ಮ ವಿರುವಲ್ಲಿ ಸಾವಿಲ್ಲ ,ನೋವಿಲ್ಲ.. ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ .. ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು ..!! ... ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏