ಬಸವಣ್ಣನ ನುಡಿಗಳು

ಕಾಯಕವೇ ಕೈಲಾಸ..
647 views
4 days ago
"ಬಸವಣ್ಣನೆ ಗುರುಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಚೆನ್ನಬಸವಣ್ಣನೆ ಲಿಂಗಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಸಿದ್ಧರಾಮಯ್ಯನೆ ಜಂಗಮಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಮರುಳಶಂಕರದೇವರೆ ಪ್ರಸಾದಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದರಯ್ಯಾ. ಪ್ರಭುದೇವರೆ ಜ್ಞಾನಮೂರ್ತಿಯಾಗಿ ಎನ್ನ ಹೃದಯಸ್ಥಲಕ್ಕೆ ಬಂದರಯ್ಯಾ. ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳು, ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು, ಸರ್ವತೋಮುಖವಾಗಿ. ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ, ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ. ಹರಹರಾ, ಶಿವಶಿವಾ ಮಹಾದೇವಾ ಮಹಾದೇವಾ, ತ್ರಿಕಾಲದಲ್ಲಿಯೂ ನಿಮ್ಮ ಶರಣರ ಶ್ರೀಪಾದವ ನೆನೆವುತಿರ್ದೆನಯ್ಯಾ, ವೀರಬಂಕೇಶ್ವರಾ.. ✍🏼 ಶರಣ ಸುಂಕದ ಬಂಕಣ್ಣ ನವರ ವಚನ.. ಶರಣು ಶರಣಾರ್ಥಿಗಳು🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಕಾಯಕವೇ ಕೈಲಾಸ..
690 views
4 days ago
ತಮಗೆಲ್ಲರಿಗೂ ಬಸವಣ್ಣ ನವರ ಬಗ್ಗೆ ತಿಳಿದಿರಲಿ🙏🏼 ಯಾರು ಬಸವಣ್ಣ..? 12ನೇ ಶತಮಾನದಲ್ಲಿ ಕರುನಾಡಿನ ಬಿಜಾಪೂರು ಜಿಲ್ಲೆಯ ಬಾಗೆವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಬ್ರಾಹ್ಮಣ ಕುಲದ ಮಾದರಸ ಮಾದಲಾಂಬಿಕೆ ಇವರ ಉದರದಲ್ಲಿ ಜನಿಸಿದ ಮಾನವ. ಬಸವಣ್ಣ ಯಾರು..? ನಾಲ್ಕು ಕಾಲಿನ, ಒಂದು ಬಾಲದ, ಎರಡು ಕೋಡಿನ, ಗರ್ಭ ಗುಡಿಯ ಎದುರಿಗೆ ಕೂಡಿಸಿದ ನಂದಿ(ಎತ್ತು) ಅಲ್ಲ; ಸರ್ವ ರಂಗದಲ್ಲಿಯೂ ಸಮಾನತೆಯನ್ನು ತಂದು ಮನುಷತ್ವವನ್ನು ಎತ್ತಿ ಹಿಡಿದ ಮಾನವತಾವಾದಿ. ಬಸವಣ್ಣ ಯಾರು..? ಶತ ಶತಮಾನಗಳ ಕಾಲ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದಾಸ್ಯಕ್ಕೆ ಒಳಗಾಗಿದ್ದ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಸ್ತ್ರೀಕುಲೋದ್ಧಾರಕ. ಬಸವಣ್ಣ ಯಾರು..? ಶತ ಶತಮಾನಗಳ ಕಾಲ ಯಾರನ್ನು ಗೆಲ್ಲಲು ಸಾಧ್ಯವಾಗಿದ್ದಿಲ್ಲವೋ ಅಂತಹ ಶೊಷಣೆಗಾಗಿದ್ದವರ ಮನಸ್ಸು, ಹೃದಯವನ್ನು ಗೆದ್ದು ಅವರನ್ನೂ ತನ್ನಂತೆ ಕಂಡು ಮಾದಾರನ ಮಗ ಎಂದು ಕರೆದುಕೊಂಡ ಸಮತಾವಾದಿ. ಬಸವಣ್ಣ ಯಾರು..? ಯಜ್ಞ- ಯಾಗ ಹೋಮ- ಹವನ ಮಾಡಿ ಲಕ್ಷಾಂತರ ಬೆಲೆ ಬಾಳುವ ವಸ್ತುಗಳನ್ನು ಸುಟ್ಟು, ಮುಗ್ದ ಜೀವಗಳನ್ನು ಆಹುತಿ ಮಾಡಿ, ಗುಡಿ ಗುಂಡಾರಗಳನ್ನು ಕಟ್ಟಿ, ಧಾರ್ಮಿಕ ಶೋಷಣೆ ನಡೆಸುತ್ತಿದ್ದವರ ವಿರುದ್ಧ ಬಂಡೆದ್ದು ಧಾರ್ಮಿಕ ಶೋಷಣೆ ನಿಲ್ಲಿಸಿದ ಬಂಡಾಯಗಾರ. ಬಸವಣ್ಣ ಯಾರು..? ನಿಮ್ನ ವರ್ಗದವರಿಗೆ ದೇವಸ್ಥಾನಗಳಲ್ಲಿ ಬಿಟ್ಟುಕೊಳ್ಳದಾದಾಗ ದೇವಸ್ಥಾನಗಳಿಗೆ ದಿಕ್ಕಾರ ಹಾಕಿ, ಮಾನವರಿಗೆ ಪ್ರವೇಶವಿಲ್ಲದ ಗುಡಿಯಲ್ಲಿ ದೇವರು ಇರುವುದಿಲ್ಲ ಬದಲಿಗೆ ದೇಹವೇ ದೇಗುಲ ಎಂದು ಸಾರಿ, ಅಂಗದ ಮೇಲೆ ಇಷ್ಟಲಿಂಗವನ್ನು ನೀಡಿ ನಿಮ್ನ ವರ್ಗದವರನ್ನು ಲಿಂಗಾಯತರನ್ನಾಗಿ ಮಾಡಿ ನೂತನ ಲಿಂಗಾಯತ ಧರ್ಮ ಸ್ಥಾಪಿಸಿದ ಧರ್ಮ ಪ್ರವರ್ತಕ. ಬಸವಣ್ಣ ಯಾರು..? ಶ್ರೇಷ್ಟ ರಾಜಕೀಯ ಮುತ್ಸದ್ದಿ ಪ್ರಧಾನಿಯಾಗಿ, ನೂತನ ಅನುಭವ ಮಂಟಪವನ್ನು ಕಟ್ಟಿ ತನ್ಮೂಲಕ ವಿಶ್ವದಲ್ಲಿಯೇ ಮೊದಲ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಪ್ರಜಾಪ್ರಭುತ್ವವಾದಿ. ಬಸವಣ್ಣ ಯಾರು..? ಕೊಲ್ಲೆನಯ್ಯ ಪ್ರಾಣಿಗಳನ್ನು ಮೆಲ್ಲೆನಯ್ಯ ಬಾಯಿಚ್ಛೆಗೆ ಹೊಲ್ಲೆನಯ್ಯ ಪರಸತಿಯರ ಸಂಗವ ಎಂದು ಹೇಳಿದ ಅಹಿಂಸಾವಾದವನ್ನು ಎತ್ತಿ ಹಿಡಿದು ಸಕಲ ಜೀವಾತ್ಮರಿಗೆ ಲೇಸ ಬಯಸಿದ ನೈತಿಕ ಸತ್ಪಥದ ಸೂತ್ರದಾರಿ. ಬಸವಣ್ಣ ಯಾರು..? ವಿಶ್ವದಲ್ಲಿ ಮೊದಲ ಸಾರ್ವಜನಿಕ ಶಿಕ್ಷಣವನ್ನು ಜಾರಿಗೆ ತಂದು ಅನುಭವ ಮಂಟಪದಲ್ಲಿ ಕಾರ್ಯಗತಗೊಳಿಸಿ, ಅನಕ್ಷರಸ್ತರನ್ನು ಅಕ್ಷರಸ್ತರನ್ನಾಗಿ ಮಾಡಿದ ಶಿಕ್ಷಣ ಕ್ರಾಂತಿಯ ಹರಿಕಾರ. ಬಸವಣ್ಣ ಯಾರು..? 12 ಸಾವಿರ ಸೂಳೆಯರನ್ನು(ಪಣ್ಯಾಂಗನೆ) ಗರತಿ(ಪುಣ್ಯಾಂಗನೆ)ಯರನ್ನಾಗಿ ಮಾಡಿ ಅವರಿಗೆ ಪುನರ್ ವಿವಾಹವ ಮಾಡಿಸಿ ಅವರಿಂದ ವಚನಗಳನ್ನು ಬರೆಯಿಸಿದ ಕರುಣಾಳು. ಬಸವಣ್ಣ ಯಾರು..? ಹೊಲೆಯ ಹಾರುವರಲ್ಲಿ ಮದುವೆಯ ಗೈಯಿಸಿ ಮಾನವ ಮಾನವರ ನಡುವಿನ ಜಾತಿಯ ಅಡ್ಡ ಗೋಡೆ ಹೊಡೆದು ಪುಡಿ ಪುಡಿ ಮಾಡಿ ಸಮತಾ ಧ್ವಜ ಹಾರಸಿದ ಯುಗಪುರುಷ. ಬಸವಣ್ಣ ಯಾರು..? ತನು, ಮನ, ಭಾವ, ನೇತ್ರ, ದೃಷ್ಟಿ, ಹಸ್ತ, ಪಾದಗಳನ್ನು ಪರುಷಮಯಗೊಳಿಸಿದ ಮಹಾ ಮಂತ್ರ ಪುರುಷ. ಬಸವಣ್ಣ ಎಂದರೆ ಯಾರು..? ಬಸವಣ್ಣ ಎಂದರೆ; ನಮ್ಮೊಳಗಿನ ಅರಿವಿನ ಪ್ರಜ್ಞೆ. ಬಸವಣ್ಣ ಎಂದರೆ; ದಣಿವರಿಯದ ಬದುಕು. ಬಸವಣ್ಣ ಎಂದರೆ; ಸಾಮರಸ್ಯ. ಬಸವಣ್ಣ ಎಂದರೆ; ಸಹೋದರತೆ. ಬಸವಣ್ಣ ಎಂದರೆ; ಮಹಾ ಬೆಳಗು. ಬಸವಣ್ಣ ಎಂದರೆ; ಮಹಾ ಬಯಲು. ಬಸವಣ್ಣ ಎಂದರೆ; ಮಡಿ ಮೈಲಿಗೆ ಇಲ್ಲದ ವಾತ್ಸಲ್ಯದ ಮಡಿಲು. ಬಸವಣ್ಣ ಎಂದರೆ; ಸಾವು ಕೇಡಿಲ್ಲದ ಶಾಂತ- ಪ್ರಶಾಂತ- ಸಮಚಿತ್ತ- ಸಮಕಳೆ- ಸಮಭಾವ- ಸಮಗಾರ.. 🙏 ಕೃಪೆ ಸಾಮಾಜಿಕ ಜಾಲತಾಣ.. #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಕಾಯಕವೇ ಕೈಲಾಸ..
774 views
26 days ago
ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ. ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು ಬಂದೆನ್ನ ನೆರೆದ ನೋಡವ್ವಾ. ಆತನನಪ್ಪಿಕೊಂಡು ತಳವೆಳಗಾದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣಮುಚ್ಚಿ ತೆರೆದು ತಳವೆಳಗಾದೆನು.. ✍️ ಅಕ್ಕಮಹಾದೇವಿಯವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ಕಾಯಕವೇ ಕೈಲಾಸ..
1.3K views
29 days ago
"ನೂರನೋದಿ ನೂರ ಕೇಳಿದರೇನು??? "ಆಸೆ ಬಿಡದು, ರೋಷ ಪರಿಯದು, ಮಜ್ಜನಕ್ಕೆರೆದು ಛಲವೇನು??? "ಮಾತಿನಂತೆ ಮನವಿಲ್ಲದೆ ಜಾತಿ ಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು