ಬಸವಣ್ಣನವರ ವಚನಗಳು

ಕಾಯಕವೇ ಕೈಲಾಸ..
726 views
17 days ago
ಶ್ರೀ ಗುರು ಬಸವ ಲಿಂಗಾಯ ನಮಃ.. "ಕಬ್ಬು ಬೆಳೆವುದಯ್ಯ ಕರಿಯ ಭೂಮಿಯಿದ್ದಲ್ಲಿ, ಉಬ್ಬುಬ್ಬಿ ಬೆಳೆವುದಯ್ಯ ಜಲ ಪ್ರಮಾಣವಿರ್ದಲ್ಲಿ, ದಾರಿದ್ರ್ಯವಿದ್ದಲ್ಲಿ ನಿದ್ರೆ ಬೆಳೆವುದಯ್ಯ, ನಮ್ಮ ಶಿವನ ಸಲೆ ಸಂದ ಶರಣರಾದ ಹಿರಿಯರಿದ್ದಲ್ಲಿ ಬುದ್ಧಿ ಬೆಳವುದಯ್ಯ, ಜಟ್ಟಿ ಮಾಸಾಳರಿರ್ದಲ್ಲಿ ಕಾಳಗ ಘನವನಪ್ಪುದಯ್ಯ, ಇಷ್ಟ ಕಂಡು ಬೆರಗಾದ ನಮ್ಮ ಗುಹೇಶ್ವರ.. ✍🏻 ಶೂನ್ಯ ಪೀಠ ಧೀಶ ಅಲ್ಲಮಪ್ರಭುದೇವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ಕಾಯಕವೇ ಕೈಲಾಸ..
979 views
22 days ago
"ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲವಯ್ಯಾ.. ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲವಯ್ಯಾ.. ನಾದವ ಮಾಡಿದ ರಾವಳಂಗೆ ಅರೆ ಆಯುಷ್ಯವಾಯಿತ್ತು.. ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.. ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಿ ಪ್ರಿಯ ನಮ್ಮ ಕೂಡಲಸಂಗಮದೇವ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ
ಕಾಯಕವೇ ಕೈಲಾಸ..
1.1K views
1 months ago
"ಲಿಂಗಾಯತ"ರೆಂಬ ಪದ ಬಂದೀರೋದೆ ಇಷ್ಟಲಿಂಗ ಶಿವಯೋಗ ಒಲಿದ ನಂತರ. ಆದರೆ ಈಗಿನವರು ಲಿಂಗನಿರೀಕ್ಷೆಯಿಂದ ದೂರ ~ ದೂರ.. ಇಲ್ಲಿ ನೇತ್ರವೆ ಸೂತ್ರ~ ನೋಟವೆ ಕೂಟ~ ಕೂಟವೆ ಮಾಟ~... ಬಸವಣ್ಣನವರು ನಮ್ಮ ಆತ್ಮ ಚೈತನ್ಯ ಹಾಗೂ ಈ ಬ್ರಹ್ಮಾಂಡದ ರಹಸ್ಯ ಅರಿಯಲು ಅತ್ಯಂತ ಸರಳವಾದ ನಿಖರವಾದ ಇಷ್ಟಲಿಂಗ ತಂತ್ರಜ್ನ್ಯಾನವನ್ನು ಜನ ಸಾಮಾನ್ಯರಿಗೆ ನೀಡಿದ ವಿಶ್ವಗುರು.. ಬಸವಣ್ಣನವರು ನಿರಾಕಾರ ಶಿವನನ್ನು ಹಾಗೂ ತನ್ನ ಆತ್ಮ ಚೈತನ್ಯವನ್ನು ಮೊದಲು ಸಾಕ್ಷಿಕರಿಸಿಗೊಂಡಿದ್ದು ಈ ಇಷ್ಟಲಿಂಗ ನಿರೀಕ್ಷೆಯ ದ್ರಷ್ಟಿಯೋಗ~ ಶಿವಯೋಗದ ಮೂಲಕವೇ~ ನಂತರದಲ್ಲಿ ಸಮಾನತೆಯ "ಸಾಮಾಜಿಕ ಕ್ರಾಂತಿ" ಹಾಗೂ "ಅನುಭವ ಮಂಟಪ".. "ಶೂನ್ಯ ಸಂಪಾದನೆ" ಆಂದೋಲನ ಆರಂಭಗೊಂಡಿದ್ದು~ ಎಲ್ಲ ಲಿಂಗವಂತರೆಲ್ಲರೂ ಇಷ್ಟಲಿಂಗ ಶಿವಯೋಗ ಮಾಡಿದಾಗ ಸಮಾನತೆಯ ಗಾಢ ನೈಜತೆ ತನ್ನಿಂತಾನೆ ಪಸರಿಸುತ್ತದೆ. ಈ ಕಾಯದೊಳಗಿನ ತನ್ನ ಚೈತನ್ಯದ ರಹಸ್ಯ ಅರಿಯುವ ಸಾಧನೆಯಲ್ಲಿರುವವರಿಗೆಲ್ಲ ಎಲ್ಲರೂ ಸಮಾನರೆಂಬ ಭಾವ ತನ್ನಿಂತಾನೆ ಮೂಡುತ್ತದೆ.. ಮನುಷ್ಯ ದೇವನಾಗಬಹುದೆಂದು ತೋರಿಸಿಕೊಟ್ಟವರು ನಮ್ಮ ಬಸವಾದಿ ಶರಣ ಶರಣೆಯರು~ ಇಷ್ಟಲಿಂಗದ ದ್ರಷ್ಟಿಯೋಗದಿಂದ ನಮ್ಮೊಳಗಿನ ಚೈತನ್ಯವು ಜಾಗ್ರತಗೊಂಡು ಲಿಂಗಾಂಗ ಸಾಮರಸ್ಯದಿಂದ ನೀವೆ ದೇವರಾಗಬೇಕು. ನಮ್ಮನ್ನು ನಾವು ಅರಿಯಲು ಇಷ್ಟಲಿಂಗ ಶಿವಯೋಗ.... ದ್ರಷ್ಟೀಯೋಗ ನಿಖರವಾದ ಮಾರ್ಗ.. ಇಡಿ ಭಾರತ ದೇಶದ ಅಧ್ಯಾತ್ಮಿಕ ಇತಿಹಾಸದಲ್ಲೆ ಅತೀ ಸರಳ ನಿಖರವಾದ ತಂತ್ರಜ್ನ್ಯಾನ... ನಮ್ಮ ಈ ಕಾಯದೊಳಗಿನ ಜೈವಿಕ ಚೈತನ್ಯದ ರಹಸ್ಯ ಅರಿಯಲು~ ಸಾಬೀತುಗೊಳಿಸಲು ಇಷ್ಟಲಿಂಗ ಒಂದು ಶ್ರೇಷ್ಠ ಮತ್ತು ಅದ್ಭುತವಾದ ಸಾಧನ.. ಬಹಳಷ್ಟು ಲಿಂಗವಂತರು~ ಇನ್ನು ಲಿಂಗಾಯತ ಧರ್ಮದ ಕೆಲವು ವಿಶೇಷ ಮುಖಂಡರು ಇಷ್ಟಲಿಂಗವನ್ನು ಸರಿಯಾಗಿ ಅರಿಯಲೆ ಇಲ್ಲ~ ಇದರಲ್ಲಿ ಹಾಕಿರುವ ಅಷ್ಟ ಬಂಧಿಗಳು ನಮ್ಮ ಈ ದೇಹದ ಮೇಲೆ ಹೇಗೆ ಯಾವ ರೀತಿ ಪರಿಣಾಮ ಮಾಡುತ್ತವೆ ಎಂಬುದು ತಿಳಿಸಲೇ ಇಲ್ಲ~ ಕಾರಣ ಇದನ್ನು ಯಾರೂ ಪ್ರಚಾರ ಮಾಡಲೆ ಇಲ್ಲ~ ಗೊತ್ತಿರುವ ಕೆಲವರು ಸಹ ಈ ವಿಶೇಷವಾದ ತಂತ್ರಜ್ನ್ಯಾನವನ್ನು ಮುಚ್ಚಿಟ್ಟು ದಾರಿ ತಪ್ಪಿಸಿದವು~ ದ್ರಷ್ಟಿ ಯೋಗದಲ್ಲಿ ಲಿಂಗ ಹಾಗೂ ದ್ರಷ್ಟಿಯ ನಡುವೆ ಯಾವ ವಸ್ತುಗಳನ್ನು ಇಡಬಾರದು. 12 ವರ್ಷ ಸತತ ಸಂಶೋಧನೆ ಮಾಡಿ ಬಸವಣ್ಣನವರು ಇದನ್ನು ಹೊರತಂದಿದ್ದು.. ಭಕ್ತಿ ಎಷ್ಟು ಸತ್ಯವೋ ಇದರ ಲಕ್ಷಪಟ್ಟು ಸತ್ಯ ಇಷ್ಟಲಿಂಗ ತಂತ್ರಜ್ನ್ಯಾನ. ಆದರೆ ಸಾಧನೆ ಮಾಡಬೇಕು. ಸಾಧನೆಯೆ ಸತ್ಯ..! #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು