ದಿನಕ್ಕೊಂದು ಕಥೆ

ಕೃಷ್ಣೆ 🦚💙
596 views
3 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ 🙏 ಹರಿಃ ಓಂ 🕉️ ಶ್ರೀ ದತ್ತಾತ್ರೇಯ ಅಷ್ಟ ಚಕ್ರಬೀಜ ಸ್ತೋತ್ರಮ್ ▶️ Sri Dattatreya Ashta Chakra Beeja Stotram ಶ್ರೀ ದತ್ತಾತ್ರೇಯ ಅಷ್ಟ ಚಕ್ರ ಬೀಜ ಸ್ತೋತ್ರವು ಭಗವಾನ್ ದತ್ತಾತ್ರೇಯನಿಗೆ ಸಮರ್ಪಿತವಾದ ಶಕ್ತಿಯುತವಾದ ಸ್ತೋತ್ರವಾಗಿದೆ. ಇದು ದೇಹದ ಎಂಟು ಚಕ್ರಗಳನ್ನು (ಅಷ್ಟ ಚಕ್ರ) ಬೀಜಾಕ್ಷರಗಳ ಮೂಲಕ ಜಾಗೃತಗೊಳಿಸಲು ಮತ್ತು ದತ್ತಾತ್ರೇಯನ ಅನುಗ್ರಹ ಪಡೆಯಲು ಸಹಾಯ ಮಾಡುತ್ತದೆ. 🌠ಶ್ರೀ ದತ್ತಾತ್ರೇಯ ಅಷ್ಟ ಚಕ್ರ ಬೀಜ ಸ್ತೋತ್ರಮ್ (ಸಾರಾಂಶ): ಸ್ವರೂಪ: ಈ ಸ್ತೋತ್ರವು ದತ್ತಾತ್ರೇಯನನ್ನು ದಿಗಂಬರ, ಭಸ್ಮಲೇಪಿತ, ಚಂದ್ರಶೇಖರ, ಮತ್ತು ನೀಲಕಂಠನಾಗಿ ವರ್ಣಿಸುತ್ತದೆ. 🌠ಬೀಜ ಮಂತ್ರಗಳು: ಸ್ತೋತ್ರದ ಪ್ರತಿ ಪಾದದಲ್ಲಿ ವಿಶಿಷ್ಟ ಬೀಜಾಕ್ಷರಗಳ ಮೂಲಕ ಚಕ್ರಗಳನ್ನು ಪ್ರಾರ್ಥಿಸಲಾಗುತ್ತದೆ. 🌠ಫಲಶ್ರುತಿ: ಈ ಸ್ತೋತ್ರವನ್ನು ಪಠಿಸುವುದರಿಂದ ದತ್ತಾತ್ರೇಯನ ಕೃಪೆ ಲಭಿಸಿ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಉನ್ನತಿ ಉಂಟಾಗುತ್ತದೆ. ಈ ಸ್ತೋತ್ರದ ಶ್ರವಣ ಮತ್ತು ಪಠಣವು ವಿಶೇಷವಾಗಿ ದತ್ತ ಜಯಂತಿ ಅಥವಾ ಗುರುವಾರದಂದು ಹೆಚ್ಚು ಫಲಪ್ರದವೆಂದು ಪರಿಗಣಿಸಲಾಗಿದೆ. ದಿಗಂಬರಂ ಭಸ್ಮ ಸುಗಂಧಲಾಪನಂ ಚಕ್ರ ತ್ರಿಶೂಲ ಡಮರು ಗದಂ ಚ! ಪದ್ಮಾಸನಸ್ಥ ಋಷಿ ದೇವವಂದಿತಂ ಧ್ಯಾನಂ ದತ್ತಾತ್ರೇಯ ಅಭಿಷ್ಠ ಸಿದ್ಧಿದಂ !! . 1. ಮೂಲಾಧಾರೇ ವಾರಿಜಪದ್ಮೇ ಸಚತುಷ್ಕೇ ವಂಶಸಂಸಾ ವರ್ಣವಿಶಾಲೈಃ ಸುವಿಶಾಲೈಃ । ರಕ್ತಂ ವರ್ಣಂ ಶ್ರೀಭಾಗವತಂ ಗಾನನಾಥಂ ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಸ್ಮಿ. 2. ಸ್ವಾಧಿಷ್ಠಾನೇ ಷಷ್ಠಲಪದ್ಮೇ ತನುಲಿಂಗೇ ಬಾಲಂತೈಸ್ತದ್ವರ್ಣವಿಶಾಲೈಃ ಸುವಿಶಾಲೈಃ । ಪೀತಂ ವರ್ಣಂ ವಾಕ್ಪತಿರೂಪಂ ದ್ರುಹಿಂ ತಂ ದತ್ತಾತ್ರೇಯಂ ಶ್ರೀಗುರುಮುರ್ತಿಂ ಪ್ರಣತೊಸ್ಮಿ. 3. ನಭೌ ಪದ್ಮೇ ಪತ್ರದಶಾಂಕೆ ದಫವರ್ಣೇ ಲಕ್ಷ್ಮಿಕಾಂತಂ ಗರುಢಾರೂಢಂ ಮಣಿಪುರೇ. ನೀಲವರ್ಣ ನಿರ್ಗುಣರೂಪಂ ನಿಗಮಾಕ್ಷಂ ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಸ್ಮಿ. 4. ಹೃತ್ಪದ್ಮಾಂತೇ ದ್ವಾದಪತ್ರೇ ಕಠವರ್ಣೇ ಅನಾಹತಂತೇ ವೃಷಭೃಷಂ ಶಿವರೂಪಂ. ಸರ್ಗಸ್ಥಿತಂ ಕುರ್ವಾಣ ಧವಳಂಗಂ ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೋಸ್ಮಿ.5. ಕಂಠಸ್ಥನೇ ಚಕ್ರವಿಷುದ್ಧೇ ಕಮಲಾಂತೇ ಚಂದ್ರಕಾರೇ ಷೋಡಶಾಪತ್ರೇ ಸ್ವರವರ್ಣೇ ಮಾಯಾಧೀಶಂ ಜೀವಶಿವಂ ತಾತಂ ದಗತ್ತ್ ಶ್ರೀಗುರುಮೂರ್ತಿಂ ಪ್ರಣತೊಸ್ಮಿ. 6. ಅಜ್ಞಾಚಕ್ರೇ ಭೃಕುತಿಷ್ಠಾನೇ ದ್ವಿದಳಂತೇ ಹಾಂ ಕ್ಷಾಂ ಬೀಜಂ ಜ್ಞಾನಸಮುದ್ರಂ ಗುರುಮೂರ್ತಿಂ ವಿದ್ಯುತ್ವರ್ಣಂ ಜ್ಞಾನಮಯಂತಿ ತಂಖಂ ದತ್ತಾತ್ರೇಯಂ ಶ್ರೀಗುರುಮೂರ್ತಿಂ ಪ್ರಣತೊಸ್ಮಿ. 7. ಮೂರ್ಧ್ನಿಸ್ಥಾನೇ ವಾರಿಜಪದ್ಮೇ ಶಶಿಬೀಜಂ ಶುಭ್ರಂ ವರ್ಣಂ ಪತ್ರಸಹಸ್ರೇ ಲಲನಾಖ್ಯೇ ಹಂ ಬೀಜಾಖ್ಯಂ ವರಣಸಹಸ್ರಂ ದತ್ತೂರ್ಯಃ । ಶ್ರೀಗುರುಮೂರ್ತಿಂ ಪ್ರಣತೊಸ್ಮಿ. 8. ಬ್ರಹ್ಮಾನಂದಂ ಬ್ರಹ್ಮಮುಕುಂದಂ ಭಗವಂತಂ ಬ್ರಹ್ಮಜ್ಞಾನಂ ಜ್ಞಾನಮಯಂ ತಂ ಸ್ವಯಮೇವ ಪರಮಾತ್ಮನಂ ಬ್ರಹ್ಮಮುನೀದ್ರಂ ಭಾಸಿತಂಗಂ ದತ್ತಾತ್ರೇಷ್ಯಂ ಪ್ರಣತೊಸ್ಮಿ. 9. ದತ್ತಾತ್ರೇಯ ಸ್ತೋತ್ರವು ಹಿಂದೂ ಧರ್ಮದಲ್ಲಿ ಬ್ರಹ್ಮ (ಸೃಷ್ಟಿಕರ್ತ), ವಿಷ್ಣು (ಸಂರಕ್ಷಕ) ಮತ್ತು ಶಿವ (ವಿನಾಶಕ) ಅವರ ಅಂಶಗಳನ್ನು ಸಂಯೋಜಿಸುವ ಸಂಯೋಜಿತ ದೇವತೆಯಾದ ಭಗವಾನ್ ದತ್ತಾತ್ರೇಯನಿಗೆ ಅರ್ಪಿತವಾದ ಸ್ತೋತ್ರ ಅಥವಾ ಪ್ರಾರ್ಥನೆಯಾಗಿದೆ. ಭಗವಾನ್ ದತ್ತಾತ್ರೇಯನನ್ನು ಸಾಮಾನ್ಯವಾಗಿ ಮೂರು ತಲೆಗಳು ಮತ್ತು ಆರು ತೋಳುಗಳನ್ನು ಹೊಂದಿರುವ ಋಷಿಯಾಗಿ ಚಿತ್ರಿಸಲಾಗುತ್ತದೆ ಮತ್ತು ಅವರನ್ನು ಗುರುಗಳ ಗುರು ಎಂದು ಪರಿಗಣಿಸಲಾಗುತ್ತದೆ, ಆಧ್ಯಾತ್ಮಿಕ ಬುದ್ಧಿವಂತಿಕೆಯನ್ನು ನೀಡುವ ಅಂತಿಮ ಶಿಕ್ಷಕ. ಈ ಸ್ತೋತ್ರವು ಭಕ್ತರು ತಮ್ಮ ಭಕ್ತಿ ಮತ್ತು ಗೌರವವನ್ನು ವ್ಯಕ್ತಪಡಿಸಲು ಹಾಗೂ ಶ್ರೀ ದತ್ತಾತ್ರೇಯರ ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ಪಡೆಯಲು ಒಂದು ಮಾರ್ಗವಾಗಿದೆ. ಇದು ಶ್ರೀ ದತ್ತಾತ್ರೇಯರ ದೈವಿಕ ಗುಣಗಳನ್ನು ಮತ್ತು ಆತ್ಮಸಾಕ್ಷಾತ್ಕಾರ ಹಾಗೂ ಮೋಕ್ಷದ ಮಾರ್ಗದ ಕಡೆಗೆ ಸಾಧಕರನ್ನು ನಡೆಸುವ ಆಧ್ಯಾತ್ಮಿಕ ಗುರುವಾಗಿ ಅವರ ಪಾತ್ರವನ್ನು ಗುರುತಿಸುತ್ತದೆ. ಭಕ್ತರು ತಮ್ಮ ಜೀವನದಲ್ಲಿ ಶ್ರೀ ದತ್ತಾತ್ರೇಯರ ಕೃಪೆಯನ್ನು ಪಡೆಯಲು ಭಕ್ತಿ ಮತ್ತು ನಂಬಿಕೆಯಿಂದ ಈ ಸ್ತೋತ್ರವನ್ನು ಪಠಿಸುತ್ತಾರೆ. ಬರಹ 👉 ವೇದಾಂತ ಜ್ಞಾನ ಯವರಿಂದ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
783 views
5 days ago
#ದಿನಕ್ಕೊಂದು ಕಥೆ ಆತ್ಮ ಸಮರ್ಪಣೆ:- ಮುಂಜಾನೆ ಗಂಗಾ ನದಿಯಲ್ಲಿ ಒಬ್ಬ ಸನ್ಯಾಸಿ ಲಂಗೋಟಿ ಹಾಕಿಕೊಂಡು ಸ್ನಾನ ಮಾಡುತ್ತಿದ್ದನು. ಲಂಗೋಟಿ ಅಂದುಕೊಂಡಿತು. ಛೆ ಈ ಮನುಷ್ಯ ನನ್ನನ್ನು ಎಷ್ಟು ತುಚ್ಚವಾಗಿ ಕಾಣುತ್ತಾನೆ. ನನಗೆ ಎಂತಹ ಸ್ಥಾನ ಕೊಟ್ಟಿದ್ದಾನೆ. ಇವನನ್ನು ಬಿಟ್ಟು ಹೋಗಬೇಕು ಎಂದು ಸಿಟ್ಟಿನಿಂದ ಅದು ಅವನಿಂದ ಕಳಚಿ ಕೊಂಡು ಗಂಗಾ ನದಿಯ ಅಂಚಿನಲ್ಲಿ ಬಿದ್ದುಕೊಂಡಿತು. ಸ್ವಲ್ಪ ಸಮಯಕ್ಕೆ ಇನ್ನೊಬ್ಬ ಸಾಧು ಸ್ನಾನಕ್ಕೆ ಬಂದನು. ಆತನು ಲಂಗೋಟಿ ಧರಿಸಿ ಸ್ನಾನ ಮಾಡುವಾಗ ಅಕಸ್ಮಾತ್ ಅವನ ಲಂಗೋಟಿ ಕೂಡ ಕೊಚ್ಚಿಕೊಂಡು ಹೋಯಿತು. ಅವನಿಗೆ ಲಂಗೋಟಿ ಬೇಕಾಗಿತ್ತು. ಮರಳ ಮೇಲೆ ಬಿದ್ದುಕೊಂಡಿದ್ದ ಲಂಗೋಟಿ ಕಣ್ಣಿಗೆ ಕಂಡು ಹರ್ಷದಿಂದ ಅದನ್ನು ಹಾಕಿಕೊಂಡು ಸದ್ಯ ಪಾರದೆ ಎಂದುಕೊಂಡನು. ಅವನು ಹಾಕಿಕೊಂಡ ಮೇಲೆ ಮತ್ತೆ ಲಂಗೋಟಿಗೆ ದುಃಖವಾಯಿತು. ತನಗೆ ಹಿಂದಿನ ಮಾಲೀಕ ಕೊಟ್ಟಿದ್ದ ಸ್ಥಾನವನ್ನೆ ಇವನು ಕೊಡುತ್ತಿದ್ದಾನೆ ಎಂದು. ಎರಡು ದಿನ ಕಳೆಯಿತು ಲಂಗೋಟಿಗೆ ಅಲ್ಲಿ ಇರುವುದು ಬಹಳ ಕಷ್ಟವಾಯಿತು. ಏಕೆಂದರೆ ಹಿಂದಿನ ಯಜಮಾನ ಇವನಿಗಿಂತ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅವನ ಬಳಿ ಎರಡು ಲಂಗೋಟಿ ಇದ್ದು ದಿನವು ಬದಲಾಯಿಸುತ್ತಿದ್ದ. ಒಂದು ದಿನವಾದರೂ ಲಂಗೋಟಿಗೆ ಬಿಡುವು ಸಿಗುತ್ತಿತ್ತು.‌ ಇವನು ಮಹಾಕ್ರೂರಿ ಎರಡು ದಿನಗಳಾದರೂ ಬದಲಾಯಿಸುತ್ತಿರಲಿಲ್ಲ.‌ ಅದೂ ಇಲ್ಲವಾಯಿತು. ಈಗ ಅದಕ್ಕನ್ನಿಸಿತು. ನಾನು ಎಷ್ಟು ದೊಡ್ಡ ತಪ್ಪು ಮಾಡಿದೆ ನನ್ನ ಹಳೆ ಯಜಮಾನ ನನ್ನು ಬಿಟ್ಟು ಬರಬಾರದಾಗಿತ್ತು ಎಂದು ಅದು ತನ್ನಷ್ಟಕ್ಕೆ ನೊಂದುಕೊಂಡಿತು. ಹೀಗೆ ಒಂದು ಕೋಣ ತನ್ನ ಒಡೆಯನ ಗದ್ದೆಯನ್ನು ಮುಂಜಾನೆಯಿಂದ ಸಂಜೆವರೆಗೂ ಗೇಯುತ್ತಿತ್ತು. ಅದಕ್ಕೂ ಸಾಕಾಗಿ ಹೋಗಿತ್ತು. ಅದೊಂದು ಉಪಾಯ ಮಾಡಿತು. ಒಂದು ದಿನ ಅವನು ಮೇಯಲು ಬಿಟ್ಟಿದ್ದ. ಅಲ್ಲಿಂದ ತಪ್ಪಿಸಿಕೊಂಡು ದೂರ ಪ್ರದೇಶಕ್ಕೆ ಓಡಿಹೋಯಿತು. ಅಲ್ಲಿ ಇಲ್ಲಿ ಹುಲ್ಲು ತಿಂದು ಅಲೆದಾಡುತ್ತಿರುವಾಗ ಮತ್ತೊಬ್ಬ ರೈತನ ಕಣ್ಣಿಗೆ ಕೋಣ ಬಿದ್ದಿತು. ಇದು ಎಲ್ಲೋ ತಪ್ಪಿಸಿಕೊಂಡು ಬಂದಿದೆ ಎಂದು ತಿಳಿದು ಅವನೇ ಅದನ್ನು ಒಯ್ದನು. ಮತ್ತು ತನ್ನ ಹೊಲದಲ್ಲಿ ನೇಗಿಲಿಗೆ ಕಟ್ಟಿ, ಹಗಲು ರಾತ್ರಿ ಎನ್ನದೆ ಅದರಿಂದ ಕೆಲಸ ಮಾಡಿಸ ತೊಡಗಿದ. ಆಗ ಈ ಕೋಣಕ್ಕೆ ಅನ್ನಿಸಿತು ನನ್ನ ಹಳೆಯ ಯಜಮಾನ ಬೆಳಿಗ್ಗೆಯಿಂದ ಮುಂಜಾನೆವರೆಗೂ ಕೆಲಸ ಮಾಡಿಸಿ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹುಲ್ಲು ಮೇವು ಕೊಟ್ಟು ಮೈದಡವಿ ಆರೈಕೆ ಮಾಡುತ್ತಿದ್ದ ಇವನು ಮಹಾಕ್ರೂರಿ. ಹಗಲು ರಾತ್ರಿ ಎನ್ನದೆ ಕೆಲಸ ಮಾಡಿಸಿಕೊಳ್ಳುತ್ತಾನೆ ಸ್ವಲ್ಪ ನಿಂತರು ಚಾಟಿಯಿಂದ ಹೊಡೆಯುತ್ತಾನೆ. ಒಳ್ಳೆಯ ಆಹಾರವನ್ನು ಕೊಡುವುದಿಲ್ಲ ವಿಶ್ರಾಂತಿಯಂತೂ ಇಲ್ಲವೇ ಇಲ್ಲ ನಾನು ನನ್ನ ಹಳೆಯ ಯಜಮಾನನನ್ನು ಬಿಟ್ಟು ಬಂದು ದೊಡ್ಡ ತಪ್ಪು ಮಾಡಿದೆ ಅಲ್ಲಿ ಕಷ್ಟ ಎಂದು ಇಲ್ಲಿ ಬಂದು ಸಿಕ್ಕಿಕೊಂಡೆ, ಇನ್ನೂ ಕಷ್ಟ ಪಡುವಂತಾಯಿತು. ಇವನಿಂದ ಎಂದಿಗೂ ಬಿಡುಗಡೆ ಇಲ್ಲ ಎಂದು ನೊಂದಿತು. ಅದೊಂದು ಕಾಡು, ಕಾಡಿನ ಒಂದು ಮರದಲ್ಲಿ ಒಂದು ಪುಟ್ಟ ಮೈನಾ ಪಕ್ಷಿ ಹಲವು ಕಾಲದಿಂದ ವಾಸ ಮಾಡಿಕೊಂಡಿತ್ತು. ಆದರೆ ಆ ಕಾಡು ಎಂದೂ ಹಸಿರಿನಿಂದ ಕಂಗೊಳಿಸಿರಲಿಲ್ಲ. ಒಂದು ಹಸಿರೆಲೆ, ಹೂವು, ಕಾಯಿ,ಹಣ್ಣು ಎಂದೆಂದೂ ಆಗಿರಲಿಲ್ಲ. ಅಲ್ಲಿ ಏನೂ ಇಲ್ಲದಿದ್ದರೂ ಮೈನಾ ಮಾತ್ರ ಸದಾ ಚಿಂತೆ ಇಲ್ಲದೆ ಶಿವನಾಮ ಸ್ಮರಣೆಯನ್ನು ಮಾಡುತ್ತಾ ಜೀವನ ಕಳೆಯುತ್ತಿತ್ತು. ಒಂದು ದಿನ ನಾರದರು ಆ ಕಾಡಿಗೆ ಬಂದರು. ಮೈನಾ ಕೇಳಿತು. ನಾರದರೆ ಎಲ್ಲಿಗೆ ಹೋಗುತ್ತಿದ್ದೀರಿ? ನಾನು ಶಿವ ದರ್ಶನ ಮಾಡಲು ಕೈಲಾಸಕ್ಕೆ ಹೋಗುತ್ತಿದ್ದೇನೆ ಎಂದರು. ಮೈನಾ ಹೇಳಿದ್ದು ಹಾಗಾದರೆ ಶಿವನಿಗೆ ಹೇಳಿ, ಪರಮೇಶ್ವರನು ನನ್ನನ್ನು ಈ ಕಾಡಿನಲ್ಲಿ ಸಂತೋಷವಾಗಿ ಇಟ್ಟಿದ್ದಾನೆ. ಅದೇ ರೀತಿ ಪಾಪ ಈ ಕಾಡು ಸಹ ಹಸಿರಿನಿಂದ ಕಂಗೊಳಿಸುವಂತೆ, ಈ ಕಾಡಿನ ಮರಗಿಡಗಳಲ್ಲಿ ಹೂವು ಹಣ್ಣುಗಳು ಚಿಗುರುವಂತೆ ತಿಳಿಸಿ ಇದೇ ನನ್ನ ಬೇಡಿಕೆ ಎಂದಿತು. ನಾರದನು ಹಾಗೆ ಆಗಲಿ ಎಂದು ಕೈಲಾಸಕ್ಕೆ ಬಂದು, ಮೈನಾ ಪಕ್ಷಿ ಹೇಳಿದ್ದನ್ನು ಶಿವನಿಗೆ ಬಹಳ ಸಲ ಹೇಳಿದ ಮೇಲೆ, ಶಿವನು ಧ್ಯಾನದಿಂದ ಹೊರ ಬಂದನು. ಮತ್ತೆ ನಾರದರು ಹೇಳಿದಾಗ, ಶಿವನು ಹೇಳಿದನು ನಾನು ಏನು ಮಾಡಲು ಸಾಧ್ಯವಿಲ್ಲ ಅದು ಆ ಪಕ್ಷಿಯ ವಿಧಿಯೇ ಹಾಗಿದೆ. ಏಳು ಜನ್ಮಗಳ ಕಾಲ ಅದು ಹೀಗೆ ಒಣಗಿದ ಕಾಡಿನಲ್ಲಿ ಇರಬೇಕು ಎಂದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ನಾರದನು ಅದೇ ವಿಚಾರವನ್ನು ಹೇಳಲು ಕಾಡಿಗೆ ಬಂದನು. ಕಾಡಿನೆಲ್ಲೆಡೆ ಹಸಿರು ಕಂಗೊಳಿಸುತ್ತಿತ್ತು. ಹಳ್ಳಕೊಳ್ಳಗಳು ತುಂಬಿದ್ದವು. ಮರ-ಗಿಡಗಳಲ್ಲಿ ಹೂವು- ಹಣ್ಣು- ಹಂಪಲು ತೊನೆದಾಡಿತ್ತು. ನಾರದರಿಗೆ ಆಶ್ಚರ್ಯವಾಯಿತು. ಇದೇನಿದು ಪರಮೇಶ್ವರ ನೋಡಿದರೆ, ಮೈನಾ ಹಾಕ್ಕಿಯ ವಿಧಿಯೇ ಹಾಗಿದೆ ಎಂದು ಹೇಳಿದ್ದರು ಆದರೆ ನಾ ಬರುವ ವೇಳೆಗೆ ಈ ರೀತಿಯಾಗಿದೆಯಲ್ಲ. ಮೈನಾ ಪಕ್ಷಿಯು ಬಹಳ ಸಂತೋಷದಿಂದ ಹಾಡು ಹೇಳುತ್ತಿತ್ತು. ನಾರದರು ಸೀದಾ ಕೈಲಾಸಕ್ಕೆ ಬಂದರು. ಹೇ ಪರಮೇಶ್ವರ ನೀನು ಹೇಳುವುದೊಂದು, ಮಾಡುವುದು ಇನ್ನೊಂದು, ನನ್ನ ಹತ್ತಿರ ಆ ಹಕ್ಕಿಯ ವಿಧಿ ಇರುವುದೇ ಹಾಗೆ ಎಂದು ಹೇಳಿದ್ದೆ, ಆದರೆ ನಾನು ಹೋಗಿ ನೋಡಿದಾಗ ಕಾಡು ಹಸಿರಿನಿಂದ ತುಂಬಿ ನಳನಳಿಸುತ್ತಿತ್ತು. ಮೈನಾ ಸಂತೋಷವಾಗಿತ್ತು. ಇದೇನು ಭಗವಂತ ನನಗೆ ಯಾಕೆ ಸುಳ್ಳು ಹೇಳಿದಿರಿ ಎಂದನು. ಆಗ ಪರಮೇಶ್ವರನ ನಕ್ಕು, ನಾರದ ನಾನು ಸುಳ್ಳು ಹೇಳಿಲ್ಲ ನಿಜವನ್ನೇ ಹೇಳಿದ್ದೇನೆ. ಮೈನಾ ಪಕ್ಷಿಯ ಹಣೆಬರಹವೇ ಹಾಗಿತ್ತು. ಆದರೆ ಅದು ತನ್ನನ್ನು ಸಂಪೂರ್ಣವಾಗಿ ಅದೇ ಜೀವನಕ್ಕೆ ಸಮರ್ಪಿಸಿಕೊಂಡಿತ್ತು. ಹಾಗಾಗಿ ಆ ಪುಟ್ಟ ಪಕ್ಷಿಯು ನನ್ನ ಧ್ಯಾನ ಮಾಡುತ್ತಾ ಅದರಲ್ಲೆ ಸಂತೋಷ ನೆಮ್ಮದಿಯನ್ನು ಕಂಡುಕೊಂಡಿತ್ತು. ಅದು ಅದಕ್ಕಿದ್ದ ಪರಿಸ್ಥಿತಿಯನ್ನೇ ಒಪ್ಪಿಕೊಂಡು ನನ್ನ ನಾಮಸ್ಮರಣೆಯನ್ನು ಮಾಡುತ್ತಾ ಜೀವಿಸಿದ್ದ ಕಾರಣ ಅದರ ಏಳು ಜನ್ಮಗಳು ಬಹಳ ಬೇಗ ಕಳೆದು ಎಂಟನೇ ಜನ್ಮದಲ್ಲಿದ್ದ ಸುಖ, ಸಂತೋಷ ಸಮೃದ್ಧಿ ಅದರ ಜೀವನದಲ್ಲಿ ದೊರಕಿತು. ಇದನ್ನು ಕೇಳಿದ ಮೇಲೆ ನಾರದನು, ಪರಮೇಶ್ವರ ಇರುವ ಕರ್ಮ ಫಲವನ್ನು ಅನುಭವಿಸದೆ ಬೇರೆ ಮಾರ್ಗವೇ ಇಲ್ಲವೇ ಎಂದನು. ಅದಕ್ಕೆ ಶಿವನು ದೇವಾನುದೇವತೆಗಳೇ ಕರ್ಮಫಲವನ್ನು ಅನುಭವಿಸಿದ್ದಾರೆ ಹಾಗಿರುವಾಗ ಇದು ಯಾರನ್ನು ಬಿಡುವುದಿಲ್ಲ. ಭೂಮಿಯಲ್ಲಿ ಜನ್ಮ ತಾಳಿದ ಪ್ರತಿಯೊಬ್ಬನೂ, ಪ್ರತಿಯೊಂದು ಜೀವಿಯು ತನಗೆ ಕೊಟ್ಟಿರುವ ಬದುಕನ್ನು ಸಂತೋಷದಿಂದ ಅನುಭವಿಸಿದರೆ ಕರ್ಮ ಶೇಷ ಗಳೆಲ್ಲ ಕಳೆದು ಸುಖ ಪ್ರಾಪ್ತಿಯಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಸಿದನು. ಇದೊಂದು ಕಥೆ. ಮನುಷ್ಯನಿಗೂ ಹಾಗೆ ಆ ಭಗವಂತನೇ ನಿಗದಿ ಮಾಡಿರುವ ವಿಧಿಯನ್ನು ತಪ್ಪಿಸಿಕೊಳ್ಳಲು ಹೋದರೆ ಮತ್ತಷ್ಟು ಕಷ್ಟಗಳು ಒದಗಿ ಅವನು ಅನುಭವಿಸುವ ಪ್ರಸಂಗ ಬರುತ್ತದೆ. ‌ ಪರಮಾತ್ಮನ ಇಚ್ಛೆಗೆ ಬದ್ಧರಾಗಿ ಶರಣಾಗಬೇಕು. ನಮಗೆ ಸಿಕ್ಕ ಬದುಕನ್ನು ಎಡರು ತೊಡರುಗಳು ಬಂದರೂ ಸಹಿಸಿಕೊಂಡು ವಿಧಿ ನಿಯಮವನ್ನೇ ಪಾಲಿಸಬೇಕು ಎಂಬುದು ಲಂಗೋಟಿ, ಕೋಣ ಮತ್ತು ಪಕ್ಷಿಗೆ ಅರ್ಥವಾಯಿತು. ಇಲ್ಲಿ ಇಲ್ಲದ್ದು ಮತ್ತೆಲ್ಲೋ ಬಹಳವಿದೆ, ಅಂದುಕೊಂಡು ಹೋದರೆ ಅಲ್ಲೂ ಸಹ ಒಂದು ದೋಷ ಇದ್ದೇ ಇರುತ್ತದೆ ಆದುದರಿಂದ ಮನಸ್ಸನ್ನೆ ಒಂದು ಕಟ್ಟು- ನಿಟ್ಟು ಶಿಸ್ತಿಗೆ ಒಳಪಡಿಸಿಕೊಂಡು, ಬದ್ಧನಾಗಿ ಮಾಡಬೇಕಾದ ಕಾರ್ಯಗಳನ್ನು ಪ್ರಾಮಾಣಿವಾಗಿ ಮಾಡುತ್ತಿದ್ದರೆ, ಭಗವಂತನಿಗೆ ನಿಜ ಭಕ್ತನಾಗುತ್ತಾನೆ. ಭಕ್ತಿಯೆಂದರೆ ಆತ್ಮ ಸಮರ್ಪಣೆ ಭಗವಂತ ಕೊಟ್ಟಂಥ ಕೆಲಸವು ಕಷ್ಟವೆಂದು, ಕೀಳಾದ ಕೆಲಸವೆಂದು, ಗೊಣಗುಟ್ಟದೆ ಪರಮಾತ್ಮನ ವರಪ್ರಸಾದವೆಂದು, ಅವನ ಚಿಂತನೆಯಲ್ಲೇ ಒಳ್ಳೆಯ ಕಾಲಕ್ಕಾಗಿ ಕಾಯುತ್ತಾ ಶಾಂತಿಯಿಂದ ಕೆಲಸ ಮಾಡುತ್ತಾ ಬಂದರೆ ಸಂತೃಪ್ತಿ ದೊರೆಯುತ್ತದೆ. ವ್ರತಗಳಾಗಲಿ, ಯೋಗ–ಯಜ್ಞಗಳಾಗಲಿ, ಜ್ಞಾನೋಪದೇಶಗಳಾಗಲಿ—ಇವೆಲ್ಲವೂ ಆತ್ಮವನ್ನು ಶುದ್ಧಗೊಳಿಸುವ ಮಾರ್ಗಗಳು ಮಾತ್ರ. ಅವು ಮನಸ್ಸನ್ನು ಸಿದ್ಧಪಡಿಸುತ್ತವೆ, ಹೃದಯವನ್ನು ಮೃದುಗೊಳಿಸುತ್ತವೆ, ಜೀವನವನ್ನು ಧರ್ಮದತ್ತ ತಿರುಗಿಸುತ್ತವೆ. ಆದರೆ ಮುಕ್ತಿಯ ಅಂತಿಮ ಕೀಲಿಕೈ ಒಂದೇ, ಅದು ಭಗವಂತನ ಮೇಲಿನ ದೃಢ, ನಿಶ್ಚಲ, ನಿಷ್ಕಪಟ ಭಕ್ತಿ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
637 views
5 days ago
#ದಿನಕ್ಕೊಂದು ಕಥೆ ಇದೊಂದು ಪುಟ್ಟ ಕಥೆ :- ಪುಟ್ಟ ಕೋಗಿಲೆಗೆ, ಒಬ್ಬ ಚಿಕ್ಕಮ್ಮ ಇದ್ದಳು. ಚಿಕ್ಕಮ್ಮ, ಮಗ ತುಂಬಾ ಚೆನ್ನಾಗಿದ್ದರು. ದಿನನಿತ್ಯವೂ ಕೋಗಿಲೆ ಕಾಡಿಗೆ ಬಂದು ಹಣ್ಣು-ತರಕಾರಿ ಎಲ್ಲಾ ತೆಗೆದುಕೊಂಡು ಹೋಗಿ ಚಿಕ್ಕಮ್ಮನಿಗೆ ಕೊಡುತ್ತಿತ್ತು. ಚಿಕ್ಕಮ್ಮ ಅದನ್ನೆಲ್ಲಾ ಚೆನ್ನಾಗಿ ತೊಳೆದು ತರಕಾರಿಯಿಂದ ರುಚಿರುಚಿಯಾದ ಅಡುಗೆ ಮಾಡಿ ಕೋಗಿಲೆಗೆ ಬಡಿಸುತ್ತಿದ್ದಳು. ಹಣ್ಣುಗಳನ್ನೆಲ್ಲಾ ಹೆಚ್ಚಿ ತಿನ್ನಲು ಕೊಡು ತ್ತಿದ್ದಳು. ದಿನವೂ ಜೊತೆಯಾಗಿಯೇ ಕುಳಿತು ಊಟ ಮಾಡುತ್ತಿದ್ದರು. ಜೊತೆಯಲ್ಲೇ ಮಲಗುತ್ತಿದ್ದರು. ಆಗ ಬೇಸಿಗೆ ಮುಗಿಯುವ ದಿನಗಳು. ಬರುವುದು ಮಳೆಗಾಲ, ಕೋಗಿಲೆ ಚಿಕ್ಕಮ್ಮನಿಗೆ ಹೇಳಿತು. ಮಳೆಗಾಲದಲ್ಲಿ ಹೊರಗೆ ಹೋಗಲು ಆಗುವುದಿಲ್ಲ. ಮನೆಯಲ್ಲೇ ಉಪ್ಪಿನಕಾಯಿ ಹಾಕಿಡು. ಅದಕ್ಕೆ ಬೇಕಾಗುವ 'ಕುಸುಬೆ' ಹೂವುಗಳನ್ನು ಕಾಡಿನಿಂದ ತರುತ್ತೇನೆ ಎಂದಿತು. ಕೋಗಿಲೆ ನಿತ್ಯ ಕಾಡಿಗೆ ಹೋಗಿ ಆಹಾರಗಳ ಜೊತೆ ಒಂದಷ್ಟು ಕುಸುಬೆ ಹೂವುಗಳನ್ನು ತಂದು ಚಿಕ್ಕಮ್ಮನ ಕೈಯಲ್ಲಿ ಕೊಡುತ್ತಿತ್ತು. ಚಿಕ್ಕಮ್ಮ ಅದನ್ನೆಲ್ಲಾ ಒಂದು ಜಾಡಿಯಲ್ಲಿ ಸಂಗ್ರಹಿಸುತ್ತಿದ್ದಳು. ಕೋಗಿಲೆಗೆ ಯೋಚನೆ ಬಂದಿತು. ಬಹಳ ದಿನಗಳಿಂದ ಕುಸುಬೆ ಹೂವು ತರುತ್ತಿದ್ದೇನೆ. ಈಗಾಗಲೇ ಜಾಡಿ ತುಂಬಿ ಹೋಗಿರಬೇಕು ಎಂದುಕೊಂಡು, ಅದೊಂದು ದಿನ ಚಿಕ್ಕಮ್ಮನ ಹತ್ತಿರ, ಚಿಗವ್ವಾ, ಮಳೆಗಾಲ ದಲ್ಲಿ ಊಟಕ್ಕೆ ಉಪ್ಪಿನಕಾಯಿ ಹಾಕಲು ನಾನು ಬಹಳ ದಿನಗಳಿಂದ ಕುಸುಬೆ ಹೂವು ತರುತ್ತಿದ್ದೇನೆ ನಾಳೆ ಹೂಗಳನ್ನೆಲ್ಲ ತೆಗೆದು ಉಪ್ಪಿನಕಾಯಿ ಹಾಕಿ ಬಿಡು ಎಂದು ಹೇಳಿ, ಹೂವು ಎಷ್ಟಾಗಿದೆ ನೋಡೋಣವೆಂದು ಜಾಡಿ ತೆಗೆಸಿ ತು. ಜಾಡಿಯ ತಿರುಗಣಿ ಮುಚ್ಚಳ ತೆಗೆದು ನೋಡಿದರೆ, ಕೆಳಗೆ ಒಂದು ಹಿಡಿಯಷ್ಟು ಮಾತ್ರ ಹೂವು ಇತ್ತು. ಇಷ್ಟೆನಾ? ಎಂದು ಕೋಗಿಲೆ ಕೇಳಿತು. ಹೌದು ಹೂವು ಒಣಗಿದರೆ ಇಷ್ಟೇ ಆಗುತ್ತದೆ ಎಂದಳು ಚಿಕ್ಕಮ್ಮ. ಕೋಗಿಲೆಗೆ ತುಂಬಾ ಸಿಟ್ಟು ಬಂತು. ಚಿಗವ್ವ ನಿನ್ನನ್ನು ಎಷ್ಟು ಒಳ್ಳೆಯವಳು ಎಂದುಕೊಂಡಿದ್ದೆ. ಇವತ್ತು ನನಗೆ ಗೊತ್ತಾಯ್ತು. ನಿನ್ನ ಒಳ್ಳೆತನ ಬರೀ ಸುಳ್ಳು, ಎಷ್ಟೋ ಆಸೆಯಿಂದ ಉಪ್ಪಿನಕಾಯಿಗೆಂದು ಕಾಡಿನಲ್ಲೆಲ್ಲ ಅಲೆದು ಕುಸುಬೆ ಹೂವು ತರುತ್ತಿದ್ದೆ. ನೀನು ಎಲ್ಲವನ್ನೂ ತಿಂದು ಬಿಟ್ಟೆ. ನನ್ನ ಶ್ರಮವೆಲ್ಲ ವ್ಯರ್ಥ ವಾಯಿತು ಎಂದು ಕಿರುಚುತ್ತಾ ಚಿಕ್ಕಮ್ಮನ ಮೈಯೆಲ್ಲ 'ಕುಕ್ಕಿ ಕುಕ್ಕಿ' ತುಂಬಾ ಗಾಯ ಮಾಡಿತು. ನಾನು ತಿಂದಿಲ್ಲ ನೀನು ಕೊಟ್ಟಿದ್ದನ್ನೆಲ್ಲ ಅದರೊಳಗೆ ಇಡುತ್ತಾ ಬಂದಿದ್ದೇನೆ ಎಂದು ಎಷ್ಟು ಹೇಳಿದರೂ ಕೋಗಿಲೆ ನಂಬಲಿಲ್ಲ. ಕೋಗಿಲೆ ಕುಕ್ಕುವುದನ್ನು ತಡೆಯಲಾರದೆ, ಚಿಕ್ಕಮ್ಮ ಅಳುತ್ತಾ ತುಂಬಾ ದೂರ ಹೋಗಿ ಬಿಟ್ಟಿತು. ಅಷ್ಟಲ್ಲದೇ ಚಿಕ್ಕಮ್ಮ- ಮಲತಾಯಿ ಅಂತ ಹೇಳುವುದಿಲ್ಲ,ನಾನು ನಂಬಿದ ಚಿಕ್ಕಮ್ಮ ನನಗೆ ಮೋಸ ಮಾಡಿದಳು. ಎಂದು ಕೋಗಿಲೆ ಎರಡು ದಿನ ಅಳುತ್ತಾ ಮನೆಯಲ್ಲಿ ಕುಳಿತಿತು.ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಮೂರನೇ ದಿನ ಕಣ್ಣೊರೆಸಿಕೊಂಡು ಆಹಾರ ಹುಡುಕಲು ಹೊರಟಿತು. ಚೈತ್ರ -ವೈಶಾಖ ಮಾಸವಾದುದರಿಂದ, ಮಾವು, ಹಲಸು, ಪೇರಲೆ, ನೇರಳೆ, ಹೂವು ಚಿಗುರಿದಂತೆ, ಕುಸುಬೇ ಹೂವು ಬೇಕಾದಷ್ಟು ಬಿಟ್ಟಿತ್ತು. ಕೋಗಿಲೆಗೆ ಆದ ಸಂತೋಷ ಅಷ್ಟಿಷ್ಟಲ್ಲ. ಒಂದಷ್ಟು ಹಣ್ಣು ತಿಂದು. ಕುಸುಬೆ ಹೂವು ಗಳನ್ನು ಬಿಡಿಸಿಕೊಂಡು ಮನೆಗೆ ಬಂದಿತು. ಜಾಡಿಯನ್ನು ಚೆನ್ನಾಗಿ ಒರೆಸಿ ಅದರಲ್ಲಿ ಹಾಕಿತು. ಮರುದಿನದಿಂದ ಬೇಗನೆ ಎದ್ದು ಹೋಗಿ ಮತ್ತಷ್ಟು ಕುಸುಬೆ ಹೂವು ತಂದು ತುಂಬಿತು. ಹೇಗೆ ದಿನಂಪ್ರತಿ ಬಿಡದೆ ಹದಿನೈದು ಇಪ್ಪತ್ತು ದಿನಗಳ ಕಾಲ ಎಡೆಬಿಡದೆ ಕುಸುಬೇ ಹೂವುಗಳನ್ನು ಬಿಡಿಸುವುದು ತರುವುದು ಜಾಡಿಯಲ್ಲಿ ತುಂಬುವುದು. ಇದೇ ಕಾಯಕ ಮಾಡಿತು. ಆಗಲೇ ಹೂವು ತುಂಬಿ ಹೋಗಿರಬೇಕು, ಉಪ್ಪಿನಕಾಯಿ ಹಾಕಿಬಿಡೋಣ ಎಂದು ಅಟ್ಟಣಿಕೆ ಮೇಲಿಟ್ಟಿದ್ದ ಜಾಡಿಯನ್ನು ಕೆಳಗಿಳಿಸಿ, ತಿರುಗಣಿ ತೆಗೆದು, ನೋಡಿತು, ಅದರ ಉಸಿರೇ ನಿಂತು ಹೋದಂತಾಯಿತು. ಕಣ್ಣು ಅಗಲಿಸಿ ಮತ್ತೆ ಮತ್ತೆ ನೋಡಿತು. ನಿತ್ಯದಲ್ಲಿ ಎಷ್ಟು ತರುತ್ತಿತ್ತೋ ಅಷ್ಟೇ ಇತ್ತು ಅದರ ಕಣ್ಣು ಅದೇ ನಂಬಲಿಲ್ಲ . ಹಿಂದಿನ ಸಲ ಇದ್ದಹಾಗೆ, ಈ ಸಾರಿಯೂ ಜಾಡಿ ಯಲ್ಲಿ ಕೆಳಗೆ ಸ್ವಲ್ಪೇ ಸ್ವಲ್ಪ ಹೂವುಗಳಿತ್ತು. ಎಷ್ಟು ದಿನದಿಂದ ತಂದಿದ್ದೇ ಇಷ್ಟೇ ಆಯಿತಾ? ಎಂದು ಯೋಚಿಸಿತು. ಆಗ ತಕ್ಷಣ ಚಿಕ್ಕಮ್ಮ ಹೇಳಿದ್ದಳು, ದಿನ ಕಳೆದಂತೆ “ಹೂಗಳು ಬಾಡಿ ಕಮ್ಮಿಯಾಗುತ್ತದೆ”, ನಾನು ಒಂದು ಹೂವನ್ನು ತಿಂದಿಲ್ಲ". ಎಂದು ಚಿಕ್ಕಮ್ಮ ಕಣ್ಣೀರಿಡುತ್ತಾ ಹೇಳಿದ್ದ ಒಂದೊಂದು ಮಾತು ನೆನಪಾಯಿತು. ಕೋಗಿಲೆಗೆ ತುಂಬಾ ದುಃಖವಾಯಿತು. ಪಾಪ ಎಷ್ಟು ಒಳ್ಳೆ ಚಿಕ್ಕಮ್ಮ, ನನಗೆ ಬಿಸಿಬಿಸಿ ಯಾಗಿ ಅಡುಗೆ ಮಾಡಿ ಬಡಿಸುತ್ತಿದ್ದಳು, ಜ್ವರ ಬಂದರೆ ನೋಡಿಕೊಳ್ಳುತ್ತಿ ದ್ದಳು, ನಾನು ಅನ್ಯಾಯ ಮಾಡಿಕೊಂಡೆ, ಎಂದು ಕೊಂಡಿತು. ಹಾಗೆ ಯೋಚಿಸಿತು ಇಲ್ಲ ಚಿಕ್ಕಮ್ಮನನ್ನು ಕರೆ ತರಬೇಕು ಕಾಡಿನ ಯಾವ ಮೂಲೆ ಯಲ್ಲಿದ್ದರೂ ಹುಡುಕಿ ಅವಳನ್ನು ಕರೆತರುತ್ತೇನೆ ಎಂದು, ಚಿಗವ್ವಾ ಚಿಗವ್ವಾ, ಚಿಗವ್ವಾ, ಚಿಗವ್ವಾ ಎಂದು ಕೂಗುತ್ತಾ ದೂರ ದೂರದ ಕಾಡಿಗೆ ಚಿಕ್ಕಮ್ಮನನ್ನು ಹುಡುಕುತ್ತಾ ಹೊರಟಿತು. ಎಲ್ಲಿ ಹುಡುಕಿದರೂ ಚಿಕ್ಕಮ್ಮ ಸಿಗಲಿಲ್ಲ. ಆದರೆ ಚಿಕ್ಕವ್ವ ಚಿಕ್ಕವ್ವ ಎಂದು ಕೂಗುತ್ತಾ ಇಂದಿಗೂ ಕೋಗಿಲೆ ಕಾಡಿನ ಮೂಲೆ ಮೂಲೆಯಲ್ಲೂ ಹುಡುಕುತ್ತಲೇ ಇದೆ. "ಲೋಭ ಪ್ರವೃತ್ತಿ ರಾರಂಭಹ ಕರ್ಮಣಮಶಮ ಸ್ಪೃಹಾ! ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ." ಅರ್ಥ: ಭರತ ವಂಶ ಶ್ರೇಷ್ಠ ನೇ! ದುರಾಸೆ, ಫಲಾಪೇಕ್ಷೆ ಗಳಿಂದ ಕೂಡಿದ ಕರ್ಮಗಳು, ನಿಯಂತ್ರಿಸಲಾಗದ ಬಯಕೆಗಳು-ಇದೆಲ್ಲವೂ ರಜೋಗುಣವು ಪ್ರಬಲವಾದಾಗ ಹೆಚ್ಚುತ್ತದೆ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
652 views
7 days ago
#ದಿನಕ್ಕೊಂದು ಕಥೆ #ಜಾಜಲಿ ಹಿಂದೆ ಜಾಜಲಿ ಎಂಬ ಮಹಾತಪಸ್ವಿಯೊಬ್ಬ ಅರಣ್ಯದಲ್ಲಿ ವಾಸವಾಗಿದ್ದ. ಜಾಜಲಿಯು ತಪೋಧನನಾಗಿದ್ದ ಹಾಗೂ ಕಠೋರವ್ರತನಿಷ್ಠನಾಗಿದ್ದು ಮನೋವೇಗದಿಂದಲೇ ಎಲ್ಲ ಲೋಕಗಳನ್ನು ಸಂಚರಿಸುತ್ತಿದ್ದ. ಭೂಮಿಯೇ ಹಾಸಿಗೆ, ಆಕಾಶವನ್ನೇ ಹೊದಿಕೆಯನ್ನಾಗಿಸಿಕೊಂಡು ಮಳೆ, ಚಳಿ, ಬಿಸಿಲು, ಗಾಳಿಗೆ ಅಂಜದೇ ಕಾಡಿನಲ್ಲಿ ತಪಸ್ಸನ್ನಾಚರಿಸುತ್ತಿದ್ದ. ಅಂತಹ ಘೋರ ತಪಸ್ಸನ್ನು ಮಾಡಿದರೂ ಜಾಜಲಿಗೆ ಧರ್ಮದ ಜ್ಞಾನವುಂಟಾಗಲೇ ಇಲ್ಲ. ಧರ್ಮದ ಪೂರ್ಣಸ್ವರೂಪದ ಅನುಭವ ತನಗಾಗದ್ದರಿಂದ ಅವನು ಖಿನ್ನನಾಗಿದ್ದ, ಇನ್ನೂ ಕಠಿಣವಾದ ತಪಸ್ಸನ್ನು ಮುಂದುವರೆಸಿದ. ಹೀಗಿರುವಾಗ ಒಮ್ಮೆ ಬಯಲಿನಲ್ಲಿ ಏಕಪಾದದಲ್ಲಿ ನಿಂತು ತಪಸ್ಸು ಮಾಡುತ್ತಿರುವಾಗ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಜಾಜಲಿ ಅದನ್ನು ಲೆಕ್ಕಿಸದೇ ತನ್ನ ತಪದಲ್ಲೇ ನಿರತನಾಗಿದ್ದ. ಅವನ ತಲೆಕೂದಲು ಜಡೆಗಟ್ಟಿದವು, ಕಾಡಿನ ವಾಸದಿಂದ ಅವನ ಶರೀರ ಮಲಿನವಾಗಿತ್ತು, ವಾಯುವನ್ನೇ ಆಹಾರವನ್ನಾಗಿ ಸ್ವೀಕರಿಸುತ್ತಿದ್ದರಿಂದ ದೇಹ ಕೃಶವಾಗಿತ್ತು. ಎಲ್ಲವನ್ನೂ ನಿರ್ಲಕ್ಷಿಸಿ ಒಣಗಿದ ಮರದಂತೆ ನಿಶ್ಚೇಷ್ಟನಾಗಿ ನಿಂತುಬಿಟ್ಟ! ಅಲ್ಲಾಡದೇ ನಿಂತ ಜಾಜಲಿಯ ಜಡೆಗಟ್ಟಿದ ತಲೆಯ ಮೇಲೆ ಗುಬ್ಬಚ್ಚಿ ದಂಪತಿಗಳು ಗೂಡು ಮಾಡಿಕೊಂಡವು. ಹುಲ್ಲು – ತರಗೆಲೆಗಳನ್ನು ತಂದು ಗೂಡು ಕಟ್ಟುತ್ತಿದ್ದರೂ ಜಾಜಲಿ ಅಲ್ಲಾಡಲಿಲ್ಲ ಬದಲಾಗಿ ಅದನ್ನು ಉಪೇಕ್ಷಿಸಿದ. ಕಂಬದAತೆ ನಿಂತಿದ್ದ ಋಷಿಯು ತಮಗೆ ಏನೂ ತೊಂದರೆ ಮಾಡುವುದಿಲ್ಲ ಎಂಬುದನ್ನು ತಿಳಿದ ಗುಬ್ಬಚ್ಚಿಗಳು ಅವನ ಮೇಲಿನ ವಿಶ್ವಾಸದಿಂದ ಅಲ್ಲಿಯೇ ಸುಖವಾಗಿ ವಾಸಮಾಡತೊಡಗಿದವು. ಮಳೆಗಾಲ ಮುಗಿದು ಚಳಿಗಾಲ ಆರಂಭವಾಯಿತು. ಪ್ರಕೃತಿನಿಯಮದಂತೆ ಗುಬ್ಬಚ್ಚಿಗಳು ಋಷಿಯ ತಲೆಯಮೇಲಿದ್ದ ಗೂಡಿನಲ್ಲಿ ಮೊಟ್ಟೆಗಳನ್ನಿಟ್ಟವು. ಜಾಜಲಿಗೂ ಈ ವಿಷಯ ತಿಳಿಯಿತು. ದಯಾಳುವಾದ ಅವನಿಗೆ ಪಕ್ಷಿಗಳಿಗೆ ತೊಂದರೆ ಮಾಡುವುದು ಇಷ್ಟವಿರಲಿಲ್ಲ. ಇನ್ನೂ ಸ್ಥಿರವಾಗಿ ನಿಂತ. ಗುಬ್ಬಚ್ಚಿಗಳು ಬೆಳಿಗ್ಗೆ ಆಹಾರವನ್ನರಸಿ ಹೋಗಿ ಸಂಜೆಯಾಗುವಷ್ಟರಲ್ಲಿ ಗೂಡಿಗೆ ಹಿಂದಿರುಗುತ್ತಿದ್ದವು. ಮೊಟ್ಟೆಗಳು ಸುರಕ್ಷಿತವಾಗಿರುವುದರಿಂದ ಅವುಗಳಿಗೆ ಯಾವುದೇ ಭಯವಿರಲಿಲ್ಲ. ಸ್ವಲ್ಪಕಾಲದ ನಂತರ ಮೊಟ್ಟೆಗಳು ಒಡೆದು ಪುಟ್ಟ ಹಕ್ಕಿಮರಿಗಳು ಹೊರಬಂದವು. ಮರಿಗಳು ಬೆಳೆಯುತ್ತಾ ಜಾಜಲಿಯ ಮೈಮೇಲೆ ಕುಳಿತವು. ರೆಕ್ಕೆ ಬಲಿತ ಮರಿಗಳು ಅಪ್ಪ-ಅಮ್ಮ ಗುಬ್ಬಚ್ಚಿಗಳೊಂದಿಗೆ ತನ್ನ ಸುತ್ತೆಲ್ಲ ಹಾರಾಡುವುದನ್ನು ಕಂಡು ಋಷಿಯು ಹರ್ಷಿತನಾದ. ಕಾಲಕಳೆದಂತೆ ಎಲ್ಲ ಪಕ್ಷಿಗಳು ಗೂಡನ್ನು ತೊರೆದು ಬೇರೆಡೆಗೆ ಹಾರಿಹೋದವು. ಹಕ್ಕಿಗಳು ಹೊರಟುಹೋದ ನಂತರ ಜಾಜಲಿಗೆ ಒಂದು ರೀತಿಯ ವಿಭ್ರಮ ಉಂಟಾಯಿತು. ತಾನು ಸಿದ್ಧಪುರುಷನಾದೆ ಎಂಬ ಅಹಂಕಾರವೊಂದು ಹುಟ್ಟಿಕೊಂಡಿತು. ತಾನು ಧರ್ಮಾತ್ಮನಾದೆ ಎಂದು ಜೋರಾಗಿ ಘೋಷಿಸಿದ. ಅಷ್ಟರಲ್ಲಿ ಅಂತರಿಕ್ಷವಾಣಿಯೊಂದು ಧ್ವನಿಸಿತು “ಜಾಜಲಿಯೇ, ಧರ್ಮದಲ್ಲಿ ನೀನು ವಾರಾಣಸಿಯಲ್ಲಿರುವ ಪ್ರಾಜ್ಞನಾದ ತುಲಾಧಾರನಿಗೆ ಸಮಾನನಲ್ಲ” ಎಂದಿತು. ಇದರಿಂದ ಕುಪಿತನಾದ ಜಾಜಲಿ ತುಲಾಧಾರನನ್ನು ಸಂದರ್ಶಿಸಲು ಹೊರಟ. ತುಲಾಧಾರನು ಒಬ್ಬ ವೈಶ್ಯನಾಗಿದ್ದನು. ಜೀವನ ನಿರ್ವಹಣೆಗಾಗಿ ವೈಶ್ಯವೃತ್ತಿಯಲ್ಲಿದ್ದರೂ ವ್ಯವಹಾರಗಳಲ್ಲಿ ಮೋಸ-ವಂಚನೆರಹಿತನಾಗಿದ್ದ. ಪ್ರಾಣಿಜಂತುಗಳಲ್ಲಿ ಕರುಣೆಯನ್ನಿಟ್ಟು ಸಾಧ್ಯವಾದಷ್ಟು ಸತ್ಕಾರ್ಯಗಳಲ್ಲಿ ನಿರತನಾಗಿದ್ದ. ಜಿತೇಂದ್ರಿಯನಾಗಿದ್ದ ಅವನಿಗೆ ವಿಷಯಾಸಕ್ತಿಯು ಇರಲಿಲ್ಲ. ವೇದ ಉಪನಿಷತ್ತುಗಳಲ್ಲಿ ಹೇಳಲ್ಪಟ್ಟ ಪರಬ್ರಹ್ಮತತ್ತ್ವವನ್ನು, ಧರ್ಮಸೂಕ್ಷ್ಮಗಳನ್ನು ತುಲಾಧಾರನು ಜಾಜಲಿಗೆ ವಿವರಿಸಿದನು. ಆತ್ಮಯಜ್ಞ, ದ್ರವ್ಯಯಜ್ಞ, ಕಾಮ್ಯಯಜ್ಞ, ಮನೋತಪೋಯಜ್ಞಗಳು, ಮುಂತಾದ ಯಜ್ಞಕರ್ಮಗಳನ್ನು, ಅವುಗಳ ಅನುಷ್ಠಾನ, ಆಚರಣೆಗಳ ಉದ್ದಿಶ್ಯವನ್ನು ತಿಳಿಸುತ್ತಾನೆ. ಸನಾತನವಾಗಿ ಹರಿದು ಬಂದ ಧರ್ಮತತ್ತ್ವಗಳನ್ನು ಬೋಧಿಸಿದ ತುಲಾಧಾರನ ಮಾತುಗಳಿಂದ ಜಾಜಲಿಯು ಪ್ರಭಾವಿತನಾದ, ಧರ್ಮದ ನಿಜಾರ್ಥವನ್ನು ಅರಿತ. ನಂತರ ತಪೋಮಾರ್ಗದಲ್ಲಿ ಈ ಧರ್ಮತತ್ತ್ವಗಳನ್ನು ಅಳವಡಿಸಿಕೊಂಡು, ಆಜೀವಪರ್ಯಂತ ಪಾಲಿಸುತ್ತ ನಿಜಾನಂದವನ್ನು ಹೊಂದಿದ. 🙏🏻 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
1.4K views
7 days ago
#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ #ಬಕಾಸುರ ವಧೆ ತಮ್ಮ ವನವಾಸದ ವೇಳೆಯಲ್ಲಿ ಪಾಂಡವರು ಪಾಂಚಾಲ ದೇಶದ ರಾಜಧಾನಿಯ ಹೊರಭಾಗದಲ್ಲಿ ಒಬ್ಬ ಕುಂಬಾರನ ಮನೆಯಲ್ಲಿ ತಂಗಿದ್ದರು. ಆಗ ಹಗಲಿನ ವೇಳೆ ಕುಂತಿ ದೇವಿಯ ಜೊತೆಗೆ ಭೀಮನು ಮಾತ್ರ ಮನೆಯಲ್ಲಿದ್ದನು. ಉಳಿದ ಸಹೋದರರು ಬ್ರಾಹ್ಮಣ ವೇಷದಲ್ಲಿ ನಗರದಲ್ಲಿ ಭಿಕ್ಷೆಗಾಗಿ ಹೋಗಿದ್ದರು. ಆಗ ಅವರಿದ್ದ ಮನೆಯ ಪಕ್ಕದ ಮನೆಯಿಂದ ಜೋರಾಗಿ ಅಳುವ ಶಬ್ದವು ಕೇಳಿಸಿತು. ಇದನ್ನು ಕೇಳಿದ ಕುಂತಿ ದೇವಿಯು ಭೀಮನನ್ನು ಕುರಿತು ‘ಪುತ್ರನೇ, ಪಕ್ಕದಲ್ಲಿರುವ ಬ್ರಾಹ್ಮಣರ ಮನೆಯಿಂದ ಅಳುವ ಧ್ವನಿ ಕೇಳಿಸುತ್ತಿದೆ. ಅದೇನೆಂದು ನೋಡಿ ಬರುತ್ತೇನೆ’ ಎಂದು ಹೇಳಿ ಪಕ್ಕದ ಮನೆಗೆ ಹೋದಳು. ಅಲ್ಲಿ ಆ ಬ್ರಾಹ್ಮಣರೂ ಅವರ ಮನೆಯವರೂ ಬಿಕ್ಕಿ ಬಿಕ್ಕಿ ಅಳುವುದನ್ನು ಕಂಡು ಕುಂತಿಯ ಮನಸ್ಸು ಕರಗಿತು. ಅವರನ್ನು ನೋಡಿ ‘ಅಯ್ಯಾ, ಬಹಳ ಹೊತ್ತಿನಿಂದ ನೀವೆಲ್ಲರೂ ಅಳುತ್ತಲೇ ಇರುವಿರಲ್ಲ. ಏನು ಕಾರಣ’ ಎಂದು ಕೇಳಿದಳು. ಆಗ ಕಣ್ಣೀರನ್ನು ಒರೆಸಿಕೊಂಡು ಸ್ವಲ್ಪ ಸಮಾಧಾನ ಮಾಡಿಕೊಂಡು ಆ ಬ್ರಾಹ್ಮಣನು ‘ತಾಯಿ, ನನ್ನ ಕುಟುಂಬಕ್ಕೆ ದೊಡ್ಡ ಆಪತ್ತು ಒದಗಿಬಿಟ್ಟಿದೆ. ಇವರೆಲ್ಲರನ್ನೂ ಕಾಪಾಡುವವರು ಯಾರು? ಎಂದು ಹೇಳಿ ಮತ್ತೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದನು. ಆಗ ಕುಂತಿಯು, ‘ಅಯ್ಯಾ ದುಃಖ ಪಡದಿರಿ? ಏನು ನಡೆಯಿತೆಂದು ತಿಳಿಸಿರಿ? ಎಂದಳು. ಆಗ ಅಳುತ್ತಲೇ ಆ ಬ್ರಾಹ್ಮಣನು ‘ತಾಯಿ, ಈ ನಗರದಲ್ಲಿನ ಗಡಿಯಲ್ಲಿ ಒಂದು ದಟ್ಟವಾದ ಕಾಡಿದೆ. ಅಲ್ಲಿ ಬಕಾಸುರನೆಂಬ ಭಯಂಕರವಾದ ರಾಕ್ಷಸನೂ ಅವನ ಅನುಚರರೂ ಇದ್ದಾರೆ’ ಎಂದನು. ಆ ವೇಳೆಗೆ ಭೀಮನೂ ಅಲ್ಲಿಗೆ ಬಂದನು. ‘ಅಯ್ಯಾ, ಈ ದೇಶದಲ್ಲಿ ರಾಜನೇ ಇಲ್ಲವಾ?’ ಎಂದು ಕೇಳಿದನು. ಆಗ ಬ್ರಾಹ್ಮಣನು ‘ರಾಜನು ಇದ್ದೂ ಇಲ್ಲದಂತಾಗಿದೆ. ಅವನು ಶೌರ್ಯವೇ ಇಲ್ಲದ ಹೇಡಿ. ಸೋಮಾರಿಯಾದ ಅವನು ದುಷ್ಟ ಶಕ್ತಿಗಳ ದಾಸನಾಗಿ ಬಕಾಸುರನನ್ನೂ ಅವನ ಅನುಚರರನ್ನೂ ಈ ನಗರಕ್ಕೆ ಕಾವಲಿಟ್ಟನು. ಆದ್ದರಿಂದ ಶತ್ರುಗಳು ಯುದ್ಧಕ್ಕೆ ಬರುವುದಿಲ್ಲ. ಆದರೆ, ತನ್ನ ದೇಶದ ಪ್ರಜೆಗಳನ್ನು ಆ ಬಕಾಸುರನಿಗೆ ಬಲಿಕೊಟ್ಟುಬಿಟ್ಟ. ಪ್ರತಿ ದಿನವೂ ಸೂರ್ಯೋದಯದ ವೇಳೆಯಲ್ಲಿ ಒಂದು ಬಂಡಿ ಅನ್ನ, ಎರಡು ಎಮ್ಮೆಗಳು, ಒಬ್ಬ ಮನುಷ್ಯನನ್ನು ಅವನಿಗೆ ಆಹಾರವಾಗಿ ಪ್ರಜೆಗಳು ಕಳುಹಿಸಬೇಕು’ ಎಂದನು. ಇದನ್ನು ಕೇಳಿ ಕೆರಳಿದ ಭೀಮನು ‘ಕಳುಹಿಸದಿದ್ದರೆ’ ಎಂದು ಕೇಳಿದನು. ಕಳುಹಿಸದಿದ್ದರೆ ಬಕಾಸುರನ ಅನುಚರರು ಈ ನಗರವನ್ನೇ ಧ್ವಂಸ ಮಾಡಿ ಬಿಡುತ್ತಾರೆ’ ಇಲ್ಲಿ ಸರದಿಯ ಪ್ರಕಾರ ಒಂದೊಂದು ಮನೆಯಿಂದ ಒಂದೊಂದು ದಿನ ಒಬ್ಬ ಮನುಷ್ಯನನ್ನು ಬಲಿಯಾಗಿ ಕಳುಹಿಸಬೇಕು. ನಾಳೆ ನನ್ನ ಮನೆಯಿಂದ ಒಬ್ಬರನ್ನು ಕಳಿಸಲೇ ಬೇಕು. ನನ್ನ ಕುಟುಂಬವನ್ನು ನಿರಾಧಾರವಾಗಿ ಬಿಟ್ಟು ಹೋಗಬೇಕಲ್ಲ, ಏನು ಮಾಡುವುದು’ ಎಂದು ಹೇಳಿ ಅಳುವುದಕ್ಕೆ ಪ್ರಾರಂಭಿಸಿದನು. ಆ ಬ್ರಾಹ್ಮಣನ ಚಿಕ್ಕ ಮಗ ‘ನಾನು ಹೋಗಿ ಆ ಅಸುರನನ್ನು ಕೊಂದು ಹಾಕಿ ಬರುತ್ತೇನೆ. ನೀವು ಅಳಬೇಡಿ ಅಪ್ಪಾ’ ಎಂದು ಮುದ್ದಾಗಿ ಹೇಳಿದನು. ಆಗ ಭೀಮನು ಆ ಪುಟ್ಟ ಹುಡುಗನನ್ನು ಅಪ್ಪಿಕೊಂಡನು. ಭೀಮನು ಅತ್ಯಂತ ಬಲಶಾಲಿಯಾದರೂ ಬೇರೆಯವರ ದುಃಖವನ್ನು ಕಂಡು ಕರುಣೆಯಿಂದ ಕರಗುವವನು. ಸಾವಿರಾರು ಪ್ರಜೆಗಳು ಒಂದಾಗಿ ಕೂಡಿ ಆ ಅಸುರನನ್ನು ಕೊಲ್ಲದೇ ಇದ್ದಾರಲ್ಲಾ ಎಂದು ವ್ಯಥೆಪಟ್ಟನು. ಆಗ ಕುಂತಿ ದೇವಿ ‘ಬ್ರಾಹ್ಮಣರೇ, ದುಃಖ ಪಡಬೇಡಿರಿ. ನನಗೆ ಐದು ಜನ ವೀರ ಪುತ್ರರಿದ್ದಾರೆ. ಅವರೆಲ್ಲ ಅತಿ ಶ್ರೇಷ್ಠ ಬಿಲ್ಲುಗಾರರು. ಇದೋ ಈಗ ನಿಮ್ಮೆದುರಿಗೆ ಇರುವ ಈ ಭೀಮನನ್ನು ಯಾರೂ ಗೆಲ್ಲಲಾರರು. ನಾಳೆ ನಿಮಗೆ ಬದಲಾಗಿ ಸೂರ್ಯೋದಯದಲ್ಲಿ ನನ್ನ ಮಗನಾದ ಈ ಭೀಮನು ಹೋಗಿ ಆ ಬಕಾಸುರನನ್ನು ಕೊಲ್ಲುತ್ತಾನೆ. ನಿಮಗೆ ಚಿಂತೆ ಬೇಡ’ ಎಂದು ಸಮಾಧಾನಪಡಿಸಿದಳು. ಮಹಾ ಪಾಪಿಯಾದ ಬಕಾಸುರನನ್ನು ಕೊಲ್ಲಲು ಭೀಮನ ತೋಳುಗಳು ಆತುರಗೊಂಡವು. ಮಾರನೆಯ ದಿನ ಬೆಳಿಗ್ಗೆ ಭೀಮನು ಹೊರಟನು. ಅವನೊಡನೆ ಒಂದು ಬಂಡಿ ತುಂಬ ಅನ್ನ, ಹಣ್ಣುಗಳು, ಎರಡು ಎಮ್ಮೆಗಳು ಕಳುಹಿಸಲ್ಪಟ್ಟವು. ಬಕಾಸುರನ ಬಳಿಗೆ ಭೀಮನು ಬೇಕೆಂದೇ ತಡವಾಗಿ ಹೋದನು. ಬೆಳಿಗ್ಗೆಯೇ ತನಗೆ ಬರಬೇಕಾಗಿದ್ದ ಆಹಾರವನ್ನು ಮಧ್ಯಾಹ್ನವಾದರೂ ಬರದೇ ಇದ್ದುದರಿಂದ ಬಕಾಸುರನಿಗೆ ಅಪಾರವಾದ ಕೋಪ ಬಂದಿತ್ತು. ಆಗ ಭೀಮನು ಅವನ ಬಳಿಗೆ ಹೋದನು. ‘ಬಕಾಸುರಾ’ ಎಂದು ಜೋರಾಗಿ ಕೂಗಿದನು. ಮೊದಲೇ ಕೋಪಗೊಂಡಿದ್ದ ಬಕಾಸುರನಿಗೆ ತನ್ನನ್ನು ಒಬ್ಬ ಸಾಮಾನ್ಯ ಮನುಷ್ಯ ಹೆಸರು ಹಿಡಿದು ಕರೆದಾಗ ತೀವ್ರವಾದ ಆವೇಶವೂ ಉಂಟಾಗಿ ಕರ್ಕಶವಾಗಿ ಗರ್ಜಿಸುತ್ತಾ ಓಡಿ ಬಂದನು. ಅವನ ಭಯಂಕರವಾದ ರೂಪ, ಬೆಂಕಿಯಂತೆ ಉರಿಯುವ ಕೆಂಪಾದ ಕಣ್ಣುಗಳು, ಕತ್ತಿನವರೆಗೆ ಇಳಿ ಬಿದ್ದಿದ್ದ ದೊಡ್ಡ ಕಿವಿಗಳು, ಕೆಂಪಾಗಿ ಜೊಂಪೆ ಜೊಂಪೆಯಾಗಿ ನೇತಾಡುತ್ತಿದ್ದ ತಲೆ ಕೂದಲುಗಳೂ ಭಯ ಹುಟ್ಟಿಸುವ ಕೋರೆ ಹಲ್ಲುಗಳೂ, ಚೂಪಾದ ಉಗುರಗಳೂ ನೋಡುವವರಿಗೆ ಅತ್ಯಂತ ಭಯವನ್ನೂ, ನಡುಕವನ್ನೂ ಹುಟ್ಟಿಸುವಂತಿದ್ದವು. ಭೀಮನ ಮೇಲೇ ಬೀಳುವಂತೆ ಆ ಬಕಾಸುರನು ಬಂದನು. ಏನನ್ನೂ ನೋಡದವನಂತೆ ಭೀಮನು ನಿಧಾನವಾಗಿ ಎಲ್ಲ ಅನ್ನವನ್ನೂ ಚೆನ್ನಾಗಿ ಕಲಸಿ ಕಲಸಿ ದಪ್ಪ ದಪ್ಪ ಉಂಡೆಗಳನ್ನಾಗಿ ಮಾಡಿ ನುಂಗುತ್ತಿದ್ದನು. ಇದನ್ನು ನೋಡಿ ಬಕಾಸುರನಿಗೆ ಕೋಪದಿಂದ ಹುಚ್ಚೇ ಹಿಡಿಯಿತು. ಆಗ ಅವನು ‘ಎಲವೋ ನರನೇ’ ಸಿಂಹದ ಗುಹೆಯಲ್ಲಿ ಸುಂಡಿಲಯಂತೆ ನೀನು ಯಾರು? ನಿನ್ನನ್ನು ಏನು ಮಾಡುತ್ತೇನೆ ನೋಡು? ಎನ್ನುತ್ತಾ ಭೀಮನ ಸಮೀಪಕ್ಕೆ ಬಂದನು. ಆಗಲೂ ಭೀಮನು ಮೌನವಾಗಿದ್ದನು. ಆಗ ಬಕಾಸುರನು ಭೀಮನ ಮೈಮೇಲೆ ಎರಗಿದನು. ಅವನನ್ನು ಎಡಗೈಯಿಂದ ಭೀಮನು ತಳ್ಳಿದಾಗ ಬಕಾಸುರ ಉರುಳಿ ಬಿದ್ದನು. ಎದ್ದು ಬಂದು ಆ ಅಸುರನು ಭೀಮನನ್ನು ಗುದ್ದುವುದಕ್ಕೆ ಬಂದನು. ಇದಾವುದಕ್ಕೂ ಅಂಜದೆ ಭೀಮನು ಪೂರ್ತಿಯಾಗಿ ಒಂದು ಬಂಡಿ ಅನ್ನವನ್ನೂ ಚೆನ್ನಾಗಿ ಉಂಡು ಮುಗಿಸಿ ಗಟಾರ್ ಎಂದು ದೊಡ್ಡದಾಗಿ ತೇಗಿದನು. ಬೆಟ್ಟಗಳಂತೆ ಕಾಣುತ್ತಿದ್ದ ಇಬ್ಬರೂ ಘೋರವಾಗಿ ಹೋರಾಡಿದರು. ಮದಿಸಿದ ಆನೆಗಳಂತೆ ಒಬ್ಬರೊಡನೆ ಒಬ್ಬರು ಸೆಣಸಿದರು. ದೊಡ್ಡ ದೊಡ್ಡ ಮರಗಳನ್ನು ಕಿತ್ತು ಹೊಡೆದಾಡಿದರು. ಸಂಜೆಯಾಗುವವರೆಗೂ ಇವರ ಯುದ್ಧ ನಡೆಯಿತು. ಬಕಾಸುರನು ತೀವ್ರವಾಗಿ ಆಯಾಸಗೊಂಡು ಕೆಳಗೆ ಉರುಳಿದನು. ಭೀಮನು ಅವನನ್ನು ಚೆನ್ನಾಗಿ ಗುದ್ದಿ ಗದೆಯಿಂದ ಬಡಿದು ಎರಡು ಭಾಗ ಮಾಡಿ ಊರೊಳೊಗೆ ಹೊತ್ತುಕೊಂಡು ಬಂದನು. ಭೀಮನನ್ನು ಕಾಣಲು ಕಾತುರಗೊಂಡಿದ್ದ ಕುಂತಿದೇವಿಯೂ, ಸಹೋದರರೂ, ಊರಿನವರೆಲ್ಲರೂ ಬಕಾಸುರನನ್ನು ಕೊಂದು ಹೊತ್ತುಕೊಂಡು ಬರುವುದನ್ನು ಕಂಡರು. ಅವರಿಗೆ ಲೋಕವೆಲ್ಲಾ ಹಿಡಿಸಲಾರದಷ್ಟು ಆನಂದವಾಯಿತು. ಬ್ರಾಹ್ಮಣನೂ, ಉಳಿದವರೂ ಭೀಮನ ಪರಾಕ್ರಮವನ್ನು ಹಾಡಿ ಕೊಂಡಾಡಿದರು. ಆ ನಗರದ ಜನರ ಭಯವನ್ನು ಹೋಗಲಾಡಿಸಲು ಬಕಾಸುರನ ಶವವನ್ನು ನಗರದ ಹೆಬ್ಬಾಗಿಲಿಗೆ ಭೀಮನು ನೇತು ಹಾಕಿದನು. ನರಬಲಿಕೊಡುವುದನ್ನು ತಪ್ಪಿಸಿದ ಭೀಮನನ್ನು ಸಂತೋಷದಿಂದ ಕಣ್ಣೀರಿಡುತ್ತಾ ಹಾಡಿ ಹಾರೈಸಿದರು. ✍🏻 Narayana Shasthry ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
899 views
14 days ago
#ದಿನಕ್ಕೊಂದು ಕಥೆ #🙏 ಓಂ ನಮಃ ಶಿವಾಯ 🙏 ಹರಿಃ ಓಂ 🕉️“ಸದಾಶಿವನೂ ಸಹ ಪರೈಯ ಪಾದಗಳನ್ನು ಪೂಜಿಸುತ್ತಾನೆ.” ಇದು ಎಲ್ಲಾ ಹೇರಳತೆಯ ಕಲ್ಪನೆಗಳನ್ನು ಉಲ್ಟಾಗೊಳಿಸುತ್ತದೆ. ಸಮೀಪ ಪರಮಾವಸ್ಥೆಯಾದ ಸದಾಶಿವ ತತ್ತ್ವ ಕೂಡ ಪರೈಗೆ ನಮಸ್ಕರಿಸುತ್ತದೆ. ಪರ್ಯೈ / ಪರೈ ಯಾರು? ಪರೈ ಎಂದರೆ: 1. ಆದಿ, ನಿಶ್ಶಬ್ದ ನಾದ (ಪ್ರಾಥಮಿಕ ಶಬ್ದರಹಿತ ಶಬ್ದ) 2. ಶಿವನಿಗೂ ಮೂಲವಾದ ತತ್ತ್ವ 3. ಅನಾಹತ ಸ್ಪಂದನ (ಹೃದಯಕ್ಕಿಂತಲೂ ಆಳವಾದ ಶಬ್ದ) – ಅನಾಹತ ನಾದ 4. ತಮಿಳು ಸಿದ್ಧ ಪರಂಪರೆಯಲ್ಲಿ, ಪರೈ ಎಂದರೆ ಸೃಷ್ಟಿಯ ಮಹಾ ನಾದದ ಮೃದಂಗ — ಮೌನದಿಂದಲೇ ಉದ್ಭವಿಸುವ ಸ್ಪಂದನ ಹೀಗಾಗಿ, ಪರಮ ತತ್ತ್ವವೂ ತನ್ನದೇ ಮೂಲಕ್ಕೆ ನಮಸ್ಕರಿಸುತ್ತದೆ. ಪ್ರೇಮದಿಂದ ವೇದಾಂತ ಜ್ಞಾನ 🙏🏻 ಓಂ ತತ್ ಸತ್ 🙏🏻 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
2.1K views
14 days ago
#🙏🏻ಶ್ರೀಕೃಷ್ಣನ ಕಥೆಗಳು📜 #ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ***ದೇವ ದೇವನಾದ ಶ್ರೀಕೃಷ್ಣನ ಜನಕ ವಸುದೇವ.*** ದಶಾವತಾರಗಳಲ್ಲಿ ಎಂಟನೇ ಅವತಾರವೆನಿಸಿದ ಕೃಷ್ಣಾವತಾರವು ಶ್ರೇಷ್ಠವಾದುದು. ಕೃಷ್ಣನ ಜನನದಿಂದ ಹಿಡಿದು ಪೂತನಿ ಸಂಹಾರ, ಗೋವರ್ಧನೋದ್ದಾರ ಕಾಳಿಯ ಮರ್ಧನ ಮೊದಲಾದ ಬಾಲಲೀಲೆಯ ಸಾಹಸಗಳು ಅವತಾರ ಪುರುಷನಿಗಲ್ಲದೆ ಅನ್ಯಥಾ ಸಾಧ್ಯವಿಲ್ಲ ಅಲ್ಲವೇ? ದುಷ್ಟ ಸಂಹಾರ, ಶಿಷ್ಟ-ರಕ್ಷಣೆ, ಪಾಂಡವ-ಕೌರವ ಯುದ್ಧದಲ್ಲಿ ಪಾಂಡವರ ಪಕ್ಷದಲ್ಲಿದ್ದು ಅರ್ಜುನನ ಸಾರಥ್ಯ, ಇವೆಲ್ಲವುಗಳೂ ಧರ್ಮ ಸಂಸ್ಕೃತಿಯ ಜಾಗೃತಿ, ತತ್ರೋಪದೇಶ, ಲೋಕಕಲ್ಯಾಣಕ್ಕಾಗಿ. ದುಷ್ಟರು ಮಿತಿ ಮೀರಿದರೆ 'ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂದು ಶ್ರೀಕೃಷ್ಣ, ಅರ್ಜುನನಿಗೆ ಗೀತೆಯಲ್ಲಿ ಹೇಳಿದ್ದಾನೆ. ಧರ್ಮಸೇತುವಿನ ರಕ್ಷಣೆಗಾಗಿ ಮನುಷ್ಯ ರೂಪದಲ್ಲಿ ಅವತರಿಸಿ ಭೂಮಿಯನ್ನು ಬೆಳಗಿಸಿದ ಶ್ರೀಕೃಷ್ಣ ಲೋಕತ್ರಯದ ಉಪಕಾರಕ್ಕಾಗಿ ಆಧ್ಯಾತ್ಮ ಗ್ರಂಥಗಳ ಮುಕುಟ ಮಣಿಯೆನಿಸಿ ಮನುಕುಲದ ವಿಶ್ವಕೋಶವೆನಿಸಿದ ಭಗವದ್ಗೀತೆಯನ್ನು ಉಪದೇಶ ಮಾಡಿದ ದೈವ- ಮಾನವ ಕೃಷ್ಣಃ ಈ ಅವತಾರ ಪುರುಷನಿಗೆ ಜನ್ಮಕೊಟ್ಟವನಾರು? ಆತನೂ ನಮಗೆ ಪ್ರಾತಃ ಸ್ಮರಣೀಯನಲ್ಲವೇ? ಹೌದು; ಸಂಶಯವೇ ಇಲ್ಲ. ಅವನೇ ವಸುದೇವ. ದೇವ ದೇವನಾದ ಶ್ರೀಕೃಷ್ಣನ ಜನಕ. ಇವನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಯದುವಂಶೋತ್ಪನ್ನನಾದ ದೇವಗರ್ಭನ ಮಗ ಶೂರ. ಈತನ ಪತ್ನಿ ಮಾರಿಷೆ ಈ ದಂಪತಿಗಳ ಸುಪುತ್ರನೇ ವಸುದೇವ. ಇವನು ಜನಿಸಿದ ಸಂದರ್ಭದಲ್ಲಿ; ಮಂದೆ ಈತನ ಗೃಹದಲ್ಲಿ ಭಗವಂತನ ಅವತಾರವಾಗುವುದೆಂದು ಯೋಗದೃಷ್ಟಿಯಿಂದ ದೇವತೆಗಳು ತಿಳಿದು ದುಂದುಭಿ ಮೊದಲಾದವುಗಳನ್ನು ಬಾರಿಸಿದರಂತೆ. ಆದುದರಿಂದ ಇವನಿಗೆ ಅನಕದುಂದುಭಿ ಎಂಬ ಹೆಸರಾಯಿತಂತೆ. ಇವನಿಗೆ ಪೌರವಿ, ರೋಹಿಣಿ, ಮದಿರೆ, ಭದ್ರೆ, ವೈಶಾಲಿ, ದೇವಕಿ, ಮೊದಲಾದ ಪತ್ನಿಯರಿದ್ದರು. ಇವರಲ್ಲಿ ರೋಹಿಣಿಗೆ ಬಲಭದ್ರ, ಶಠ, ಸಾರಣ, ದುರ್ಮದ, ಮೊದಲಾದ ಮಕ್ಕಳೂ ವೈಶಾಲಿ ಎಂಬವಳಿಗೆ ಕೌಶಿಕನೂ ದೇವಕಿಗೆ ಕೀರ್ತಿವಂತ, ಸುಷೇಣ, ದಾಯು, ಭದ್ರಸೇನ, ಋಜುದಾಸ, ಭದ್ರದೇವರೆಂಬ ಆರು ಮಂದಿ ಮಕ್ಕಳೂ ಕ್ರಮವಾಗಿ ಹುಟ್ಟಿದರು. ಇವರನ್ನೆಲ್ಲ ಕಂಸನು ಕೊಂದನು. ಅನಂತರ ಏಳನೆಯ ಗರ್ಭವನ್ನು ಅರ್ಧರಾತ್ರಿಯಲ್ಲಿ ಭಗವತ್ ಪ್ರೇರಿತೆಯಾದ ಯೋಗಮಾಯೆ ಆಕರ್ಷಿಸಿ ರೋಹಿಣಿಯ ಉದರದಲ್ಲಿ ಹಾಕಿದಳು. ಆಕರ್ಷಿಸಿ ಹಾಕಿದುದರಿಂದ ಹುಟ್ಟಿದವನಾದ ಬಲರಾಮನಿಗೆ ಸಂಕರ್ಷನೆಂದು ಹೆಸರಾಯಿತು. ಎಂಟನೆಯ ಗರ್ಭದಲ್ಲಿ ಜನಿಸಿದವನೇ ಶ್ರೀಕೃಷ್ಣ. ವಸುದೇವನ ತಮ್ಮನಾದ ದೇವಭಾಗನಿಗೆ ಭಕ್ತಾಗ್ರೇಸರನೆನಿಸಿದ ಉದ್ಧವನು ಜನಿಸಿದನು. ಮಹಾವಿದ್ವಾಂಸನೂ ದೇವಸಮಾನವಾದ ಕೀರ್ತಿಶಾಲಿಯೂ ಆದ ಇವನಿಗೆ ದೇವಶ್ರವ ಎಂಬ ಹೆಸರೂ ಇದೆ. ವಸುದೇವನ ಇನ್ನೊಬ್ಬ ತಮ್ಮನಾದ ಅನಾದೃಷ್ಟಿಗೆ ಅಶಕಿ ಎಂಬವಳಲ್ಲಿ ನಿವೃತ್ತ ಶತ್ರು ಎಂಬ ಮಗನಾದನು. ದೇವಶಿವ ಎಂಬ ಸೋದರನಿಗೆ ಶತ್ರುಘ್ನನೆಂಬ ಮಗನು ಹುಟ್ಟಿದನು. ಇವನ ತಂದೆಯು ಯಾವುದೋ ಕಾರಣಕ್ಕಾಗಿ ಅಡವಿಯಲ್ಲಿ ಬಿಟ್ಟು ಅಲ್ಲಿ ಬಿಲ್ಲವರಿಂದ ಪೋಷಿತನಾದುದರಿಂದ ಈತನು ಏಕಲವ್ಯ ಎಂಬ ಹೆಸರಿನಿಂದ ಪ್ರಸಿದ್ದ ಬಿಲ್ಲುಗಾರನಾದನು. ವಸುದೇವನ ಪತ್ನಿ ದೇವಕಿ. ಇವಳು ದೇವಕನ ಮಗಳು. ಕಂಸನ ತಂಗಿ. ದೇವಕಿ ವಿವಾಹ ಸಂದರ್ಭದಲ್ಲಿ, 'ದೇವಕಿಯ ಎಂಟನೆಯ ಗರ್ಭದಿಂದ ಸೊದರ ಮಾವನಾದ ಕಂಸನಿಗೆ ಮರಣ' ಎಂದು ಅಶರೀರವಾಣಿಯಾಯಿತು. ಇದನ್ನಾಲಿಸಿದ ಕಂಸನು ದೇವಕಿಯನ್ನು ಅಲ್ಲಿಯೇ ಕೊಲ್ಲಲು ಮುಂದಾದನು. ಆಗ ವಸುದೇವನು 'ಬೇಡ... ಬೇಡ... ಅವಳನ್ನು ಕೊಲ್ಲಬೇಡ. ಅವಳಿಗೆ ಹುಟ್ಟಿದ ಮಕ್ಕಳನ್ನೆಲ್ಲ ನಿನಗೆ ಒಪ್ಪಿಸುವೆ' ನೆಂದೂ ಭರಸೆಯಿತ್ತು ತಡೆದನು. ಕಾರಾಗೃಹದಲ್ಲಿರಿಸಿದ ತುಂಬು ಗರ್ಭಿಣಿ ದೇವಕಿಯೊಂದಿಗೆ ವಸುದೇವನನ್ನೂ ಕೂಡಿ ಹಾಕಿಸಿದ್ದ ಕಂಸ. ಶ್ರಾವಣ ಬಹುಳ ಅಷ್ಟಮಿಯಂದು ರೋಹಿಣಿ ನಕ್ಷತ್ರ ನಡುರಾತ್ರಿಯಲ್ಲಿ ಶ್ರೀಕೃಷ್ಣನ ಜನನವಾಯಿತು. 'ನಂದಗೋಕುಲದಲ್ಲಿ ಯಶೋಧೆಗೆ ಹೆಣ್ಣು ಮಗು ಜನಿಸಿದೆ ಅದನ್ನು ಇಲ್ಲಿ ತಂದು ಬಿಡು. ಈ ಮಗುವನ್ನು ಯಶೋದೆ ಬಳಿ ಬಿಡು' ಎಂಬ ಅಶರೀರವಾಣಿ ವಸುದೇವನಿಗೆ ಕೇಳಿಸಿತು. ಪರಮಾಶ್ಚರ್ಯ!! ಅವನಿಗೆ ಕಟ್ಟಿದ್ದ ಕಬ್ಬಿಣ ಸರಪಳಿಗಳೆಲ್ಲವೂ ತನ್ನಿಂತಾನೇ ಬಿಚ್ಚಲ್ಪಟ್ಟವು. ಬಾಗಿಲುಗಳು ತೆರೆದುಕೊಂಡವು . ಈ ಅದ್ಭುತ ದೃಶ್ಯಗಳನ್ನು ಕಂಡ ವಸುದೇವನಿಗೆ; ಈಗ ಜನಿಸಿದ ಮಗುವು ಅವತಾರ ಪುರುಷನೆಂದು ತಿಳಿಯುತ್ತದೆ. ಶಿಶುವನ್ನು ಹೊತ್ತು ಯಮುನಾ ನದಿಯನ್ನು ದಾಟುತ್ತಿರುವಾಗ ಇದ್ದಕ್ಕಿದ್ದಂತೆ ನೀರು ಮೊಣಕಾಲಿನಿಂದ ಕೆಳಗೆ ಬರುತ್ತದೆ. 'ದೇವರೊಲಿದರೆ ಯಾವ ಭಯವೂ ಇಲ್ಲ' ಎಂಬುದಕ್ಕೆ ಈ ಅದ್ಭುತಗಳೆಲ್ಲ ನಿದರ್ಶನಗಳು. ವಾಸುದೇವನಿಗೆ ತನ್ನ ಮಕ್ಕಳಾದ ಬಲರಾಮ-ಶ್ರೀಕೃಷ್ಣರು ಪ್ರಕೃತಿ-ಪುರುಷ ಸ್ವರೂಪರೆಂದೂ ಸಾಕ್ಷಾತ್ ಈಶ್ವರ ಸ್ವರೂಪರೆಂದೂ ತಿಳಿದಿರುತ್ತದೆ. ಇದರಿಂದಾಗಿ ಮುಂದೆ ಅವರಿಬ್ಬರೂ ದೊಡ್ಡವರಾದ ಮೇಲೆ ಅವರನ್ನು ಪ್ರೇಮಪೂರ್ವಕವಾಗಿ, ಅಭಿನಂದನಾ ಪೂರ್ವಕವಾಗಿ ಮಾತನಾಡಿಸುತ್ತಾನೆ ವಸುದೇವ, ವಸುದೇವನು ಕುರುಕ್ಷೇತ್ರದಲ್ಲಿ ಪರಮ ಧಾರ್ಮಿಕವಾದ ಯಾಗಯಜ್ಞಗಳನ್ನು ಮಾಡುತ್ತಾನೆ. ಕೃಷ್ಣನ ಬಾಲ್ಯದಲ್ಲಿ ಸಾಕಿಸಲಹಿದ ನಂದಗೋಪನನ್ನೂ-ಯಶೋಧೆಯನ್ನೂ ಸನ್ಮಾನಿಸಿಕೊಂಡು ಬಹು ಮೂಲ್ಯವಾದ ಆಭರಣ, ವಸ್ತ್ರ, ಉತ್ತಮೋತ್ತಮವಾದ ಸಾಮಗ್ರಿಗಳನ್ನೂ ನೀಡಿ ಗೌರವಿಸುತ್ತಾನೆ. ದುಷ್ಕರ ಸಂಹಾರ ಮಾಡಿ ಭೂಭಾರ ಇಳಿಸಲು, ಶಿಷ್ಟರ ರಕ್ಷಣೆಗಾಗಿ ಧರೆಯಲ್ಲಿ ಅವತಾರವೆತ್ತಿದ ದೇವ ದೇವೋತ್ತಮನಾದ ಶ್ರೀಕೃಷ್ಣನ ಜನಕ, ವಸುದೇವನ ಸ್ಮರಣೆ ನಮಗೆ ಸದಾ ಬೇಕಲ್ಲವೇ? ನಾ ಶ್ರೀಧರ್ ಆನಂದದಾಯಕ ದೈವಿಕ ಆತ್ಮ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
846 views
16 days ago
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #ಶ್ರೀ ಲಲಿತಾ ತ್ರಿಪುರ ಸುಂದರಿ ನಮೋಸ್ತುತ್ತೆ #ತ್ರಿಪುರ ಸುಂದರಿ ದೇವತೆ - ವಿಶ್ವದ ಆಡಳಿತ ದೇವತೆ ತ್ರಿಪುರ ಎಂದರೆ ಮೂರು ನಗರಗಳು ಅಥವಾ ಮೂರು ಲೋಕಗಳು (ಲೋಕಗಳು) , ಆದರೆ ಸುಂದರಿ ಎಂದರೆ - ಸುಂದರ ಮಹಿಳೆ. ಮೂರು ನಗರಗಳು ದೇಹ, ಮನಸ್ಸು ಮತ್ತು ಪ್ರಜ್ಞೆಯನ್ನು ಸಂಕೇತಿಸುತ್ತವೆ. ಹೀಗಾಗಿ, ತ್ರಿಪುರಸುಂದರಿಯನ್ನು ಮೂರು ನಗರಗಳು ಅಥವಾ ಮೂರು ಲೋಕಗಳ ಸುಂದರ ಮಹಿಳೆ ಎಂದು ಕರೆಯಲಾಗುತ್ತದೆ. ಅವಳು ಹತ್ತು ಜ್ಞಾನ ದೇವತೆಗಳಾದ ಮಹಾವಿದ್ಯಾಗಳಲ್ಲಿ ಮೂರನೆಯವರಾದ ಆದಿ ಪರಾಶಕ್ತಿಯ ಮುಖ್ಯ ಅಂಶ . ತ್ರಿಪುರ ಸುಂದರಿಯನ್ನು ದುರ್ಗಾ ಮತ್ತು ಮಹಾಕಾಳಿಯಂತೆ ಪಾರ್ವತಿ ದೇವಿಯ ಅಭಿವ್ಯಕ್ತಿಯಾಗಿ ಪ್ರತಿನಿಧಿಸಲಾಗುತ್ತದೆ . ಅವಳು ಶಿವನೊಂದಿಗೆ ಆದಿ ಸೃಷ್ಟಿಕರ್ತಳು. ಶ್ರೀಕುಲ ಸಂಪ್ರದಾಯದ ಪ್ರಕಾರ ತ್ರಿಪುರ ಸುಂದರಿ ಆದಿ ಪರಾಶಕ್ತಿ ದೇವಿಯ ಅತ್ಯುನ್ನತ ಅಂಶವಾಗಿದೆ. ಹಿಂದೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ಮೇಲೆ, ಅವಳನ್ನು ಸರ್ವೋಚ್ಚ ಪ್ರಜ್ಞೆ ಅಥವಾ ಸರ್ವೋಚ್ಚ ಬ್ರಹ್ಮ ಎಂದು ಕರೆಯಲಾಗುತ್ತದೆ. ತ್ರಿಪುರ ಸುಂದರಿ ದೇವಿಯನ್ನು ಮೂರು ರೂಪಗಳಲ್ಲಿ ಚಿತ್ರಿಸಲಾಗಿದೆ: ತ್ರಿಪುರ ಬಾಲಾ, ತ್ರಿಪುರ ಸುಂದರಿ ಮತ್ತು ತ್ರಿಪುರ ಭೈರವಿ . ತ್ರಿಪುರ ಬಾಲಾ ಯುವ ಕನ್ಯೆ ದೇವತೆಯನ್ನು ಪ್ರತಿನಿಧಿಸುತ್ತಾಳೆ, ಆದರೆ ತ್ರಿಪುರ ಸುಂದರಿ ಮೂರು ಲೋಕಗಳ ಅದ್ಭುತ ಶಾಶ್ವತ ಸೌಂದರ್ಯವನ್ನು ಪ್ರತಿನಿಧಿಸುತ್ತಾಳೆ. ತ್ರಿಪುರ ಭೈರವನ ಮೂರನೇ ರೂಪವು ಲಲಿತಾ ದೇವಿಯ ಭಯಾನಕ ಶಕ್ತಿಯಾಗಿದೆ. ಭೈರವಿ ಆದಿ ಶಕ್ತಿಯ ಹತ್ತು ಅಂಶಗಳಾದ ಮಹಾವಿದ್ಯೆಗಳಲ್ಲಿ ಒಂದಾಗಿದೆ . ಅವಳ ಇತರ ಎರಡು ರೂಪಗಳು ಶ್ರೀ ಚಕ್ರದ ಆರಾಧನೆಯಲ್ಲಿ ಬೇರೂರಿರುವ ಶ್ರೀ ವಿದ್ಯಾ ಸಂಪ್ರದಾಯಕ್ಕೆ ಕೇಂದ್ರವಾಗಿದ್ದರೆ, ತ್ರಿಪುರ ಸುಂದರಿಯ ವಿಭಿನ್ನ ಹೆಸರುಗಳಾಗಿವೆ. ತ್ರಿಪುರ ಸುಂದರಿ ದೇವಿಯು ಶಿವನ ಪತ್ನಿ . ಅವಳು ಶಿವನೊಂದಿಗೆ ವಿಶ್ವವನ್ನು ಸೃಷ್ಟಿಸುತ್ತಾಳೆ, ರಕ್ಷಿಸುತ್ತಾಳೆ ಮತ್ತು ನಾಶಮಾಡುತ್ತಾಳೆ. ಅವಳು ಬೇರೆ ಯಾರೂ ಅಲ್ಲ, ಸತಿ , ದುರ್ಗಾ ಮತ್ತು ಮಹಾಕಾಳಿ ದೇವತೆ . ತ್ರಿಪುರಸುಂದರಿಯನ್ನು ವಿವಿಧ ಗ್ರಂಥಗಳು ಮತ್ತು ಕಥೆಗಳಲ್ಲಿ ಹಲವು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಅವಳ ಸಾವಿರ ಹೆಸರುಗಳಲ್ಲಿ, ಅವಳನ್ನು ಹದಿನಾರು ವರ್ಷದ ಶೋಡಶಿ ಮತ್ತು ದೇವಿಯ ಬಾಲ ರೂಪ ಬಾಲಸುಂದರಿ ಎಂದೂ ಕರೆಯಲಾಗುತ್ತದೆ. ಆಟವಾಡುವುದು, ಅನುಭವವನ್ನು ಹುಡುಕುವುದು ಮತ್ತು ಇತರರನ್ನು ತನ್ನತ್ತ ಆಕರ್ಷಿಸುವುದು ಅವಳ ಸ್ವಭಾವ. ಅವಳ ಮುಗ್ಧತೆ ಎಲ್ಲರನ್ನೂ ಅವಳ ಕಡೆಗೆ ಆಕರ್ಷಿಸುತ್ತದೆ. ತ್ರಿಪುರಸುಂದರಿ ಹದಿನಾರು ರೀತಿಯ ಬಯಕೆಗಳನ್ನು ಪ್ರತಿನಿಧಿಸುತ್ತಾಳೆ ಎಂದು ನಂಬಲಾಗಿದೆ. ಷೋಡಶಿ ಎಂದರೆ ಹದಿನೈದು ಅಕ್ಷರಗಳ ಮಂತ್ರ ಮತ್ತು ಅಂತಿಮ ಬೀಜಾಕ್ಷರವನ್ನು ಒಳಗೊಂಡಿರುವ 16 ಅಕ್ಷರಗಳ ಮಂತ್ರವನ್ನು ಸಹ ಸೂಚಿಸುತ್ತದೆ. ಆದ್ದರಿಂದ, 16 ವರ್ಷದ ಯುವತಿಯಾಗಿ, ಷೋಡಶಿ ವ್ಯಕ್ತಿಗಳನ್ನು ಆಧ್ಯಾತ್ಮಿಕ ಹಾದಿಯಲ್ಲಿ ತಾರತಮ್ಯದಿಂದ ಮುನ್ನಡೆಸುತ್ತಾಳೆ, ಇದು ವ್ಯಕ್ತಿ, ಉತ್ಸಾಹ ಮತ್ತು ದೇವರ ಕಡೆಗೆ ಮುಗ್ಧತೆಯನ್ನು ಸಂಕೇತಿಸುತ್ತದೆ. ಅವಳನ್ನು ಲಲಿತಾ ಎಂದೂ ಕರೆಯುತ್ತಾರೆ. ಲಲಿತಾ ಎಂದರೆ ಇತರರನ್ನು ಆಡಬಲ್ಲ ಅದ್ಭುತ ಮತ್ತು ಪ್ರಕಾಶಮಾನ ಎಂದರ್ಥ. ಲಲಿತಾ ಬ್ರಹ್ಮಾಂಡದ ಸೃಷ್ಟಿ, ಅಭಿವ್ಯಕ್ತಿ ಮತ್ತು ಲಯದ ಪ್ರಾತಿನಿಧ್ಯವೂ ಹೌದು. ತ್ರಿಪುರಸುಂದರಿಯನ್ನು ರಾಜರಾಜೇಶ್ವರಿ ಎಂದೂ ಕರೆಯುತ್ತಾರೆ. ಆಕೆಯನ್ನು ಇಡೀ ವಿಶ್ವದ ಆಡಳಿತಗಾರ್ತಿ ಎಂದು ಕರೆಯಲಾಗುತ್ತದೆ. ಆಕೆ ಸ್ಥೂಲ ಲೋಕವನ್ನು ಆಳುವ ಆಜ್ಞೆಗಳನ್ನು ನೀಡಿದಳು. ಆದ್ದರಿಂದ, ನಮ್ಮ ಜೀವನದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದಾಗಲೆಲ್ಲಾ ಅವಳನ್ನು ಗೌರವಿಸುವುದು ಮತ್ತು ಅವಳ ಕೃಪೆಯನ್ನು ನೆನಪಿಸಿಕೊಳ್ಳುವುದು ಅತ್ಯಗತ್ಯ. ತ್ರಿಪುರ ಸುಂದರಿ ದೇವಿಯ ದರ್ಶನ ತ್ರಿಪುರ ಸುಂದರಿ ಉದಯಿಸುತ್ತಿರುವ ಸೂರ್ಯನಂತೆ ಪ್ರಜ್ವಲಿಸುತ್ತಿದ್ದಾಳೆ, ಸಂತೋಷ, ಕರುಣೆ ಮತ್ತು ಜ್ಞಾನದ ಆನಂದವನ್ನು ಹರಡುತ್ತಿದ್ದಾಳೆ. ಅವಳನ್ನು ಕೆಂಪು ಮತ್ತು ಚಿನ್ನದ ಚರ್ಮ, ಮೂರು ಮೋಡಿಮಾಡುವ ಕಣ್ಣುಗಳು, ಅಲ್ಲಾಡುವ ನಾಲಿಗೆ, ಭಯಂಕರ ಹಲ್ಲುಗಳು ಮತ್ತು ನಾಲ್ಕು ತೋಳುಗಳನ್ನು ಹೊಂದಿರುವ ಹದಿನಾರು ವರ್ಷದ ಸುಂದರ ಯುವತಿಯಾಗಿ ಚಿತ್ರಿಸಲಾಗಿದೆ. ದೇವಿ ತ್ರಿಪುರ ಸುಂದರಿ ತನ್ನ ಪ್ರತಿಯೊಂದು ಕೈಯಲ್ಲೂ ಒಂದು ಪಾಶ, ಒಂದು ಮುಳ್ಳು, ಒಂದು ಬಿಲ್ಲು ಮತ್ತು ಒಂದು ಬಾಣವನ್ನು ಹಿಡಿದಿದ್ದಾಳೆ. ಪಾಶವು ಬಾಂಧವ್ಯವನ್ನು ಸಂಕೇತಿಸುತ್ತದೆ; ಮುಳ್ಳು ವಿಕರ್ಷಣೆಯನ್ನು ಪ್ರತಿನಿಧಿಸುತ್ತದೆ; ಕಬ್ಬಿನ ಬಿಲ್ಲು ಮನಸ್ಸು ಮತ್ತು ಆಸೆಗಳನ್ನು ಸೂಚಿಸುತ್ತದೆ. ಹೂವಿನ ಬಾಣಗಳು ಐದು ಇಂದ್ರಿಯಗಳ ವಸ್ತುಗಳಾಗಿವೆ ಏಕೆಂದರೆ ಅವುಗಳ ಸೌಂದರ್ಯ ಮತ್ತು ಸೌಂದರ್ಯವು ಅವಳ ಪತ್ನಿ ಶಿವನೇ ಅವಳಿಂದ ತನ್ನ ಕಣ್ಣುಗಳನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಅವಳನ್ನು ಹೇರಳವಾಗಿ ಆಭರಣಗಳಿಂದ ಅಲಂಕರಿಸಲಾಗಿದೆ. ಅವಳನ್ನು ಹದಿನಾರು ವರ್ಷದ ಮುದ್ದಾದ ಹುಡುಗಿಯಾಗಿ ಚಿತ್ರಿಸಲಾಗಿದೆ. ಅವಳನ್ನು ಹಲವಾರು ವಿಧಗಳಲ್ಲಿ ಚಿತ್ರಿಸಲಾಗಿದೆ. ಕಾಳಿ ದೇವಿಯಾಗಿ, ಅವಳು ಬೆತ್ತಲೆಯಾಗಿ ಕುಳಿತು ಉಗ್ರ ತಾಯಿಯ ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತಾಳೆ. ಬ್ರಹ್ಮ, ವಿಷ್ಣು, ಶಿವ ಮತ್ತು ರುದ್ರರು ಹಿಡಿದಿರುವ ಸಿಂಹಾಸನದ ಮೇಲೆ ಶಾಂತಿಯುತ ಭಂಗಿಯಲ್ಲಿ ಮಲಗಿರುವ ಶಿವನ ಚಪ್ಪಟೆ ದೇಹದ ಮೇಲೆ ಇರಿಸಲಾಗಿರುವ ಕಮಲದ ಮೇಲೆ ಕುಳಿತಿರುವಂತೆಯೂ ಅವಳನ್ನು ತೋರಿಸಲಾಗಿದೆ. ತ್ರಿಪುರ ಸುಂದರಿ ಮಹಾ ಮಂತ್ರ ಲಾಭ ತ್ರಿಪುರ ಸುಂದರಿ ದೇವಿಯು ತನ್ನ ಭಕ್ತರನ್ನು ಜೀವನದಲ್ಲಿ ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತಾಳೆ ಮತ್ತು ಎಲ್ಲಾ ಕಾರ್ಯಗಳಲ್ಲಿ ಸತತ ಯಶಸ್ಸನ್ನು ನೀಡುತ್ತಾಳೆ. ಲಲಿತಾ ಸಹಸ್ರನಾಮ ಸ್ತೋತ್ರ , ತ್ರಿಪುರ ಸುಂದರಿ ಅಷ್ಟಕಂ ಲಲಿತಾ ತ್ರಿಶತಿ ಸ್ತೋತ್ರ ಇತ್ಯಾದಿಗಳು ದೇವಿಗೆ ಸಂಬೋಧಿಸಲಾದ ಅತ್ಯಂತ ಪೂಜ್ಯ ಸಂಸ್ಕೃತ ಸ್ತೋತ್ರಗಳಾಗಿವೆ. ಈ ತ್ರಿಪುರ ಸುಂದರಿ ಮಹಾ-ಮಂತ್ರವು ಶತ್ರುಗಳನ್ನು ಮತ್ತು ಅವುಗಳಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಕುಟುಂಬ ಮತ್ತು ಸ್ನೇಹಿತರ ನಡುವೆ ವಾದಗಳು, ವಿವಾದಗಳು ಮತ್ತು ದ್ವೇಷವನ್ನು ಉಂಟುಮಾಡುವ ತಪ್ಪುಗಳನ್ನು ತಡೆಯಲು ಈ ಮಂತ್ರವನ್ನು ಪಠಿಸಬಹುದು. ತ್ರಿಪುರ ಸುಂದರಿ ಮಹಾ ಮಂತ್ರವು ಸಾರ್ವತ್ರಿಕ ದುಷ್ಪರಿಣಾಮಗಳನ್ನು ಸಹ ನಿವಾರಿಸುತ್ತದೆ. ಮಕ್ಕಳನ್ನು ಪಡೆಯಲು ಪ್ರಯತ್ನಿಸುತ್ತಿರುವ ವಿವಾಹಿತ ದಂಪತಿಗಳು ತ್ರಿಪುರ ಸುಂದರಿ ದೇವತೆಯನ್ನು ಪ್ರಾರ್ಥಿಸುವುದರಿಂದ ಪ್ರಯೋಜನ ಪಡೆಯಬಹುದು. ಗರ್ಭಿಣಿಯರು ಸುರಕ್ಷಿತ ಹೆರಿಗೆಗಾಗಿ ನಿರ್ದಿಷ್ಟ ಮಂತ್ರವನ್ನು ಸಹ ಪಠಿಸಬಹುದು. ಭಾರತದ ತ್ರಿಪುರಸುಂದರಿ ದೇವಾಲಯಗಳು ಭಾರತದ ಕೆಲವು ಜನಪ್ರಿಯ ತ್ರಿಪುರಸುಂದರಿ ದೇವಾಲಯಗಳು ರಾಜಸ್ಥಾನದ ಬನ್ಸ್ವಾರಾ; ಉದಯಪುರ, ತ್ರಿಪುರ; ಮನಾಲಿ, ಹಿಮಾಚಲ ಪ್ರದೇಶ; ಮೈಸೂರು, ಕರ್ನಾಟಕ, ಇತ್ಯಾದಿಗಳಲ್ಲಿವೆ. ಭಂಡಾಸುರ ಎಂಬ ಅಸುರನನ್ನು ಕೊಂದು ಭೂಮಿಯ ಮೇಲೆ ಮತ್ತು ಸ್ವರ್ಗದಲ್ಲಿರುವ ಜನರನ್ನು ರಕ್ಷಿಸಲು ಅವಳು ಮುಖ್ಯವಾಗಿ ರೂಪುಗೊಂಡಳು. ಅವಳು ಸೌಂದರ್ಯದಂತೆಯೇ ಕರುಣೆ ಮತ್ತು ಕೃಪೆಯ ಪ್ರತಿರೂಪವೂ ಆಗಿದ್ದಾಳೆ. ಅವಳನ್ನು ಪೂಜಿಸುವ ಮೂಲಕ ವಿವಾಹ ವಿಳಂಬ, ವೈವಾಹಿಕ ಸಮಸ್ಯೆಗಳು, ಅಸಂಗತತೆ, ಬಂಜೆತನ, ಬಡತನ, ಸಾಲಗಳು ಮತ್ತು ವಿವಿಧ ದುರದೃಷ್ಟಗಳಿಂದ ಪರಿಹಾರ ಪಡೆಯಬಹುದು. ತ್ರಿಪುರ ಸುಂದರಿ ದೇವಿಯು ಪವಿತ್ರ ವ್ಯಕ್ತಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಮತ್ತು ಅವರ ಜೀವನದಲ್ಲಿ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತಾಳೆ. ✍🏻 Narayana Shasthry ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಕೃಷ್ಣೆ 🦚💙
2.6K views
1 months ago
#ದಿನಕ್ಕೊಂದು ಕಥೆ #ಪುರಾಣ ಪುಣ್ಯ ಕಥೆಗಳು #ನವದುರ್ಗೆ 🙏 ಹರಿಃ ಓಂ 🕉️ 🌺 ನವದುರ್ಗಾ (Navadurga) ಒಂಬತ್ತು ರೂಪಗಳು ಮತ್ತು ನವ ರಸಗಳು ನವದುರ್ಗಾ ಎಂದರೆ Durga ದೇವಿಯ ಒಂಬತ್ತು ಪ್ರಮುಖ ಅವತಾರಗಳು. ಇವುಗಳನ್ನು ವಿಶೇಷವಾಗಿ Navaratri ಸಂದರ್ಭದಲ್ಲಿ ಪೂಜಿಸಲಾಗುತ್ತದೆ. 🎙️ನವದುರ್ಗೆಯ ಒಂಬತ್ತು ರೂಪಗಳು: 1. ಶೈಲಪುತ್ರಿ 2. ಬ್ರಹ್ಮಚಾರಿಣಿ 3. ಚಂದ್ರಘಂಟಾ 4. ಕುಷ್ಮಾಂಡಾ 5. ಸ್ಕಂದಮಾತಾ 6. ಕಾತ್ಯಾಯನಿ 7. ಕಾಲರಾತ್ರಿ 8. ಮಹಾಗೌರಿ 9. ಸಿದ್ಧಿದಾತ್ರಿ ಪ್ರತಿ ರೂಪವು ಶಕ್ತಿಯ ವಿಭಿನ್ನ ತತ್ವವನ್ನು ಪ್ರತಿನಿಧಿಸುತ್ತದೆ — ಭಕ್ತಿ, ಶೌರ್ಯ, ಜ್ಞಾನ, ಕರುಣೆ, ಸಂಹಾರಶಕ್ತಿ ಇತ್ಯಾದಿ. --- 🌸 ನವರಸ ದುರ್ಗಾ ನವರಸ ದುರ್ಗಾ ಎಂದರೆ ದೇವಿಯಲ್ಲಿರುವ ಒಂಬತ್ತು ಭಾವಗಳು (ನವರಸಗಳು). ಇವುಗಳು ದೇವಿಯ ಲೀಲಾ ಮತ್ತು ಶಕ್ತಿಯ ವೈವಿಧ್ಯತೆಯನ್ನು ಸೂಚಿಸುತ್ತವೆ. 🎙️ಭಾರತೀಯ ನಾಟ್ಯಶಾಸ್ತ್ರದಲ್ಲಿ ಹೇಳಿರುವ ನವರಸಗಳು: 1. ಶೈಲಪುತ್ರಿ 👉 ಶೃಂಗಾರ (ಪ್ರೀತಿ, ಸೌಂದರ್ಯ) 2. ಬ್ರಹ್ಮಚಾರಿಣಿ 👉 ಹಾಸ್ಯ (ಹಾಸ್ಯಭಾವ) 3. ಚಂದ್ರಘಂಟಾ 👉 ಕರೂಣಾ (ದಯೆ) 4. ಕುಷ್ಮಾಂಡಾ 👉 ರೌದ್ರ (ಕೋಪ) 5. ಸ್ಕಂದಮಾತಾ 👉ವೀರ (ಶೌರ್ಯ) 6. ಕಾತ್ಯಾಯನಿ 👉 ಭಯಾನಕ (ಭೀತಿ) 7. ಕಾಲರಾತ್ರಿ 👉 ಬೀಭತ್ಸ (ಅಸಹ್ಯ) 8. ಮಹಾಗೌರಿ 👉 ಅದ್ಭುತ (ಆಶ್ಚರ್ಯ) 9. ಸಿದ್ಧಿದಾತ್ರಿ 👉 ಶಾಂತ (ಶಾಂತಿ) 🎙️ಈ ನವರಸಗಳನ್ನೂ Durga ದೇವಿಯಲ್ಲಿಯೇ ಕಾಣಬಹುದು. ಉದಾಹರಣೆಗೆ: 🔅ಮಹಿಷಾಸುರ ಮರ್ಧಿನಿ ರೂಪದಲ್ಲಿ ವೀರ ಮತ್ತು ರೌದ್ರ ರಸ ⭐ಅಂಬಾ ರೂಪದಲ್ಲಿ ಕರೂಣಾ ರಸ 🔅ಮಹಾಗೌರಿ ರೂಪದಲ್ಲಿ ಶಾಂತ ರಸ --- 🌠ಸಾರಾಂಶ 🔹 ನವದುರ್ಗಾ – ದೇವಿಯ ಒಂಬತ್ತು ಅವತಾರಗಳು 🔹 ನವರಸ ದುರ್ಗಾ – ದೇವಿಯ ಒಂಬತ್ತು ಭಾವರೂಪಗಳು ಇವೆರಡೂ ಶಕ್ತಿಯ ಮಹತ್ವವನ್ನು ವಿಭಿನ್ನ ದೃಷ್ಟಿಕೋಣಗಳಿಂದ ವಿವರಿಸುತ್ತವೆ. 🙏🌺 ಬರಹ 👉 ವೇದಾಂತ ಜ್ಞಾನ ಯವರಿಂದ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏