Follow
ಮೈಲನಹಳ್ಳಿ ದಿನೇಶ್ ಕುಮಾರ್
@mdk1008
187
Posts
191
Followers
ಮೈಲನಹಳ್ಳಿ ದಿನೇಶ್ ಕುಮಾರ್
623 views
25 days ago
#🙏🏼ಬಸವ ಜಯಂತಿಯ ಶುಭಾಶಯ🕉️ ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟಿಯ ಕಟ್ಟಿ, ಆಕಳ ಹಾಲನೆರೆದು ಜೇನುತುಪ್ಪವ ಹೊಯ್ದಡೆ, ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು ಕೂಡಲಸಂಗಮದೇವಾ. ಕನ್ನಡದ ಅಸ್ಮಿತೆ, ದೀನ ದಲಿತರ ಆಶಾಕಿರಣ, ಸಮಾನತೆಯ ಹರಿಕಾರ, ಅನುಭವ ಮಂಟಪದ ಕರ್ತೃ, ಕೋಟ್ಯಾಂತರ ಧಮನಿತರ ಉಸಿರು, ಕರ್ನಾಟಕದ ಸಾಂಸ್ಕೃತಿಕ ನಾಯಕ, ಅಸಮಾನತೆಯ ಎದೆಗೆ ಒದ್ದು, ಸಮಾನತೆಯ ಗಿಡ ನೆಟ್ಟ ವಿಶ್ವಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು. -- ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #Vishwaguru #BasavaJayanti #karnataka
ಮೈಲನಹಳ್ಳಿ ದಿನೇಶ್ ಕುಮಾರ್
884 views
1 months ago
ಎಷ್ಟೇ ಎಲೆ ಉದುರಿದರೂ ಮರ ಹಾಗೇ ಇರುವಂತೆ, ಎಷ್ಟೇ ಕಷ್ಟ ಬಂದರೂ ಬದುಕು ಮತ್ತೆ ಚಿಗುರಿ ಮುಂದೆ ಸಾಗುವುದು. ಯುಗಾದಿ ಪರಿವರ್ತನೆಯ ಸಂಕೇತ ಸಮೃದ್ಧಿ, ಸೊಗಸಿನ ಆಗಮನದ ಸಂಕೇತ ಸಂವತ್ಸರದ ಬದಲಾವಣೆ ಚಲನಶೀಲತೆಯ ಸಂಕೇತ. ನವ ಚಿಂತನೆ, ನವ ಸ್ಫೂರ್ತಿ, ನವ ಭರವಸೆಗಳೊಂದಿಗೆ ಯುಗಾದಿಯನ್ನು ಸ್ವಾಗತಿಸೋಣ. ಸರ್ವರಿಗೂ #ಯುಗಾದಿ ಹಬ್ಬದ ನಿಮಿತ್ತ ನಲ್ಮೆಯ ಶುಭಾಶಯಗಳು. -- ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #ugadi #festival #ಚಂದ್ರಮಾನ #ಯುಗಾದಿ #ಯುಗಾದಿ ಹಬ್ಬ
ಮೈಲನಹಳ್ಳಿ ದಿನೇಶ್ ಕುಮಾರ್
608 views
2 months ago
ಅವಳಿರದ ದಿನವಿರದಂತೆ ಹಗಲಿಂದ ಇರುಳವರೆಗಿನ ದಿನಚರಿಯೇ ಅವಳಂತೆ ಅವಳಿಗೂ ಒಂದು ದಿನವಂತೆ. ಎಲ್ಲಾ ರೀತಿಯ ದೌರ್ಜನ್ಯಗಳನ್ನು ನಾಲ್ಕು ಗೋಡೆಗಳ ನಡುವೆ ಸಹಿಸಿ ಕೊಳೆಯದೆ, ಸಮಾನತೆ ಮತ್ತು ನಿರ್ಭಿತಿಯಿಂದ ಬದುಕುವ ಹಕ್ಕು ನಿಮ್ಮದಾಗಲಿ. #ವಿಶ್ವ_ಮಹಿಳಾ_ದಿನದ_ಶುಭಾಶಯಗಳು #womensday #ಮಹಿಳಾ ದಿನ
ಮೈಲನಹಳ್ಳಿ ದಿನೇಶ್ ಕುಮಾರ್
2.5K views
2 months ago
ನಾಡಿನ ಸಮಸ್ತ ಜನತೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಯುಗಮಾನೋತ್ಸವದ ಶುಭಾಶಯಗಳು. ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಮಾನವಧರ್ಮದ ಉಳಿವಿಗಾಗಿ ಸಾರಿದ ತತ್ವಗಳು ಸಾರ್ವಕಾಲಿಕವಾಗಿವೆ. ಪ್ರತಿಯೊಬ್ಬರ ಬಾಳಿಗೆ ಬೆಳಕಾಗಿವೆ. ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆಯ ಜೀವನವನ್ನು ಬೋಧಿಸಿದ ಅವರ ಚಿಂತನೆಗಳು ಸಮಾಜದ ಸುಧಾರಣೆಗೆ ದಾರಿದೀಪವಾಗಿದೆ. - ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #Renukacharya #jayanti #ರೇಣುಕಾಚಾರ್ಯ ಜಯಂತಿ
ಮೈಲನಹಳ್ಳಿ ದಿನೇಶ್ ಕುಮಾರ್
631 views
2 months ago
#ಯಡಿಯೂರಪ್ಪ #ಬಿಎಸ್ ಯಡಿಯೂರಪ್ಪ ಹುಟ್ಟುಹಬ್ಬ ಸಾರ್ವಜನಿಕ ಬದುಕಿನಲ್ಲಿ ಹೋರಾಟ, ರಾಜಕಾರಣದಲ್ಲಿ ಆದರ್ಶ, ಸಂಘಟನೆಯಲ್ಲಿ ಕ್ರಿಯಾಶೀಲತೆ, ನಾಡಿನ ಜನಮನದಲ್ಲಿ ಶಾಶ್ವತವಾಗಿ ನೆಲೆ ನಿಂತ ನೀವು ಕರ್ನಾಟಕದ ಇತಿಹಾಸದಲ್ಲಿ ಬೆವರಿನಿಂದ ಮೇಲೆದ್ದು ಬಂದ ಜನನಾಯಕ". ವೀರಶೈವ ಲಿಂಗಾಯತ ಸಮುದಾಯದ ಮೇರು ಪರ್ವತ, ಕೆಚ್ಚೆದೆಯ ಕನ್ನಡಿಗರ ಧೀಮಂತ ನಾಯಕ, ರೈತಪರ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಜನ್ಮದಿನದ ನಿಮಿತ್ತ ಪ್ರೀತಿಯ ಗೌರವ ಪೂರ್ವಕ ಶುಭಾಶಯಗಳು.
ಮೈಲನಹಳ್ಳಿ ದಿನೇಶ್ ಕುಮಾರ್
718 views
3 months ago
ದೇಶದ ಹೆಮ್ಮೆಯ ಸಂವಿಧಾನ ಜಾರಿಗೆ ಬಂದ ಈ ಪವಿತ್ರ ದಿನದಂದು ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ದೇಶಕ್ಕೆ ಸ್ವಾತಂತ್ರ್ಯ ಒದಗಿಬರಲು ಹಾಗೂ ದೇಶದ ಪ್ರಜಾಪ್ರಭುತ್ವದ ರಚನೆಗೆ ಕಾರಣೀಭೂತರಾದ ಸರ್ವರನ್ನೂ ಸ್ಮರಿಸೋಣ. - ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #ಗಣರಾಜ್ಯೋತ್ಸವ2026 #🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉 #🪖ಗಣರಾಜ್ಯೋತ್ಸವ ಪರೇಡ್🎖️ #✨ತ್ರಿವರ್ಣ ವಿಶೇಷ 🧡🤍💚 #🚩ಭಾರತೀಯ ಧ್ವಜ ಸ್ಟೇಟಸ್ 🇮🇳 #🚩ಭಾರತೀಯ ಧ್ವಜ ಸ್ಟೇಟಸ್ 🇮🇳 #🇮🇳 ಗಣರಾಜ್ಯೋತ್ಸವದ ಶುಭಾಶಯಗಳು 🇮🇳❤️
ಮೈಲನಹಳ್ಳಿ ದಿನೇಶ್ ಕುಮಾರ್
725 views
3 months ago
ಬಯಲಲ್ಲಿ ಬಯಲಾದ ಪರಿ! ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು ಬಯಲು ಬಯಲಲ್ಲಿ ಬಯಯಲಾಯಿತ್ತಯ್ಯಾ..!! ಮಣ್ಣು ಗೆದ್ದವರು ಮಣ್ಣಲ್ಲಿ ಹೋಗಿದ್ದಾರೆ, ಆದರೆ ಮನಸ್ಸು ಗೆದ್ದವರು ಮಹಾತ್ಮರಾಗಿದ್ದಾರೆ. ಕಾಯಕಯೋಗಿ, ತ್ರಿವಿಧ ದಾಸೋಹಿ, ಪದ್ಮಭೂಷಣ ಪರಮ ಪೂಜ್ಯ ಲಿಂ. ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಅನ್ನ, ಅಕ್ಷರ, ಜ್ಞಾನ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳ ಭವಿಷ್ಯ ಬಾಳಿಗೆ ಬೆಳಕಾದ ಶತಮಾನದ ಸಂತ ಸಾಧನೆ ಸದಾ ಸ್ಮರಣೀಯ. ಶ್ರೀಗಳ ಪುಣ್ಯಸ್ಮರಣೆಯ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಪೂಜ್ಯರ ಬದುಕಿನ ಹಾದಿ ನಮ್ಮೆಲ್ಲರಿಗೂ ಆದರ್ಶ.. #ದಾಸೋಹ_ದಿನ #ಶಿವಕುಮಾರ_ಸ್ವಾಮೀಜಿ #ಸಿದ್ಧಗಂಗಿ #ಮಠ #ತುಮಕೂರು #tumakur #siddaganga #mutt #shuvakumara #swamiji #🔱 ಭಕ್ತಿ ಲೋಕ
ಮೈಲನಹಳ್ಳಿ ದಿನೇಶ್ ಕುಮಾರ್
572 views
4 months ago
ಶೇಂಗಾ ಎಳ್ಳು ಬೆಲ್ಲದ ಹದವ ಬೆರೆಸಿ ಕಟ್ಟಿದ ಪ್ರೀತಿ ಪಾಕದ ಉಂಡೆ ಇನ್ನಷ್ಟು ಸಿಹಿಯಾಗಲಿ, ನಿಮ್ಮೆದೆಯ ತುಂಬಾ ನಗೆಯ ಪೈರು ಪಸರಿಸಲಿ, ಅದೆಷ್ಟೇ ಸುಖ ಕಷ್ಟಗಳ ಮಧ್ಯೆಯೂ ಒಡಲ ತುಂಬಾ ಒಂದಿಷ್ಟು ನಗುವ ಹೂರಣ ತುಂಬಿರಲಿ.. ಸಮಸ್ತ ಜಗ ಜನಕ್ಕೂ, ಭಕ್ತ ಕೋಟಿಗೂ, ಮನದಿಂದ ಮನಕೆ ಪ್ರೀತಿ ನಗೆಯ ಬೆಳಕ ಸಂಕ್ರಮಣ... ಶುಭವೊಂದೇ ನನ್ನಾಶಯ ನಲ್ಮೆಯ ನಾಡಿನ ಸಮಸ್ತ ಜನತೆಗೆ "#ಉತ್ತರಾಯಣ_ಪುಣ್ಯಕಾಲ - #ಮಕರ ಹಬ್ಬದ ನಿಮಿತ್ತ ಪ್ರೀತಿಯ ಶುಭಾಶಯಗಳು. Happy #Sankratri -2026 💐🌾🌱🪴🎂 #ಸಂಕ್ರಾಂತಿ #ಸಂಕ್ರಾಂತಿ #ಸಂಕ್ರಾಂತಿ #🤩ಮಕರ ಸಂಕ್ರಾಂತಿ ಸ್ಟೇಟಸ್ 🌞 #🌺ಮಕರ ಸಂಕ್ರಾಂತಿಯ ಶುಭಾಶಯಗಳು❤️ #🌾ಸುಗ್ಗಿ ಹಬ್ಬ🌴
ಮೈಲನಹಳ್ಳಿ ದಿನೇಶ್ ಕುಮಾರ್
594 views
4 months ago
ಪ್ರಖರ ಮಾತುಗಳಿಂದ ಇಡೀ ವಿಶ್ವವನ್ನೇ ಬೆರಗುಗೊಳಿಸಿದ ವೀರ ಸನ್ಯಾಸಿ, ಯುವ ಮನಸ್ಸುಗಳ ಪ್ರೇರಣಾ ಶಕ್ತಿ, ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯ ಹಿರಿಮೆಯನ್ನು ಜಗದಗಲ ಸಾರಿದ ಮೇರು ಸಾಧಕ, ತಮ್ಮ ವ್ಯಕ್ತಿತ್ವ ಮತ್ತು ಪ್ರತಿಭೆಯಿಂದ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಸಿಡಿಲ ಸಂತ ಸ್ವಾಮಿ ವಿವೇಕಾನಂದ ಅವರ ಜಯಂತಿಯಂದು ಗೌರವ ನಮನಗಳು. #NationalYouthDay #🔱 ಭಕ್ತಿ ಲೋಕ #ಸ್ವಾಮಿ ವಿವೇಕಾನಂದ ಜಯಂತಿ 🙏 #🙏ಸ್ವಾಮಿ ವಿವೇಕಾನಂದ ಜಯಂತಿ ಶುಭಾಶಯಗಳು 💐 #🙏ಸ್ವಾಮಿ ವಿವೇಕಾನಂದ ಜಯಂತಿ💐 #💐ಸ್ವಾಮಿ ವಿವೇಕಾನಂದ ಜಯಂತಿ
ಮೈಲನಹಳ್ಳಿ ದಿನೇಶ್ ಕುಮಾರ್
775 views
4 months ago
ಕರ್ನಾಟಕವನ್ನು ಶೈಕ್ಷಣಿಕವಾಗಿ–ಸಾಂಸ್ಕೃತಿಕವಾಗಿ ಬೆಳಗಿದ ಪುಣ್ಯಪುರುಷರಲ್ಲಿ ಅಗ್ರಗಣ್ಯರಾದ ಜ್ಞಾನದಾಸೋಹಿ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ಜಯಂತಿಯಂದು ಭಕ್ತಿಪೂರ್ವಕ ನಮನಗಳು. ಶಿರಸಂಗಿ‌‌ ಸಂಸ್ಥಾನದ ಕೊನೆಯ ದೊರೆ, ತಮ್ಮ ಆಸ್ತಿಯನ್ನೆಲ್ಲ ಸಮಾಜ ಸೇವೆಗಾಗಿ ಧಾರೆ ಎರೆದ ದಾನವೀರ ಶಿರಸಂಗಿ ಲಿಂಗರಾಯ ದೇಸಾಯಿ ಅವರು 19ನೇ ಶತಮಾನದಲ್ಲೇ ಸಮಾಜವನ್ನು ಎಚ್ಚರಿಸಿ, ಶಿಕ್ಷಣದ ಜ್ಯೋತಿ ಬೆಳಗಿದರು. ಜನಕಲ್ಯಾಣಕ್ಕಾಗಿ ಕೆರೆ–ಕಟ್ಟೆಗಳು, ಕಾಲುವೆಗಳನ್ನು ನಿರ್ಮಿಸಿ ವೈಜ್ಞಾನಿಕ ಕೃಷಿಗೆ ದಿಕ್ಕು ತೋರಿದ ಜಲತಜ್ಞರು. ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಸಾನಿಧ್ಯದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯನ್ನು ಸ್ಥಾಪಿಸಿ, ಸಮಾಜದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅಪಾರ ದೇಣಿಗೆ ನೀಡಿ ಮೊದಲ ಎರಡು ಅವಧಿಗೆ ಅದರ ಅಧ್ಯಕ್ಷರಾಗಿ ಮಹಾಸಭಾವನ್ನು ಮುನ್ನಡೆಸಿದರು. ತಮ್ಮ ಸಮಸ್ತ ಆಸ್ತಿಯನ್ನು ಶಿಕ್ಷಣ ಮತ್ತು ಅಭಿವೃದ್ಧಿಗೆ ದಾನಮಾಡಿದ ಮಹಾದಾನಿಯ ಸೇವೆಯ ಫಲವಾಗಿ BLDE, KLE, BVV ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ಅನ್ನದಾಸೋಹ ಕೇಂದ್ರಗಳು ಹುಟ್ಟಿ ಇಂದು ಕೂಡ ಜ್ಞಾನ ದಾಸೋಹದ ಪರಂಪರೆಯನ್ನು ಮುಂದುವರಿಸುತ್ತಿವೆ. ಸಮಾಜಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಆ ಮಹಾನ್ ಚೇತನ ಸದಾ ನಮಗೆ ಪ್ರೇರಣೆ. ✍🏻- ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #Shirasangi #lingaraja #Desai #jayanti #ಶಿರಸಂಗಿ #ಲಿಂಗರಾಜ #ದೇಸಾಯಿ #ಶಿರಸಂಗಿ ಲಿಂಗರಾಜ ದೇಸಾಯಿ ಜಯಂತಿ #🔱 ಭಕ್ತಿ ಲೋಕ