ದಿನಕ್ಕೊಂದು ಕಥೆ

ರಾಧಾಕೃಷ್ಣ 🦚💙
668 views
7 days ago
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ 🙏 ಹರಿಃ ಓಂ 🕉️ ಇವು Narada maharshi ನಾರದ ಮಹರ್ಷಿಗಳ ಪ್ರಸಿದ್ಧ ಕಥೆಗಳು — ಭಕ್ತಿ, ಜ್ಞಾನ ಮತ್ತು ಧರ್ಮದ ಸಂದೇಶವನ್ನು ತುಂಬಿಕೊಂಡಿವೆ: --- 📖 1. ನಾರದರು ಮತ್ತು ವಾಲ್ಮೀಕಿ ಮಹರ್ಷಿ ಕಥೆ ಒಮ್ಮೆ ವಾಲ್ಮೀಕಿ ಮೊದಲಿಗೆ ರತ್ನಾಕರ ಎಂಬ ಕಳ್ಳನಾಗಿದ್ದನು. ಅವನು ದರೋಡೆ ಮಾಡಿ ಕುಟುಂಬವನ್ನು ಪಾಲಿಸುತ್ತಿದ್ದನು. ಒಂದು ದಿನ ನಾರದ ಮಹರ್ಷಿಗಳು ಅವನನ್ನು ಭೇಟಿ ಮಾಡಿ ಕೇಳಿದರು: 👉 “ನೀನು ಮಾಡುವ ಪಾಪವನ್ನು ನಿನ್ನ ಕುಟುಂಬದವರು ಹಂಚಿಕೊಳ್ಳುವರಾ?” ರತ್ನಾಕರ ತನ್ನ ಕುಟುಂಬವನ್ನು ಕೇಳಿದಾಗ, ಯಾರೂ ಪಾಪವನ್ನು ಹೊರುವುದಿಲ್ಲ ಎಂದು ತಿಳಿಯಿತು. ಇದರಿಂದ ಅವನು ಮನಸ್ಸು ಬದಲಿಸಿ, ನಾರದರಿಂದ “ರಾಮ” 🙏ನಾಮ ಜಪವನ್ನು ಕಲಿತು 👉 ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನಗೊಂಡನು. 🌠ಪಾಠ: ನಾಮಸ್ಮರಣೆಯ ಶಕ್ತಿ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. --- 📖 2. ನಾರದರು ಮತ್ತು ವಿಷ್ಣುವಿನ ಮಾಯೆ ಒಮ್ಮೆ ನಾರದರು ತಮ್ಮ ಭಕ್ತಿಯ ಮೇಲೆ ಹೆಮ್ಮೆಪಟ್ಟರು. ಆಗ Lord Vishnu ಅವರು ಅವರಿಗೆ ಮಾಯೆಯನ್ನು ತೋರಿಸಲು ನಿರ್ಧರಿಸಿದರು. ನಾರದರು ಒಂದು ಗ್ರಾಮಕ್ಕೆ ಹೋಗಿ: ಮನೆ, ಕುಟುಂಬ, ಮಕ್ಕಳು ಎಲ್ಲವನ್ನು ಹೊಂದಿದರು ಹಲವು ವರ್ಷಗಳು ಜೀವನ ನಡೆಸಿದರು ಆದರೆ ಅಚಾನಕ್ ಒಂದು ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡರು. ಅವರು ಅಳುತ್ತಿರುವಾಗ ವಿಷ್ಣು ಪ್ರತ್ಯಕ್ಷವಾಗಿ ಹೇಳಿದರು: 👉 “ಇದು ನನ್ನ ಮಾಯೆ!” 🌠ಪಾಠ: ದೇವರ ಮಾಯೆ ಅತೀ ಮಹತ್ವವಾದುದು; ಅಹಂಕಾರವನ್ನು ಬಿಡಬೇಕು. --- 📖 3. ನಾರದರು ಮತ್ತು ಕೃಷ್ಣ ನಾರದರು ಯಾವ ಭಕ್ತನು ದೊಡ್ಡವನು ಎಂದು ತಿಳಿಯಲು ಬಯಸಿದರು. Lord Krishna ಅವರು ಹೇಳಿದರು: 👉 “ಒಬ್ಬ ರೈತನನ್ನು ನೋಡಿ.” ನಾರದರು ದಿನಪೂರ್ತಿ ರೈತನನ್ನು ಗಮನಿಸಿದರು: ರೈತನು ದಿನದಲ್ಲಿ ಕೇವಲ 2–3 ಬಾರಿ ದೇವರನ್ನು ನೆನಪಿಸುತ್ತಿದ್ದನು ಆದರೆ ಕೃಷ್ಣನು ನಾರದರಿಗೆ ಎಣ್ಣೆ ತುಂಬಿದ ಪಾತ್ರೆಯನ್ನು ಕೊಟ್ಟು, 👉 “ಇದನ್ನು ಸುರಿಯದೆ ತಿರುಗಿ ಬಾ” ಎಂದರು. ನಾರದರು ಗಮನದಿಂದ ಅದನ್ನು ಮಾಡಿದರು, ಆದರೆ ದೇವರನ್ನು ನೆನಪಿಸಲಿಲ್ಲ. ಆಗ ಕೃಷ್ಣನು ಹೇಳಿದರು: 👉 “ಅವನು ಕೆಲಸದ ನಡುವೆ ದೇವರನ್ನು ನೆನಪಿಸುತ್ತಾನೆ, ಅದೇ ನಿಜವಾದ ಭಕ್ತಿ.” 🌠ಪಾಠ: ಜೀವನದ ಕೆಲಸಗಳ ನಡುವೆ ದೇವರನ್ನು ನೆನಪಿಸುವುದೇ ನಿಜವಾದ ಭಕ್ತಿ. --- ಇನ್ನಷ್ಟು Narada ಮಹರ್ಷಿಗಳ ಮನಮುಟ್ಟುವ ಕಥೆಗಳು ಇಲ್ಲಿವೆ — ಇವುಗಳಲ್ಲಿ ಭಕ್ತಿ, ವಿನಯ ಮತ್ತು ಜ್ಞಾನಗಳ ಸಂದೇಶ ತುಂಬಿದೆ: --- 📖 4. ನಾರದರು ಮತ್ತು ಪ್ರಹ್ಲಾದ ಒಮ್ಮೆ Prahlada ಗರ್ಭದಲ್ಲಿದ್ದಾಗಲೇ ನಾರದರು ಅವನ ತಾಯಿಗೆ ವಿಷ್ಣು ಭಕ್ತಿಯನ್ನು ಉಪದೇಶಿಸಿದರು. ಅದರಿಂದ ಪ್ರಹ್ಲಾದನು ಜನಿಸಿದ ಕ್ಷಣದಿಂದಲೇ ಭಕ್ತನಾದನು. ಅವನು ತನ್ನ ತಂದೆ ಹಿರಣ್ಯಕಶಿಪುವಿನ ವಿರೋಧಕ್ಕೂ ಕೂಡ 👉 “ನಾರಾಯಣ” 🙏ನಾಮವನ್ನು ಬಿಡಲಿಲ್ಲ. 🌠ಪಾಠ: ಸತ್ಸಂಗ ಮತ್ತು ಉತ್ತಮ ಉಪದೇಶ ಜೀವನವನ್ನು ಬಾಲ್ಯದಲ್ಲೇ ರೂಪಿಸುತ್ತದೆ. --- 📖 5. ನಾರದರು ಮತ್ತು ತುಳಸಿ ದೇವಿ ಒಮ್ಮೆ ತುಳಸಿ ದೇವಿ ತಪಸ್ಸು ಮಾಡುತ್ತಿದ್ದರು. ನಾರದರು ಅವರಿಗೆ ಧರ್ಮದ ಮಾರ್ಗವನ್ನು ತಿಳಿಸಿ, 👉 ವಿಷ್ಣು ಭಕ್ತಿಯಲ್ಲಿ ಸ್ಥಿರವಾಗುವಂತೆ ಮಾರ್ಗದರ್ಶನ ನೀಡಿದರು. ಇದರಿಂದ ತುಳಸಿ ದೇವಿ ಮಹಾ ಪುಣ್ಯಸ್ಥಳಿಯಾಗಿ ಪ್ರಸಿದ್ಧರಾದರು. 🌠ಪಾಠ: ಸರಿಯಾದ ಮಾರ್ಗದರ್ಶನ ಜೀವನವನ್ನು ಪವಿತ್ರಗೊಳಿಸುತ್ತದೆ. --- 📖 6. ನಾರದರು ಮತ್ತು ಅಹಂಕಾರಿ ರಾಜ ಒಬ್ಬ ರಾಜ ತನ್ನ ಶಕ್ತಿಯ ಮೇಲೆ ತುಂಬಾ ಅಹಂಕಾರ ಹೊಂದಿದ್ದನು. ನಾರದರು ಅವನ ಬಳಿ ಹೋಗಿ, ಅವನ ಅಹಂಕಾರವನ್ನು ಪರೀಕ್ಷಿಸಲು ಪ್ರಶ್ನೆಗಳು ಕೇಳಿದರು. ರಾಜನು ತನ್ನ ಶಕ್ತಿ ಶಾಶ್ವತವಲ್ಲ ಎಂಬುದನ್ನು ಅರಿತು 👉 ವಿನಯವನ್ನು ಅಳವಡಿಸಿಕೊಂಡನು. 🌠ಪಾಠ: ಅಧಿಕಾರ ಮತ್ತು ಶಕ್ತಿ ತಾತ್ಕಾಲಿಕ — ವಿನಯವೇ ಶಾಶ್ವತ. --- 📖 7. ನಾರದರು ಮತ್ತು ಸಂಗೀತ ನಾರದರು ಕೇವಲ ಋಷಿ ಮಾತ್ರವಲ್ಲ, ಅವರು ಮಹಾನ್ ಸಂಗೀತಜ್ಞರೂ ಆಗಿದ್ದರು. ಅವರು ತಮ್ಮ ವೀಣೆಯಿಂದ “ನಾರಾಯಣ… ನಾರಾಯಣ…” ಎಂದು ಕೀರ್ತನೆ ಮಾಡುತ್ತಿದ್ದರು. ಅವರ ಸಂಗೀತದಿಂದ: 🔅ದೇವರುಗಳು ಸಂತೋಷಪಟ್ಟರು 🔅ಭಕ್ತರಲ್ಲಿ ಭಕ್ತಿ ಹೆಚ್ಚಾಯಿತು 🌠ಪಾಠ: ಸಂಗೀತವೂ ದೇವರ ಸಂಪರ್ಕಕ್ಕೆ ಒಂದು ಮಾರ್ಗ. --- ✨ ಸಮಾಪ್ತಿ: 🔅ನಾರದ ಮಹರ್ಷಿಗಳ ಜೀವನ ನಮಗೆ ಹೇಳುವುದು: 🔅ಭಕ್ತಿ + ಜ್ಞಾನ + ವಿನಯ = ಪೂರ್ಣ ಜೀವನ 🔅ಸತ್ಸಂಗ ಮತ್ತು ನಾಮಸ್ಮರಣೆ ಅತ್ಯಂತ ಮುಖ್ಯ 🔅ಅಹಂಕಾರ ಬಿಟ್ಟು ಧರ್ಮದ ಮಾರ್ಗದಲ್ಲಿ ನಡೆಯಬೇಕು --- ಬರಹ 👉 ವೇದಾಂತ ಜ್ಞಾನ ಯವರಿಂದ --- ✨ ಸಾರಾಂಶ: 🔅ನಾರದ ಮಹರ್ಷಿಗಳ ಕಥೆಗಳು ನಮಗೆ ಹೇಳುವುದು: 🔅ಭಕ್ತಿ ಜೀವನವನ್ನು ಬದಲಿಸುತ್ತದೆ 🔅ಅಹಂಕಾರವನ್ನು ತ್ಯಜಿಸಬೇಕು 🔅ಯಾವ ಪರಿಸ್ಥಿತಿಯಲ್ಲಾದರೂ ದೇವನಾಮ ಸ್ಮರಣೆ ಮುಖ್ಯ 2026 ರಲ್ಲಿ, ಇಂದು ನಾರದ ಜಯಂತಿಯನ್ನು ಶನಿವಾರ, ಮೇ 2, 2026 ರಂದು ಆಚರಿಸಲಾಗುತ್ತದೆ..
ರಾಧಾಕೃಷ್ಣ 🦚💙
807 views
9 days ago
#ದಿನಕ್ಕೊಂದು ಕಥೆ ಬಾಲ್ಯದ ಹುರುಪು- ಓಹೋ ಸವಿ ನೆನಪು:- ಕಾಲೇಜಿಗೆ ಹೋಗುವ ಹುಡುಗರಿದ್ದರೂ, ಅಭ್ಯಾಸ ಬಲದಂತೆ ಶಾಲಾ ಮಕ್ಕಳ ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದ ಕೂಡಲೇ ಊರಿಗೆ ಹೋಗಿ ಬರುವುದು ವಾಡಿಕೆಯಂತೆ ಹೋದಾಗ, ಬಾಲ್ಯದ ಗೆಳತಿ ಮಾಲತಿ ಬಂದ ವಿಷಯ ತಿಳಿಯಿತು. ಮನೆಯಿಂದ ಒಂದು ಮೈಲು ದೂರದಲ್ಲಿ ಇರುವ ಗದ್ದೆ -ತೋಟದ ಮನೆ.‌ ಸಣ್ಣ ಸಾರಾ ಬರುತ್ತೆ ಮೇಲೆ ನಾಲ್ಕು ಕುಂಟೆ ಜೋಡಿಸಿದ್ದಾರೆ ದಾಟಿ ಹೋಗುತ್ತಿದ್ದಂತೆ ಮಾಲತಿ ಎದುರಿಗೆ ಬಂದಳು ಇಬ್ಬರ ಮುಖವು ಮೊರದಗಲವಾಯಿತು. ಹೊಸಿಲು ದಾಟಿ ಪಡಸಾಲೆ ಯಲ್ಲಿ ಕಟ್ಟಿದ್ದ ಉಯ್ಯಾಲೆ ಮೇಲೆ ಕುಳಿತು ಹರಟೆ ಶುರು ಹಚ್ಚಿಕೊಂಡೆವು. ಮಾಲತಿ ಅವಳ ಅಮ್ಮನನ್ನು ಕೂಗಿದಳು ಅವರು ಬಂದು ಮಾತನಾಡಿಸಿ ರಾಗಿ ಹುರಿ ಹಿಟ್ಟಿನ ಪಾನಕ, ಜೊತೆಗೆ ನಿಪ್ಪಟ್ಟು ಕೊಟ್ಟು ನೀವಿಬ್ಬರು ಮಾತಾಡುತ್ತಿರಿ, ಒಳಗೆ ಬೇಗ ಅಡಿಗೆ ಮುಗಿಸಿ ಬರುವೆ ಎಂದು ಹೋದರು. ನಮ್ಮಿಬ್ಬರ ಮಾತು ಕೇಳಬೇಕಾ, ವರ್ಷಗಳೇ ಕಳೆದಿತ್ತು ನಮ್ಮೂರು, ಮಠ ದೇವಸ್ಥಾನ, ಹೊಸ ಕುಟುಂಬಗಳು, ಹಳೆ ಹೊಸ ಸ್ನೇಹಿತರು, ಅತ್ತೆ ಮನೆ ಮಕ್ಕಳ ಕೆಲಸ ವಿದ್ಯಾಭ್ಯಾಸ ಎಲ್ಲ ಬಂದಿತ್ತು. ಮಾಲತಿಗೆ ಕಾರಣಾಂತರದಿಂದ ಮದುವೆ ಸ್ವಲ್ಪ ತಡವಾಗಿ ಹುಟ್ಟಿದ ಮಗು ಇನ್ನೂ 6ನೇ ತರಗತಿ ಓದುತ್ತಿದ್ದ. ಅವಳ ಮಗ ಒಳಗಿನ ಕೋಣೆಯಿಂದ ಬಂದು ಅಮ್ಮ ನನಗೆ ಬರೆದು ಬರೆದು ಸಾಕಾಗಿದೆ. ಸ್ವಲ್ಪ ಹೊರಗೆ ಆಡಿ ಬರುತ್ತೇನೆ ಅಂದ. ಮಾಲತಿ ಕೋಪದಿಂದ ಕಣ್ಣು ದೊಡ್ಡ ಮಾಡಿ, ನೋಡು ಹೇಳಿದ್ದನ್ನ ಬರೆದು ಮುಗಿಸೋ ತನಕ ಹೊರಗೆ ತಲೆ ಹಾಕಬೇಡ ಎನ್ನುತ್ತಾ ದರ ದರ ಹುಡುಗನ ಕೈ ಹಿಡಿದೆಳೆದು ಕೋಣೆಯೊಳಗೆ ದಬ್ಬಿ ಮುಂದಿನ ಚಿಲಕ ಹಾಕಿದಳು. ನನಗೆ ಆಶ್ಚರ್ಯವಾಯಿತು, ಅಲ್ವೇ ಪರೀಕ್ಷೆಗಳೆಲ್ಲ ಮುಗಿದು ರಜಕ್ಕಲ್ವಾ ನೀನು ಬಂದಿರೋದು? ಮತ್ಯಾಕೆ ನಿನ್ನ ಮಗನಿಗೆ ಓದು ಬರಹದ ಶಿಕ್ಷೆ.‌ ರಜೆ ಅಲ್ವಾ ಫ್ರೀಯಾಗಿ ಆಡಿಕೊಂಡಿರಲಿ ಬಿಡು ಅಂದೆ. ಅವಳು ಇಲ್ಲಾ ಕಣೆ ಈಗೆಲ್ಲಾ ವಿಚಿತ್ರ ಕಾಲ ಬಂದಿದೆ ಹಿಂದಿನಂತಿಲ್ಲ. ಅವನ್ನ ಹೆದರಿಸಿ ಓದಿಸ್ದೆ ಹೋದ್ರೆ ಆಮೇಲೆ ಬಗ್ಗಲ್ಲ ಅದು ಅಲ್ದೆ ಮುಂದಿನ ವರ್ಷ 7ನೇ ತರಗತಿ, ಪಬ್ಲಿಕ್ ಪರೀಕ್ಷೆ ಅದಕ್ಕಾಗಿ ಪುಸ್ತಕ ಗಳನ್ನು ತಂದಿದ್ದೇನೆ. ಈಗಿನಿಂದಲೇ ಸ್ವಲ್ಪ ಓದಿಸಿ ಬಿಟ್ಟರೆ ಮುಂದೆ ಕಷ್ಟವಾಗಲ್ಲ ಎಂಬ ಗೆಳತಿ ಮಾತಿಗೆ ನಗಬೇಕೋ, ಅಳಬೇಕೋ ತಿಳಿಲಿಲ್ಲ. ಆದರೂ ಹೇಳಿದೆ ಶಾಲೆ ಪ್ರಾರಂಭವಾದ ದಿನದಿಂದ ಪಾಠವನ್ನು ಓದಿಸಿದರೆ ಸಾಕು ಏಕೆಷ್ಟು ಅವಸರ ಸಣ್ಣ ವಯಸ್ಸಿನ ಹುಡುಗರು ಆಡಿಕೊಳ್ಳಲಿ ಬಿಡು. ಈ ಬಾಲ್ಯದ ಸವಿ ನೆನಪು ಬೆಳೆದು ದೊಡ್ಡವರಾದರೂ ಮರೆಯುವುದಿಲ್ಲ ನಾನು ನೀನು ಹಾಗೆ ಬೆಳೆದಿದ್ದು ಅಲ್ವಾ ನೀನೇ ಯೋಚಿಸು ಎಂದು ಹಳೆಯ ನೆನಪಿನ ಸುರುಳಿ ಬಿಚ್ಚಿದೆ. ಶಾಲಾ ತರಗತಿಗಳ ವಾರ್ಷಿಕ ಪರೀಕ್ಷೆ ಮುಗಿಯುತ್ತಿದ್ದಂತೆ ಬೇಸಿಗೆ ರಜೆಯಲ್ಲಿ ಮಜಾ ಮಾಡಲು ಹತ್ತು ಹಲವು ಅವಕಾಶಗಳು ಕೈಬೀಸಿ ಕರೆಯುತ್ತಿತ್ತು .ಅಜ್ಜಿ ಮನೆಗೆ ಹೋಗುವ ಸಲುವಾಗಿಯೇ ಬೇಸಿಗೆ ರಜಾ ಕೊಡುವುದು ಎಂಬ ಕಾಲ ಆಗಿತ್ತು ಅಜ್ಜನ ಊರಿನಲ್ಲಿ ತೋಟಗದ್ದೆ ಸುತ್ತುವುದು ನದಿ ಹಳ್ಳಗಳಲ್ಲಿ ಮನಸ್ಸು ಇಚ್ಛೆ ಈಜುವುದು ನೀರಲ್ಲೇ ಜುಟಾಟ ಹಿತ್ತಲಲ್ಲಿರುವ ಪೇರಲೆ ಪನ್ನೀರ್ ಲ* ಸಪೋಟ ಮರಗಳ ಮೇಲೆ ಮರದಿಂದ ಮರಕ್ಕೆ ಹಾರುತ್ತ ಮರಕೋತಿ ಕೊಟ್ಟಿಗೆ ಬೇಲಿ ಮೂಲೆ ಓಣಿ ಸಂಧಿ ಬೋಧಿ ರಾಶಿಗಳ ಮೇಲೆ ಗುಂಡಿ ಮಾಡಿಕೊಂಡು ಮುದ್ದಾದ ನಾಲ್ಕಾರು ಮರಿಗಳನ್ನು ಹಾಕಿದ್ದ ನಾಯಿ ಇನ್ನು ಕಣ್ಣು ಬಿಡದ ಆ ಮರಿಗಳನ್ನು ಲಂಗದೊಳಗೆ ಬಚ್ಚಿಟ್ಟುಕೊಂಡು ಒಳ ಹೊರಗೆಲ್ಲ ಸುತ್ತುವುದು ದೋಸೆ ರೊಟ್ಟಿ ಚೂರುಗಳನ್ನು ನಾಯಿಗೆ ಕೊಡುವುದು ಬೆಕ್ಕಿಗೆ ಹಾಲು ಕೊಡುವುದು ಹಳೆಯ ಮನೆಯ ಗೋಡೆಗಳ ಫೋಟೋ ಹಿಂದೆ ಕಟ್ಟಿರುವ ಗುಬ್ಬಿ ಗೂಡಿನಿಂದ ಜಾರಿ ಬಿದ್ದ ಮರಿಯನ್ನು ಜತನದಿಂದ ಗೂಡು ಮಾಡಿ ಬಿಡುವುದು ಗುಬ್ಬಿಗಳಿಗೆ ಅಕ್ಕಿ ನುಚ್ಚು ಭತ್ತ ತಂದು ಹಾಕುವುದು. ಒಟ್ಟಿಗೆಯಲ್ಲಿರುವ ಪುಟಾಣಿ ಕರುವಿನ ಕೊರಳಿಗೆ ಗೆಜ್ಜೆ ಕಟ್ಟಿ ನೆಗೆಯುವುದನ್ನು ನೋಡಿ ಖುಷಿಪಡುವುದು ಬಚ್ಚಲವಲೆಯೊಳಗೆ ನೀರುಳ್ಳಿ ಹಲಸಿನ ಬೀಜ ಗೇರು ಬೀಜಗಳನ್ನು ಸುಟ್ಟು ತಿನ್ನುವುದು, ಮಸಿ ಮಣ್ಣು ಬೂದಿ ತುಂಬಿದ ಬಟ್ಟೆ ಮೈ ಕೈ ಕಾಲುಗಳನ್ನು ತೊಳೆಯಬೇಕೆಂದರೆ ಹೊಳೆನೀರೇ ಸರಿ.‌ ಹಳ್ಳಿಯ ವಾತಾವರಣದಲ್ಲಿ ಬೆಳೆಯುವ ಮಕ್ಕಳಿಗೆ ಅದೆಷ್ಟೋ ಪಾಠಗಳನ್ನು ಪ್ರಕೃತಿಯೇ ಕಲಿಸಿಕೊಡುತ್ತದೆ ಸಾಲಾಗಿ ಹರಿವ ಇರುವೆಯ ಹಿಂದೆ ಹೋಗಿ ಅದರ ಗೂಡನ್ನು ಪತ್ತೆ ಹಚ್ಚುತ್ತಾರೆ ಮಣ್ಣಿನಲ್ಲಿರುವ ಗುಬ್ಬಿ ಹುಳದ ಗೂಡನ್ನು ಸರಿಸಿ ಅವುಗಳನ್ನು ಅಂಗೈಯಲ್ಲಿ ಹಿಡಿದು ಆಡುವುದು ಹಾರುವ ಬಣ್ಣ ಬಣ್ಣದ ಚಿಟ್ಟೆಗಳನ್ನು ಕೈಯಲ್ಲಿ ಹಿಡಿದು ಬಿಡುವ ಸಂತೋಷ ರಾತ್ರಿ ಮಿಣಕ್ ಎನ್ನುವ ದ ದೀಪದ ಹುಳುಗಳನ್ನು ಹಿಡಿದು ಕವರಿನಲ್ಲಿ ಕಟ್ಟಿ ಬ್ಯಾಟರಿ ಬೆಳಕು ಕಾಣುವ ಹುರುಪು ಎಲ್ಲಿಂದಲೋ ಇಳಿದು ಬರುವ ಜರಿಯನ್ನು ಕೌತುಕದಿಂದ ನೋಡುವುದು ನೀರಿನ ಸಾಹಸ ಒದ್ದೆಮರನಲ್ಲಿ ಕಪ್ಪೆಗೂಡು ಕಾಗದದಲ್ಲಿ ದೋಣಿ ಮಾಡಿ ನೀರಿನಲ್ಲಿ ತೇಲಿ ಬಿಡುವುದು ಮರಳಲ್ಲಿ ಈಶ್ವರ ಲಿಂಗ ಮಾಡಿ ಪೂಜೆ ಮಾಡುವುದು. ತುಂಬಾ ಬಿಸಿಲಿನ ಸಮಯದಲ್ಲಿ ಮನೆಯ ಒಳಗೆ ಆಡುವ ಆಟಗಳಾದ ಪಗಡೆ, ಚೌಕಬಾರ, ಗಿಚ್ಚಿ, ಕಲ್ಲಾಟ, ಚನ್ನೆಮಣೆ, ( ಅಳುಗುಳಿ ಮಣೆ) ಕಣ್ಣಾ ಮುಚ್ಚೆ, ಕಳ್ಳ ಪೊಲೀಸು, ಐಸ್ ಪೈಸ್ ಸ್ವಲ್ಪ ಬಿಸಿ ಇಳಿಯುತ್ತಿದ್ದಂತೆ ಮುಂಭಾಗದ ಬಯಲಿನಲ್ಲಿ ಚಿನ್ನಿದಾಂಡು, ಬುಗುರಿ, ಲಗೋರಿ, ಟೋಪಿ ಬೇಕ ಟೋಪಿ, ಗೋಲಿ, ಕಬ್ಬಡಿ, ಆಟವನ್ನು ಗಂಡು ಮಕ್ಕಳ ಸರಿ ಸರಿಗೂ ಆಡುವುದು.‌ ಬಿದಿರಿನ ಪೆಟ್ಲು ಮಾಡಿ ಪೆಟ್ಲಕಾಯಿ ಸಿಗದಿದ್ದರೆ ಕೆಸುವಿನ ಸೊಪ್ಪು ತುಂಬಿ ಟಪ್ ಎನಿಸುವುದು. ಚಾರ್ಟರ್ ಬಿಲ್ ಮಾಡಿಕೊಂಡು ಮಾವು ನೇರಳೆ ಹಣ್ಣುಗಳನ್ನು ಉದುರಿಸುವುದು. ನಾಯಿ ಬೆಕ್ಕಿನ ಮರಿಗಳು ಕಣ್ಣು ಬಿಡುವ ತನಕ ಅವುಗಳ ಮುಂದೆ ಕುಳಿತು ಕಾವಲು ಕಾಯುವುದು. ಇನ್ನು ಗ್ರಾಮೀಣ ಆಟಗಳಾದ, ಗೊಂಬೆ ಮದುವೆ ಆಟ, ಅಡಿಗೆ ಆಟ ಬಹಳ ಹುರುಪಿನಿಂದ ಆಡುತ್ತಿದ್ದೆವು. ಮದುವೆ ಆಟದಲ್ಲಿ ದೊಡ್ಡವರು ಮಾಡುವ ಎಲ್ಲಾ ಶಾಸ್ತ್ರವನ್ನು ಮಾಡುತ್ತಿದ್ದೇವೆ ತೆಂಗಿನಗರಿ, ಅಥವಾ ದಪ್ಪ ಎಲೆ ಸುತ್ತಿ ಓಲಗದಂತೆ ಮಾಡಿಕೊಂಡು ಓಲಗ ಊದುವುದು, ಬೀಗರ ಜಗಳ, ಅಡಿಕೆಗಂತೂ ಕಡಿಮೆ ಇರಲಿಲ್ಲ ಪುಟಾಣಿ ಅವಲಕ್ಕಿ ಅರಳು, ಬೆಲ್ಲ, ನೇರ್ಲೆ ಹಣ್ಣು ಹಲಸಿನ ಹಣ್ಣು ಎಲ್ಲಾ ತರಹದ ಕಾಡು ಹಣ್ಣುಗಳನ್ನು ಸಂಗ್ರಹಿಸಿ ಅಡಿಗೆ ತಯಾರಿ. ದೊಡ್ಡವರಿಗೆ ಗೊತ್ತಾಗದ ರೀತಿ, ಒಳಗಿನಿಂದ ಸೀರೆ, ಪಂಚೆ ತಂದು ಅಡರ ಬಡರಾ ಉಟ್ಟಿಕೊಂಡು ದೊಡ್ಡವರು ಮಾಡುವ ಮದುವೆಗಿಂತ ಕಡಿಮೆ ಇರುತ್ತಿರಲಿಲ್ಲ. ಸ್ವಲ್ಪ ಗೊತ್ತಾದ ಮೇಲೆ ಪುಟ್ಟ ಕರ್ಪೂರದ ಗೊಂಬೆಗೆ ಬಟ್ಟೆ ಹಾಕಿ ಮಗು ಅಣ್ತ ಮಾಡಿ ಜೋಗುಳ ಕಟ್ಟಿ ಹಾಡುವುದು. ಸ್ಕೂಲ್ ಆಟ:- ಎಲ್ಲಾ ಮಕ್ಕಳಿಗೂ ಟೀಚರ್ ಆಗುವ ಹುಚ್ಚು, ಕೊನೆಗೆ ಮೂರು ಜನ ಸೇರಿ ಕ್ಲಾಪ್ಸ ಹೊಡೆದು ಅದರಲ್ಲಿ ಗೆದ್ದವರನ್ನು ಟೀಚರ್ ಮಾಡುವುದು. ಹೋಮ್ ವರ್ಕ್ ಮಾಡದಿದ್ದರೆ, ಮಾತಾಡಿದರೆ, ಲಕ್ಕಿ ಕೋಲು ತೆಗೆದು ಕೊಂಡು ಕೈಗೆ ಹೊಡೆಯುವುದು, ಉಟ್ ಬೈಸ್ ಹೋಡೆಸುವುದು, ಕ್ಲಾಸ್ ರೂಮಿನಿಂದ ಹೊರಗೆ ನಿಲ್ಲಿಸುವುದು. ತುಂಬಾ ಬೋರ್ ಆದಾಗ, ಬಟ್ಟೆ ಬಗೆವಾ ಕಲ್ಲಿನ ಬೆಲೆ ಸೇರಿದೆ ಕುಟ್ಟಿ ಕಡ್ಡಿ ಅಂಟಿಸಿಕೊಂಡು ಬಾಯಲ್ಲಿ ನೀರೂರುವಂತೆ ಚೀಪುವುದು, ಇದು ಈಗಿನ ಲಾಲಿಪಪ್, ಚೂಯಿಂಗ್ ಗಮ್ ಗಿಂತ ಚೆನ್ನಾಗಿತ್ತು. ಆರೋಗ್ಯಕ್ಕೆ ಒಳ್ಳೆಯದು ನಾಲಿಗೆ ಕ್ಲೀನಾಗುತ್ತಿತ್ತು. ದಸರಾ ಬಂತೆಂದರೆ, ಹುಲಿವೇಷದಂತೆ ಹರಿಶಿನ ಕುಂಕುಮ ಬಟ್ಟೆಗೆ ಹಾಕುವ ನೀಲಿ ಕಲೆಸಿಕೊಂಡು ಕೈ ಕಾಲು ಮುಖಗಳಿಗೆ ಹಚ್ಚಿಕೊಂಡು ಹುಲಿ ವೇಷ ಕುಣಿಯುವುದು. ಎರಡು ಮರಗಳನ್ನು ಮರಗಳಿಗೆ ಹಗ್ಗ ಕಟ್ಟಿಕೊಂಡು ಒಬ್ಬರಿಗಿಂತ ಒಬ್ಬರು ಜೋರಾಗಿ ಜೀಕಿ ಕೊಳ್ಳುವುದು.‌ ಇಂಥ ಹತ್ತು ಹಲವು ಆಟಗಳನ್ನು ಬಾಲ್ಯದಲ್ಲಿ ಆಡಿ -ಕುಣಿದು- ನಲಿದು, ನಿಜ ಜೀವನದಲ್ಲಿ ದೊಡ್ಡವರು ನಿರ್ವಹಿಸುವ ಪಾತ್ರಗಳನ್ನೆಲ್ಲ ಮಕ್ಕಳು ಆಟದ ಮೂಲಕವೇ ಕಲಿತು ದೊಡ್ಡವರಾಗುವ ಹೊತ್ತಿಗೆ ಸಾಕಷ್ಟು ತಿಳುವಳಿಕೆ ಬಂದಿರುತ್ತಿ ತ್ತು. ಈಗ ಎಲ್ಲವುದಕ್ಕೂ ಕೋರ್ಸ್ ಅಂತ ಮಾಡಿದಾರೆ. ಇಂಥ ಆಟಗಳಿಂದ ಮಕ್ಕಳ ದೈಹಿಕ ಮಾನಸಿಕ ಬಹುತೇಕ ಬೆಳವಣಿಗೆಗೆ ಸಹಾಯವಾಗುತ್ತಿತ್ತು ಈ ರೀತಿ ಮಕ್ಕಳು ಅಜ್ಜಿ ಮನೆಯಲ್ಲಿ ನೆರೆ ಹೊರೆ ಮಕ್ಕಳು ಸೇರಿ ಆಡಿ ನಲಿದು ಎಂದಿಗೂ ಮರೆಯಲಾರದ ಸವಿ ಸವಿ ಸಾವಿರ ನೆನಪಿನ ಬಾಲ್ಯದ ನೆನಪಿನ ಬುತ್ತಿಯನ್ನು ಕಟ್ಟಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ನನ್ನ ಗೆಳತಿ ಜೊತೆ ಮಾತಾಡಿ ನೋಡು ಮಾಲತಿ ನಿನಗೆ ನಾನು ಹೇಳುವುದು ಇಷ್ಟೆ, ಕೆಲ ಅಮ್ಮಂದಿರು ಮಾಡುವಂತೆ ನೀನು ಮಗನ ಮೇಲೆ ವಿಪರೀತ ಒತ್ತಡವನ್ನು ಹೇರಬೇಡ ಟೆಸ್ಟ್ ಗಳು ಪರೀಕ್ಷೆಗಳು ಬಂದರೆ ರಾಂಕ್ ಬರಲೇಬೇಕೆಂದು ಹಠ ಏಕೆ ಈ ರೀತಿ ಪರಿಸ್ಥಿತಿಯನ್ನು ನೀನೆ ನಿರ್ಮಾಣ ಮಾಡಿಕೊಂಡರೆ ನಿನ್ನ ಮಗನ ಬಾಲ್ಯವನ್ನು ಹಿಸುಕಿದಂತಾಗುವುದಿಲ್ಲವೇ ಯೋಚಿಸು, ಬೇಸಿಗೆ ರಜೆಯನ್ನು ಓದು ಬರೆ ಎಂಬ ಕಟ್ಟುಪಾಡು ಬಿಟ್ಟು ಹಾಯಾಗಿ ಹಾಡಿಕೊಂಡಿರಲು ಬಿಡು ಎಂದೆ. ಆದರೆ ಅವಳು ಒಪ್ಪದೇ ನಿನಗೇನು ಗೊತ್ತು ನಿನ್ನ ಮಕ್ಕಳು ದೊಡ್ಡವರಾಗಿ ಕಾಲೇಜಿಗೆ ಹೋಗುತ್ತಿದ್ದಾರೆ ಅದಕ್ಕೆ ಹೀಗೆ ಹೇಳುವೆ, ನಿನಗೆ ಇಂದಿನ ಶಿಕ್ಷಣದ ವಿಷಯ ಗೊತ್ತಿಲ್ಲ ಮಾರ್ಕ್ಸ್ ಗಳನ್ನು ಎಷ್ಟು ತೆಗೆದುಕೊಂಡು ವಿದ್ಯಾರ್ಥಿಗಳನ್ನು ಮಾತ್ರ ಗಮನಿಸುತ್ತಾರೆ. ಬರೀ ಓದುವುದು ಮಾತ್ರವಲ್ಲ ಒಂದು ಮಗು, ಡ್ಯಾನ್ಸು ಸಂಗೀತ, ಎಲ್ಲಾ ಆಟಗಳು, ಈಜುವುದು, ಕ್ರಿಕೆಟು, ಜೊತೆಗೆ ನಟನೆ, ಹೀಗೆ ಒಂದಲ್ಲ ಎರಡಲ್ಲ ಎಲ್ಲದರಲ್ಲೂ ಮಕ್ಕಳು ಪ್ರಥಮವಾಗಿ ಬರಬೇಕು. ಅಲ್ಲದೆ ಮುಂದೆ ಉನ್ನತ ವ್ಯಾಸಂಗ ಮಾಡಬೇಕೆಂದರೆ ಈಗಿನಿಂದಲೇ ಕಷ್ಟಪಡಬೇಕು ಬೇಸಿಗೆ ರಜೆಯಲ್ಲಿ ಆಡದಿದ್ದರೂ ಚಿಂತೆ ಇಲ್ಲ ನಾಳೆ ಶಾಲೆಯಲ್ಲಿ ಕಡಿಮೆ ಮಾರ್ಕ್ಸ್ ಬಂದರೆ ಯಾಪು ಮೊರೆ ಹಾಕಿಕೊಂಡು ಬರುವ ಮಕ್ಕಳನ್ನು ನೋಡುವ ಕಷ್ಟ ಹಾಗೂ ಹೆಚ್ಚು ಓದಬೇಕೆಂದರೆ ಒದ್ದಾಡುವ ತಾಪತ್ರಯ ಯಾವ ಪೋಷಕರಿಗೂ ಬೇಡ ಎಂದಳು. ಎಲ್ಲಾ ತಿಳಿದುಕೊಂಡು ಮಗನ ಮೇಲೆ ಓದಲು ಒತ್ತಡ ಹೇಳುತ್ತಿದ್ದ ಮಾಲತಿಗೆ ಸರಿ ತಪ್ಪುಗಳ ವಿಮರ್ಶೆ ಮಾಡುವುದನ್ನು ನಿಲ್ಲಿಸಿ ಅವರಮ್ಮ ಮಾಡಿದ ರುಚಿಯಾದ ಅಡುಗೆ, ಅನ್ನ ಸಾರು, ಹಪ್ಪಳ, ಸಂಡಿಗೆ, ಕೆಸುವಿನ ದಂಟಿನ ಸಾಸಿವೆ, ಗುಬ್ಬಿ ಬಾಳೆ ಎಲೆ ಬೊಂಡ, ಹಲಸಿನ ಹಣ್ಣಿನ ಮಳಕಾ, ಮಾವಿನಕಾಯಿ ಚಿತ್ರಾನ್ನ, ಅಕ್ಕಿ ಹಾಲುಬಾಯಿ, ಕಡೆದ ಮಜ್ಜಿಗೆ, ಉಪ್ಪಿನಕಾಯಿ ಮಾಡಿಕೊಂಡು ಮನೆಗೆ ಹೊರಟೆ. ಮನೆ ಸಮೇಪಿಸಿತು ಗಮ್ ಎನ್ನುವ ಹಲಸಿನ ಕಣ್ಣಿನ ಪರಿಮಳ ಬಂದಿತು. ಹೊಟ್ಟೆ ತುಂಬಿದ್ದರು ಬಾಯಲ್ಲಿ ನೀರೂರಿತು. “ಉಂಡಾಗ ಹಲಸು ಹಸಿದಾಗ ಮಾವು” ನೆನಪಾಯಿತು ಸೀದಾ ಕೊಟ್ಟಿಗೆ ಹತ್ತಿರ ಹೋದೆ ಅಮ್ಮ ದೊಡ್ಡ ಬಗ್ಗೆ ಹಲಸಿನ ಹಣ್ಣನ್ನು ಹೆಚ್ಚಿ ಶ್ಯಾಡೆ ಮಾಡಿ ಮರಕ್ಕೆ ಹಾಕುತ್ತಿದ್ದಳು. ಸುತ್ತ ಮಕ್ಕಳು ಕುಳಿತುಕೊಂಡು ಶ್ಯಾಡೆಯಿಂದ ತೊಳೆ ಬಿಡಿಸಿ ಸಣ್ಣ ತೊಳೆ ತಿನ್ನುವುದು, ಬೀಜ ಇರುವ ಹಿರಿಯರನ್ನು ಪಾತ್ರೆಗೆ ಹಾಕುತ್ತಿದ್ದರು ಇನ್ನೊಂದು ತಲೆ ಬಟ್ಟಲಿಗೆ ಹಾಕುತ್ತಾ ಟಂಗ್ ಟ್ವಿಸ್ಟರ್ ಅಂತ ಫಾಸ್ಟ್ ಆಗಿ ಹೇಳುವ “ ಕಾಗೆ ಪುಕ್ಕ- ಗುಬ್ಬಿ ಪುಕ್ಕ” ಕಪ್ಪುಕಾಗೆ- ಕೆಂಪು ಕುಂಕುಮ, “ಕಿಮಿಕ್ ಕಮಕ್- ಕಮಕ್ ಕಿಮಿಕ್” ಕರಿ ಕಿವಿ- ಕಿವಿ ಕರಿ,ಹ ಇಂಥ ಪದಗಳನ್ನು ನಾಲಿಗೆ ತಳಪಡಿಸಿದಂತೆ ಹೇಳುತ್ತಿರುವುದನ್ನು ನೋಡಿ ಬೆರೆಗಾದೆ. ದೊಡ್ಡವರು ಹೇಳಲು ಹೊರಟಾಗ ಕಾಗೆ ಪುಕ್ಕ ಬುಗ್ಗಿ ಪುಕ್ಕ ಪಕ್ ಪಕ್ ಆಯಿತು. ಹುಡುಗರು ಕಿಸಕ್ಕನ ನಕ್ಕು ಆಟ ನಿಲ್ಲಿಸಿ ನಂತರ ಎಲ್ಲರೂ ಸೇರಿಕೊಂಡು ಅಂತ್ಯಾಕ್ಷರಿ ಆಡೋಣ ಎಂದು ಸ್ಟಾರ್ಟ್ ಮಾಡಿದರು. “ ಬೈಠೇ ಬೈಠೇ ಕ್ಯಾ ಕರೆ ಹೋ ಜಾಯೇ ಕುಛ್ ಕಾಮ್ ಶುರು ಕರೋ ಅಂತ್ಯಾಕ್ಷರಿ ಲೇಕೆ ಪ್ರಭು ಕಾ ನಾಮ್” ಗಜಮುಖನೆ ಗಣಪತಿಯೆ ನಿನಗೆ ವಂದನೆ ನಂಬಿದವರ ಬಾಯಿನ ಕಲ್ಪತರು ನೀನೆ, ನ- ನಾನೇ ವೀಣೆ ನೀನೇ ತಂತಿ ಅವನೇ ವೈನಿಕಾ ಅವನೇ ವೈನಿಕ, ಕ- ಕೃಷ್ಣ ಎಂದರೆ ಭಯವಿಲ್ಲ, ಕೃಷ್ಣಾ ಎನದೆ ಸುಖವಿಲ್ಲ, ಕೃಷ್ಣ ಎಂದರೆ ದಿನವಿಲ್ಲ ಬಾಯಾರಿಕೆ ಹಸಿವಿನ ಹಂಗಿಲ್ಲ, ಕೃಷ್ಣ ಹರೇ ಜೈ ಜೈ ಕೃಷ್ಣ ಹರೇ, ಕೃಷ್ಣ ಹರೇ ಜೈ ಜೈ ಕೃಷ್ಣ ಹರೇ” ರ- ರಾಜ ಮುದ್ದು ರಾಜಾ ನೂಕುವಂತ ಕೋಪ ನನ್ನಲ್ಲೇಕೆ ರಾಜ ಮುದ್ದು ರಾಜ, ಜ- “ಜಯತು ಜಯ ವಿಠಲ ನಿನ್ನ ನಾಮವು ಶಾಂತಿಧಾಮವು ಸೌಖ್ಯದಾ ರಾಮ ಜಯತು ಜಯ ವಿಠಲ. ತೀರಾ ಹಿಂದಿನ ಕಾಲವೂ ಅಲ್ಲ, ಆಧುನಿಕ ಯುಗವಂತೂ ಅಲ್ಲ ,ಮಧ್ಯ ಕಾಲದ ನಮ್ಮ ಬಾಲ್ಯ ಹೀಗಿತ್ತು. ಒಂದು ಎರಡು ಬಾಳೆಲೆ ಹರಡು ಮೂರು ನಾಲ್ಕು ಅನ್ನ ಹಾಕು ಐದು ಆರು ಬೇಳೆ ಸಾರು ಏಳು ಎಂಟು ಪಲ್ಯಕ್ಕೆ ದಂಟು ಒಂಬತ್ತು ಹತ್ತು ಎಲೆ ಮುದುರೆತ್ತು ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು. ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ.
ರಾಧಾಕೃಷ್ಣ 🦚💙
839 views
16 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #🙏ತಿರುಪತಿ ತಿಮ್ಮಪ್ಪ #ಶ್ರೀನಿವಾಸ ಕಲ್ಯಾಣ 🌷🙏 ಪದ್ಮಾವತಿಯೊಂದಿಗೆ ಶ್ರೀನಿವಾಸನ ಕಲ್ಯಾಣ ಮಾಡಿಸಿದ ಯಶೋಧ :- ದ್ವಾಪರ ಯುಗದ ಕೃಷ್ಣನ ತಾಯಿ ಯಶೋದೆಗೂ, ಕಲಿಯುಗದ ಶ್ರೀನಿವಾ ಸನಿಗೂ ಎತ್ತಣಿಂದ ಎತ್ತ ಸಂಬಂಧ ಎಂದು ಯೋಚಿಸ ಹೊರಟರೆ ಇದು ಭಗವಂತನ ಸಂಕಲ್ಪ. ಕೃಷ್ಣನ ವರದಿಂದ ಕಾರಣ ಜನ್ಮಳಾದಳು ಬಕುಳಾದೇವಿ. ಕಾರ್ಯಕಾರಣಕ್ಕಾಗಿ ಭೃಗು ಮಹರ್ಷಿಯ ನಿಮಿತ್ತ ಶಾಪದಿಂದ ಮಹಾ ವಿಷ್ಣು,ತನ್ನ ಪತ್ನಿ ಮಹಾಲಕ್ಷ್ಮಿಯನ್ನು ಹುಡುಕುವ ಸಲುವಾಗಿ ತನ್ನ ದಿವ್ಯ ರೂಪ ವನ್ನು ವೈಕುಂಠದಲ್ಲಿ ಬಿಟ್ಟು ಮಾನವ ಶರೀರದಿಂದ ಶ್ರೀನಿವಾಸನಾಗಿ ಧರೆಯಲ್ಲಿ ಅವತರಿಸಿದನು. ಧರೆಗಿಳಿದ ಕಾರಣ ಮಾನವ ಸಹಜ ವಾಗಿ ಹಸಿವು ನೀರಡಿ ಕೆ ಗಳಿಂದ ಬಳಲಿ ಒಂದು ಮರದ ಕೆಳಗಿನ ಹುತ್ತದಲ್ಲಿ ಸೇರಿದನು. ತ್ರಿಲೋಕ ಸಂಚಾರಿ ಆದ ನಾರದರು, ಶ್ರೀನಿವಾಸನ ಹಸಿವು- ಬಾಯಾರಿಕೆ- ಬಳಲಿಕೆ ಗಳನ್ನು ತಿಳಿಸುವ ಸಲುವಾಗಿ ಕೊಲ್ಲಾಪುರಕ್ಕೆ ನಡೆದರು. ಪತಿಯ ಮೇಲಿನ ಕೋಪದಿಂದ ವೈಕುಂಠವನ್ನು ತೊರೆದು ಭೂಲೋಕದ ಕೊಲ್ಲಾಪುರ ದಲ್ಲಿ ನೆಲೆಯಾಗಿದ್ದ ಮಹಾಲ ಕ್ಷ್ಮಿಗೆ ಶ್ರೀನಿವಾಸ ಪಡುತ್ತಿದ್ದ ಕಷ್ಟವನ್ನು ತಿಳಿಸಿದರು ತನ್ನ ಪತಿ ಹಸಿವು ಬಳಲಿಕೆಯಿಂದ ಇರುವುದನ್ನು ತಿಳಿದು ಲಕ್ಷ್ಮಿಗೆ ಸಹಿಸಲಾಗ ಲಿಲ್ಲ. ಆಕೆಯ ಸಿಟ್ಟು ಇನ್ನೂ ಹೋಗಿರದ ಕಾರಣ ಅವಳು ಶ್ರೀನಿವಾಸ ಇದ್ದಲ್ಲಿಗೆ ಬರಲಿಲ್ಲ. ಆದರೆ, ದೇವಲೋಕದ ಬ್ರಹ್ಮ ಮತ್ತು ಶಿವನಲ್ಲಿ ಮೊರೆ ಹೋದಳು. ಆಲಿಸಿದ ಬ್ರಹ್ಮನು ಧೇನುವಾಗಿ, ಶಿವನು ಕರುವಾಗಿ ಭೂಮಿಗೆ ಬಂದು ಚೋಳರಾಜನ ಗೋ ಶಾಲೆ ಸೇರಿದರು. ಆ ನಂತರ ಗೋಶಾಲೆಯ ಹಸುಗಳ ಗುಂಪಿನಲ್ಲಿ ಸೇರಿಕೊಂಡು ಶ್ರೀನಿವಾಸನ ಆಶ್ರಯ ತಾಣವಾದ ಹುತ್ತದ ಬಳಿಗೆ ಬಂದ ಕಾಮಧೇನು ಹಾಲು ತುಂಬಿದ ಕೆಚ್ಚಲಿನಿಂದ ಶ್ರೀನಿವಾಸನ ಬಾಯಿಗೆ ಬೀಳುವಂತೆ ಹಾಲು ಸುರಿಸಿ ಹಸಿವು ತಣಿಸಿತು. ಆದರೆ ಒಂದೆರಡು ದಿನದೊಳಗೆ ಈ ವಿಷಯ ಚೋಳ ರಾಜನಿಗೆ ತಿಳಿದು ಅವನು ಗೋ ಶಾಲೆಯ ಗೋಪಾಲಕನಿಗೆ ಪರೀಕ್ಷಿಸಲು ಹೇಳಿದನು. ಗೋಪಾಲಕನು ಹುತ್ತದೊಳಗೆ ಹಾಲು ಸುರಿಸುತ್ತಿದ್ದ ಕಾಮಧೇನುವನ್ನು ಕಂಡ ಸಿಟ್ಟಿನಿಂದ ಹಸುವಿಗೆ ಹೊಡೆಯಲು ಕೈಲಿದ್ದ ಕೋಲನ್ನು ಅದರ ಕಡೆಗೆ ಗುರಿ ಯಿಟ್ಟು ಬೀಸಿ ಒಗೆದನು ಬೀಸಿ ಬಂದ ಕೋಲಿನ ಪೆಟ್ಟು ಕಾಮಧೇನು ವಿಗೆ ಬೀಳದಂತೆ ಶ್ರೀನಿವಾಸ ತನ್ನ ತಲೆಯನ್ನು ಅಡ್ಡ ಹಿಡಿದನು. ಆ ದೊಣ್ಣೆ ಯ ಪ್ರಹಾರದ ಪೆಟ್ಟು ಅವನ ಹಣೆಗೆ ಬಡಿಯಿತು. ಶ್ರೀನಿವಾಸನ ಹಣೆಗೆ ಬಲ ವಾದ ಪೆಟ್ಟು ಬಿದ್ದು ರಕ್ತ ಸುರಿಯಿತು. ನೋವಿನಿಂದ ನರಳ ತೊಡಗಿದ. ಈ ವಿಚಾರ ದೇವಲೋಕದಲ್ಲಿ ತಿಳಿದು ಚರ್ಚೆಯಾಯಿತು. ಅಲ್ಲಿದ್ದ ಗುರು ಬೃಹಸ್ಪತಿ ಗಳು ತಾವೇ ಶ್ರೀನಿವಾಸನಿಗೆ ಆರೈಕೆ ಮಾಡುವುದಾಗಿ ಹೊರಟ ಸಮಯದಲ್ಲಿ ನಾರದರು ಆಗಮಿಸಿ ಅವರೊಂದು ಸಲಹೆ ಕೊಟ್ಟರು. ಬೃಹಸ್ಪತಿಗಳೇ ನೀವು ಹೋಗಿ ಔಷಧಿ ಕೊಡಿ ಆದರೆ ಶ್ರೀನಿವಾಸನಿಗೆ ಆರೈಕೆ ಮಾಡಲು ಅಲ್ಲೊಬ್ಬ ತಾಯಿ ಕಾದಿದ್ದಾಳೆ. ಅವಳು ಶ್ರೀನಿವಾಸನ ಆರೈಕೆ ಪ್ರೀತಿಯಿಂದ ಮಾಡುತ್ತಾಳೆ ಆ ಜವಾಬ್ದಾರಿಯನ್ನು ಅವಳಿಗೆ ಬಿಡಿ ಎಂದರು. ಅಲ್ಲಿದ್ದವರೆಲ್ಲ ಆಶ್ಚರ್ಯ ಚಕಿತರಾಗಿ ಇದೇನು ಶ್ರೀನಿವಾಸನಿಗೆ ತಾಯಿಯೇ ಯಾರು ಆಕೆ ?ಎಂದಾಗ, ನಾರದರು ದ್ವಾಪರ ಯುಗದ ನೆನಪು ಮಾಡಿ ದರು. ಮೂರು ಸಾವಿರ ವರ್ಷಗಳ ಹಿಂದೆ ಮಥುರಾ ನಗರದಲ್ಲಿ ವಸುದೇವ ದೇವಕಿಗೆ ಹುಟ್ಟಿದ ಮಗು ಕೃಷ್ಣನನ್ನು,‌ ಕಂಸನದೃಷ್ಟಿಯಿಂದ ತಪ್ಪಿಸಲು, ವಿಷ್ಣುವಿನ ಆದೇಶದಂತೆ, ವಸುದೇವನು ಆಗ ತಾನೇ ಹುಟ್ಟಿದ ಹಸು ಗೂಸನ್ನು ಬುಟ್ಟಿಯಲ್ಲಿ ಹೊತ್ತು ತಂದು ಗೋಕುಲದ ಯಶೋಧ -ನಂದರ ಮನೆಯಲ್ಲಿ ಬಿಡುತ್ತಾನೆ. ಮುಂದೆ ಕೃಷ್ಣನು, ತಾಯಿ ಯಶೋಧೆಯ ಮುದ್ದಿನ ಆರೈಕೆಯಲ್ಲಿ ಬೆಳೆಯುತ್ತಾನೆ. ಇತ್ತ ಮಧುರಾದಲ್ಲಿ ಕೃಷ್ಣನ ಸೋದರ ಮಾವ ಕಂಸನು ಕೃಷ್ಣನನ್ನು ಸಂಹರಿಸಲು ತಂತ್ರರೂಪಿಸಿ ಕೃಷ್ಣ - ಬಲರಾಮರನ್ನು ಮಥುರಾಕ್ಕೆ ಕರೆಸುವ ಸಲುವಾಗಿ ಕುಸ್ತಿ ಕಾಳಗ ಸ್ಪರ್ಧೆ ಏರ್ಪಡಿಸಿ ಅವರಿಗೆ ಬರಲು ಆಹ್ವಾನ ಕೊಟ್ಟು ಕರೆ ತರಲು ಅಕ್ರೂರನನ್ನು ಕಳಿಸಿದನು. ಕಂಸನ ಕುತಂತ್ರವನ್ನು ಬಲ್ಲ ಕೃಷ್ಣನು ಮಧುರಾಕ್ಕೆ ಬೇಕೆಂದೆ ಹೋಗಿ ಅಲ್ಲಿ ಕಂಸನ ಸಂಹಾರ ಮಾಡಿ ಹೆತ್ತವರಾದ ವಸುದೇವ - ದೇವಕಿಯರನ್ನು ಬಂಧಮುಕ್ತ ಗೊಳಿಸಿದನು. ಆನಂತರ ಮತ್ತೆ ಅವನೆಂದೂ ಗೋಕುಲಕ್ಕೆ ಬರಲೇ ಇಲ್ಲ. ದೇಶದ ಉದ್ದಗಲಕ್ಕೂ ಸಂಚರಿಸುವುದೇ ಆಯಿತು. ಎಷ್ಟೋ ವರ್ಷಗಳು ಕಳೆದ ಮೇಲೆ ಒಮ್ಮೆ ಯಶೋಧಾ ತಾಯಿ ಕೃಷ್ಣನ ಅರಮನೆಗೆ ಬಂದಾಗ ಅಷ್ಟಮಹಿಷಿಯರಲ್ಲದೆ ಅದರ ಮೇಲೆ ಮತ್ತೆ 16,000 ಕನ್ಯೆಯರನ್ನು ವಿವಾಹವಾದ ವಿಷಯ ತಿಳಿದು ಯಶೋಧ ತಾಯಿಗೆ ಬೇಸರವಾಯಿತು. ಕೃಷ್ಣನ ಮದುವೆಯನ್ನು ತಾನೇ ಮುಂದೆ ನಿಂತು ಮಾಡಿ ಆ ಸಂಭ್ರಮವನ್ನು ಕಣ್ತುಂಬಿ ಕೊಳ್ಳುವ ಕನಸನ್ನು ಕಂಡಿದ್ದಳು. ಬೇಸರದಿಂದ ನೀನು ನನಗೆ ತಿಳಿಸದೆ ಮದುವೆಯಾಗಿರುವೆ ನಿನ್ನ ವಿವಾಹ ನೋಡುವ ಭಾಗ್ಯವನ್ನು ನನಗೆ ಕರುಣಿಸಲಿಲ್ಲ ಎಂದು ಕೃಷ್ಣನಿಗೆ ಹೇಳಿದಾಗ ಕೃಷ್ಣನು ಬೇಸರ ಪಡಬೇಡ ಮುಂದಿನ ಕಲಿಯುಗದಲ್ಲಿ ನಿನ್ನ ಕೈಯಾರೆ ನನ್ನ ವಿವಾಹವನ್ನು ಸಂಭ್ರಮ ದಿಂದ ಮಾಡುವೆ ಎಂದು ತಾಯಿ ವರ ಕೊಟ್ಟಿದ್ದ. ಅದರಂತೆ ಕಲಿಯುಗ ಕಾಲಿಟ್ಟಾಗ ಯಶೋದೆ ಸಪ್ತಗಿರಿಯಲ್ಲಿ ಬಕುಳಾ ದೇವಿಯಾಗಿ ಅವತರಿಸಿ ವರಾಹನದಿ ತಟದ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಬರುತ್ತಿರುವ ಆಕೆಯನ್ನು ನಾರದರು ದೇವಲೋಕದ ಸಭೆಯಲ್ಲಿದ್ದವರಿಗೆ ತೋರಿಸಿದರು. ಇತ್ತ ಪೆಟ್ಟು ತಿಂದು ರಕ್ತ ಸುರಿಯುತ್ತಿದ್ದ ಶ್ರೀನಿವಾಸ ಒಬ್ಬನೇ ಪುಷ್ಕರಣಿಯ ಮೆಟ್ಟಿಲ ಮೇಲೆ ಕುಳಿತಿದ್ದನು. ಆಗತಾನೆ ಸ್ನಾನ ಮುಗಿಸಿ ಬಂದ ಬಕುಳಾ ದೇವಿ ಆತನನ್ನು ನೋಡಿ ಯಾರಪ್ಪ ನೀನು? ಎಲ್ಲಿಂದ ಬಂದಿರುವೆ? ಏನಿ ದು ನಿನ್ನ ಗಾಯ? ಎಂದೆಲ್ಲಾ ಕೇಳಿದಾಗ ಶ್ರೀನಿವಾಸನು ಅಮ್ಮಾ ಎಂದು ಕರೆಯುತ್ತಿದ್ದಂತೆ, ಬಕುಳಾ ದೇವಿಗೆ ಅಮ್ಮಾ ಎಂಬ ಶಬ್ದ ಕಿವಿಗೆ ಬೀಳುತ್ತಿದ್ದ ಹಾಗೆ ತಾಯಿಯ ಕರುಳು ಚುರುಕ್ ಎಂದಿತು. ಅಮ್ಮಾ ನನ್ನ ಹೆಸರು ಶ್ರೀನಿ ವಾಸ ಸ್ವಲ್ಪ ಪೆಟ್ಟು ಬಿದ್ದಿದೆ ಎಂದನು ತಾಯಿ ಕರುಳು ಕೇಳಬೇಕಲ್ಲವೇ? ಇದೇನು ಸಣ್ಣ ಗಾಯವೇ? ಎಷ್ಟೊಂದು ರಕ್ತ ಸುರಿಯುತ್ತಿದೆ ಎಂದು ತನ್ನ ಸೀರೆಯ ಸೆರಗಿನ ಅಂಚನ್ನು ಹರಿದು ಹಣೆಗೆ ಕಟ್ಟಲು ಹೊರಟಾಗ ಅಮ್ಮ ತಡೆಯಿರಿ ಎಂದು ಧ್ವನಿ ಕೇಳಿದಾಗ ತಿರುಗಿ ನೋಡಿದಳು, ಕೈಯಲ್ಲಿ ಔಷಧಿ ಹಿಡಿದು ಧನ್ವಂತರಿಯಂತೆ ಒಬ್ಬ ವ್ಯಕ್ತಿ ನಿಂತಿದ್ದನು. ಆತ ಬೇರೆ ಯಾರೊ ಆಗಿರದೇ ದೇವಗುರು ಬೃಹಸ್ಪತಿ. ಆ ಔಷಧಿ ಯನ್ನು ಬಕುಳಾದೇವಿ ಕಟ್ಟಲು ಹಿಡಿದಿದ್ದ ಸೀರೆಯ ತುಂಡಿನೊಳಗೆ ಹಾಕಿ ಈಗ ಇದನ್ನು ಕಟ್ಟಿ ಎಂದನು. ಬಕುಳಾದೇವಿ ಔಷಧಿ ತುಂಬಿದ ಸೆರಗಿನ ಅಂಚನ್ನು ಶ್ರೀನಿವಾಸನ ಹಣೆಗೆ ಕಟ್ಟಿ, ಬಂದ ವ್ಯಕ್ತಿಯ ಕಡೆ ತಿರುಗಿ ಸಮಯಕ್ಕೆ ಸರಿಯಾಗಿ ಬಂದಿರುವೆಯಲ್ಲ ಇದು ಯಾವ ಜನ್ಮದ ಸಂಬಂಧವೂ ನಾಕಾಣೆ ಇವನು ಅಮ್ಮ ಎಂದು ಕರೆದಾಗಲೇ ನನಗೆ ನನ್ನ ಮಗ ಎಂದು ಅನಿಸುತ್ತಿದೆ. ಹೀಗೆ ಆರೈಕೆ ಮಾಡು ತ್ತಲೇ ಶ್ರೀನಿವಾಸನಿಗೆ ಯಾರಪ್ಪ ನೀನು ಎಲ್ಲಿಂದ ಬಂದಿರುವೆ ನಿನ್ನ ತಂದೆ ತಾಯಿ ಬಂಧು ಬಳಗ ಎಲ್ಲಿರುವರು ಎಂದು ಕೇಳಿದಾಗ ಅಮ್ಮ ನನಗೆ ಯಾರು ಇಲ್ಲ ನೀನೇ ನನ್ನ ತಾಯಿ ಎಂದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ತಾಯಿಯ ಮಮತೆ ಉಕ್ಕಿಬಂದು ಈ ರೀತಿ ಪೆಟ್ಟು ಮಾಡಿದವರು ಯಾರು ಅಂತ ಹೇಳು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಳು. ಹೋಗಲಿ ಬಿಡಮ್ಮ ಕಳೆದು ಹೋದ ವಿಚಾರ ಬೇಡ ಈಗ ನನಗೆ ಹಸಿವಾಗುತ್ತಿದೆ ಅಮ್ಮ ಹೇಳು ಅಮ್ಮ ಹೇಳು ನಿನ್ನ ಮನೆ ಎಲ್ಲಿದೆ? ನೀನು ಯಾರ ಜೊತೆ ಇರುವೆ ಎಂದನು ಬಕುಳಾದೇವಿ ನನಗೂ ಯಾರು ಇಲ್ಲ ನಾನು ಒಬ್ಬಂಟಿಯಾಗಿರುವೆ ಎಂದಳು. ಶ್ರೀನಿವಾಸ ಹೇಳಿದ ಯಾರೂ ಇಲ್ಲ ಎಂದು ಏಕೆ ಹೇಳುವೆ, ಭಗವಂತ ನಿನ್ನ ಜೊತೆಗಿರುತ್ತಾನೆ. ಏಕಾಂಗಿ ಯಾಗಿ ಯಾರು ಇರುವು ದಿಲ್ಲ ಇನ್ನು ಮುಂದೆ ನಾನೇ ನಿನ್ನ ಮಗ ನೀನೇ ನನಗೆ ಅಮ್ಮ ಎಂದನು. ಈ ರೀತಿಯಾಗಿ ಅಮ್ಮ ಮಗನ ಬಾಂಧವ್ಯ ಮುಂದುವರೆಯಿತು. ತಾಯಿಯ ಆರೈಕೆಯಲ್ಲಿ ಶ್ರೀನಿವಾಸ ಚೇತರಿಸಿ ಕೊಂಡನು. ಮುಂದೆ ಆಕಾಶ ರಾಜನ ಮಗಳಾದ ಪದ್ಮಾವತಿ ಯೊಂದಿಗೆ ಮಗ ಶ್ರೀನಿವಾಸನ ಮದುವೆಯನ್ನು ಬಕುಳಾದೇವಿಯೇ ಮುಂದೆ ನಿಂತು, ಹಿಂದೆ ಅಂತ ಮದುವೆ ಯಾಗಿಲ್ಲ ಮುಂದೆ ಆಗುವುದಿಲ್ಲ ಅನ್ನುವ ಹಾಗೆ, ಶ್ರೀನಿವಾಸನು ತನ್ನ ಮದುವೆಗಾಗಿ ಕುಬೇರನ ಹತ್ತಿರ ಸಾಲ ಮಾಡಿ ಬಾರಿ ಮದುವೆಯನ್ನು ಸಂಭ್ರಮ ಸಡಗರದಿಂದ ಮಾಡಿ ಕೊಂಡನು. ಅಂತಹ ಶ್ರೀನಿವಾಸ ಪದ್ಮಾವತಿ ರ ಕಲ್ಯಾಣಕ್ಕೆ ಸಾಕ್ಷಿಯಾಗಿ ದ್ವಾಪರದ ಯಶೋದೆ ಕಲಿಯುಗದಲ್ಲಿ ಬಕುಳಾದೇವಿಯಾಗಿ ಆ ಸಂಭ್ರಮವನ್ನು ಕಣ್ತುಂಬಿ ಕೊಂಡಳು. ( ತ್ರೇತಾಯುಗದಲ್ಲಿ ರಾವಣ ಸೀತೆಯನ್ನು ಅಪಹರಿಸಿದಾಗ ಸೀತೆಯ ಬದಲಿಗೆ ಅಲ್ಲಿ ‘ವೇದವತಿ’ ಇದ್ದು, ರಾಮ ರಾವಣರ ಯುದ್ಧವೆಲ್ಲ ಮುಗಿದ ನಂತರ ರಾಮನು ವೇದವತಿಗೆ ಏನು ವರ ಬೇಕು ಎಂದು ಕೇಳಿದಾಗ ನೀನು ನನ್ನನ್ನು ವಿವಾಹ ಆಗಬೇಕು ಎಂದಳಂತೆ ರಾಮ ಆಗ ಏಕ ಪತ್ನಿ ವ್ರತಸ್ಥ ನಾದುದರಿಂದ ಮುಂದಿನ ಯುಗದಲ್ಲಿ ಶ್ರೀನಿವಾಸನಾಗಿ ಬಂದು ನಿನ್ನನ್ನು ವಿವಾಹ ಆಗಬೇಕು ಎಂದು ಮಾತು ಕೊಟ್ಟಿದ್ದನಂತೆ ಅದರಂತೆ ವೇದವತಿಯೇ ಪದ್ಮಾವತಿಯಾಗಿ ಜನಿಸಿ ರಾಮನೆ ಶ್ರೀನಿವಾಸನಾಗಿ ಅವಳ ಇಚ್ಛೆಯಂತೆ ವಿವಾಹವಾದನು. ಮುಂದೆ ಲಕ್ಷ್ಮಿಗೂ ಮತ್ತು ಪದ್ಮಾವತಿ ಸರಿ ಬರದೆ ಶ್ರೀನಿವಾಸ ತಿರುಪತಿಯಲ್ಲಿ ಕಲ್ಲಾದ ಎನ್ನುವ ಕಥೆಯು ಇದೆ.) ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ! ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಮ್ !! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ #ashanagabhushan #ಆಶಾನಾಗಭೂಷಣ
ರಾಧಾಕೃಷ್ಣ 🦚💙
693 views
16 days ago
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ ಕಟುಕನ ಬಾಯಲ್ಲಿ ಹರಿ ಶ್ರೀಮನ್ನಾರಾಯಣ :- ಗುಜರಾತ್ ರಾಜ್ಯದ ಒಂದು ಗ್ರಾಮದಲ್ಲಿ "ದಾರುಬ್ರಹ್ಮ" ಎಂಬ ವ್ಯಕ್ತಿಯು ಮಾಂಸದ ವ್ಯಾಪಾರ ಮಾಡುತ್ತಿದ್ದನು. ತುಂಬಾ ಪ್ರಾಮಾಣಿಕ ವ್ಯಕ್ತಿ. ಅವನು ಮಹಾವಿಷ್ಣುವಿನ ಪರಮ ಭಕ್ತನಾಗಿದ್ದನು. ಅವನು ಬೆಳಿಗ್ಗೆಯಿಂದ ರಾತ್ರಿ ಮಲಗುವ ತನಕ ಹಾಗೂ ಮಾಂಸದ ವ್ಯಾಪಾರ ಮಾಡುವಾಗ ಭಗವಂತನ ನಾಮಸ್ಮರಣೆ ಮಾಡುತ್ತಿದ್ದನು. ಸದಾ ಅವನ ಬಾಯಲ್ಲಿ, "ಶ್ರೀಮನ್ನಾರಾಯಣ ಹರಿ, ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ" ಎಂದು ಪುಂಖಾನುಪುಂಕವಾಗಿ ಅವನ ಬಾಯಲ್ಲಿ ಬರುತ್ತಿತ್ತು. ಇದು ಅಲ್ಲಿ ಬರುವ ಎಲ್ಲಾ ವ್ಯಾಪಾರಿಗಳಿಗೂ, ಸುತ್ತುಮುತ್ತು ಇರುವವರಿಗೂ ತಿಳಿದಿತ್ತು. ಅವರೆಲ್ಲರೂ ದಾರುಬ್ರಹ್ಮನ ಕುರಿತು ಮಾತನಾಡುತ್ತಿದ್ದರು. ಅವನು ನಾರಾಯಣನ ಪರಮಭಕ್ತ. ವ್ಯಾಪಾರ ಮಾಡುವಾಗ ಹಣ ಎಷ್ಟು ಕೊಟ್ಟರು ಎಂದು ನೋಡುವುದಿಲ್ಲ, ಮತ್ತು ಮಾಂಸದ ವ್ಯಾಪಾರ ಮಾಡುತ್ತಾನೆ. ಆದರೆ ತಾನು ತಿನ್ನುವುದಿಲ್ಲ. ಅವನ ಭಕ್ತಿಗೋ, ಒಳ್ಳೆಯತನಕ್ಕೋ, ಮುಗ್ಧತೆಗೋ, ಯಾವುದೇ ಗಿರಾಕಿಗಳು ಅವನಿಗೆ ಎಂದೂ ಮೋಸ ಮಾಡುತ್ತಿರಲಿಲ್ಲ. ಗಿರಾಕಿಗಳು ಅರ್ದ ಕಿಲೋ ಕೊಡು ಎಂದರೆ, ಈಗ್ಲೇ ಕೊಡುತ್ತೀನಿ, ಜೈ ಶ್ರೀ ಹರಿ ಎಂದು, ಅವರಿಂದ ಹಣ ತೆಗೆದುಕೊಳ್ಳುವಾಗ, ಚಿಲ್ಲರೆ ಕೊಡುವಾಗ, ಜೈ ಶ್ರೀ ಹರಿ, ಎಂದು ಹೇಳುತ್ತಿದ್ದನು. ಅಂಗಡಿಯ ಸುತ್ತಮುತ್ತಲು ಭಕ್ತಿಯ ವಾತಾವರಣ ತುಂಬಿತ್ತು. ಒಂದು ದಿನ ಅವನು ಮನೆಯಿಂದ ಅಂಗಡಿಗೆ ಬರುತ್ತಿರುವಾಗ, ದಾರಿಯಲ್ಲಿ ಒಂದು ಕಲ್ಲು ಎಡವಿದನು. ಬಗ್ಗಿ ಕಲ್ಲನ್ನು ಎತ್ತಿ ಬದಿಗೆ ಹಾಕಲು ಹೊರಟಿದ್ದನು. ಆದರೆ ಅವನ ಕಣ್ಣಿಗೆ ಕಲ್ಲು ಆಕರ್ಷಣೀಯವಾಗಿ ಕಂಡಿತು. ಖುಷಿಯಾದ ಅವನು ವಾಹ್ ಗೋಲಾಕಾರದ ಈ ಕಪ್ಪನೆಯ ಕಲ್ಲು ಎಷ್ಟು ಚೆನ್ನಾಗಿದೆ ಹಾಗೂ ದೊಡ್ಡದಾಗಿದೆ. ಅಂಗಡಿಯಲ್ಲಿ ಯಾವುದಾದರೂ ಕೆಲಸಕ್ಕೆ ಬರುತ್ತದೆ. ಎಂದು ಕೊಂಡು ಅಂಗಡಿಗೆ ತಂದನು. ಅದೇ ವೇಳೆಗೆ ವ್ಯಾಪಾರಿಯೊಬ್ಬ ಬಂದು, ಒಂದು ಕಿಲೋ ಮಟನ್ ಕೊಡಲು ಹೇಳಿದ. ದಾರುಬ್ರಹ್ಮ ತೂಗು ತಕ್ಕಡಿಯಲ್ಲಿ ತನಗೆ ಸಿಕ್ಕ ಕಲ್ಲು ಇಟ್ಟನು. ಇನ್ನೊಂದು ಬದಿ ಮಟನ್ ಹಾಕಿದ. ಅದು ಒಂದು ಕಿಲೋ ತೂಗಿತು. ಆಗ ದಾರು ಅಂದುಕೊಂಡ, ಓಹೋ ಈ ಕಲ್ಲು ಒಂದು ಕಿಲೋ ತೂಗುತ್ತದೆ ಎಂದು. ಅದಾಗಲೇ ಮತ್ತೊಬ್ಬ ಬಂದು, ಅರ್ಧ ಕಿಲೋ ಕೊಡು ಎಂದು ಕೇಳಿದ. ತೂಕದ ತಕ್ಕಡಿಗೆ ಮಟನ್ ಹಾಕಿದ, ಆ ಕಲ್ಲು ಅರ್ದ ಕಿಲೋ ತೂಕ ತೋರಿಸಿತು. ತುಂಬಾ ಆಶ್ಚರ್ಯವಾಯಿತು. ಮೊದಲೇ ಬಂದಿದ್ದ ಗಿರಾಕಿ, ಈ ಕಲ್ಲು ಜಾದು ಮಾಡುತ್ತದೆ. ಆಗ ನನಗೆ ಕೇಳಿದಾಗ 1 ಕಿಲೋ ತೋರಿಸಿತು, ಇವನು ಅರ್ಧ ಕಿಲೋ ಕೇಳಿದ ಅದು ಈಗ ಅರ್ಧ ಕಿಲೋ ತೂಕ ತೋರಿಸುತ್ತಿದೆ. ತಕ್ಷಣ ದಾರುಬ್ರಹ್ಮ 5 ಕೆಜಿ ಮಟನ್ ಹಾಕಿದ. ಕಲ್ಲು ಸಹ 5 ಕೆಜಿ ತೂಕ ತೋರಿಸಿತು. ಇದಂತೂ ತುಂಬಾ ಆಶ್ಚರ್ಯವಾದ ವಿಚಾರ. ಒಬ್ಬರಿಂದ ಒಬ್ಬರಿಗೆ ಹೋಗಿ ಊರೆಲ್ಲ ಹರಡಿ ಎಲ್ಲರೂ ಈ ವಿಚಿತ್ರವನ್ನು ನೋಡಲು ಬಂದರು, ಮತ್ತು ಬರುತ್ತಲೇ ಇದ್ದರು. ಅಂಗಡಿಯ ಸುತ್ತಮುತ್ತ ಜಾತ್ರೆಯಂತೆ ಜನ ಸೇರುತ್ತಿದ್ದರು. ದಾರುಬ್ರಹ್ಮ ಕಲ್ಲನ್ನು ನೋಡಿ, ಇದು ನಿಜವಾಗಿ ಜಾದು ಕಲ್ಲು, ರಸ್ತೆಯಲ್ಲಿ ಬಿದ್ದಿತ್ತು ನನಗೆ ಸಿಕ್ಕಿತು. ಈ ಕಲ್ಲು ಬಂದ ಮೇಲೆ ನನಗೆ ವ್ಯಾಪಾರ ಹೆಚ್ಚಳವಾಗಿದೆ. ಶ್ರೀಮನ್ನಾರಾಯಣ ತಂದೆ ಎಲ್ಲಾ ನಿನ್ನ ಕರುಣೆ ಎಂದನು. ಕೆಲವು ಜನರು ಕಲ್ಲಿನ ಚಮತ್ಕಾರಿ ವಿಚಾರವನ್ನು ಹಳ್ಳಿಯಲ್ಲಿದ್ದ ದೇವಸ್ಥಾನದ ಮುಖ್ಯ ಪುರೋಹಿತರಿಗೆ ತಿಳಿಸಿದರು. ದೇವಸ್ಥಾನದಲ್ಲಿದ್ದ ಅರ್ಚಕರಿಗೆ ಆ ಕಲ್ಲನ್ನು ನೋಡಬೇಕೆಂದು ಕುತೂಹಲವಾಯಿತು. ಅವನ ಅಂಗಡಿಗೆ ಬಂದು, ಅಂಗಡಿಯಿಂದ ದೂರದಲ್ಲಿ ನಿಂತು ನೋಡಿದರು. ಅವನು ಹರಿಭಜನೆ ಮಾಡುತ್ತಾ, ಮಾಂಸ ಕತ್ತರಿಸುವುದನ್ನು, ತೂಕ ಮಾಡಿ ಮಾರುವುದನ್ನು, ಎಲ್ಲಾ ನೋಡಿದರು. ಅವನು ಕಲ್ಲನ್ನು ತೆಗೆಯದೆ. ಎಷ್ಟು ಬೇಕು ಎಂದು ಹಾಕಿದರೆ ಆ ಕಲ್ಲು ಅಷ್ಟೇ ತೂಗುತ್ತಿತ್ತು. ಈ ಚಮತ್ಕಾರವನ್ನು ನೋಡಿದ ದೇವಾಲಯದ ಅರ್ಚಕರಿಗೆ ಮೈ ರೋಮಾಂಚನವಾಯಿತು. ಭಾವುಕರಾದ ಅವರು, ಕಸಾಯಿ ದಾರುಬ್ರಹ್ಮ ನ ಅಂಗಡಿ ಸಮೀಪ ಬಂದರು. ತನ್ನ ಕೆಲಸದಲ್ಲಿಯೇ ನಿರತನಾಗಿದ್ದ ದಾರುಬ್ರಹ್ಮ ಪಕ್ಕನೆ ತಿರುಗಿ ದೇವಸ್ಥಾನದ ಮುಖ್ಯಸ್ಥರನ್ನು ನೋಡಿ ಆಶ್ಚರ್ಯವಾಯಿತು. ಓಡಿಬಂದು, ಬ್ರಾಹ್ಮಣ ದೇವ, ಕಸಾಯಿ ಅಂಗಡಿಯಲ್ಲಿ, ನೀವು? ಗಾಬರಿಯಿಂದ ನನ್ನಿಂದ ಏನಾಗಬೇಕು? ಏನಾದರೂ ತಪ್ಪಾಯಿತೆ ಎಂದು ಕೈಮುಗಿದು ಕೇಳಿದ. ದಾರು, ನಿನ್ನ ಅಂಗಡಿಯಲ್ಲಿ ಒಂದು ಚಮತ್ಕಾರಿ ಕಲ್ಲು ಇದೆ ಎಂದು ಜನ ಹೇಳಿದರು. ಅದನ್ನು ನೋಡಲು ಬಂದಿದ್ದೆ, ದೂರದಿಂದಲೇ ನಿಂತು ನಾನು ನೋಡಿದೆ ಅದು ಸಾಧಾರಣ ಕಲ್ಲಲ್ಲ. ಭಗವಾನ್ ವಿಷ್ಣುವಿನ ಅಂಶವಾದ ಸಾಲಿಗ್ರಾಮ. ಅಂತಹ ಪವಿತ್ರವಾದ ಮಹಾವಿಷ್ಣುವಿನ ವಾಸವಿರುವ ಸಾಲಿಗ್ರಾಮವನ್ನು ಇಂಥ ಮಲಿನ ಜಾಗದಲ್ಲಿ ಇಟ್ಟುಕೊಳ್ಳಬಾರದು ಮಹಾಪಾಪ ಎಂದರು. ಅರ್ಚಕರು ಹೇಳಿದುದನ್ನು ಕೇಳಿದ ದಾರುಬ್ರಹ್ಮ ನು ಸ್ವಾಮಿ ನನ್ನನ್ನು ಕ್ಷಮಿಸಿ. ನನಗೆ ಗೊತ್ತಿಲ್ಲದೆ ಭಗವಾನ್ ಮಹಾವಿಷ್ಣುವಿನ ಸಾಲಿಗ್ರಾಮವನ್ನು ನನ್ನ ಕಸಾಯಿಖಾನೆ ಅಂಗಡಿಯಲ್ಲಿ ಇಟ್ಟುಕೊಂಡು ಘೋರ ಅಪರಾಧ ಎಸಗಿದ್ದೇನೆ. ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ನನ್ನನ್ನು ಕ್ಷಮಿಸು ತಂದೆ ಎಂದು ಬಹಳ ನೊಂದುಕೊಂಡು, ಬ್ರಾಹ್ಮಣ ದೇವ, ನೀವು ಮಂದಿರದಲ್ಲಿ ಭಗವಂತನ ಪೂಜೆ ಮಾಡುವವರು. ಈ ವಿಷ್ಣುವಿನ ಕಲ್ಲನ್ನು ನೀವೇ ತೆಗೆದುಕೊಂಡು ಹೋಗಿ, ಪೂಜೆ ಮಾಡಿ ನನ್ನನ್ನು ಅನುಗ್ರಹಿಸಿ ಎಂದು ಕೈಮುಗಿದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಆಗ ಅರ್ಚಕರು, ದಾರುಬ್ರಹ್ಮ ನಿನ್ನದೇನೂ ತಪ್ಪಿಲ್ಲ . ನಿನಗೆ ಸಾಲಿಗ್ರಾಮ ಎಂದು ತಿಳಿಯದು. ಅದಕ್ಕೆ ಹಾಗಾಗಿದೆ ಇನ್ನು ಮುಂದೆ, ಭಗವಾನ್ ಮಹಾವಿಷ್ಣು ವಾಸವಿರುವ ಸಾಲಿಗ್ರಾಮವನ್ನು ಮಂದಿರದಲ್ಲಿಟ್ಟು ಅಭಿಷೇಕ, ಪೂಜೆ, ಅರ್ಚನೆ ನೈವೇದ್ಯ , ಮಂಗಳಾರತಿ ಮಾಡುವೆ. ಆಗ ಎಲ್ಲರಿಗೂ ಒಳ್ಳೆಯದಾಗುತ್ತದೆ. ನಿನಗೂ ಒಳ್ಳೆಯದಾಗುತ್ತದೆ ಎಂದರು. ದಾರು ಭಕ್ತಿಯಿಂದ ಸಾಲಿಗ್ರಾಮವನ್ನು ಅರ್ಚಕರಿಗೆ ಕೊಟ್ಟನು. ಅವರು ಅದನ್ನು ಶ್ರದ್ಧಾಭಕ್ತಿಂದ ತೆಗೆದುಕೊಂಡು ಹೋಗಿ ಗರ್ಭಗುಡಿಯಲ್ಲಿಟ್ಟು ಭಕ್ತಿ ಹಾಗೂ ಸಂತೋಷದಿಂದ ಪೂಜೆ ಅರ್ಚನೆ ಮಾಡುತ್ತಾ ಬಂದರು. ಕೆಲವು ದಿನಗಳೇ ಕಳೆಯಿತು. ಒಂದು ರಾತ್ರಿ ಅರ್ಚಕರಿಗೆ ಕನಸು ಬಿತ್ತು. ಅರ್ಚಕರು ಶೇಷಶಾಯಿಯಾದ ಮಹಾವಿಷ್ಣುವಿನ ಮುಂದೆ ನಿಂತಿದ್ದರು. ಹೇ ಬ್ರಾಹ್ಮಣೋತ್ತಮ , ಕಸಾಯಿಖಾನೆಯವನು ಕೊಟ್ಟ ಸಾಲಿಗ್ರಾಮವನ್ನು ನೀನು ಚೆನ್ನಾಗಿ ಪೂಜೆ ಅರ್ಚನೆ ಮಾಡುತ್ತಿರುವೆ ಅದರಿಂದ ನಾನು ಸಂತುಷ್ಟನಾಗಿದ್ದೇನೆ. ಆದರೆ ನನಗೆ ಕಸಾಯಿಖಾನೆಯ ದಾರು ಬ್ರಹ್ಮನ ಮುಗ್ಧ ಭಕ್ತಿ, ನಿತ್ಯ ವೂ ನನ್ನನ್ನು ವರ್ಣನೆ ಮಾಡಿ ಆನಂದಿಸುವುದು, ದಿನದ ಪ್ರತಿ ಕ್ಷಣವೂ ನನ್ನ ನಾಮಸ್ಮರಣೆ ಮಾಡುವುದು, ಅವನ ಅನಂತವಾದ ಭಕ್ತಿ ಶ್ರದ್ಧೆ ಪ್ರೀತಿ ಇವು ನನಗೆ ಬಹಳ ಇಷ್ಟ. ಆದುದರಿಂದ ಕಸಾಯಿಖಾನೆಯವನಿಗೆ ಸಾಲಿಗ್ರಾಮವನ್ನು ಕೊಡು ಎಂದನು. ಬ್ರಾಹ್ಮಣನು ಹೆದರಿ, ಹೇ ಮಹಾವಿಷ್ಣು ನಾನು ಮಾಡುವ ಪೂಜೆಯಲ್ಲಿ ಲೋಪ ವಾಯಿತೇ, ನನಗೆ ತಿಳಿದ ಮಟ್ಟಿಗೆ ನಾನು ಶ್ರದ್ಧೆಯಿಂದ ಮಾಡಿದೆ ಹೇ ಭಗವಂತ ನನ್ನನ್ನು ಕ್ಷಮಿಸು ತಂದೆ ಎನ್ನುತ ಕೈ ಮುಗಿದು ಅಳುತ್ತಾ ಭಗವಂತನ ಪಾದಕಮಲಗಳನ್ನು ಕಣ್ಣೀರಿನಿಂದ ತೋಯಿಸಿದನು. ಪರಮಾತ್ಮನು ಬ್ರಾಹ್ಮಣನನ್ನು ಮೇಲೆತ್ತಿ, ಬ್ರಾಹ್ಮಣೋತ್ತಮ ನಿನ್ನ ಪೂಜೆ ಸೇವೆಯಿಂದ ನಾನು ಸಂತುಷ್ಟನಾಗಿದ್ದೇನೆ. ಆದರೆ, ಕಸಾಯಿಖಾನೆಯ ದಾರುಬ್ರಹ್ಮ ಮಾಡುವ ನಾಮಸ್ಮರಣೆ ನನಗೆ ಕೇಳುವುದು ತುಂಬಾ ಇಷ್ಟ. ಆದ್ದರಿಂದ ಸಾಲಿಗ್ರಾಮ ಅವನಿಗೆ ಕೊಡು ಎಂದನು. ಬ್ರಾಹ್ಮಣನಿಗೆ ಎಚ್ಚರವಾಯಿತು. ತಕ್ಷಣ ಸಾಲಿಗ್ರಾಮವನ್ನು ತೆಗೆದುಕೊಂಡು ಕಸಾಯಿಖಾನೆಯವನ ಅಂಗಡಿಗೆ ಹೋಗಿ, ದಾರುಬ್ರಹ್ಮ, ಭಗವಾನ್ ಮಹಾವಿಷ್ಣುವಿಗೆ ನೀನು ಅಂತರಾಳದಿಂದ ಮಾಡುವ ನಾಮಸ್ಮರಣೆಯೇ ಅವನಿಗೆ ಬೇಕಂತೆ, ಅವನು ನಿನ್ನ ಬಾಯಿಂದ ಬರುವ ನಾಮಸ್ಮರಣೆ ಹಿತವಂತೆ. ಎಂತೆಂಥ ತಪಸ್ಸು ಮಾಡಿದ ಋಷಿಮುನಿಗಳಿಗೆ ಅಲಭ್ಯವಾಗಿರುವ ಶ್ರೀಮನ್ನಾರಾಯಣನಿಗೆ ನಿನ್ನ ಅಂತರಂಗದ ಭಕ್ತಿಯೇ ಇಷ್ಟ. ಆದುದರಿಂದ ಸಾಲಿಗ್ರಾಮವನ್ನು ನೀನೇ ಅಂಗಡಿಯಲ್ಲಿ ಇಟ್ಟುಕೋ ಎಂದು ಕೊಟ್ಟನು. ದಾರುಬ್ರಹ್ಮ ಸಾಲಿಗ್ರಾಮವನ್ನು ತೆಗೆದುಕೊಂಡು ಆನಂದಭಾಷ್ಪ ಸುರಿಸುತ್ತಾ ಎದೆಗೊತ್ತಿಕೊಂಡು ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಎಂದು ಮೈಮರೆತನು. ಮತ್ತೆ ದಾರು ಬ್ರಹ್ಮಮಾಡುವ ಭಗವಂತನ ನಾಮಸ್ಮರಣೆಯ ತರಂಗಗಳು ಅಲೆ ಅಲೆ ಯಾಗಿ ಎಲ್ಲೆಡೆ ವ್ಯಾಪಿಸಿತು. ನಾರಾಯಣ ನಾರಾಯಣ ಜಯ ಗೋವಿಂದ ಹರೇ ನಾರಾಯಣ ನಾರಾಯಣ ಜಯ ಗೋವಿಂದ ಹರೇ ಕರುಣಾಪಾರಾವಾರ ವರುಣಾಲಯ ಗಂಭೀರ ನಾರಾಯಣ ಘನನೀರದಸಂಕಾಶ ಕೃತಕಲಿ ಕಲ್ಮಶ ನಾಶನ ನಾರಾಯಣ ಯಮುನಾ ತೀರ ವಿಹಾರ ! ಧೃತ ಕೌಸ್ತುಭ ಮಣಿಹಾರ ನಾರಾಯಣ ಪಿತಾಂಬರ ಪರಿಧಾನ ಸುರ ಕಲ್ಯಾಣ ವಿಧಾನ ನಾರಾಯಣ! ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಶ್ರೀಮನ್ನಾರಾಯಣ ಹರಿ ಶ್ರೀಮನ್ನಾರಾಯಣ ಹರಿ ಭಜಮನ ಶ್ರೀಮನ್ನಾರಾಯಣ ಭಜಮನ ಶ್ರೀಮನ್ನಾರಾಯಣಾಅಅಅ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
ರಾಧಾಕೃಷ್ಣ 🦚💙
911 views
24 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ರುಕ್ಮಿಣಿ ಕೃಷ್ಣನ ಮೊದಲನೆಯ ಪತ್ನಿ ಹಿಂದೂ ಧರ್ಮದಲ್ಲಿ, ರುಕ್ಮಿಣಿ ಕೃಷ್ಣನ ಮೊದಲನೆಯ ಪತ್ನಿ ಹಾಗು ದ್ವಾರಕ ನಗರದ ರಾಣಿ. ಕೃಷ್ಣ ಧೀರತನದಿಂದ ರುಕ್ಮಿಣಿಯನ್ನು ಅವಳ ಬೇಡಿಕೆ ಮೇಲೆ, ಅವಳ ಇಚ್ಛೆ ವಿರುದ್ದವಾಗಿ ನಡೆಯುತಿದ್ದ ಅವಳ ಮದುವೆಯಿಂದ ಅಪಹರಿಸುತ್ತಾನೆ (ಭಾಗವತ ಪುರಾಣದಲ್ಲಿ ಇದರ ವರ್ಣನೆ ಇದೆ). ಕೃಷ್ಣನ ೧೬,೧೦೮ ರಾಣಿಯರಲ್ಲಿ, ರುಕ್ಮಿಣಿ ಮೊದಲನೇ ಹಾಗು ಅತ್ಯಂತ ಪ್ರಮುಖ. ರುಕ್ಮಿಣಿಯನ್ನು ಲಕ್ಷ್ಮಿಯ ಅವತಾರ ಎಂದು ಭಾವಿಸಲಾಗಿದೆ.ದೇವಿಯನ್ನು ವಿವಿಧ ಸಾಹಿತ್ಯದಲ್ಲಿ ಕೃಷ್ಣನ ಮುಖ್ಯ ಅಥವಾ ಪ್ರಧಾನ ಪತ್ನಿ ಎಂದು ಪರಿಗಣಿಸಲಾಗುತ್ತದೆ. ಪ್ರಾಥಮಿಕವಾಗಿ ವಾರಕರಿ ಮತ್ತು ಹರಿದಾಸ ಸಂಪ್ರದಾಯದಲ್ಲಿ ಪೂಜಿಸಲಾಗುತ್ತದೆ ಮತ್ತು ಹೆಚ್ಚಾಗಿ ಶ್ರೀ ವೈಷ್ಣವ ಧರ್ಮದಲ್ಲಿ ಲಕ್ಷ್ಮಿ-ನಾರಾಯಣರನ್ನು ಪೂಜಿಸಲಾಗುತ್ತದೆ. ರುಕ್ಮಿಣಿಯನ್ನು ಮುಖ್ಯವಾಗಿ ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದಲ್ಲಿ ಪೂಜಿಸಲಾಗುತ್ತದೆ.ಮಹಾರಾಷ್ಟ್ರದ ಜನರು ಅವಳನ್ನು ವಿಠ್ಠಲನೊಂದಿಗೆ (ಕೃಷ್ಣನ ಪ್ರಾದೇಶಿಕ ರೂಪ) ಪೂಜಿಸುತ್ತಾರೆ ಮತ್ತು ಅವಳನ್ನು ರಖುಮಾಯಿ ಎಂದು ಕರೆಯುತ್ತಾರೆ.ದಕ್ಷಿಣ ಭಾರತದಲ್ಲಿ, ಅವಳನ್ನು ಕೃಷ್ಣ ಮತ್ತು ಅವನ ಇನ್ನೋರ್ವ ಮುಖ್ಯ ಪತ್ನಿ ಸತ್ಯಭಾಮಾ ಜೊತೆಗೆ ಪೂಜಿಸಲಾಗುತ್ತದೆ. ರುಕ್ಮಿಣಿ ಎಂಬ ಹೆಸರು ಸಂಸ್ಕೃತ ಪದ ರುಕ್ಮಾದಿಂದ ಬಂದಿದೆ, ಇದರರ್ಥ 'ವಿಕಿರಣ', 'ಸ್ಪಷ್ಟ' ಅಥವಾ 'ಪ್ರಕಾಶಮಾನ'. ಈ ಹೆಸರು 'ಚಿನ್ನದ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆ' ಎಂದೂ ಅರ್ಥೈಸಬಹುದು. ಇತರ ಹೆಸರುಗಳು ಮತ್ತು ವಿಶೇಷಣಗಳು ಹೀಗಿವೆ: ಶ್ರೀ - ಲಕ್ಷ್ಮಿ, ಅದೃಷ್ಟದ ದೇವತೆ ವೈದರ್ಭಿ - ವಿದರ್ಭ ರಾಜ್ಯದಿಂದ ಬಂದವಳು. ಭೈಷ್ಮಿ - ಭೀಷ್ಮಕನ ಮಗಳು. ರಖುಮಾಯಿ - ತಾಯಿ ರುಕ್ಮಿಣಿ ಚಿರ್ಯೌವನ - ಶಾಶ್ವತವಾಗಿ ಯುವತಿ. ಪ್ರದ್ಯುಮ್ನ ಜನನಿ - ಪ್ರದ್ಯುಮ್ನನ ತಾಯಿ. ವೈಖಾನಸಾಗಮದ ಪ್ರಕಾರ, ಕೃಷ್ಣನ ಬಲಭಾಗದಲ್ಲಿ ರುಕ್ಮಿಣಿಯನ್ನು ಚಿತ್ರಿಸಬೇಕು.ಅವಳ ಚಿತ್ರ ಚಿನ್ನದ ಹಳದಿ ಮೈಬಣ್ಣ. ಅವಳ ಕೂದಲನ್ನು ಹೂವುಗಳಿಂದ ಅಲಂಕರಿಸಬೇಕು.ಆಕೆಯ ಬಲಗೈ ಕೆಳಗೆ ಇರಬೇಕು ಮತ್ತು ಎಡಗೈಯಲ್ಲಿ ಕಮಲವನ್ನು ಹಿಡಿದಿರಬೇಕು. ಅವಳು ವಿವಿಧ ಆಭರಣಗಳಿಂದ ಅಲಂಕರಿಸಲ್ಪಟ್ಟಿದ್ದಾಳೆ.ತನ್ನ ಸ್ವಯಂವರದಲ್ಲಿ ತನ್ನೊಂದಿಗೆ ಓಡಿಹೋಗುವಂತೆ ಕೃಷ್ಣನನ್ನು ವಿನಂತಿಸಲು ರುಕ್ಮಿಣಿಯು ಬ್ರಾಹ್ಮಣನನ್ನು ಕಳುಹಿಸಿದಳು. ಆ ಬ್ರಾಹ್ಮಣನು ರಾಜಕುಮಾರಿಯನ್ನು ಸುಂದರವಾದ ಕೈಗಳು, ಹೆಣೆಯಲ್ಪಟ್ಟ ವಸ್ತ್ರಗಳು ಮತ್ತು ಚಂದ್ರನನ್ನು ಹೋಲುವ ಮುಖವನ್ನು ಹೊಂದಿರುವಂತೆ ಕಾವ್ಯಾತ್ಮಕವಾಗಿ ವಿವರಿಸುತ್ತಾನೆ.ಇತರ ಕಾವ್ಯಗಳಲ್ಲೂ ಅವಳು ಸುಂದರಿ ಎಂದು ಸ್ಥಿರವಾಗಿ ವಿವರಿಸಲಾಗಿದೆ. ದಕ್ಷಿಣ ಭಾರತದ ಪ್ರತಿಮಾಶಾಸ್ತ್ರದ ಸಂಪ್ರದಾಯದಲ್ಲಿ, ರುಕ್ಮಿಣಿ, ಸತ್ಯಭಾಮಾ ಕೃಷ್ಣನ ಜೊತೆಗೆ, ಪ್ರಾಥಮಿಕ ಪತ್ನಿಯರಾಗಿ ಕಾಣಿಸಿಕೊಳ್ಳುತ್ತಾರೆ. ಮಹಾಕಾವ್ಯ ಮಹಾಭಾರತ ಮತ್ತು ಇತರ ಪುರಾಣ ಗ್ರಂಥಗಳ ಪ್ರಕಾರ, ರಾಜಕುಮಾರಿ ರುಕ್ಮಿಣಿಯು ವಿದರ್ಭ ರಾಜ್ಯದ ರಾಜನಾದ ಭೀಷ್ಮಕನಿಗೆ ಜನಿಸಿದಳು ಮತ್ತು ರುಕ್ಮಿ, ರುಕ್ಮರಥ, ರುಕ್ಮಬಾಹು, ರುಕ್ಮಕೇಶ ಮತ್ತು ರುಕ್ಮನೇತ್ರ ಎಂಬ ಐವರು ಅಣ್ಣಂದಿರನ್ನು ಹೊಂದಿದ್ದಳು.ವಿಷ್ಣು ಪುರಾಣ, ಭಾಗವತ ಪುರಾಣ, ಮತ್ತು ಪದ್ಮ ಪುರಾಣದಂತಹ ಅನೇಕ ಪುರಾಣಗಳು ಆಕೆಯನ್ನು ವಿಷ್ಣು ದೇವರ ಪತ್ನಿಯಾದ ಲಕ್ಷ್ಮಿ ದೇವಿಯ ಅವತಾರವೆಂದು ಹೊಗಳುತ್ತವೆ. ವಿವಾಹ ರುಕ್ಮಿಣಿಯು ಒಮ್ಮೆ ಕೃಷ್ಣನ ಬಗ್ಗೆ ಮತ್ತು ಅವನ ವೀರ ಕಾರ್ಯಗಳಾದ ಕ್ರೂರ ರಾಜ ಕಂಸನನ್ನು ವಧಿಸಿದ ಮತ್ತು ದುಷ್ಟ ರಾಜ ಜರಾಸಂಧನನ್ನು ವಿರೋಧಿಸಿದ ಬಗ್ಗೆ ಕೇಳಿದಳು ಎಂದು ಭಾಗವತ ಪುರಾಣ ಹೇಳುತ್ತದೆ. ಅವಳು ಅವನನ್ನು ಪ್ರೀತಿಸುತ್ತಿದ್ದಳು ಮತ್ತು ಅವನನ್ನು ಮದುವೆಯಾಗಲು ಬಯಸಿದ್ದಳು.ರುಕ್ಮಿಣಿ ಕಲ್ಯಾಣದ ಪ್ರಸಂಗ, ಮತ್ತು ರುಕ್ಮಿಣಿ ತನ್ನ ಅಪೇಕ್ಷಿತ ಪತಿಗೆ ತೋರುವ ಭಕ್ತಿಯನ್ನು ಶುಕ ಋಷಿ ರಾಜ ಪರೀಕ್ಷಿತನಿಗೆ ವಿವರಿಸುತ್ತಾನೆ. ರುಕ್ಮಿಣಿಯ ಪೋಷಕರು ಸಂತೋಷಪಟ್ಟರು ಮತ್ತು ಅವರ ಅನುಮತಿಯನ್ನು ನೀಡಿದರು, ಆದರೆ ಜರಾಸಂಧನ ಮಿತ್ರನಾಗಿದ್ದ ರುಕ್ಮಿ ಅದನ್ನು ಬಲವಾಗಿ ವಿರೋಧಿಸಿದನು. ಬದಲಾಗಿ, ಅವನು ತನ್ನ ಸ್ನೇಹಿತ, ಚೇದಿ ಸಾಮ್ರಾಜ್ಯದ ಪಟ್ಟದ ರಾಜಕುಮಾರ ಮತ್ತು ಕೃಷ್ಣನ ಸೋದರಸಂಬಂಧಿಯಾದ ಶಿಶುಪಾಲನನ್ನು ಮದುವೆಯಾಗಲು ಪ್ರಸ್ತಾಪಿಸಿದನು. ಭೀಷ್ಮಕನು ಇದಕ್ಕೆ ಸಮ್ಮತಿಸಿದನು ಮತ್ತು ದುಃಖಿತಳಾದ ರುಕ್ಮಿಣಿಯು ತಕ್ಷಣವೇ ನಂಬಿಗಸ್ತ ಬ್ರಾಹ್ಮಣನನ್ನು ಕರೆದು ಕೃಷ್ಣನಿಗೆ ಸಂದೇಶವನ್ನು ತಲುಪಿಸಲು ಕೇಳಿಕೊಂಡಳು. ಸಂದೇಶದಲ್ಲಿ, ಅವಳು ತನ್ನ ಪ್ರೀತಿಯ ಬಗ್ಗೆ ಕೃಷ್ಣನಿಗೆ ಬರೆದಳು ಮತ್ತು ತನ್ನ ಮದುವೆಗೆ ಮೊದಲು ಅಂಬಿಕಾ (ಪಾರ್ವತಿ) ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತನ್ನನ್ನು ಅಪಹರಿಸಲು ಕೇಳಿಕೊಂಡಳು. ದ್ವಾರಕೆಯಲ್ಲಿ ಸಂದೇಶವನ್ನು ಸ್ವೀಕರಿಸಿದ ಕೃಷ್ಣ, ರುಕ್ಮಿಣಿಯ ಪತ್ರವನ್ನು ಸ್ವೀಕರಿಸಿದೆ ಮತ್ತು ಅವಳನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಳ್ಳಲು ಬರುವುದಾಗಿ ತಿಳಿಸಲು ಬ್ರಾಹ್ಮಣನಿಗೆ ಹೇಳಿದನು. ಕೃಷ್ಣನು ತಕ್ಷಣವೇ ತನ್ನ ಅಣ್ಣನಾದ ಬಲರಾಮನೊಂದಿಗೆ ವಿದರ್ಭಕ್ಕೆ ಹೊರಟನು. ಈ ಮಧ್ಯೆ ವಿದರ್ಭದ ರಾಜಧಾನಿ ಕುಂಡಿನದಲ್ಲಿ ಭೀಷ್ಮಕನು ರುಕ್ಮಿಣಿಯ ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದನು.ರುಕ್ಮಿಣಿಯು ರಾಜರ ಆತಿಥೇಯವನ್ನು ಗಮನಿಸುತ್ತಾ ಚಿಂತಿತಳಾದಳು, ತಾನು ಕಳುಹಿಸಿದ ಬ್ರಾಹ್ಮಣನು ಸುರಕ್ಷಿತವಾಗಿ ತಲುಪಲಿಲ್ಲವೋ ಅಥವಾ ಮತ್ತು ಸರ್ವೇಶ್ವರ ತನ್ನ ಪ್ರಯತ್ನಗಳಿಗೆ ಸಹಾಯ ಮಾಡುವನೋ ಇಲ್ಲವೋ ಎಂದು ಆಶ್ಚರ್ಯಪಟ್ಟಳು.ಕೃಷ್ಣನು ತನ್ನನ್ನು ಮದುವೆಯಾಗಲು ಇನ್ನೂ ಬಂದಿಲ್ಲ ಎಂಬ ಅವಳ ದುಃಖವು ಎಷ್ಟು ಅಗಾಧವಾಗಿತ್ತು ಎಂದರೆ ಅವಳು ತಿನ್ನಲು ನಿರಾಕರಿಸಿದಳು, ತನ್ನ ಗಿಣಿಗೆ ಹಾಡಲು ನಿರಾಕರಿಸಿದಳು.ಶಿಶುಪಾಲ, ಜರಾಸಂಧ ಸೇರಿದಂತೆ ಮಿತ್ರರು ಆಗಮಿಸಿದ್ದರು. ಕೃಷ್ಣ ಮತ್ತು ಬಲರಾಮ ಕೂಡ ಆಗಮಿಸಿದ್ದರು, ಮತ್ತು ಭೀಷ್ಮಕ ಅವರನ್ನು ಸ್ವಾಗತಿಸಿದರು. ರುಕ್ಮಿಣಿಯು ಎಲ್ಲಾ ಭರವಸೆಯನ್ನು ಕಳೆದುಕೊಂಡಿದ್ದಳು, ಆದರೆ ಸಂದೇಶವಾಹಕನು ತನ್ನ ಕೋರಿಕೆಯನ್ನು ಕೃಷ್ಣನು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.ಮರುದಿನ, ಅವಳು ಅಂಬಿಕಾ ದೇವಿಗೆ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ಹೋದಳು. ಅವಳು ಮದುವೆಯ ಸ್ಥಳಕ್ಕೆ ಹೋದಾಗ, ಅವಳು ಕೃಷ್ಣನನ್ನು ನೋಡಿದಳು ಮತ್ತು ಅವನು ಶೀಘ್ರದಲ್ಲೇ ಅವಳನ್ನು ಅವನೊಂದಿಗೆ ತನ್ನ ರಥಕ್ಕೆ ಕರೆದುಕೊಂಡು ಹೋದನು. ಜರಾಸಂಧನ ಎಲ್ಲಾ ಪಡೆಗಳು ತ್ವರಿತವಾಗಿ ಅವರನ್ನು ಬೆನ್ನಟ್ಟಲು ಪ್ರಾರಂಭಿಸಿದವು, ಆದರೆ ಅವರು ಬಲರಾಮ ಮತ್ತು ಅವನ ಸೈನ್ಯದಿಂದ ಹಿಮ್ಮೆಟ್ಟಿಸಿದರು. ರುಕ್ಮಿ ಕೃಷ್ಣ ಮತ್ತು ರುಕ್ಮಿಣಿಯನ್ನು ಬೆನ್ನಟ್ಟಿದನು.ಅವರು ಕೃಷ್ಣನಿಗೆ ಹೋರಾಟಕ್ಕೆ ಸವಾಲು ಹಾಕಿದನು, ಆದರೆ ಮೊದಲಿನಿಂದ ಸುಲಭವಾಗಿ ಸೋಲಿಸಲ್ಪಟ್ಟನು. ರುಕ್ಮಿಣಿಯು ತನ್ನ ಸಹೋದರನ ಪ್ರಾಣವನ್ನು ಉಳಿಸುವಂತೆ ಕೃಷ್ಣನನ್ನು ಬೇಡಿಕೊಂಡಳು. ಆದಾಗ್ಯೂ, ಅವನು ಶಿಕ್ಷೆಯ ಗುರುತಾಗಿ ರುಕ್ಮಿಯ ಕೂದಲು ಮತ್ತು ಮೀಸೆಯನ್ನು ಬೋಳಿಸಿದನು ಮತ್ತು ಅವನನ್ನು ಮುಕ್ತಗೊಳಿಸಿದನು.ಕೃಷ್ಣ ಮತ್ತು ರುಕ್ಮಿಣಿಯವರು ದ್ವಾರಕಾವನ್ನು ತಲುಪಿದರು, ಅಲ್ಲಿ ಅವರನ್ನು ಬಹಳ ವೈಭವ ಮತ್ತು ಸಮಾರಂಭದಿಂದ ಸ್ವಾಗತಿಸಲಾಯಿತು, ನಂತರ ಮದುವೆಯಾಯಿತು. ಕೃಷ್ಣನ ಉಪಾಯ ಭಾಗವತ ಪುರಾಣವು ಶುಕ ಋಷಿಯ ಮೂಲಕ ಒಂದು ಪ್ರಸಂಗವನ್ನು ವಿವರಿಸುತ್ತದೆ, ಅಲ್ಲಿ ಇನ್ನೂ ಅವಿವಾಹಿತ ರುಕ್ಮಿಣಿ ರತ್ನದ ಬೀಸಣಿಗೆಯಿಂದ ಗಾಳಿ ಹಾಕುತ್ತಾ, ತನ್ನ ನಿರೀಕ್ಷಿತ ಪತಿ ಕೃಷ್ಣನಿಗೆ ದುಬಾರಿ ಕವಚ ಮತ್ತು ಬೆರಗುಗೊಳಿಸುವ ಹಾರವನ್ನು ಧರಿಸಲು ಪ್ರಾರಂಭಿಸುತ್ತಾಳೆ. ಕೃಷ್ಣನು ಸಂತೋಷಪಟ್ಟರೂ ಸಹ, ಅವನು ರಾಜಕುಮಾರಿಯನ್ನು ಹಲವಾರು ಸುಂದರ ಮತ್ತು ಶಕ್ತಿಯುತ ರಾಜರು ಬಯಸಿದ್ದರು ಎಂಬ ಅಂಶವನ್ನು ಸೂಚಿಸುತ್ತಾನೆ ಮತ್ತು ಅವನು ಅವರಿಗೆ ಸಮಾನನಲ್ಲ ಎಂದು ಹೇಳುತ್ತಾನೆ ಮತ್ತು ಅವಳನ್ನು ರಕ್ಷಿಸಲು ಅವನು ತನ್ನ ಸಾಮ್ರಾಜ್ಯವನ್ನು ಕಳೆದುಕೊಂಡಿದ್ದನು.ತನ್ನ ವರನನ್ನಾಗಿ ಆಯ್ಕೆ ಮಾಡುವಲ್ಲಿ ಅವಳು ದೂರದೃಷ್ಟಿ ಹೊಂದಿರಲಿಲ್ಲ ಮತ್ತು ಈಗ ಅವಳು ತನ್ನಂತಹ ಕ್ಷತ್ರಿಯನನ್ನು ಆರಿಸಬೇಕಾಯಿತು ಎಂದು ಅವನು ಟೀಕಿಸುತ್ತಾನೆ.ರುಕ್ಮಿಣಿಯ ಹೃದಯವು ನಡುಗಿತು, ಅವಳ ಕೆಂಪು ಉಗುರುಗಳು ನೆಲವನ್ನು ಗೀಚಿದವು ಮತ್ತು ಅವಳ ಕಣ್ಣುಗಳಿಂದ ಕಣ್ಣೀರು ಹರಿಯಿತು. ಅವಳು ನೆಲದ ಮೇಲೆ ಬಿದ್ದಳು, ಅವಳ ಕೂದಲು ಚದುರಿತು.ಕೃಷ್ಣನು ಅವಳನ್ನು ಬೇಗನೆ ಅವಳ ಮೇಲಕ್ಕೆತ್ತಿದನು ಮತ್ತು ಅವನು ಕೇವಲ ತಮಾಷೆ ಮಾಡುತ್ತಿದ್ದಾನೆ ಎಂದು ಅವಳಿಗೆ ಭರವಸೆ ನೀಡಿದನು.ಅವಳ ಪರಿತ್ಯಾಗದ ಭಯವು ಅವಳಿಂದ ದೂರ ಹೋಗುತ್ತಿದೆ, ರಾಜಕುಮಾರಿ ಅವನನ್ನು ಶ್ಲಾಘಿಸುತ್ತಾಳೆ, ಅವನ ವೈಭವಗಳನ್ನು ಹೊಗಳುತ್ತಾಳೆ ಮತ್ತು ಅವನನ್ನು ತನ್ನ ಆತ್ಮ, ಅವಳ ಸ್ವಯಂ ಪ್ರಜ್ಞೆ ಎಂದು ಸಂಬೋಧಿಸುತ್ತಾಳೆ. ✍🏻 Narayana Shasthry
ರಾಧಾಕೃಷ್ಣ 🦚💙
1K views
24 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #🙏 ಓಂ ನಮಃ ಶಿವಾಯ ಚಂಡಿಕೇಶ್ವರ:- ಮಹಾದೇವನ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಹೋದಾ ಗ ಪ್ರಕಾರದಲ್ಲಿ ಪ್ರದಕ್ಷಿಣೆ ಯನ್ನು ಅರ್ಧ ಚಂದ್ರಾಕಾರ ಮಾಡುತ್ತೇವೆ. ಇದನ್ನು 'ಸೋಮಸೂತ್ರ' ಎನ್ನುತ್ತಾರೆ. ಶಿವನ ಪಾಣಿಪೀಠದ ಗೋಮಕಿ ಬಾಯಿಂದ ತೀರ್ಥ ಬೀಳುವ ಜಾಗದವರೆಗೆ ಹೋಗುತ್ತೇವೆ. ಅದನ್ನು ದಾಟಿ ಹೋಗುವುದಿ ಲ್ಲ. ಏಕೆಂದರೆ ಶಿವನ ಶಿರದಿಂದ ಇಳಿದು ಬಂದ ಅಭಿಷೇಕದ ತೀರ್ಥದಲ್ಲಿ ಗಂಗೆ ಹಾಗೂ ಗಣಗಳು ಇರುತ್ತಾರೆ ಅಂಥ ಪವಿತ್ರ ತೀರ್ಥವನ್ನು ದಾಟಬಾರದು ಹಾಗೂ ತೀರ್ಥದಲ್ಲಿ ಶಿವನ ಸಕಾರಾತ್ಮಕ ಅಪಾರ ಶಕ್ತಿ ಇದ್ದು, ಅದರ ಪ್ರಭಾವ ದಿಂದ ಮನುಷ್ಯನ ದೇಹದ ಮುಖ್ಯವಾದ ಶಕ್ತಿ ನಷ್ಟವಾಗು ತ್ತದೆ ಎಂಬ ಕಾರಣಕ್ಕೆ ಸುತ್ತು ಪ್ರದಕ್ಷಿಣೆ ಹಾಕಬಾರದು ಎನ್ನುತ್ತಾರೆ. ಶಿವನ ದೇವಸ್ಥಾನದಲ್ಲಿ ಕೆಲವು ಆಚರಣೆಗಳನ್ನು ಕಾಣುತ್ತೇವೆ. ಆಲಯದ ಒಳಗೆ ಹೋದಾಗ ಶಿವ ದರ್ಶನ ಮಾಡಿ ಬರುವಾಗ ನಂದಿಯ ಕಿವಿಯ ಮೇಲ್ಭಾಗವನ್ನು ಹೆಬ್ಬೆರಳಿನಿಂದ ತೋರುಬೆರಳ ತನಕ ಹಿಡಿದು ಶಿವನನ್ನು ನೋಡುತ್ತಾ ಇಷ್ಟಾರ್ಥಗಳನ್ನು ಯಾರಿಗೂ ಕೇಳದಂತೆ ಹೇಳುತ್ತೇವೆ. ಧ್ಯಾನಾಸಕ್ತನಾದ ಶಿವನು ನಂದಿಯ ಮೂಲಕ ತಿಳಿಯುತ್ತಾನೆ ಎಂಬ ನಂಬಿಕೆ ಇದೆ. ಶಿವನ ದೇವಸ್ಥಾನ ದಿಂದ ವಿಭೂತಿ - ಪತ್ರೆ -ಫಲ -ಪುಷ್ಪ- ಪ್ರಸಾದ ಏನನ್ನೇ ತರುವುದಾದರೂ ಶಿವನ ಕುಟುಂಬದವನೇ ಆಗಿರುವ “ಚಂಡಿಕೇಶ್ವರ” ನ ಕಿವಿ ಬಳಿ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ತಿಳಿಸಿ ತರಬೇಕು. ಶಿವ ಮಂದಿರಗಳಲ್ಲಿ ಶಿವನ ಕುಟುಂಬವಾದ ಗಣಪತಿ, ಶಿವ- ಪಕ್ಕದ ಗುಡಿಯಲ್ಲಿ ಪಾರ್ವತಿ, ಹಾಗೆ ಸುಬ್ರಹ್ಮಣ್ಯ, ಈಶ್ವರನ ಎದುರಿಗೆ ನಂದಿ- ಹಾಗೆ ಬೃಂಗಿ ಮತ್ತು ಚಂಡಿಕೇಶ್ವರ ಮೂರ್ತಿಗಳನ್ನು ಇಟ್ಟಿರು ತ್ತಾರೆ. ಶಿವನ ಗಣಗಳಲ್ಲಿ ನಂದಿ- ಬೃಂಗಿಯರ ಹಿನ್ನೆಲೆ ಸಾಧಾರಣ ಗೊತ್ತಿರುತ್ತದೆ. 'ಚಂಡಿಕೇಶ್ವರ'ನ ಕುರಿತಾಗಿ ಒಂದು ಕಥೆ ಇದೆ. ದಕ್ಷಿಣ ಭಾರತದಲ್ಲಿ ಮಣಿಯಾರ್ ನದಿಯ ದಡದಲ್ಲಿ ಒಂದು ಅಗ್ರಹಾರವಿದ್ದು ಅಲ್ಲಿ 'ಈಚದತ್ತ' ಶರ್ಮಾ ಎಂಬ ಬ್ರಾಹ್ಮಣ ವೇದಪಂಡಿತನಿದ್ದು, ಮಕ್ಕಳಿಗೆ ವೇದ ಪಾಠ ಮಾಡುತ್ತಿದ್ದರು. ಚಂದೇಶನು ತಂದೆಯಂತೆ ವೇದಪಾರಂಗತನಾಗಿದ್ದು, ಅವನ ಆರಾಧ್ಯ ದೈವ ಶಿವನ ಭಕ್ತನಾಗಿದ್ದನು. ಶಿವಧ್ಯಾನ, ಶಿವ ಪೂಜೆ ಮಾಡುವುದರಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು. ನಿತ್ಯವೂ ಮಣಿಯಾರ್ ನದಿಯಲ್ಲಿ ಸ್ನಾನ, ದೇವತಾರಾಧನೆ ಮಾಡಿ ವೇದಾಧ್ಯಯನ ಮಾಡುತ್ತಿದ್ದ. ಅಂದು ನದಿಯಲ್ಲಿ ಸ್ನಾನ ಮಾಡಿ ನಿತ್ಯ ಕರ್ಮಗಳನ್ನು ಮುಗಿಸಿ ಬರುತ್ತಿರುವಾಗ ಒಬ್ಬ ಗೋಪಾಲಕ ಒಂದು ಹಸುವನ್ನು ಮನ ಬಂದಂತೆ ಹೊಡೆಯುತಿದ್ದ ಇದನ್ನು ಕಂಡ ಚಂದೇಶನ ಮನಸ್ಸಿಗೆ ನೋವಾಯಿತು. ಹೇಳಿದ ಹೇ ಗೋಪಾಲಕ ಗೋವು ದೈವ ಸಮಾನವಾದದು ಅದನ್ನು ಹಿಂಸಿಸುವುದು ಹೊಡೆಯುವುದು ಸರಿಯಲ್ಲ. ನಿನಗೆ ಈ ಹಸುವನ್ನು ಸಾಕುವುದು ಕಷ್ಟವಾದರೆ ನಾನು ಆದರ ಪಾಲನೆ ಪೋಷಣೆ ಮಾಡುತ್ತೇನೆ ಎಂದು ಹೇಳಿದ. ಕೋಪದಲ್ಲಿದ್ದ ಗೋಪಾಲಕ ಆಯಿತು ನನ್ನ ಎಲ್ಲಾ ಗೋವುಗಳನ್ನು ನಿನಗೆ ಕೊಡುತ್ತೇನೆ ಅದರ ಎಲ್ಲಾ ಜವಾಬ್ದಾರಿ ನಿನ್ನ ಮೇಲಿದೆ ಆದರೆ ಅದರ ಮೇಲಿನ ಹಕ್ಕು ನನ್ನದು. ಅವುಗಳ ಹಾಲು ನನಗೆ ಸಿಗಬೇಕು ಎಂದನು. ಚಂದೇಶನು ಷರತ್ತುಗಳಿಗೆ ಸಂತೋಷದಿಂದ ಒಪ್ಪಿ ಅವನು ನದಿಯ ದಡದಲ್ಲೇ ಇದ್ದು ಗೋ ಪೋಷಣೆ ಮಾಡುತ್ತಾ, ಜೊತೆ ಯಲ್ಲಿ ವೇದಾಧ್ಯಯನ ಮುಂದುವರೆಸಿದ. ಚಂದೇಶನ ಪಾಲನೆ ಪೋಷಣೆ ಯಿಂದ ಗೋವುಗಳು ತೃಪ್ತಿ ಹೊಂದಿ ಚಂದೇಶ ನನ್ನು ಪ್ರೀತಿಸತೊಡ ಗಿದವು. ಚಂದೇಶನು ನಿತ್ಯವೂ ಕಾಡಿಗೆ ಹೋಗಿ ಹುಲ್ಲು ಸೊಪ್ಪು ತಂದು ಹಸುಗಳಿಗೆ ಮೇವನ್ನು ಹಾಕುತ್ತಿದ್ದನು. ಮೇವು ತರುವ ಸಲುವಾಗಿ ಅವನ ಬಳಿ ಚಿಕ್ಕ ಕೊಡಲಿಯನ್ನು ಇಟ್ಟುಕೊಂಡಿದ್ದನು. ಚಂದೇಶನ ಆರೈಕೆಯಿಂದ ಗೋವು ಗಳು ಅವಾಗಿಯೇ ಹಾಲು ಸುರಿಸಲು ಪ್ರಾರಂಭಿಸಿದವು. ಹಾಲನ್ನು ಸಂಗ್ರಹಿಸಲು ಮಣ್ಣಿನ ದೋಣಿ ಮಾಡಿ ಹಾಲನ್ನು ಸಂಗ್ರಹಿಸುತ್ತಿದ್ದನು. ಅವನು ನಿತ್ಯ ಪೂಜೆಗಾಗಿ ನದಿಯಿಂದ ಮರಳನ್ನು ತಂದು ಶಿವಲಿಂಗ ತಯಾರಿಸಿದನು. ಮಣ್ಣಿನ ದೋಣಿಗಳಲ್ಲಿ ಹಾಲನ್ನು ಸಂಗ್ರಹಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದನು. ಒಂದು ದಿನ ಅಗ್ರಹಾರದಿಂದ ಬರುತ್ತಿದ್ದ ಒಬ್ಬ ವ್ಯಕ್ತಿ , ಗೋವುಗಳು ತಾವಾಗಿಯೇ ಹಾಲು ಸುರಿಸುವುದನ್ನು ಹಾಗೂ ಚಂದೇಶನು ಹಾಲನ್ನು ಸಂಗ್ರಹಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದನ್ನು ನೋಡಿದನು. ಇದನ್ನು ಅಗ್ರಹಾ ರದಲ್ಲಿದ್ದ ಗೋವುಗಳ ಯಜಮಾನನಿಗೆ ತಿಳಿಸಿದನು. ಯಜಮಾನ ಚಂದೇಶನ ತಂದೆಯಲ್ಲಿ ದೂರು ಹೇಳಿದನು. ತನ್ನ ಮಗ ಅನ್ಯರ ಹಸುವಿನ ಹಾಲನ್ನು ಶಿವನಿಗೆ ಅಭಿಷೇಕ ಮಾಡುವುದನ್ನು ಕೇಳಿ ಕೋಪಗೊಂಡು ಕಣ್ಣಾರೆ ನೋಡ ಬೇಕೆಂದು ಚಂದೇಶನಿದ್ದಲ್ಲಿಗೆ ಬಂದನು. ಆದರೆ ಆ ಸಮಯ ಚಂದೇಶನು ಏಕಾಗ್ರತೆಯಿಂದ ಶಿವನಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದನು. ಗೋವುಗಳು ಸಹ ನೋಡುತ್ತಿದ್ದವು “ಈಚದತ್ತ ಶರ್ಮ”ನು ಮಗನನ್ನು ಕರೆದನು, ಕೇಳಲಿಲ್ಲ ವೆಂದು ಹತ್ತಿರಕ್ಕೆ ಹೋಗಿ ಅಲುಗಾಡಿಸಿದರೂ, ಧ್ಯಾನ ಮಗ್ನ ನಾಗಿದ್ದ ಚಂದೇಶನಿಗೆ ಎಚ್ಚರ ಆಗಲಿಲ್ಲ ಕೋಪಗೊಂಡ ಈಚದತ್ತ ಹಾಲು ತುಂಬಿಸಿ ಸಂಗ್ರಹಿಸಿಟ್ಟ ಮಣ್ಣಿನ ದೋಣಿ ಗಳನ್ನು ಕಾಲಿಂದ ಒದ್ದನು. ಹಾಲು ತುಂಬಿದ ಮಣ್ಣಿನ ದೋಣಿಗಳು ಒಡೆದ ತುಂಡುಗಳು ಮರಳಿನ ಶಿವಲಿಂಗಕ್ಕೆ ತಾಗಿ ಶಿವಲಿಂಗವು ಬಿರಿಯಿತು. ತಕ್ಷಣ ಎಚ್ಚರಗೊಂಡ ಚಂದೇಶ, ಕೋಪಗೊಂಡು ತನ್ನ ಶಿವ ಧ್ಯಾನವನ್ನು ಭಂಗ ಮಾಡಿ, ಅಭಿಷೇಕಕ್ಕೆ ಇಟ್ಟ ಹಾಲಿನ ಮಡಿಕೆಗಳನ್ನು ಕಾಲಿ ನಿಂದ ಒದ್ದು ಒಡೆದು ಆ ಚೂರುಗಳಿಂದ ಶಿವನ ಲಿಂಗವನ್ನು ಭಿನ್ನ ಮಾಡಿದ ನಿನ್ನ ಕಾಲುಗಳಿಗೆ ತಕ್ಕ ಶಾಸ್ತಿ ಮಾಡುವೆ ಎಂದು ತಂದೆಯೆನ್ನದೇ ಅವನ ಎರಡು ಕಾಲುಗಳನ್ನು ಕತ್ತರಿಸಿದನು. ತಂದೆಯ ಎರಡು ಕಾಲಿನಿಂದಲೂ ರಕ್ತ ಹರಿದು ನೋವಿನಿಂದ ನರಳುತ್ತಾ ರಕ್ತದ ಮೇಲೆ ಕುಳಿತುಬಿಟ್ಟನು. ತಂದೆ ಎನ್ನದೆ ತನ್ನ ಆರಾಧ್ಯ ದೈವ ಶಿವನ ಧ್ಯಾನಕ್ಕೆ ಅಪ ಚಾರ ಮಾಡಿದವನ ಕಾಲುಗಳನ್ನು ಕತ್ತರಿಸಿದ ಚಂದೇಶನ ಭಕ್ತಿಗೆ ಮೆಚ್ಚಿ ಭಿನ್ನವಾದ ಮರಳಿನ ಲಿಂಗದೊಳಗಿಂದ ಶಿವನು ಪ್ರತ್ಯಕ್ಷನಾದನು. ಸಾಮಾನ್ಯ ಮನುಷ್ಯನಾದ ಚಂದೇಶನ ಭಕ್ತಿಗೆ ಮೆಚ್ಚಿ ಚಂದೇಶನನ್ನು ತನ್ನ ಕುಟುಂಬದ ಸದಸ್ಯನೆಂದು ಗಣಪತಿ - ಸುಬ್ರಹ್ಮಣ್ಯರ ಜೊತೆ ತನ್ನ ಮಗ ನೆಂದು ಸ್ವೀಕರಿಸಿದನು. ಚಂದೇಶನ ಹೆಸರನ್ನು ಚಂಡಿಕೇಶ್ವರ ಎಂದು ನಾಮಕರಣ ಮಾಡಿದನು. ಶಿವನ ಅನುಗ್ರಹದಿಂದ ಈಚದತ್ತ ಶರ್ಮನಿಗೆ ಕಾಲುಗಳು ಬಂದವು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ ಶಿವನ ಗುಡಿಯಲ್ಲಿ ಇರುವ ಚಂಡಿಕೇಶ್ವನ ಮುಂದೆ ಚಪ್ಪಾಳೆ ಅಥವಾ ಚಿಟಿಕೆ ಹೊಡೆಯಬೇಕು ಏಕೆಂದರೆ ಪರಮೇಶ್ವರನು ಧ್ಯಾನದಲ್ಲಿ ನಿರತನಾಗಿದ್ದು, ಚಂಡಿಕೇಶ್ವರ ಸದಾ ಕಾಲವು ಶಿವನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ಹಾಗೆಂದ ಮಾತ್ರಕ್ಕೆ ಅವನಿಗೆ ಗೊತ್ತಿಲ್ಲದಂತೆ ಭಕ್ತರು ಶಿವನ ಪತ್ರೆ- ಪುಷ್ಪ- ಪ್ರಸಾದ -ಭಸ್ಮ, ಇಂಥ ಯಾವುದೇ ವಸ್ತುವನ್ನು ತೆಗೆದು ಕೊಂಡು ಹೋಗಬೇಕಾದರೆ, ಧ್ಯಾನದಲ್ಲಿ ಮುಳುಗಿರುವ ಚಂಡಿಕೇಶ್ವರನಿಗೆ ಚಪ್ಪಾಳೆ ತಟ್ಟಿ ಎಚ್ಚರ ಮಾಡಿ ಶಿವನ ಪ್ರಸಾದಗಳನ್ನು ಅವನಿಗೆ ತೋರಿಸಿ ತೆಗೆದುಕೊಂಡು ಹೋಗುವ ಪದ್ಧತಿ ಬಂದಿದೆ. ಕೆಲವರು ಚಂಡಿಕೇಶ್ವರನಿಗೆ ಕಿವಿ ಕೇಳುವುದಿಲ್ಲ ಎಂದು ತಿಳಿದಿದ್ದಾರೆ. ಆದರೆ ಅವನು ಶಿವ ಧ್ಯಾನದಲ್ಲಿ ಮಗ್ನನಾಗಿ ರುತ್ತಾನೆ ಧ್ಯಾನದಿಂದ ಎಚ್ಚರಗೊಳಿಸಲು ಚಪ್ಪಾಳೆ ತಟ್ಟ ಬೇಕು. ಸಾಮಾನ್ಯ ಮಾನವನಾಗಿದ್ದ ಚಂದೇಶನ ಭಕ್ತಿಗೆ ಶಿವನು ಮೆಚ್ಚಿ ತನ್ನ ಮಗನಾಗಿ ಮಾಡಿಕೊಂಡನು. ಕರ ಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮಾನಸಂ ವಾಪರಾಧಮ್ ನಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ!! ನನ್ನ ಕೈ ಕಾಲುಗಳ ಕ್ರಿಯೆಗಳಿಂದ ಮಾತಿನಿಂದ, ಶರೀರದಿಂದ, ಕಣ್ಣು ಕಿವಿಗಳಿಂದ, ಮನಸ್ಸಿನಿಂದ, ಅಥವಾ ಕರ್ಮಗಳಿಂದ, ನಿರ್ಧಾರಿತ ಕೆಲಸವನ್ನು ಮಾಡುವಾಗ, ಯಾವ ಪಾಪಗಳಾಗಿದೆಯೋ, ಅವೆಲ್ಲವನ್ನು ಕ್ಷಮಿಸು ಹೇ ಮಹಾದೇವ ಶಂಭೋ ಜಯವಾಗಲಿ, ಕರುಣಾ ಸಾಗರನಾದ ನಿನ್ನಲ್ಲಿ ಅವೆಲ್ಲವನ್ನು ಅರ್ಪಿಸುತ್ತೇನೆ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ
ರಾಧಾಕೃಷ್ಣ 🦚💙
2.1K views
25 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಸೋಮವಾರ ಮಾತಂಗ ದೇವಿ ಜನ್ಮತಾಳಿದ ದಿನದ ಪ್ರಯುಕ್ತ . ತಾಯಿ ಮಾತಂಗಿ :- ಅವಳು ಒಂಬತ್ತನೇ ಮಹಾವಿದ್ಯಾ ಮತ್ತು ಸರಸ್ವತಿಯ ತಾಂತ್ರಿಕ ಸ್ವರೂಪ. 🌹. ಅವರ ಕಥೆ ಮತ್ತು ಅವರ ತಾಂತ್ರಿಕ ಮಹತ್ವದ ಬಗ್ಗೆ ಒಂದು ಮಾಹಿತಿಯು. ಈ ಪವಿತ್ರ ಮಾತಿನ ಬಹಿಷ್ಕೃತ ದೇವತೆ ಎಂದೂ ಕರೆಯಲ್ಪಡುವ ಅವರು ಸಂಪ್ರದಾಯದ ಅಂಚಿನಲ್ಲಿ ಕುಳಿತುಕೊಳ್ಳುತ್ತಾರೆ. ದೇವಾಲಯದ ಒಳಗೆ ಹಾಗೂ ಸಂಪೂರ್ಣವಾಗಿ ಹೊರಗೆ ಅಲ್ಲ. 🌹. ಹಾಗಾದರೆ ಮಾತೆ ಮಾತಂಗಿ - ಒಂಬತ್ತನೇ ಮಹಾವಿದ್ಯಾ- ಸರಸ್ವತಿಯ ತಾಂತ್ರಿಕ ರೂಪ..! ಆದರೆ, ಅವರ ವೈದಿಕ ಪ್ರತಿರೂಪಕ್ಕಿಂತ ಭಿನ್ನವಾಗಿದ್ದು, ಅವರು ಯಾವ ನಿಯಮಗಳನ್ನು ಪಾಲಿಸುವುದಿಲ್ಲ. ಆಳವಾದ, ಹೆಚ್ಚು ಕಚ್ಚಾ ಸತ್ಯವನ್ನು ಬಹಿರಂಗಪಡಿಸಲು ಅವರು ನಿಯಮಳನ್ನು ಮುರಿಯುತ್ತಾರೆ. ಸರಸ್ವತಿ ಶುದ್ಧ, ಶುಭ್ರ ಮತ್ತು ಸರಿಯಾದವಳು. ಆದರೆ ಮಾತಂಗಿಯು ಕಾಡು, ಪಚ್ಚೆ-ಹಸಿರು ಮತ್ತು ಕ್ಷಮಿಸಲಾಗದಂತೆ ಮುಕ್ತಳು. ☘️. ಈ ನಿಟ್ಟಿನಲ್ಲಿ ಮಾತೆ ಮಾತಂಗಿಯ ಕಥೆ :- 🌷. ಒಮ್ಮೆ, ಪ್ರಾಚೀನ ಕಾಲದಲ್ಲಿ, ದೇವತೆಗಳು ಶ್ರೀ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಭವ್ಯವಾದ ಔತಣವನ್ನು ಅರ್ಪಿಸಿದರು. ವಾಡಿಕೆಯಂತೆ, ದೈವಿಕ ಔತಣದಿಂದ ಉಳಿದ ಆಹಾರವನ್ನು ಎಸೆಯಲಾಗುತ್ತಿತ್ತು, ಏಕೆಂದರೆ ಯಾರೂ ಈಗಾಗಲೇ ದೇವತೆಗಳಿಗೆ ಅರ್ಪಿಸಿದ್ದನ್ನು ತಿನ್ನಲು ಧೈರ್ಯ ಮಾಡಲಿಲ್ಲ. ಆದರೆ ಆ ದೈವಿಕ ಔತಣದಿಂದ - ಉಚ್ಚಿಷ್ಟ - ದೇವಿಯ ಒಂದು ರೂಪ ಹುಟ್ಟಿಕೊಂಡಿತು. ಅವಳು ಆಚರಣೆಯಿಂದ ಹುಟ್ಟಿಲ್ಲ. ಅವಳು ತ್ಯಜಿಸಲ್ಪಟ್ಟದ್ದರಿಂದ ಜನಿಸಿದಳು. ಅವಳು ಆಹ್ವಾನಿಸದೆ ಹೊರಹೊಮ್ಮಿದಳು, ಆದರೆ ಸಂಪೂರ್ಣವಾಗಿ ದೈವಿಕಳಾಗಿದ್ದಳು. 🌷. ಅವಳ ದೇಹವು ಹಚ್ಚ ಹಸಿರಿನ ಕಾಡುಗಳಂತೆ ಹಸಿರಾಗಿತ್ತು, ಅವಳ ಕಣ್ಣುಗಳು ಬುದ್ಧಿವಂತಿಕೆಯಿಂದ ಸ್ಥಿರವಾಗಿದ್ದವು ಮತ್ತು ಅವಳ ಪ್ರಭಾವಲಯವು ನಿಷೇಧಿತ ಮಾಯಾಜಾಲದಿಂದ ತುಂಬಿತ್ತು. ದೇವರುಗಳು ಅವಳನ್ನು ವಿಸ್ಮಯದಿಂದ ನೋಡಿದರು, ಏಕೆಂದರೆ ಇದು ಮಾತಂಗಿ - ಅಶುದ್ಧ, ಅಂಚಿನಲ್ಲಿರುವ, ಅಶುದ್ಧರನ್ನು ಸ್ವೀಕರಿಸುವ ಮತ್ತು ಅವರನ್ನು ಆಧ್ಯಾತ್ಮಿಕ ಶಕ್ತಿಯ ಮೂಲಗಳಾಗಿ ಪರಿವರ್ತಿಸುವ ದೇವತೆ. 🌺..ಅಷ್ಟಕ್ಕೂ ಈ ಮಾತೆ ಮಾತಂಗಿಯು ಏನನ್ನು ಪ್ರತಿನಿಧಿಸುತ್ತಾಳೆ..!? ತಾಯಿ ಮಾತಂಗಿಯು ಮಾತು, ಸಂಗೀತ, ಕಲೆ ಮತ್ತು ಬುದ್ಧಿವಂತಿಕೆಯ ದೇವತೆ - ಆದರೆ ನೀವು ಶಾಲೆಯಲ್ಲಿ ಕಲಿಯುವ ರೀತಿಯಲ್ಲ. ಅವಳು ಆತ್ಮದ ಕಾಡು, ಪಳಗಿಸದ ಅಭಿವ್ಯಕ್ತಿಯನ್ನು ನಿಯಂತ್ರಿಸುತ್ತಾಳೆ — ನಾವು ಹೇಳಲು ಹೆದರುವ ಪದಗಳು, ಯಾರೂ ನೋಡದಿದ್ದಾಗ ಮೂಡುವ ಮಧುರ, ಸಾಮಾಜಿಕ ಕ್ರಮವನ್ನು ಮುರಿಯುವ ಸತ್ಯಗಳು. ಅವಳು ಉಚ್ಛಿಷ್ಟದ ಕ್ಷೇತ್ರವನ್ನು ಆಳುತ್ತಾಳೆ - ಉಳಿದ, ಕಲುಷಿತ, ತಿರಸ್ಕರಿಸಲ್ಪಟ್ಟ. ತಾಂತ್ರಿಕ ಆಚರಣೆಯಲ್ಲಿ, ಅವಳನ್ನು ಸಮೀಪಿಸುವುದು ಸಾಂಪ್ರದಾಯಿಕ ಮಾನದಂಡಗಳಿಂದ ಅಶುದ್ಧವೆಂದು ಪರಿಗಣಿಸಲಾದ ಅರ್ಪಣೆಗಳನ್ನು ಒಳಗೊಂಡಿರುತ್ತದೆ. ಇದು ಶುದ್ಧ ಮತ್ತು ಅಶುದ್ಧ, ಒಳ್ಳೆಯದು ಮತ್ತು ಕೆಟ್ಟದ್ದರ ದ್ವಂದ್ವಗಳನ್ನು ಮೀರುವ ಕ್ರಿಯೆಯನ್ನು ಸಂಕೇತಿಸುತ್ತದೆ. ಅವಳ ಮಾರ್ಗವು ದುರ್ಬಲ ಹೃದಯದವರಿಗೆ ಅಲ್ಲ. ಅವಳು ಸಭ್ಯ ಸಂಭಾಷಣೆಗಳ ದೇವತೆಯಲ್ಲ. ಅವಳು ಶೋಧಿಸದ ಸತ್ಯದ ದೇವತೆಯಾಗಿರುವಳು. 🌺..ಮಾತಂಗಿ ತಾಯಿ ಏಕೆ ಮುಖ್ಯ..!? ಪರಿಪೂರ್ಣತೆಯ ಗೀಳಿನ ಜಗತ್ತಿನಲ್ಲಿ, ಮಾತಂಗಿ ಹೇಳುತ್ತಾರೆ :- “ನಿಮ್ಮ ಅವ್ಯವಸ್ಥೆ ಪವಿತ್ರ. ಹೀಗಿದ್ದಾಗ ಇಲ್ಲಿ ನಿಮ್ಮ ಧ್ವನಿ ಮುಖ್ಯವಾಗಿದೆ.” ಅವಳು ತುಳಿತಕ್ಕೊಳಗಾದವರಿಗೆ, ಧ್ವನಿಯಿಲ್ಲದವರಿಗೆ, ಸಾಮಾಜಿಕವಾಗಿ ಹೊರಗಿಡಲ್ಪಟ್ಟವರಿಗೆ ಅಧಿಕಾರ ನೀಡುತ್ತಾಳೆ. ಅವಳು ಬಹಿಷ್ಕೃತರು, ಬೀದಿ ಸಂಗೀತಗಾರರು, ಪ್ರಾಸಬದ್ಧರಾಗದ ಕವಿಗಳು, ಸರದಿಯಲ್ಲಿ ಮಾತನಾಡುವ ಮಕ್ಕಳ ನಡುವೆ ನಡೆಯುತ್ತಾಳೆ ಮತ್ತು ಅವಳು ಅವರಿಗೆ ಪಿಸುಗುಟ್ಟುತ್ತಾಳೆ - “ನಿಮ್ಮನ್ನು ನೀವು ಮೌನಗೊಳಿಸಬೇಡಿ. ನಿಮ್ಮ ಧ್ವನಿ ನನ್ನ ಬಲಿಪೀಠ...” 🌺..ತಾಯಿ ಮಾತಂಗಿಯ ಸಂಕೇತ. 🌷. ಹಸಿರು ಚರ್ಮ: ಜೀವನ, ಪ್ರಕೃತಿ ಮತ್ತು ಆಕಾರವಿಲ್ಲದ ಅಭಿವ್ಯಕ್ತಿಯ ಫಲವತ್ತತೆಯನ್ನು ಪ್ರತಿನಿಧಿಸುತ್ತದೆ. 🌷. ಅವಳ ಕೈಗಳಲ್ಲಿ ವೀಣೆ : - ಸರಸ್ವತಿಯಂತೆ, ಆದರೆ ಇಲ್ಲಿ ಅದು ದಂಗೆ ಮತ್ತು ಅಂತಃಪ್ರಜ್ಞೆಯ ಸಂಗೀತವನ್ನು ನುಡಿಸುತ್ತದೆ. 🌷. ಮೂರನೇ ಕಣ್ಣು : - ಬಾಹ್ಯ ಅನುಮೋದನೆಯಲ್ಲ, ಆಂತರಿಕ ಸತ್ಯದ ಮೂಲಕ ಜಾಗೃತಿಯನ್ನು ಸಂಕೇತಿಸುತ್ತದೆ. 🌷. ಅವಳು ಶವಗಳ ಸಿಂಹಾಸನದ ಮೇಲೆ ಕುಳಿತಿರುವವಳು : - ಅವಳು ಅಹಂ, ಗುರುತು ಮತ್ತು ಸಾಮಾಜಿಕ ಸ್ಥಾನಮಾನದ ಭ್ರಮೆಯನ್ನು ಜಯಿಸುತ್ತಾಳೆ. ಅವಳನ್ನು ಉಚ್ಛಿಷ್ಟ ಮಾತಂಗಿನಿ ರೂಪದಲ್ಲಿ ಪೂಜಿಸಲಾಗುತ್ತದೆ, ಅಲ್ಲಿ ಭಕ್ತನು ಧಾರ್ಮಿಕವಾಗಿ ಅಶುದ್ಧನಾಗಿರುತ್ತಾನೆ - ಜಾತಿ ಮತ್ತು ಧಾರ್ಮಿಕ ಶ್ರೇಣಿಗಳನ್ನು ಸವಾಲು ಮಾಡುವ ದಿಟ್ಟ ನಡೆ. 🌺..ಆಂತರಿಕ ಅರ್ಥ.. ಮಾತಂಗಿಯನ್ನು ಆವಾಹಿಸಿಕೊಳ್ಳುವುದೆಂದರೆ ಅವಮಾನವನ್ನು ಬಿಡುವುದು. ಅವಳನ್ನು ಆರಾಧಿಸುವುದೆಂದರೆ ನಿಮ್ಮ ಮುರಿದ ಧ್ವನಿಯೂ ಸಹ ದೈವಿಕ ಶಕ್ತಿಯನ್ನು ಹೊಂದಿದೆ ಎಂದು ಅರಿತುಕೊಳ್ಳುವುದು. ಸತ್ಯವು ಯಾವಾಗಲೂ ಶುದ್ಧ ಪದಗಳಲ್ಲಿ ಬರುವುದಿಲ್ಲ ಎಂಬುದಕ್ಕೆ ಅವಳು ಜ್ಞಾಪನೆ. ಕೆಲವೊಮ್ಮೆ ಅದು ಕಿರುಚಾಟ, ನಿಟ್ಟುಸಿರು ಅಥವಾ ತಪ್ಪಾಗಿ ಹಾಡುವ ಹಾಡಿನಲ್ಲಿ ಬರುತ್ತದೆ. ಅವಳು ಧ್ವನಿ ಮತ್ತು ಮೌನದ ನಡುವಿನ ಅಂತರದಲ್ಲಿ, ಅಭಿವ್ಯಕ್ತಿಯ ಮೊದಲು ವಿರಾಮದಲ್ಲಿ ಮತ್ತು ನಿಮ್ಮ ಆತ್ಮವನ್ನು ಮಾತನಾಡಲು ಬೇಕಾದ ಧೈರ್ಯದಲ್ಲಿ ವಾಸಿಸುತ್ತಾಳೆ. 🌺..ಅವಳನ್ನು ಯಾವಾಗ ಹುಡುಕಬೇಕು..? :- ನಿಮ್ಮ ಧ್ವನಿ ನಿರ್ಬಂಧಿಸಲ್ಪಟ್ಟಾಗ ನೀವು ತೀರ್ಪಿಗೆ ಹೆದರಿದಾಗ ನೀವು ಸೃಜನಶೀಲತೆಯಿಂದ ತುಂಬಿರುವಾಗ ಆದರೆ ಅದನ್ನು ಹೇಗೆ ಬಿಡುಗಡೆ ಮಾಡಬೇಕೆಂದು ತಿಳಿದಿಲ್ಲದಿದ್ದಾಗ ನೀವು ನಟಿಸುವುದರಲ್ಲಿ ಆಯಾಸಗೊಂಡಾಗ ನೀವು ನಿಮ್ಮ ಸತ್ಯವನ್ನು ಹೇಳಿಕೊಳ್ಳಲು ಬಯಸಿದಾಗ - ಎಷ್ಟೇ ಕಾಡು ಅಥವಾ ಗೊಂದಲಮಯವಾಗಿದ್ದರೂ ಪರವಾಗಿಲ್ಲ..! 🌺..ಆ ದೇವತೆಯ ಪಿಸುಮಾತು.. “ನೀನು ಇರುವಂತೆಯೇ ಬಾ...ನೀನು ಪರಿಪೂರ್ಣನಾಗುವುದು ನನಗೆ ಬೇಕಾಗಿಲ್ಲ...ನಿನ್ನ ನಿಜ ನನಗೆ ಬೇಕು..! ಸ್ಪಷ್ಠ ಮಾತನಾಡು.., ನಿನ್ನ ಮೂಲಕ ನಾನು ಮಾತನಾಡುತ್ತೇನೆ...!!” ಮಾತೆ ಮಾತಂಗಿ ಪ್ರಪಂಚದಿಂದ ಓಡಿಹೋಗುವುದರ ಬಗ್ಗೆ ಅಲ್ಲ. ಅವಳು ಪವಿತ್ರ ಮಾತಿನ ಮೂಲಕ ಜಗತ್ತನ್ನು ಪುನಃ ಬರೆಯುವುದರ ಬಗ್ಗೆ. ಅವಳು ದೂರವಿಲ್ಲ. ಮಾತನಾಡಲು ಧೈರ್ಯ ಮಾಡುವ ಪ್ರತಿಯೊಂದು ಧ್ವನಿಯಲ್ಲೂ ಅವಳು ಇದ್ದಾಳೆ. ಅವಳು ಕೇವಲ ದೇವತೆಯಲ್ಲ. (✍️ಸುಧೀರ ಶ್ರೀ. ಜಾಧವ) ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್
ರಾಧಾಕೃಷ್ಣ 🦚💙
918 views
25 days ago
#ದಿನಕ್ಕೊಂದು ಕಥೆ ಭಯದೊಳಗಿನ ವಿಜಯ:- ಒಂದೂರಲ್ಲಿ ಅಜ್ಜಿ ಹಾಗೂ ಮೊಮ್ಮಗ ಇದ್ದರು. ಅಜ್ಜಿಗೆ ಮೊಮ್ಮಗನ ಮೇಲೆ ಪ್ರೀತಿ ಇತ್ತು. ಆದರೆ ಅವನ ಸಮಸ್ಯೆ ಅಜ್ಜಿಗೊಂದು ತಲೆನೋವಾಗಿತ್ತು. ಚಿಕ್ಕಂದಿನಲ್ಲೇ ತಂದೆ ತಾಯಿ ಕಳೆದುಕೊಂಡ ಮಗು ಅಜ್ಜಿ ಮಡಿಲಿಗೆ ಬಂದು ಬಿತ್ತು. ಅಜ್ಜಿ ಅಕ್ಕರೆಯಿಂದ ಆರೈಕೆ ಅನುಪಾನ ಮಾಡಿ ಸಾಕಿದಳು. ಎರಡ್ಮೂರು ವರ್ಷಗಳು ತುಂಬುವವರೆಗೆ ಚೆನ್ನಾಗಿದ್ದ ಮೊಮ್ಮಗು, ಅದ್ಯಾವ ದೆವ್ವ ಬಂದು ಮೆಟ್ಟಿ ಕೊಂಡಿತು ಏನೋ? ಎಂಬಂತೆ ಚೆನ್ನಾಗಿ ಆಟ ಆಡಿಕೊಂಡಿ ದ್ದ ಹುಡುಗ ಮನೆಯ ಸಂಧಿ ಮೂಲೆಗಳಲ್ಲಿ ಮುದುರಿ ಕೂರ ತೊಡಗಿದ. ಇಷ್ಟೇ ಆಗಿದ್ದರೆ ಏನಾದರೂ ಮಾಡಬಹುದಿತ್ತು. ಆದರೆ ಆ ಹುಡುಗನನ್ನು ಯಾರೇ ಬಂದು ಮುಟ್ಟಿದರೆ ಹೇಡಿಗಳಂತೆ ಹೆದರಿಕೊಂಡು ನಡುಗುತ್ತಾ ಮೂಲೆಯಲ್ಲಿ ಕುಳಿತು ಬಿಡುತ್ತಿದ್ದರು. ಆಟ ಆಡುವ ಮಕ್ಕಳು ಮುಟ್ಟಿದರೆ ಆಟ ಬಿಟ್ಟು ಹೆದರಿ ಓಡಿ ಹೋಗುತ್ತಿದ್ದವು. ಇದಿಷ್ಟೇ ಅಲ್ಲ ಪ್ರಾಣಿಗಳನ್ನು ಮುಟ್ಟಿದರೂ ಅವು ಹೆದರಿಕೊಂಡು ಹಿಂದೆ ಸರಿಯುತ್ತಿದ್ದವು. ಈ ವಿಚಾರ ಊರವರಿಗಲ್ಲದೆ ಅಕ್ಕ ಪಕ್ಕ ಹಳ್ಳಿ ಹರಾಸುಗಳಿಗೂ ತಿಳಿಯಿತು. ಅಜ್ಜಿಯ ಮನೆ ಸುತ್ತಮುತ್ತ ಓಡಾಡಲು ಜನ ಹೆದರಿದರು. ಆಡುವ ಮಕ್ಕಳನ್ನಂತೂ ಅಲ್ಲಿ ಸುಳಿದಾಡಲು ಬಿಡುತ್ತಿರಲಿಲ್ಲ. ಇದರಿಂದ ಹುಡುಗ ಮತ್ತಷ್ಟು ಮನೆಯೊಳಗೆ ಇರುವುದಾಯಿತು. ಈಗಾಗಲೇ ಹುಡುಗನಿಗೆ ಆರೇಳು ವರ್ಷ ಆಗಿದೆ. ಎಲ್ಲಾ ಕೆಲಸದ ಭಾರ ಅಜ್ಜಿಯೇ ಮಾಡಬೇಕು.ಸಣ್ಣಪುಟ್ಟ ಸಾಮಾನು, ತರಕಾರಿ ತರಿಸಲು ಹುಡುಗನನ್ನು ಅಂಗಡಿಗೆ ಕಳುಹಿಸುವಂತಿಲ್ಲ. ಈಗೀಗಂತೂ ಅಜ್ಜಿಗೂ ವಯಸ್ಸಾಗುತ್ತಾ ಬಂದಿದೆ.ಈ ಮೊಮ್ಮಗನ ಸಮಸ್ಯೆ ಬೇರೆ ಕಾಡುತ್ತಿದೆ. ಹೀಗಿರುವಾಗ ಒಂದು ದಿನ ಯಾತ್ರೆ ಹೊರಟಿದ್ದ ಸನ್ಯಾಸಿಯೊಬ್ಬ ಮುಸ್ಸಂಜೆ ಸಮಯ ಅಜ್ಜಿ ಮನೆಗೆ ಬಂದನು. ಅವನು ಅಜ್ಜಿಗೆ ಕೇಳಿದ, ನಾನು ಈ ದಿನ ರಾತ್ರಿ ತಂಗಿ ಬೆಳಗ್ಗೆ ಎದ್ದು ಹೋಗುತ್ತೇನೆ ಆಗಬಹುದೇ? ಎಂದು. ಅಜ್ಜಿಯು ಸಂತೋಷದಿಂದ ಒಪ್ಪಿ ರಾತ್ರಿ ಸ್ವಲ್ಪ ತಿಂಡಿ ,ಹಣ್ಣು ಕೊಟ್ಟು ಮಲಗಲು ಚಾಪೆ ಕೊಟ್ಟಿತು. ರಾತ್ರಿ ಮಲಗಿ ಬೆಳಗ್ಗೆ ಎದ್ದ ಸನ್ಯಾಸಿ ಅಜ್ಜಿಗೆ ತಿಳಿಸಿ ಹೋಗಲು ಒಳಗೆ ಬಂದ. ಆಗ ಮೂಲೆಯಲ್ಲಿ ಮುದುರಿ ಕುಳಿತಿದ್ದ ಹುಡುಗ ಕಣ್ಣಿಗೆ ಕಂಡ. ಸನ್ಯಾಸಿ ಆ ಹುಡುಗನನ್ನು ದೃಷ್ಟಿಸಿ ನೋಡುತ್ತಿರುವಾಗಲೇ ಒಂದು ಬೆಕ್ಕು ಬಂದಿತು. ಹುಡುಗನು ಹತ್ತಿರ ಮಿಯಾವ್ ಮಿಯಾವ್ ಅನ್ನುತ್ತ ಆ ಹುಡುಗನ ಮೇಲೆ ಬಾಲ ಆಡಿಸಿತು. ತಕ್ಷಣವೇ ಹಾವು ಮೆಟ್ಟಿದವರಂತೆ ಹೆದರಿ ಗಾಬರಿ ಮುಖದಿಂದ ಈಚೆ ಬಂದು ಮೂಲೆಯಲ್ಲಿ ನಡುಗುತ್ತಾ ಮುದುರಿ ಕುಳಿತಿತು. ಸನ್ಯಾಸಿ ತದೇಕಚಿತ್ತದಿಂದ ನೋಡಿದ. ಅಷ್ಟು ಹೊತ್ತಿಗೆ ಆ ಅಜ್ಜಿ ಬಂದು ಇದುವರೆಗಿನ ಕಥೆಯನ್ನೆಲ್ಲ ಹೇಳಿ. ಜೋರಾಗಿ ಅತ್ತಳು. ಸನ್ಯಾಸಿ ಅಜ್ಜಿಯನ್ನು ಸಮಾಧಾನಪಡಿಸಿ ಆ ಹುಡುಗನ ಹತ್ತಿರ ಕುಳಿತು ಕೈ ತೋರಿಸುವಂತೆ ಹೇಳಿದ. ಆ ಹುಡುಗ ದೂರದಲ್ಲಿ ಕೈಬಿಚ್ಚಿ ತೋರಿಸಿತು ಒಂದಷ್ಟು ಹೊತ್ತು ನೋಡಿದ ಸನ್ಯಾಸಿ, ಏನೋ ಲೆಕ್ಕಾಚಾರ, ಗುಣಾಕಾರ ಹಾಕಿ ಸಂತಸದಿಂದ ಮುಗುಳ್ನಗೆ ನಗುತ್ತಾ , ಅಜ್ಜಿ ನಿನ್ನ ಮೊಮ್ಮಗನ ಬಗ್ಗೆ ಲವಲೇಶವೂ ಯೋಚನೆ ಮಾಡಬೇಡ. ಸದ್ಯದಲ್ಲೇ ಇವನಿಗೆ ರಾಜ ಯೋಗ ಒದಗಿ ಬರಲಿದೆ. ಮುಂದೆ ಇವನು ರಾಜನಾಗುತ್ತಾನೆ ಎಂದು ಹೇಳಿ ಅಜ್ಜಿಗೆ ಕೃತಜ್ಞತೆ ಸಲ್ಲಿಸಿ ಹೊರಟನು. ಅಜ್ಜಿ ಮನೆಯ ಸುತ್ತಮುತ್ತ ಯಾರೂ ಬರದೆ ನಿರ್ಬಂಧ ಹೇರಿದಂತಾಗಿ ಊರಿನ ಜನರು ಸುತ್ತಿ ಬಳಸಿ ಓಡಾಡುವಂತಾಗಿ ತೊಂದರೆಯಾಯಿತು. ಮಕ್ಕಳು ಸಹ ಅಲ್ಲಿ ಆಡುವಂತಿಲ್ಲ. ಹೀಗಾಗಿ ಊರವರೆಲ್ಲ ಸೇರಿ ರಾಜನ ಹತ್ತಿರ ಹೋಗಿ ಅಜ್ಜಿ ಹಾಗೂ ಮೊಮ್ಮಗನ ಕುರಿತು ಎಲ್ಲವನ್ನೂ ಹೇಳಿ ನಮಗೆ ತೊಂದರೆಯಾಗುತ್ತಿದೆ ಇದನ್ನು ಸರಿಪಡಿಸಿಕೊಡಬೇಕು ಎಂದು ನ್ಯಾಯವನ್ನು ಕೇಳಿದರು. ರಾಜ ಮತ್ತು ಮಂತ್ರಿ ಸಮಾಲೋಚಿಸಿ, ಇದು ಹೌದೇ ಎಂದು ವಿಚಾರಿಸಲು ಅರಮನೆ ಸೇವಕರನ್ನು ಕಳಿಸಿದರು. ಅದು ನಿಜವೆಂದು ತಿಳಿದಮೇಲೆ ರಾಜ ಭಟರು ಬಂದು ಸಾಬೀತು ಪಡಿಸಲು ಜೋರಾಗಿದ್ದ ಒಂದು ನಾಯಿ ಮರಿಯನ್ನು ಹುಡುಗನ ಹತ್ತಿರ ಬಿಟ್ಟರು. ನಾಯಿಮರಿ ಹತ್ತಿರ ಹೋಗಿ ಆ ಹುಡುಗನನ್ನು ಮುಟ್ಟುತ್ತಿದ್ದಂತೆ ಗಕ್ಕಂತ ಹೆದರಿ ಮುದುರಿ ಮಲಗಿಬಿಟ್ಟಿತು. ರಾಜನ ಆದೇಶದಂತೆ, ಅಜ್ಜಿಯ ಅನುಮತಿ ಪಡೆದು ಆ ಹುಡುಗನನ್ನು ಯಾರೂ ಮುಟ್ಟದಂತೆ ವ್ಯವಸ್ಥೆ ಮಾಡಿ ಅರಮನೆಗೆ ಕರೆದುಕೊಂಡು ಬಂದರು. ಮರುದಿನ ಸಭೆಯಲ್ಲಿ ಈ ಹುಡುಗನ ಕುರಿತು ಚರ್ಚೆ ನಡೆದು, ಇವನಿಗೆ ಮರಣದಂಡನೆ ವಿಧಿಸುವುದು ಸರಿಯೆಂದು, ಕೆಲ ವರುಷ ಕಾದು ನೋಡಲು ಕಾರಾಗೃಹದಲ್ಲಿ ಇಡುವುದೇ ಸರಿ ಎಂದು ಚರ್ಚೆ ನಡೆದು, ಕೊನೆಗೆ ರಾಜನು, ಮಂತ್ರಿಯ ಸಲಹೆಯಂತೆ ಆ ಹುಡುಗನನ್ನು ಒಬ್ಬನೇ ಇರುವಂಥ ಕಾರಾಗೃಹದಲ್ಲಿ ಇಟ್ಟರು. ಮಂತ್ರಿ ಬಹಳ ಬುದ್ದಿವಂತ. ಆಗಾಗ್ಗೆ ಹುಡುಗ ಇರುವ ಬಂದೀಖಾನೆಗೆ ಹೋಗಿ ನೋಡಿಕೊಂಡು ಬರುತ್ತಿದ್ದ. ಮತ್ತು ಅಲ್ಲಿನ ಸೇವಕರಿಗೆ ಹುಡುಗನಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಕೊರತೆಯಾಗದಂತೆ, ನೋಡಿಕೊಳ್ಳಬೇಕೆಂದು ಕರಾರುವಕ್ಕಾಗಿ ತಿಳಿಸಿದ್ದ. ಹುಡುಗನ ಅಜ್ಜಿಗೆ ಈ ವಿಚಾರವನ್ನು ತಿಳಿಸಿ ಅಜ್ಜಿಗೆ ಬೇಕಾದ ವ್ಯವಸ್ಥೆಯನ್ನು ಮಂತ್ರಿಯೇ ಮುತುವರ್ಜಿವಹಿಸಿ ಮಾಡಿದ್ದನು. ಹೀಗೆ ಒಂದಷ್ಟು ತಿಂಗಳು ಕಳೆಯಿತು. ನೆರೆ ರಾಜ್ಯದ ರಾಜ, ನಿಮ್ಮ ರಾಜ್ಯದ ಮೇಲೆ ಯುದ್ಧ ಮಾಡುತ್ತೇನೆ ಇಲ್ಲದಿದ್ದರೆ ಕಪ್ಪ ಕಾಣಿಕೆ ಕೊಟ್ಟು ಸೋತೆವೆಂದು ಒಪ್ಪಿಕೊಳ್ಳಬೇಕೆಂದು ಸುತ್ತೋಲೆಯನ್ನು ಕಳಿಸಿದನು. ನೆರೆರಾಜ್ಯದ ಮೇಲೆ ಯುದ್ಧ ಮಾಡಿದರೆ ಈ ರಾಜ್ಯ ಹೇಳ ಹೆಸರಿಲ್ಲದಂತೆ ಅಳಿಸಿಹೋಗುತ್ತದೆ. ಯುದ್ಧ ಮಾಡದೇ ಕಪ್ಪಕಾಣಿಕೆ ಕೊಟ್ಟು ಸೋಲೊಪ್ಪಿಕೊಳ್ಳಲು ಮನಸ್ಸಿಲ್ಲ. ಈ ಸಮಯಕ್ಕಾಗಿ ಕಾಯುತ್ತಿದ್ದ ಮಂತ್ರಿಯು ಯೋಚಿಸಿ ಒಂದು ಉಪಾಯ ಮಾಡಿದನು.ವಿಷಯವನ್ನು ರಾಜ ಹಾಗೂ ಮಂತ್ರಿ, ಕಾರ್ಯರೂಪಕ್ಕೆ ಹೇಗೆ ತರುವುದು ಎಂಬುದನ್ನು ನಿರ್ಧರಿಸಿದರು, ಒಂದು ಲಕೋಟೆ ಬರೆದು,ಬಂದೀ ಖಾನೆಯಲ್ಲಿಟ್ಟಿದ್ದ ಹುಡುಗನ ಕೈಲಿ ಲಕೋಟೆ ಕೊಟ್ಟು, ನೆರೆ ದೇಶದ ರಾಜನ ಕೈಮುಟ್ಟಿ, ಹೇಗೆ ಕೊಡಬೇಕು ಎಂಬುದನ್ನು ಮನದಟ್ಟು ಮಾಡಿಸಿದರು. ನಂತರ ರಾಜ್ಯದ ಸೇನಾಧಿಪತಿ, ಮುಖ್ಯ ರಾಜಭಟರ ಜೊತೆ ಆ ಹುಡುಗನನ್ನು ಕಳುಹಿಸಿಕೊಟ್ಟರು. ನೆರೆ ರಾಜ್ಯದ ರಾಜಸಭೆಯಲ್ಲಿ ಸಿಂಹಾಸನದ ಮೇಲೆ ರಾಜಗಾಂಭೀರ್ಯದಿಂದ,ದರ್ಪದಿಂದ, ಕುಳಿತಿದ್ದ ರಾಜನಿಗೆ, ಸಂದೇಶವನ್ನು ತಿಳಿಸಿದ ಸೇನಾಧಿಪತಿ, ಆ ಹುಡುಗನಿಗೆ ಲಕೋಟೆ ಕೊಡಲು ತಿಳಿಸಿದನು. ಹುಡುಗನು ಸೇನಾಧಿಪತಿಯ ಆದೇಶದಂತೆ ರಾಜ ಕುಳಿತಲ್ಲಿಗೆ ಬಂದು, ರಾಜನ ಕೈಗೆ ಮಂತ್ರಿಯು ಹೇಳಿಕೊಟ್ಟಂತೆ, ಲಕೋಟೆ ಕೊಟ್ಟನು. ಕೊಟ್ಟ ಕ್ಷಣದಲ್ಲೇ ರಾಜನ ದರ್ಪ, ಗಾಂಭೀರ್ಯ, ಎಲ್ಲಿ ಹಾರಿ ಹೋಯಿತೋ ಎಂಬಂತೆ," ಅಯ್ಯಯ್ಯೋ ನನಗೆ ಯುದ್ಧ ಬೇಡ, ನಾನ್ಯಾಕೆ ಯುದ್ಧ ಮಾಡಲಿ, ನಾನು ಯಾರ ಜೊತೆಯಲ್ಲೂ ಕಾದಾಡುವುದಿಲ್ಲ. ಬಂದವರಿಗೆ ಸತ್ಕರಿಸಿ, ಗೌರವದಿಂದ ಕಳಿಸಿ ಎಂದು ಹೇಳಿ ಸಿಂಹಾಸನದ ಮೇಲೆ ಕುಳಿತನು. ಸಭೆಯಲ್ಲಿ ಕುಳಿತು ಎಲ್ಲರಿಗೂ ರಾಜನು ಹೀಗೇಕೆ ಮಾಡುತ್ತಿದ್ದಾನೆಂದು ತಿಳಿಯಲಿಲ್ಲ. ಆ ಲಕೋಟೆಯಲ್ಲಿ ಹೆದರುವಂತಹದ್ದು ಏನಿದೆ ಎಂದು, ಸಭೆ ಚರ್ಚಿಸುತಿತ್ತು.ಲಕೋಟೆ ತಂದವರಿಗೆ ರಾಜೋಚಿತ ಸತ್ಕಾರ ಮಾಡಿ ಕಳಿಸಿಕೊಟ್ಟರು. ನಂತರ ಲಕೋಟೆ ತೆಗೆದು ನೋಡಿದಾಗ, "ನಾವು ನೀವು ಸ್ನೇಹದಿಂದ ಇರೋಣ, ಯುದ್ಧ ಯಾಕೆ ? ಇದರಿಂದ ಸೈನ್ಯ ನಾಶವಾಗುತ್ತೆ, ಬೊಕ್ಕಸ ಬರಿದಾಗುತ್ತೆ, ರಾಜ್ಯದ ಸುರಕ್ಷತೆಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು, ಸ್ನೇಹಿತರಾಗಿರೋಣ ಎಂದಷ್ಟೇ ಬರೆದಿದ್ದು. ಯಾರಿಗೂ ಏನು ಎಂದು ಯೋಚಿಸಿದರು ಅರ್ಥವಾಗಲಿಲ್ಲ . ಈ ದೇಶದ ರಾಜನಿಗೆ ಸಮಾಧಾನವಾಯಿತು. ಹಾಗೂ ಹುಡುಗನ ಕೈ ಗುಣದಿಂದ ಎರಡು ದೇಶಗಳ ಯುದ್ಧ ನಿಂತಿತು. ಇನ್ನು ಮುಂದೆ ರಾಜ್ಯಕ್ಕೆ ಯಾವುದೇ ಗಂಭೀರವಾದ ಸಮಸ್ಯೆಗಳು ಎದುರಾದರೂ, ಹುಡುಗನಿಂದ ನಾವು ಪರಿಹರಿಸಿಕೊಳ್ಳಬಹುದು. ಎಂಬ ವಿಶ್ವಾಸದಿಂದಾಗಿ ರಾಜ್ಯದಲ್ಲಿ ಹೆಚ್ಚು ಹೆಚ್ಚು ಅಭಿವೃದ್ಧಿಯಾಗತೊಡಗಿತು. ರಾಜ -ಮಂತ್ರಿ ಎಲ್ಲರೂ ನೆಮ್ಮದಿಯಿಂದ ಇದ್ದರು. ಯಾವುದೇ ರಾಜ್ಯಗಳ ಭಯವೂ ಇವರಿಗೆ ಇಲ್ಲವಾಯಿತು. ಹುಡುಗನ ಬಂಧೀಖಾನೆಯಲ್ಲಿದ್ದರೂ ಹೆಚ್ಚು ಹೆಚ್ಚು ಗೌರವ,ಪ್ರೀತಿ ಕೊಡುತ್ತಿದ್ದರು. ರಾಜ ಮತ್ತು ಮಂತ್ರಿ ಮುಂದಾಲೋಚನೆಯಿಂದ ಹುಡುಗನಿಗೆ ಕುದುರೆ ಸವಾರಿ, ಕತ್ತಿವರಸೆ,ಶಸ್ತ್ರಾಭ್ಯಾಸಗಳ ಜೊತೆ ಶೈಕ್ಷಣಿಕ ಶಿಕ್ಷಣ ಸೇರಿದಂತೆ,ಎಲ್ಲ ಶಿಕ್ಷಣವನ್ನು ಕೊಡಿಸುತ್ತಿದ್ದರು. ಹುಡುಗನ ಅಜ್ಜಿಯನ್ನು ಅರಮನೆಯವರೇ ನೋಡಿಕೊಂಡರು.ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಹೀಗಿರುವಾಗ ಇನ್ನೊಂದು ಬಲಿಷ್ಠ ದೇಶದ ರಾಜ ಯುದ್ಧಕ್ಕೆ ಬರುವೆನೆಂದು, ಸಂಧಿ ಮಾತುಕತೆಗಳಿಗೆ ಅವಕಾಶವಿಲ್ಲವೆಂದು, ಕಟ್ಟುನಿಟ್ಟಾಗಿ ತಿಳಿಸಿದರು. ರಾಜನು ಮಂತ್ರಿಯ ಜೊತೆ ಸಭಿಕರ ಜೊತೆ ಸಮಾಲೋಚನೆ ನಡೆಸಿ ಯುದ್ಧಕ್ಕೆ ಬರಬಹುದೆಂದು ನಾವು ತಯಾರಿದ್ದೇವೆ ಎಂದು ತಿಳಿಸಿದರು. ಯುದ್ಧ ನಿಗದಿಯಾದ ದಿನ, ಎಲ್ಲಾ ಸೈನಿಕರಿಗಿಂತ ಮೊದಲು ಈ ಹುಡುಗನನ್ನು ನಿಲ್ಲಿಸಿದರು. ಮೊದಮೊದಲು ನಿಲ್ಲುವುದಿಲ್ಲವೆಂದು ಹೆದರಿದನು. ಆದರೆ ರಾಜ ಮತ್ತು ಮಂತ್ರಿ ಪರಿವಾರದವರು ಸೂಕ್ತ ಸಲಹೆ ಸೂಚನೆಗಳನ್ನು ಕೊಟ್ಟು ಆತನನ್ನು ನಿಲ್ಲಿಸಿದರು.ಯುದ್ಧ ಆರಂಭವಾಗುವ ಮುನ್ನ, ಹುಡುಗನನ್ನು ಶತ್ರು ಸೈನಿಕರು ಇರುವ ಕಡೆಗೆ ಕಳಿಸಿ, ಶುಭಕೋರಿ, ಹಸ್ತಲಾಗವ ಮಾಡುವ ನೆಪದಲ್ಲಿ ಹೆಚ್ಚುಕಡಿಮೆ ಅಲ್ಲಿರುವ ಬಹಳಷ್ಟು ಸೈನಿಕರು, ಸೇನಾಧಿಪತಿಗಳನ್ನು ಮುಟ್ಟಿ ಬರುವಂತೆ ವ್ಯವಸ್ಥಿತವಾಗಿ ಮಾಡಿದರು. ಏನು ನಡೆಯುತ್ತಿದೆ ಎಂದು ಗೊತ್ತಾಗುವುದ ರೊಳಗಾಗಿ ನಾವು ಯುದ್ದ ಮಾಡಲಾರೆವು, ನಮ್ಮಿಂದ ಆಗುವುದಿಲ್ಲ ಎಂದು ಹೆದರುತ್ತಾ ಒಬ್ಬರಾದ ಮೇಲೆ ಒಬ್ಬರು ಓಡಿಬಿಟ್ಟರು. ಅಷ್ಟು ಹೊತ್ತಿಗೆ ಉಭಯಸೇನೆಗಳ ಮಧ್ಯೆ ಗದ್ದಲಗಳಾಗಿ ಯಾರು, ಯಾಕೆ ಹೀಗಾಯ್ತು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಯುದ್ಧ ಮಾಡಲು ಬಂದವರು ಹಿಂತಿರುಗಿದರು. ಈ ರಾಜ್ಯದವರು ಸಂತೋಷವಾಗಿ ಬಂದರು. ಇದೇ ತರಹದ ಘಟನೆಗಳು ಒಂದಷ್ಟು ಸಲ ನಡೆದುದರಿಂದ ಈ ರಾಜ್ಯದ ತಂಟೆಗೆ ಯಾರು ಬರಲಿಲ್ಲ. ಕೆಲವೇ ವರ್ಷಗಳಲ್ಲಿ ರಾಜ್ಯ ಅಭಿವೃದ್ಧಿಯಾಗುತ್ತಾ ಬಲಿಷ್ಠ ರಾಜ್ಯದ ಸಮಕ್ಕೆ ನಿಂತು ಬಿಟ್ಟಿತು.ಈ ಹುಡುಗ ಬೆಳೆದು ಯುವಕನಾಗಿದ್ದ ಅರಮನೆಯ ಸದಸ್ಯ ಆಗಿದ್ದುದರಿಂದ, ಹಾಗೂ ಅವನಿಗಿರುವ ವಿಶೇಷ ಶಕ್ತಿಯಿಂದ, ಹೆಚ್ಚು ಮರ್ಯಾದೆ, ಗೌರವ ಪ್ರೀತಿ, ಎಲ್ಲಾ ದೊರೆತ ಕಾರಣ, ಅವನಿಗೆ ಈಗ ಧೈರ್ಯ ಬಂದಿತ್ತು. ಅವನೇ ಎಷ್ಟೊ ಯುದ್ಧಗಳ ಮುಂದಾಳತ್ವ ವಹಿಸಿ ಗೆದ್ದುಕೊಂಡು ಬಂದನು.ಅವನು ಮುಟ್ಟಿದರೆ, ಹೇಡಿಗಳು ಆಗವುದು, ಮುದುರಿ ಕೂರುವುದು ಈ ತರಹದ್ದೆಲ್ಲ ಹೊರಟುಹೋಗಿತ್ತು. ದಕ್ಷರಾಜನಿಗೆ ಇರಬೇಕಾದ ಯೋಗ್ಯತೆಗಳೆಲ್ಲವೂ ಅವನಲ್ಲಿ ಬಂದಿತ್ತು. ರಾಜನಿಗೆ ಒಬ್ಬಳೇ ಮಗಳಿದ್ದಳು. ಅವಳನ್ನು ಈ ಹುಡುಗನಿಗೆ ಕೊಟ್ಟು ಮದುವೆ ಮಾಡಿ, ಇವನೇ ತನ್ನ ಮುಂದಿನ ವಾರಸುದಾರ ಎಂದು ಘೋಷಿಸಿದನು. ಸನ್ಯಾಸಿ ಹೇಳಿದ ಭವಿಷ್ಯ ನಿಜವಾಯಿತು. ಮುಂದೆ ಶ್ರೇಷ್ಠ ರಾಜನಾಗಿ ಪ್ರಜೆಗಳ ವಿಶ್ವಾಸಗಳಿಸಿ, ರಾಜ್ಯದ ಕೀರ್ತಿ ಹರಡಿದನು. " ಗತಿರ್ಭರ್ತಾ ಪ್ರಭು ಸಾಕ್ಷೀ, ನಿವಾಸ ಶರಣ ಸುಹೃತ್! ಪ್ರಭವ ಪ್ರಲಯ ಸ್ಥಾನಂ, ನಿಧಾನಂ ಬೀಜವ್ಯಯಂ" ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ
ರಾಧಾಕೃಷ್ಣ 🦚💙
894 views
25 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಶ್ರೀ ಶಂಕರರ ಪರ್ಯಟನೆಯಲ್ಲಿ ಮಾಹೀಷ್ಮತಿ ನಗರ ಪ್ರವೇಶ ಸಂದರ್ಭ:- ಭಾರತೀಯ ಪರಂಪರೆಯಲ್ಲಿ ಸನಾತನ ಧರ್ಮದ ತಳಹದಿ ಎಂದರೆ “ಗುರು ಪರಂಪರೆ” ಇದು ಪ್ರಮುಖವಾದದ್ದು. ಭಗವಂತನ ಇರುವಿಕೆ- ಆರಾಧನೆ ಹಾಗೂ ಪ್ರಾರ್ಥನೆಯನ್ನು ಮೊದಲು ತಿಳಿಸಿ ಕೊಡುವುದು ಗುರುಗಳು. “ಗುರುರ್ಬ್ರಹ್ಮಾ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ: ಗುರು: ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂದು ಪ್ರಾರ್ಥಿಸುತ್ತೇವೆ. ಭಾರತೀಯರಾದ ನಾವೆಲ್ಲ ಗುರು ತೋರಿದ ಮಾರ್ಗದಲ್ಲಿ ನಡೆದು ಬಂದವರು. ಭಾರತದ ಏಕತೆ ಮತ್ತು ಅಖಂಡತೆಯ ಬಗ್ಗೆ ಹೆಮ್ಮೆ ಪಡುವುದು,‌ ಯುದ್ಧ- ಕಠಾರಿಗಳ ಸೆಣಸಾಟ ಆಗಿರದೆ “ತರ್ಕ ಮತ್ತು ಜ್ಞಾನ” ಬಲದಿಂದ ಎಂದು ಜಗತ್ತಿಗೆ ಸಾರಿದವರು, ಅಖಂಡ ಭಾರತ ವನ್ನು ಒಂದೇ ಸೂತ್ರದಡಿಯಲ್ಲಿ ಕಟ್ಟಿ ಒಗ್ಗೂಡಿಸಿದ ಮಹಾ ಮಹಿಮರು, ಗುರು ಪರಂಪರೆಯಲ್ಲಿ ಅತ್ಯಂತ ಮಹತ್ವ ಸ್ಥಾನ ಪಡೆದವರು “ಶ್ರೀಮತ್ ಭಗವತ್ಪಾದ ಶಂಕರಾಚಾರ್ಯರು”ಇವರು “ಅಹಂ ಬ್ರಹ್ಮಾಸ್ಮಿ” ಎಂಬ ಮಹಾ ವಾಕ್ಯದ ತತ್ವವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದರು. ಒಮ್ಮೆ ಶಂಕರರು ತಮ್ಮ ದಿಗ್ವಿಜಯ ಯಾತ್ರೆಯಲ್ಲಿ ಮಾಹೀಷ್ಮತೀ ನಗರಕ್ಕೆ ಬಂದರು. ನರ್ಮದಾ ನದಿಯ ತೀರದಲ್ಲಿ ವಿರಾಜಿಸುತ್ತಿದ್ದ ಪವಿತ್ರ ಕ್ಷೇತ್ರವೇ ಮಾಹೀಷ್ಮತೀ ನಗರ. ಆ ನಗರದಲ್ಲಿ ಕುಮಾರೀಲಭಟ್ಟರ ಶಿಷ್ಯರು, ಮಹಾಪಂಡಿತರಾದ ಮಂಡನ ಮಿಶ್ರರ ಗೃಹವು ಪ್ರಸಿದ್ಧಿಯಾಗಿತ್ತು. ಕುಮಾರಿಲರಿಂದ ಅನುಗ್ರಹ ಪಡೆದು ಹೊರಟ ಆಚಾರ್ಯರು ಮಾಹೀಷ್ಮತಿ ನಗರಕ್ಕೆ ಬಂದು, ಮೊದಲಿಗೆ ಊರಿನ ಶಿವಾಲಯದಲ್ಲಿ ಶಿಷ್ಯರೊಂದಿಗೆ ವಿಶ್ರಾಂತಿ ಪಡೆದರು. ಮರುದಿನ ಮಂಡನಮಿಶ್ರರನ್ನು ಭೇಟಿಯಾಗಬೇಕೆಂದು ನಿರ್ಧರಿಸಿದರು. ಬೆಳಿಗ್ಗೆ ಮಂಡನಮಿಶ್ರರ ಮನೆ ಹುಡುಕುತ್ತಾ ಊರೊಳಗೆ ಹೊರಟರು. ಆಗ ನೀರು ತರಲು ನದಿಯ ಕಡೆ ಹೋಗುತ್ತಿದ್ದ ಒಬ್ಬ ಮಹಿಳೆ ಎದುರಾದಳು. ಆಚಾರ್ಯರು ಆಕೆಯನ್ನು ಕೇಳಿದರು: “ತಾಯಿ, ಮಂಡನಮಿಶ್ರರ ಮನೆಗೆ ಹೋಗುವ ದಾರಿ ಯಾವುದು?” ಅವಳು ಆಶ್ಚರ್ಯಪಟ್ಟು, “ಈ ಊರಲ್ಲಿ ಮಂಡನಮಿಶ್ರರ ಮನೆ ಅರಿಯದವರು ಯಾರಿದ್ದಾರೆ? ನೀವು ಹೊಸಬರೇನೋ?”ಎಂದು ಕೇಳಿದಳು. ಆಚಾರ್ಯರು ಶಾಂತವಾಗಿ, “ಹೌದು ತಾಯಿ, ನಾನು ಈ ಊರಿಗೆ ಹೊಸಬ ಮಂಡನಮಿಶ್ರರನ್ನು ಭೇಟಿಯಾಗಬೇಕಿದೆ” ಎಂದರು. ಆಕೆ ಹೇಳಿದರು: “ಅವರ ಮನೆಯನ್ನು ಹುಡುಕುವುದು ಬಹಳ ಸುಲಭ. ಅವರ ಮನೆಯ ಬಾಗಿಲಲ್ಲಿ ಪಂಜರದಲ್ಲಿರುವ ಗಿಳಿಗಳು ‘ಜಗತ್ತು ಸತ್ಯವೇ? ಮಿಥ್ಯವೇ? ವೇದಗಳು ಸ್ವತಃ ಪ್ರಮಾಣವೇ ಅಥವಾ ಪರತಃ ಪ್ರಮಾಣವೇ? ಮೋಕ್ಷಕ್ಕೆ ಮಾರ್ಗ ಜ್ಞಾನವೇ? ಕರ್ಮವೇ?’ ಎಂದು ಚರ್ಚೆ ಮಾಡುತ್ತಿರುತ್ತವೆ. ಅದೇ ಮಂಡನಮಿಶ್ರರ ಮನೆ.” ಈ ಮಾತು ಕೇಳಿ ಆಚಾರ್ಯರು ಮನಸ್ಸಿನಲ್ಲಿ ಆಶ್ಚರ್ಯಪಟ್ಟರು: “ಗಿಳಿಗಳೇ ಇಷ್ಟು ವೇದಾಂತ ಚರ್ಚೆ ಮಾಡುತ್ತಿದ್ದರೆ, ಆ ಮನೆಯ ಯಜಮಾನನ ಪಾಂಡಿತ್ಯ ಇನ್ನೆಷ್ಟು ಮಹತ್ತರವಾಗಿರಬೇಕು!” ಎಂದು ಆಲೋಚಿಸಿದರು. ಆಕೆಯ ಸೂಚನೆಯಂತೆ ಅವರು ಮಂಡನಮಿಶ್ರರ ಮನೆಗೆ ಬಂದರು. ಆದರೆ ಬಾಗಿಲು ಮುಚ್ಚಿತ್ತು. ದ್ವಾರದಲ್ಲಿ ಕುಳಿತಿದ್ದವನನ್ನು ಕೇಳಿದರು: “ಮಂಡನಮಿಶ್ರರು ಮನೆಯಲ್ಲಿದ್ದಾರೆಯೇ?” ಆತ ಉತ್ತರಿಸಿದ: “ಹೌದು, ಇಂದು ಅವರ ತಂದೆಯ ಶ್ರಾದ್ಧ ನಡೆಯುತ್ತಿದೆ. ಯಾರನ್ನೂ ಒಳಗೆ ಬಿಡಬಾರದೆಂದು ಹೇಳಿದ್ದಾರೆ.” ಶಂಕರಾಚಾರ್ಯರು ಮತ್ತು ಮಂಡಲ ಮಿಶ್ರರ ಮೊದಲ ಭೇಟಿಯ ಕಥೆ:- ಮಂಡನ ಮಿಶ್ರರ ಮನೆಯಲ್ಲಿ ಅಂದು ವಿಶೇಷವಿತ್ತು. ಪಂಡಿತೋತ್ತಮರಾದ ಮಂಡನಮಿಶ್ರರು ತಮ್ಮ ತಂದೆಯ ಶ್ರಾದ್ಧ ಕಾರ್ಯದಲ್ಲಿ ತೊಡಗಿದ್ದರು. ಅವರು ಮನೆಯವರಿಗೆಲ್ಲ ಕಟ್ಟುನಿಟ್ಟಾಗಿ ಹೇಳಿದ್ದರು “ಇಂದು ಯಾರನ್ನೂ ಒಳಗೆ ಬಿಡಬಾರದು.” ಎಲ್ಲರೂ ಆ ಮಾತನ್ನು ಪಾಲಿಸುತ್ತಿದ್ದರು. ಅದೇ ಸಮಯದಲ್ಲಿ, ಶಂಕರಾಚಾರ್ಯರು ಭಿಕ್ಷೆಗಾಗಿ ಅಲ್ಲಿಗೆ ಬಂದರು. ಆದರೆ, ಶ್ರಾದ್ಧ ನಡೆಯುತ್ತಿದೆ. ಯಾರೂ ಅವರನ್ನು ಒಳಗೆ ಬಿಡಲಿಲ್ಲ. ಆಗ ಶಂಕರರು ತಮ್ಮ ಯೋಗಬಲದಿಂದ ಆಕಾಶಮಾರ್ಗದಲ್ಲಿ ಬಂದು ನೇರವಾಗಿ ಮನೆಯ ಒಳ ಅಂಗಳದಲ್ಲಿ ನಿಂತರು. ಆ ಸಮಯದಲ್ಲಿ ಮಹರ್ಷಿಗಳಾದ ಜೈಮಿನಿ ಮತ್ತು ವ್ಯಾಸರ ಪಾದಪ್ರಕ್ಷಾಳನದಲ್ಲಿ ಮಂಡನಮಿಶ್ರರು ತೊಡಗಿದ್ದರು. ಹಠಾತ್ತನೆ ಸನ್ಯಾಸಿಯನ್ನು ಕಂಡ ಮಂಡನಮಿಶ್ರ ರಿಗೆ ಕೋಪ ಬಂತು ಏಕೆಂದರೆ, ವೈದಿಕ ಕರ್ಮಾದಿಗಳು ನಡೆಯುವಲ್ಲಿ ಸನ್ಯಾಸಿಗಳು ಬರುವಂತಿಲ್ಲ. ಮಂಡನ ಮಿಶ್ರರು ಒರಟಾಗಿ ಕೇಳಿದರು: ( ಕುತೋ ಮುಂಡೀ) “ಏ ಬೋಳ, ಎಲ್ಲಿಂದ ಬಂದೆ?” ಶಂಕರಾಚಾರ್ಯರು ಶಾಂತರಾಗಿ ಹೇಳಿದರು: (ಅಗಳ್ಮಾನುಂಡಿ) “ಕುತ್ತಿಗೆಯವರೆಗೆ ಬೋಳ.” ದ್ವಂದ್ವಾರ್ಥವಿಟ್ಟು ಆಚಾರ್ಯರು ಉತ್ತರ ಕೊಟ್ಟಿದ್ದು. ಉತ್ತರ ಕೇಳಿ ಮಂಡನಮಿಶ್ರರಿಗೆ ಇನ್ನಷ್ಟು ಕೋಪ ಬಂತು. ಅವರು ಹೇಳಿದರು: “ನಾನು ಕೇಳಿದ್ದು ನೀನು ಬಂದ ದಾರಿಯನ್ನು” ಆಚಾರ್ಯರು ಅಷ್ಟೇ ಶಾಂತವಾಗಿ ಪ್ರಶ್ನಿಸಿದರು: “ದಾರಿ ಏನನ್ನು ಹೇಳಿತು?” ಈ ಮಾತು ಕೇಳಿ ಮಂಡನಮಿಶ್ರರು ಘರ್ಜಿಸಿ. “ನಿನ್ನ ತಾಯಿ ವಿಧವೆ ಎಂದು ಹೇಳಿತು!” ಆದರೂ ಶಂಕರರು ಶಾಂತರಾಗಿ ಹೇಳಿದರು: “ಕೇಳಿದವನು ನೀನು “ದಾರಿ ಉತ್ತರ ಕೊಟ್ಟದ್ದು ನಿನಗೆ, ನಿನ್ನ ತಾಯಿ ವಿಧವೆ ಎಂದು, ಹಾಗಾದರೆ ಅದು ನಿನಗೆ ಅನ್ವಯಿಸಬೇಕು ಅಲ್ಲವೇ?” ಈ ಮಾತು ಮಂಡನಮಿಶ್ರರಿಗೆ ತೀವ್ರವಾಗಿ ತಟ್ಟಿತು. ಅವರ ಕೋಪ ಇನ್ನಷ್ಟು ಹೆಚ್ಚಾಯಿತು. ಅವರು ಮತ್ತೆ ಪ್ರಶ್ನಿಸಿದರು: “ಏ ದುಷ್ಟಬುದ್ಧಿಯೇ! ಈ ಶಿಖೆ, ಯಜ್ಞೋಪವೀತಗಳನ್ನು ಹೊತ್ತುಕೊಂಡಿರುವುದು ನಿನಗೆ ಭಾರವಲ್ಲವೇ?” ಆಗ ಶಂಕರರು ಉತ್ತರಿಸಿದರು: “ವೇದದಲ್ಲಿ ಅವುಗಳ ಅರ್ಥವನ್ನು ತಿಳಿಯದೇ ಇರುವುದು ನಿಜವಾದ ಭಾರ.”ಇದರಿಂದ ಮಾತಿನ ತೀವ್ರತೆ ಇನ್ನಷ್ಟು ಹೆಚ್ಚಿತು. ಮಂಡನಮಿಶ್ರರು ಹೇಳಿದರು: “ನಿನ್ನ ಬ್ರಹ್ಮನಿಷ್ಠೆ ಏನು?” ಶಂಕರರು ತಕ್ಷಣ ಪ್ರತಿಕ್ರಿಯಿಸಿದರು: “ಹಾಗಾದರೆ ನಿನ್ನ ಕರ್ಮನಿಷ್ಠೆ ಏನು?” ಹೀಗೆ ಇಬ್ಬರ ಮಧ್ಯೆ ತೀಕ್ಷ್ಣವಾದ ವಾಗ್ವಾದ ನಡೆಯಿತು. ಮಂಡನಮಿಶ್ರರು ಕೋಪದಿಂದ ಮಾತನಾಡುತ್ತಿದ್ದರೆ, ಶಂಕರಾಚಾರ್ಯರು ಶಾಂತವಾಗಿ, ತರ್ಕದಿಂದ ಉತ್ತರಿಸುತ್ತಿದ್ದರು. ಈ ಸಂಭಾಷಣೆಯನ್ನು ಕುತೂಹಲದಿಂದ ಆಲಿಸುತ್ತಿದ್ದ “ಜೈಮಿನಿ ಮಹರ್ಷಿಗಳು”, ಮಂಡನಮಿಶ್ರರಿಗೆ ಹೇಳಿದರು: “ಇವರು ಸಾಮಾನ್ಯ ಸನ್ಯಾಸಿ ಅಲ್ಲ, ಆದಿ ಶಂಕರಾಚಾರ್ಯರು.” ಇದನ್ನು ಕೇಳಿ ಮಂಡನಮಿಶ್ರರ ಕೋಪ ಜರ್ರಂತ ಇಳಿಯಿತು. ಆಗ ಶಂಕರರು ವಿನಯದಿಂದ ಹೇಳಿದರು: “ಪಂಡಿತೋತ್ತಮರೆ, ನಾನು ಭಿಕ್ಷೆಗಾಗಿ ಬಂದಿದ್ದೇನೆ. ನೀಡುವಿರಾ?” ಮಂಡನಮಿಶ್ರರು ಹೇಳಿದರು: ಅಸೀನರಾಗಿ “ಖಂಡಿತವಾಗಿ ನೀಡುತ್ತೇನೆ. ಇಂದಿನ ಶ್ರಾದ್ಧ ಕಾರ್ಯ ಮುಗಿಯಲಿ. ನಾಳೆ ನಾವು ವಾದವನ್ನು ಆರಂಭಿಸೋಣ.” ವಾದಕ್ಕೆ ತೀರ್ಪುದಾರರು ಯಾರು ಎಂಬ ವಿಷಯ ಬಂದಾಗ, ಜೈಮಿನಿ ಮಹರ್ಷಿಗಳು ಹೇಳಿದರು:“ಮಂಡನಮಿಶ್ರರ ಪತ್ನಿಯಾದ “ಉಭಯ ಭಾರತಿದೇವಿ” ವೇದಾಂತದಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಅವರೇ ಮಧ್ಯಸ್ಥರಾಗಲಿ.” ಎಲ್ಲರೂ ಅದನ್ನು ಒಪ್ಪಿದರು. ಹೀಗೆ, ಮುಂದಿನ ದಿನ ಮಹತ್ತರವಾದ ಚರ್ಚೆ ನಡೆಯಲು ನಿರ್ಧಾರವಾಯಿತು. ಆಚಾರ್ಯರು ತಮ್ಮ ಸ್ಥಳಕ್ಕೆ ಹಿಂತಿರುಗಿದರು. ಇದರ ಸಾರಾಂಶ:- ಕೋಪ ಮತ್ತು ಶಾಂತತೆ ಮುಖಾಮುಖಿಯಾದಾಗ, ಜ್ಞಾನವು ಯಾವಾಗಲೂ ಶಾಂತತೆಯ ಮೂಲಕವೇ ವ್ಯಕ್ತವಾಗುತ್ತದೆ. ಇಲ್ಲಿ ನಡೆದಿದ್ದು: ವೇದವಾಂಗ್ಮಯದಲ್ಲಿ ಪಾಂಡಿತ್ಯ ಹೊಂದಿದ ಪಂಡಿತಶ್ರೇಷ್ಠ ಮಂಡನಮಿಶ್ರರು ಹಾಗೂ ಅದ್ವೈತ ತತ್ವಜ್ಞಾನಿ ತಮ್ಮ ತತ್ವವನ್ನು ಸ್ಥಾಪಿಸಿದ ಆದಿ ಶಂಕರಾಚಾರ್ಯರು ಇವರಿಬ್ಬರ ನಡುವೆ ನಡೆದ ಈ ತೀಕ್ಷ್ಣವಾದ ತತ್ವ ಚರ್ಚೆ ಭಾರತೀಯ ಸಂಪ್ರದಾಯದಲ್ಲಿ ಅತಿ ಪ್ರಮುಖವಾಗಿದೆ. ಸದಾಶಿವ ಸಮಾರಂಭಾಮ್ ಶಂಕರಾಚಾರ್ಯ ಮಧ್ಯಮಾಮ್ । ಅಸ್ಮದಾಚಾರ್ಯ ಪರ್ಯಂತಾಮ್ ವಂದೇ ಗುರು ಪರಂಪರಾಮ್॥ ಶ್ರೀ ಗುರು ಚರಣಾರವಿಂದಾರ್ಪಣ ಮಸ್ತು. 🙏🙏🙏 (ಶ್ರೀ ಶಂಕರ ಕಥಾಮೃತ) ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ
ರಾಧಾಕೃಷ್ಣ 🦚💙
1K views
25 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಶಿವ ಶಕ್ತಿಯರ ‘ಗೌರಿ’ ತವರೂರು ಗುಮ್ಮಳಾಪುರ:- ಬೆಂಗಳೂರಿನ ಹೊರಬಾಗದ ಆನೇಕಲ್ ತಾಲೂಕಿನ ಗಡಿ ಭಾಗದ ಕೃಷ್ಣಗಿರಿ ಜಿಲ್ಲೆಯ ಸಮೀಪ ಗುಮ್ಮಳಾಪುರ ಎಂಬ ಗ್ರಾಮವಿದೆ. ಈ ಗ್ರಾಮವನ್ನು ಗೌರಿ ದೇವಿಯ ತವರೂರು ಎನ್ನುತ್ತಾರೆ. ಒಮ್ಮೆ ಶಿವನು ಗೌರಿಯನ್ನು ಕರೆದು ಕೊಂಡು ಹೋಗಲು ಬಂದಿದ್ದ ಎಂಬುದಕ್ಕಾಗಿ ಇದನ್ನು ‘ಕೈಲಾಸ ಪುರಿ’ ‘ ಭೂ ಕೈಲಾಸ’ ಅಂತಲೂ ಕರೆಯುತ್ತಾರೆ. ಇಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಪ್ರಕೃತಿ ಸಂಪತ್ತು ಹೇರಳವಾಗಿದೆ. ಈ ಗುಮ್ಲಾ ಪುರದಲ್ಲಿ ಪುರಾತನ ಕಾಲದಿಂದ ಪ್ರಸಿದ್ಧವಾದ ‘ಗೌರಿ ದೇವಿಯ’ ದೇವಸ್ಥಾನವಿದೆ. ವಿಶೇಷ ಎಂದರೆ ಎಲ್ಲಾ ದೇವಾಲಯಗಳಂತೆ ನಿತ್ಯ ಪೂಜೆ ನಡೆಯುವುದಿಲ್ಲ. ವರ್ಷದಲ್ಲಿ ಒಂದು ತಿಂಗಳು ಮಾತ್ರ ದೇವಾಲಯದ ಬಾಗಿಲು ತೆಗೆದಿದ್ದು ಭರಪೂರ ಭಕ್ತರನ್ನು ಆಕರ್ಷಿಸುವ ದೇವಾಲಯ ಆಗಿದೆ.‌ ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬಾಗಿಲು ತೆಗೆದು ತದಿಗೆ ದಿನ ಬರುವ ಗೌರಿ ಗಣೇಶ ಹಬ್ಬದಲ್ಲಿ,‌ ಮಣ್ಣಿನಿಂದ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಮಾಡಿ ಪ್ರತಿಷ್ಠಾಪಿಸಿ ಒಂದು ತಿಂಗಳು ತವರು ಮನೆಯ ಆತಿಥ್ಯ ಎಂದು ಗೌರಿಗೆ ವಿಶೇಷ ಪೂಜೆ ನೈವೇದ್ಯ ಮಾಡುತ್ತಾರೆ. ಒಂದು ತಿಂಗಳು ಅಂದರೆ, ಮಹಾಲಯ ಅಮಾವಾಸ್ಯೆ ನಂತರ ಬರುವ ಗುರುವಾರದ ತನಕ ಪೂಜೆ- ಭಜನೆ- ವಿಶೇಷ ಅಲಂಕಾರಗಳನ್ನು ಮಾಡಿ, ಜಾತ್ರೆ ನಡೆಸಿ ಗೌರಮ್ಮನಿಗೆ ಮಡಿಲು ತುಂಬಿ ತವರು ಮನೆಯಿಂದ‌ ಗಂಡನ ಮನೆ ಕೈಲಾಸಕ್ಕೆ ಕಳುಹಿಸುವ ಕೊಡುವ ಆಚರಣೆ ನಡೆಸುತ್ತಾರೆ. ಪ್ರತಿ ವರ್ಷ ತವರೂರಿಗೆ ಬಂದ ಗೌರಿ ಒಂದು ತಿಂಗಳು ತವರಿನ ಲ್ಲಿದ್ದು ಉಳಿದ 11 ತಿಂಗಳು ಗಂಡನ ಮನೆ ಕೈಲಾಸದಲ್ಲಿ ಇರುತ್ತಾಳೆ ಎಂಬ ಪ್ರತೀತಿ ಇದೆ. ಈ ಗ್ರಾಮದಲ್ಲಿ 770 ಶಿವಶರಣರು ವಾಸವಾಗಿದ್ದರು. ಇಲ್ಲಿನ ಗುರುಕುಲದಲ್ಲಿ ಊರ ಮಕ್ಕಳು, ನೆರೆಹೊರೆ ಗ್ರಾಮ ಹಳ್ಳಿಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ ರು. ಪ್ರತಿ ವರ್ಷ ನಡೆವ ಜಾತ್ರೆಗೆ ಊರಿನ ಎಲ್ಲಾ ಮನೆಯ ಹೆಣ್ಣು ಮಕ್ಕಳು ಬರುವ ಪದ್ಧತಿ ಇತ್ತು. ಆ ವರ್ಷವು ಗೌರಿ ಹಬ್ಬ ಬಂದಿತು ಗುರುಕುಲದಲ್ಲಿ ಓದುತ್ತಿದ್ದ ಗಂಡು ಮಕ್ಕಳು ಗೌರಿ ಹಬ್ಬ ಬಂದ ಕೂಡಲೇ ರಜಾ ತೆಗೆದುಕೊಳ್ಳುತ್ತಿದ್ದರು. ಶಿವಶರಣರ ಒಂದು ಕುಟುಂಬದಲ್ಲಿ ಹೆಣ್ಣು ಮಕ್ಕಳು ಇರಲಿಲ್ಲ. ಆ ಮನೆಯ ಹುಡುಗ ಗುರುಕುಲಕ್ಕೆ ಬರುತ್ತಿದ್ದ. ಎಲ್ಲಾ ಹುಡುಗರು ರಜೆ ತೆಗೆದುಕೊಂಡಿದ್ದು ನೋಡಿ ಅವನು ಕೇಳಿದ ಹಬ್ಬಕ್ಕೆ ನನಗೂ ರಜಾ ಬೇಕು ಎಂದು. ಯಾಕೋ ನಿನಗೆ ರಜಾ, ಅಕ್ಕ ಇಲ್ಲ- ತಂಗಿ ಇಲ್ಲ ನಿಮ್ಮ ಮನೆಯಲ್ಲಿ ಹಬ್ಬವೇ ಇಲ್ಲ. ರಜ ಏಕೆ ಎಂದ ಗುರುಗಳ ಮಾತಿಗೆ, ಉಳಿದ ಹುಡುಗರೆಲ್ಲ ಜೋರಾಗಿ ನಕ್ಕರು. ಇದು ಆ ಹುಡುಗ ಅವಮಾನ ಎಂದು ಭಾವಿಸಿದ. ಮನೆಗೆ ಬಂದು ತಾಯಿ ಹತ್ತಿರ ಅಮ್ಮ ನನಗೆ ಈಗಲೇ ಅಕ್ಕ ಬೇಕು ತಂದು ಕೊಡು ಎಂದು ಹಠ ಮಾಡಿದ. ಎಷ್ಟೇ ಸಮಾಧಾನ ಮಾಡಿದರು ಕೇಳಲಿಲ್ಲ. ಇಲ್ಲದ ಅಕ್ಕನನ್ನು ನಿನಗೆ ಎಲ್ಲಿಂದ ತಂದುಕೊಡಲಿ ಎಂದ ತಾಯಿಗೆ,‌ ಹಾಗಾದರೆ ನಾನೇ ಅಕ್ಕನನ್ನು ಕರೆತರುವೆ ನನಗೆ ಬುತ್ತಿ ಕಟ್ಟಿ ಕೊಡು ಎಂದ. ಸದ್ಯ ಹಠ ನಿಂತರೆ ಸಾಕೆಂದು ತಾಯಿ ಬುತ್ತಿ ಕಟ್ಟಿ ಕೊಟ್ಟಳು. ಹುಡುಗ ಬುತ್ತಿ ಕಟ್ಟಿಕೊಂಡು ಊರು -ಕೇರಿ- ಕಾಡು - ಮೇಡು ಎಲ್ಲಾ ಕಡೆ ಎಲ್ಲಾ ಕಡೆ ಅಕ್ಕ ಬಾ, ಎಲ್ಲಿರುವೆ ಅಕ್ಕ ಮನೆಗೆ ಬಾ ಎಂದು ಕೂಗುತ್ತಿದ್ದ, ಎಲ್ಲಿ ಹುಡುಕಿದರೂ ಅಕ್ಕ ಸಿಗಲಿಲ್ಲ. ಬೇಸತ್ತ ಹುಡುಗ ಎಷ್ಟು ಕರೆದರೂ ಅಕ್ಕಾ ನೀನು ಬರುತ್ತಿಲ್ಲ ನಿನ್ನನ್ನು ಕರೆದುಕೊಂಡು ಬರುವುದಾಗಿ ಅಮ್ಮನಿಗೆ ಹೇಳಿ ಬಂದಿದ್ದೆ, ಈಗ ಮನೆಗೆ ಹೋಗಿ ಏನು ಹೇಳಲಿ? ನಾನು ಮನೆಗೆ ಹೋಗುವುದಿಲ್ಲ ಈ ಬೆಟ್ಟದಿಂದ ಹಾರಿ ಪ್ರಾಣ ಬಿಡುವೆ ಎಂದು ಹಾರಲು ಹೊರಟಿದ್ದ. ಅದು ಮುಸ್ಸಂಜೆ ಸಮಯ. ಶಿವ ಪಾರ್ವತಿಯರು ಆಕಾಶ ಮಾರ್ಗದಲ್ಲಿ ಸಂಚರಿ ಸುತ್ತಾ ಭೂಲೋಕದ ಸ್ಥಿತಿಗತಿಗಳನ್ನು ವೀಕ್ಷಿಸುತ್ತಿದ್ದರು.‌ ಹಾಗೆ ಹೋಗುತ್ತಿದ್ದಾಗ “ಅಕ್ಕಾ ಬಾ, ಅಕ್ಕ ಎಲ್ಲಿದ್ದರೂ ಬಾ, ನೀನು ಬರದಿದ್ದರೆ ನಾನು ಬೆಟ್ಟದಿಂದ ಹಾರು ತ್ತೇನೆ” ಎಂಬ ಕೂಗು ಕೇಳಿ ಪಾರ್ವತಿಯ ಮಾತೃ ಹೃದಯ ಕರಗಿತು, ಆಕೆ ಶಿವನಿಗೆ ಹೇಳಿದಳು. ಯಾರೋ ಬಾಲಕ ನನ್ನನ್ನು ಕೂಗುತ್ತಿದ್ದಾನೆ ನೋಡಿ ಬರುತ್ತೇನೆ ಎಂದಳು. ಜಗತ್ತಿನ ತಂದೆ ಯಾದ ಶಿವನು ಅನುಮತಿಸುತ್ತಾನೆ. ಪಾರ್ವತಿ ಕೂಗು ಬಂದತ್ತ ಬಂದಳು, ನೋಡುತ್ತಾಳೆ, “ಅಕ್ಕಾ ಇವತ್ತು ನೀನು ಬರದಿದ್ದರೆ ನಾನು ಬೆಟ್ಟದ ಕೆಳಗೆ ಬೀಳುವೆ ಎಂದು ಕೂಗುತ್ತಾ ಬಾಲಕ ಹಾರಿದ ಸಮಯಕ್ಕೆ ಬಂದ ಪಾರ್ವತಿ ತನ್ನ ಸೆರಗನ್ನು ಹಾಸಿ ಬಾಲಕನನ್ನು ಹಿಡಿದುಕೊಂಡಳು. ಹುಡುಗನಿಗೆ ಏಕೆ ಹಾರಲು ಹೊರಟಿದ್ದೆ ಎಂದು ಗೌರಿ ಕೇಳಿದಾಗ, ನನಗೆ ಅಕ್ಕ -ತಂಗಿ ಇಲ್ಲ .ನಮ್ಮೂರಿ ನಾ ಜಾತ್ರೆಗೆ ಎಲ್ಲರ ಮನೆಯಲ್ಲೂ ಅಕ್ಕ-ತಂಗಿಯರು ಬರುತ್ತಾರೆ. ಆದರೆ ನಮ್ಮ ಮನೆಯಲ್ಲಿ ಹಬ್ಬ ಇಲ್ಲ ಎಂದವನೇ, ‌ಅಕ್ಕ ಹೇಗೋ ನೀನು ಬಂದೆಯಲ್ಲ ಈ ವರ್ಷ ಎಲ್ಲರ ಮನೆಯಂತೆ ನಾವು ಹಬ್ಬ ಮಾಡೋಣ ಬಾ ಅಕ್ಕ ನನಗೆ ಅಕ್ಕ ಸಿಕ್ಕೇಬಿಟ್ಟಳು ಎಂದು ಸಂತೋಷದಿಂದ ಕುಣಿಯುತ್ತಾ ,ಬಾ ಅಕ್ಕ ಮನೆಗೆ ಹೋಗೋಣ ಅಮ್ಮ ಕಾಯುತ್ತಿದ್ದಾಳೆ ಎಂದು ಅಕ್ಕನನ್ನು ಕರೆದುಕೊಂಡು ಮನೆಗೆ ಬಂದ. ಅಕ್ಕ ಪಾರ್ವತಿ ಮನೆಗೆ ಬಂದು ಹೊಸಿಲು ದಾಟುತ್ತಿದ್ದಂತೆ. ಮನೆಯಲ್ಲಿ ಸಂಭ್ರಮ ವೈಭವ ತುಂಬಿತು. ಅಕ್ಕನ ಜೊತೆ ಜಾತ್ರೆಯಲ್ಲಿ ಓಡಾಡಿದ ಹುಡುಗನ ಸಂತೋಷಕ್ಕೆ ಪಾರವೇ ಇಲ್ಲ. ಮನೆಗೆ ಬಂದ ಗೌರಿಯನ್ನು ದೇವರು ಕೊಟ್ಟ ಮಗಳು ಎಂದೇ ಉಪಚರಿಸುತ್ತಿದ್ದರು. (ಕೈಲಾಸದ ಶಿವನ ಪತ್ನಿ ಗೌರಿ ಬರುವುದು ಎಂದರೆ ಸಾಮಾನ್ಯ ವಲ್ಲ. ಆಕೆ ಬರುವಾಗ 101 ದೇವತೆಗಳು ಹಾಗೆ ಕೆರೆ,‌ ಕುಂಟೆ, ಬಾವಿ, ಶಿವಲಿಂಗ, ಬಿಲ್ವಪತ್ರೆ ಮರ,‌ (ಎಲ್ಲಾ 101 ) ಗಳು ಜೊತೆಯಲ್ಲಿ ಬಂದು ನೆಲೆಸಿದರು ಎಂಬ ಪ್ರತೀತಿ ಇದೆ. ಈಗಲೂ ಇದೆ ಎನ್ನುತ್ತಾರೆ) ಗೌರಿ ದೇವಿ ಊರಿನ ಕೆರೆ ದಡದ ಮೇಲೆ ಕುಳಿತಿದ್ದಳು ಶಿವಶರಣೆಯರು ಹೋಗಿ ಆರತಿ ಮಾಡಿ ಆಕೆಯನ್ನು ಕರೆ ತಂದು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದರು ಎಂಬ ಮಾತಿದೆ. ತವರಿನ ಪ್ರೀತಿಯ ಉಪಚಾರದಲ್ಲಿ ಮೈಮರೆತ ಗೌರಿಗೆ ಒಂದು ತಿಂಗಳು ಕಳೆದದ್ದು ತಿಳಿಯಲಿಲ್ಲ. ಅದಕ್ಕಾಗಿ ಇಲ್ಲಿನ ಜನರು “ಉಂಡ ಗೌರಮ್ಮ ಹರಸುತ್ತಾಳೆ ನಮ್ಮನ್ನು” ಎನ್ನುತ್ತಾರೆ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ತವರಿಗೆ ಹೋದ ಗೌರಿ ಒಂದು ತಿಂಗಳಾಯಿತು ಇನ್ನು ಬಂದಿಲ್ಲ ಎಂದು ಶಿವ ಯೋಚಿಸಿದ. ನಂತರ ದೇವಿಯನ್ನು ಕರೆ ತರಲು ‘ನಂದಿ’ಯನ್ನು ಕಳಿಸುತ್ತಾನೆ. ನಂದಿ ಬಂದಿದ್ದು ಸೋಮವಾರ.‌ ಆ ದಿನ ಬಸವಣ್ಣನ ಜಾತ್ರೆ ಮಾಡಿ, ಕೆಂಡೋತ್ಸವ ಮಾಡುತ್ತಾರೆ. ನಂದಿ ಸಂತೋಷದಿಂದ ಒಂದು ತಿಂಗಳು ಇದ್ದ ಎನ್ನುತ್ತಾರೆ. ಪಾರ್ವತಿ ಇನ್ನೂ ಬರದೇ ಇದ್ದ ಕಾರಣ, ವೀರಭದ್ರನನ್ನು ಕಳಿಸುತ್ತಾನೆ. ಮಂಗಳವಾರ ಬೆಳಗ್ಗೆ ಕೆರೆ ದಂಡೆಯಲ್ಲಿ ಕುಳಿತ ವೀರಭದ್ರನನ್ನು ನೋಡಿದ ಹುಡುಗರು ಹೋಗಿ ಕರೆತರು ವಾಗ ಹೆಜ್ಜೆ ಹೆಜ್ಜೆ ಗೂ ತೆಂಗಿನಕಾಯಿ ಒಡೆಯುತ್ತಾರೆ. ಆತನೀಗೂ ಕೆಂಡೋತ್ಸವ ಸೇವೆ ಮಾಡಿಸಿದಾಗ ವೀರಭದ್ರ ಕೋಪ ಬಿಟ್ಟು ಸದ್ದಿಲ್ಲದೆ ಅಲ್ಲೇ ಕುಳಿತು ಬಿಡು ತ್ತಾನೆ. ಒಂದು ಬುಧವಾರ ದೇವತೆಗಳೆಲ್ಲ ಸಭೆ ಸೇರಿ ಗೌರಿಯನ್ನು ಕರೆತರಲು ಪಂಚಾಯಿತಿ ನಡೆಸಿ ಭೂಲೋಕಕ್ಕೆ ಬಂದರು. ಆಗ ಒಂದು ತಿಂಗಳಾಗಿತ್ತು. ಗೌರಿಯನ್ನು ಗಂಡನ ಮನೆಗೆ ಕಳಿಸುವುದು ಗುರುವಾರ ಎಂದಾಗಿತ್ತು. ಗೌರಿಯನ್ನು ತವರಿಗೆ ಕರೆತರಲು ನಾಲ್ಕಾರು ಜನ ಹೋಗಿ ಸ್ವಾಗತಿಸಿ ಕರೆತರುತ್ತಾರೆ. ಇಲ್ಲಿಂದ ಕಳಿಸಿಕೊಡುವಾಗ 300- 400 ಜನರು ಗೌರಿ ಕೂರಿಸಿದ ಪಲ್ಲಕ್ಕಿ ಯನ್ನು ತಲೆಯ ಮೇಲೆ ಹೊತ್ತು ಗಂಡನ ಮನೆ ಕೈಲಾಸಕ್ಕೆ ಕಳಿಸಲು ಕೆರೆ ನೀರಿನಲ್ಲಿ ವಿಸರ್ಜಿಸಿ ಬರುತ್ತಾರೆ. (ಅವಳ ಜೊತೆ ನೂರ ಒಂದು ದೇವತೆಗಳು ಇರುತ್ತಾರೆ ) ಗೌರಿ ಗಣಪತಿಯರನ್ನು ವಿಸರ್ಜನೆ ಮಾಡಲು ಕರೆದೊಯ್ಯುವ ರಥದಲ್ಲಿ 101 ದೇವತಾ ಸಮೂಹ ಇದ್ದು, ರಥ ಎಳೆಯಲು 300 ರಿಂದ 400 ಜನರು ಇರುತ್ತಾರೆ. ರಥ ಬರುವಾಗ ಎಷ್ಟು ಭಾರ ಇರುತ್ತೋ ಅಷ್ಟೇ ಭಾರ ಇರುತ್ತದೆ. ರಥ ತುಂಬಾ ಭಾರ ಆಗುತ್ತದೆ ಎಂದು ಬರುವಾಗ ಬಂದ ನೂರಾ ಒಂದು ದೇವತೆಗಳು ಗುಮ್ಲಾಪು ರದಲ್ಲೇ ನೆಲೆಸಿದರು ಎಂಬ ಐತಿಹ್ಯವಿದೆ. ಒಂದು ತಿಂಗಳು ಸಂಭ್ರಮದ ಜಾತ್ರೆ ನಡೆಸಿ, ಗೌರಿ- ಗಣೇಶನನ್ನು ಊರಿನ ಕೆರೆಯಲ್ಲಿ ವಿಸರ್ಜಿಸಿದರು. ಆಶ್ಚರ್ಯ ಎಂದರೆ, ಗೌರಮ್ಮನ ಪೂಜೆ ಮಾಡುವಾಗ ಮಂಗಳದ್ರವ್ಯಗಳಾದ ಮಾಂಗಲ್ಯ ,‌ಕೈಗೆ ಹಾಕಿದ ಬಳೆ ಅರಿಶಿನ ಕುಂಕುಮ ಬಟ್ಟಲು ಎಲ್ಲ ನೀರಲ್ಲಿ ವಿಸರ್ಜನೆ ಮಾಡಿ ಬಂದಿರುತ್ತಾರೆ.ಮರುದಿನ ಬೆಳಿಗ್ಗೆ ಕರಿಮಣಿ ಮಾಂಗಲ್ಯ, ಬಳೆ, ಗೌರಿ ಪೀಠ ಹೂವಿನ ಪ್ರಸಾದ ತೇಲುವುದನ್ನು ದನ ಕಾಯುವ ಹುಡುಗರು ನೋಡಿ ಗೌರಿದೇವಿ ಪ್ರಸಾದ ಎಂದು ತಂದರು. ಮರು ವರ್ಷದಿಂದ ಅದೇ ಕೆರೆಯ ಮಣ್ಣನಿಂದ ಗೌರಿದೇವಿ- ಗಣಪತಿ ವಿಗ್ರಹ ಮಾಡಿ ಪೂಜೆ, ಜಾತ್ರೆ ಎಲ್ಲ ಮಾಡುತ್ತಾ ಪದ್ಧತಿಯಾಗಿ ಬಂದಿದೆ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಗೌರಮ್ಮನ ಜಾತ್ರೆ ಸಮಯದಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ದೂರ ದೂರದಿಂದ ಬಂದು, ತವರಿಗೆ ಬಂದ ಗೌರಮ್ಮನಿಗೆ ಮಡಿಲು ( ಮಡ್ಲಕ್ಕಿ) ತುಂಬುತ್ತಾರೆ. ಇದು ಅಲ್ಲಿನ ಪದ್ಧತಿಯಾಗಿದೆ.‌ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು- ಆಂಧ್ರಪ್ರ ದೇಶ- ಮಹಾರಾಷ್ಟ್ರಗಳಿಂದ ಹೆಂಗಸರು ಕುಟುಂಬ ಸಮೇತ ಸಂಭ್ರಮದಿಂದ ಬಂದು ಜಾತ್ರೆಯನ್ನು ಕಣ್ತುಂಬಿಕೊಂಡು ಪತಿ ಮಕ್ಕಳು ಕುಟುಂಬ ಚೆನ್ನಾಗಿರಲಿ ಎಂದು ಜಗಜ್ಜನನಿಯನ್ನು ಪ್ರಾರ್ಥಿಸಿ ಮಡ್ಲು ತುಂಬುತ್ತಾರೆ. ಇಲ್ಲಿನ ಗೌರಮ್ಮನಿಗೆ ಹಸಿರು- ಕೆಂಪು ಬಳೆಗಳನ್ನು ಅರ್ಪಿಸುತ್ತಾರೆ. ಜಾತ್ರೆ ಮುಗಿದ ಮೇಲೆ ಗೌರಿ ಗಣೇಶನನ್ನು ಕೆರೆಯಲ್ಲಿ ಬಿಟ್ಟು ಕೈಲಾಸಕ್ಕೆ ಕಳುಹಿಸುತ್ತಾರೆ ಆಗ ಶಿವ ಪಾರ್ವತಿಯನ್ನು ಕರೆದೊಯ್ಯಲು ಅತ್ತೆ ಮನೆ ಗುಮ್ಲಾಪುರಕ್ಕೆ ಬರುತ್ತಾನೆ, ಎಂಬ ಭಾವದಿಂದ ಗೌರಿಯನ್ನು, ಮಾಂಗಲ್ಯ ಸರ, ಮೂಗುತಿ ಮತ್ತು ಅಲಂಕರಿಸಿದ ಪೀಠದ ಸಮೇತ ಕೆರೆಯಲ್ಲಿ ವಿಸರ್ಜಿಸುತ್ತಾರೆ. ಹಬ್ಬದ ಸಮಯದಲ್ಲಿ ಮೂಗುತಿ ಮಾಂಗಲ್ಯ ಪೀಠದ ಸಮೇತ ಕೆರೆಯಲ್ಲಿ ಮೇಲೆ ಕಾಣಿಸುತ್ತವೆ. ಅಲ್ಲಿಗೆ ಬರುವ ದನ ಕಾಯುವ ಹುಡುಗರಿಗೆ ಸಿಗುತ್ತದೆ. ಆ ಹುಡುಗರು ತಂದು ಗೌರಮ್ಮನ ಜಾತ್ರೆ ಮಾಡುತ್ತಾ ಬಂದರು.‌ ಈ ಒಂದು ತಿಂಗಳು ಮಾತ್ರ ಗೌರಿ ದೇವಸ್ಥಾನ ತೆರೆದಿದ್ದು ಜಾತ್ರೆ ಉತ್ಸವ ನಡೆಯುತ್ತದೆ. ಗುಂಮ್ಲಾಪುರದ ವಿಶೇಷತೆಯಾದ ಸುತ್ತಮುತ್ತ 101 ದೇವತೆಗಳು, ಹಾಗೆ ಕೆರೆ- ಕುಂಟೆ, ಕಲ್ಪವೃಕ್ಷ - ಬಿಲ್ವಪತ್ರೆ ಮರ, ಗುಹೆ, ಎಲ್ಲವೂ 101 ಇರುವುದು ಗೌರಿಯ ವರಪ್ರಸಾದವೆಂದೆ ಭಾವಿಸಿದ್ದಾರೆ. ಈ ಕ್ಷೇತ್ರವು ಕಲಿಯುಗದ ಆರಂಭದಿಂದಲೂ ಶಿವಶರಣರ ನೆಲೆಯಾಗಿದೆ ಎಂಬ ಉಲ್ಲೇಖವಿದೆ || ಸರ್ವ ಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ಶರಣ್ಯೇ ತ್ರ್ಯಂಬಿಕೇ ದೇವಿ ನಾರಾಯಣಿ ನಮೋಸ್ತು ತೇ| ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ