"ಕಾದ ಲೋಹದ ಮೇಲೆ ನೀರನೆರೆದಡೆ ನೀರ ಕುಡಿದುದು ಕಾಹೊ, ಕಬ್ಬುನವೊ??? ಎಂಬುದನರಿತಲ್ಲಿ ಅಂಗಲಿಂಗಸಂಬಂಧಿ. ಕ್ಷೀರ ಉಕ್ಕುವಲ್ಲಿ ಆರೈದು ನೀರನೆರೆದಡೆ
ಆ ನೀರ ಕುಡಿದುದು ಹಾಲೊ, ಹಂಚೊ??? ಎಂಬುದ ಕಡೆಗಾಣಿಸಿದಲ್ಲಿ ಕ್ರೀ ಜ್ಞಾನ ಆತ್ಮಲಿಂಗಸಂಬಂಧಿ. ಇಂತೀ ಉಭಯದ ಒಳಗನರಿತಲ್ಲಿ ಕ್ರೀಗೆ ವರ್ತನೆ, ಅರಿವಿಂಗೆ ಕೂಟ. ಈ ಗುಣ ಆಟ. ಬ್ರಹ್ಮೇಶ್ವರಲಿಂಗದ ಒಳಗನರಿದವರಾಟ.. ,✍️ ಬಾಹೂರ ಬೊಮ್ಮಣ್ಣ ನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏
#//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು