ಕಾಂತಾರದಲ್ಲಿನ ಪಂಜುರ್ಲಿ ದೈವಕ್ಕೂ ವಿಷ್ಣುವಿನ ವರಾಹ ಅವತರಾಕ್ಕೂ ಸಂಬಂಧವಿದೆಯೇ.?
ದೈವವೆಂದರೆ ತುಳುನಾಡಿಗರಲ್ಲಿ ರಕ್ಷಣೆ, ಭಕ್ತಿ ಹಾಗೂ ಶಕ್ತಿಯ ರೂಪ. ಇಂದಿಗೂ ಜನರು ತಾವು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮುನ್ನ ದೇವರನ್ನು ಪೂಜಿಸುವಂತೆ ದೈವವನ್ನು ಪೂಜಿಸುತ್ತಾರೆ. ಹಾಗಾಗಿ, ತುಳುವರ ಹಾಗೂ ದೈವದ ನಡುವೆ ಒಂದು ಭಾವನಾತ್ಮಕ ಸಂಬಂಧವಿದೆ. ದೈವದ ಬಗ್ಗೆ ಗೌರವವಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ದೇವರಷ್ಟೇ ನಂಬಿಕೆಯಿದೆ. ಅವರು ನಂಬುವ ದೈಗಳಲ್ಲಿ ಪಂಜುರ್ಲಿ ದೈವ ಪ್ರಮುಖವಾದುದ್ದು, ಈಗಾಗಲೇ ಕಾಂತಾರ ಸಿನಿಮಾದ ಮೂಲಕ ಪಂಜುರ್ಲಿ ದೈವ ದೇಶ, ವಿದೇಶಗಳಲ್ಲೂ ಚಿರಪರಿಚಿತ. ಕಾಂತಾರ ಸಿನಿಮಾದಲ್ಲಿ ನಾವು ಕಾಣುವ, ತುಳುವರ ನಂಬಿಕೆಯ ಹಾಗೂ ಗೌರವದ ಪಂಜುರ್ಲಿ ದೈವದ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಈ ಲೇಖನವನ್ನು ಓದಿ.